ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆ ಮಂದಿಯ ಪ್ರಗತಿಗೆ ಅಡ್ಡಿಯಾಗಬಹುದು ಈ ಸಸ್ಯಗಳು

Vastu for plant: ಪರಿಸರ ಪ್ರಿಯರು ಸಾಮಾನ್ಯವಾಗಿ ತಮ್ಮ ಮನೆಗಳಲ್ಲಿ ಸಸ್ಯಗಳನ್ನು ಇಡುತ್ತಾರೆ. ಈ ಸಸ್ಯಗಳನ್ನು ನಿಯಮ ಪ್ರಕಾರ ಇರಿಸದೇ ಇದ್ದರೆ ಅದು ಮನೆ ಮಂದಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಮನೆಯಲ್ಲಿ ಸಸ್ಯಗಳನ್ನು ಇರಿಸುವಾಗ ಸರಿಯಾದ ಕ್ರಮವನ್ನು ಪಾಲಿಸುವುದು ಬಹುಮುಖ್ಯ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಮನೆಯಲ್ಲಿ ಸಸ್ಯಗಳನ್ನು ಯಾವ ರೀತಿ ಇಡಬೇಕು ಗೊತ್ತೆ?

ಬೆಂಗಳೂರು: ಅಲಂಕಾರ ಪ್ರಿಯರು, ಪರಿಸರ ಪ್ರೇಮಿಗಳು, ಅಲ್ಪಸ್ವಲ್ಪ ವಾಸ್ತು ಶಾಸ್ತ್ರಗಳನ್ನು (vastu for home) ನಂಬಿರುವವರು ತಮ್ಮ ಮನೆಗಳಲ್ಲಿ ಕೆಲವೊಂದು ಸಸ್ಯಗಳನ್ನು (vastu for plant) ಇಟ್ಟುಕೊಳ್ಳುತ್ತಾರೆ. ಹೀಗೆ ಇರಿಸಬಹುದಾದ ಸಸ್ಯಗಳಿಗೆ (vastu for Plant Placement) ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸದೇ ಇದ್ದರೆ ಮನೆ ಮಂದಿಯ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದು. ಮನೆ ಅಥವಾ ಕಚೇರಿಯ (vastu for office) ದಕ್ಷಿಣ ಅಥವಾ ಪಶ್ಚಿಮದ ಗೋಡೆಗಳಲ್ಲಿ ಎತ್ತರದ ಸಸ್ಯಗಳನ್ನು ಕೆಲವರು ಇರಿಸುತ್ತಾರೆ. ಇದು ಸ್ಥಳಗಳನ್ನು ಸುಂದರಗೊಳಿಸುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಇದು ವಾಸ್ತು ಪ್ರಕಾರ ಸರಿಯಲ್ಲ. ಇದರಿಂದ ಶಕ್ತಿಯ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಇದು ನಾನಾ ತೆರನಾದ ಸಮಸ್ಯೆಗಳಿಗೆ ಕಾರಣವಾಗಬಹುದು

ಮನೆ, ಕಚೇರಿಯ ಪ್ರತಿಯೊಂದು ದಿಕ್ಕು ಕೂಡ ಮಹತ್ವಪೂರ್ಣವಾಗಿರುತ್ತದೆ. ಇದು ಯಶಸ್ಸಿನ ಮೇಲೆ ಪರಿಣಾಮ ಬಿರುವುದರಿಂದ ಇಲ್ಲಿ ಇಡಬಹುದಾದ ವಸ್ತುಗಳ ಬಗ್ಗೆ ತಿಳಿದುಕೊಂಡಿರಬೇಕು. ಒಂದು ವೇಳೆ ಸರಿಯಾದ ಸ್ಥಳದಲ್ಲಿ ಸೂಕ್ತವಾದ ವಸ್ತುಗಳನ್ನು ಇಡದೇ ಹೋದರೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಸ್ತು ಪ್ರಕಾರ ಮನೆ, ಕಚೇರಿಗಳ ಎಲ್ಲ ದಿಕ್ಕುಗಳಿಗೆ ಸರಿಯಾದ ಗಮನ ಕೊಡುವುದರಿಂದ ಪ್ರಗತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞ ಹಿತೇಂದ್ರ ಕುಮಾರ್ ಶರ್ಮಾ.

ಕೆಲವೊಂದು ಸಣ್ಣ ತಪ್ಪುಗಳು ಬಹುದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಬಹುತೇಕ ಮಂದಿ ಮಾಡುವ ಸಾಮಾನ್ಯ ತಪ್ಪು ಎಂದರೆ ಸಸ್ಯಗಳನ್ನು ತಪ್ಪು ದಿಕ್ಕುಗಳಲ್ಲಿ ಇಡುವುದು.

ಮನೆ ಅಥವಾ ಕಚೇರಿಯ ದಕ್ಷಿಣ ಅಥವಾ ಪಶ್ಚಿಮದಲ್ಲಿ ಎತ್ತರದ ಸಸ್ಯಗಳನ್ನು ಎಂದಿಗೂ ಇದಕೂಡದು. ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತದೆ ಎನ್ನುತ್ತಾರೆ ಶರ್ಮಾ.

plant1

ಏನು ಸಮಸ್ಯೆ?

ಮನೆ ಅಥವಾ ಕಚೇರಿಯ ಪ್ರತಿಯೊಂದು ದಿಕ್ಕು ನಿರ್ದಿಷ್ಟ ಗುಣಗಳನ್ನು ಹೊಂದಿದೆ. ಉತ್ತರ ಮತ್ತು ಪೂರ್ವವನ್ನು ಗಾಳಿ, ಬೆಳಕನ್ನು ಪ್ರತಿನಿಧಿಸುತ್ತದೆ. ದಕ್ಷಿಣ ಮತ್ತು ಪಶ್ಚಿಮವು ಹೆಚ್ಚು ಭಾರವಾಗಿರುತ್ತದೆ. ಸಸ್ಯಗಳು ಗಾಳಿಯ ಅಂಶವನ್ನು ಪ್ರತಿನಿಧಿಸುತ್ತವೆ. ಅದು ಬೆಳಕಿನೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಅದನ್ನು ಭಾರವಾದ ದಿಕ್ಕಿನಲ್ಲಿ ಇರಿಸಿದಾಗ ಅದು ಶಕ್ತಿಯ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಮನೆ ಮಂದಿಯ ಪ್ರಗತಿ, ಆದಾಯ ಮತ್ತು ಮಾನಸಿಕ ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇನ್ನು ನೈಋತ್ಯ ದಿಕ್ಕು ಸ್ಥಿರತೆ ಮತ್ತು ನಿಯಂತ್ರಣವನ್ನು ಸಂಕೇತಿಸುತ್ತದೆ. ಇಲ್ಲಿ ಸಸ್ಯಗಳನ್ನು ಇರಿಸುವುದು ವ್ಯವಹಾರ ನಷ್ಟಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲದೆ ಸಾಲ ಹೆಚ್ಚಾಗುತ್ತದೆ. ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಪಶ್ಚಿಮ ದಿಕ್ಕು ಲಾಭ ಮತ್ತು ಸಂಪತ್ತಿಗೆ ಸಂಬಂಧಿಸಿದೆ. ಇಲ್ಲಿ ಸಸ್ಯಗಳನ್ನು ಇಡುವುದರಿಂದ ಬರುವಂತಹ ಲಾಭ ನಿಂತುಹೋಗಿ ವೆಚ್ಚಗಳು ಅಧಿಕವಾಗುವುದು.

ಇದನ್ನೂ ಓದಿ: Vastu Tips: ಮನೆಯ ಸಮೀಪದಲ್ಲಿ ದೇವಾಲಯವಿದ್ದರೆ ಪಾಲಿಸಬೇಕಾದ ನಿಯಮಗಳು ಏನು?

ಏನು ಪರಿಹಾರ?

ವಾಸ್ತು ಪ್ರಕಾರ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಸಸ್ಯಗಳನ್ನು ಇಡಬಹುದು. ಅಲ್ಲಿ ಬೆಳಕು, ಸಕಾರಾತ್ಮಕ ಶಕ್ತಿಯು ಸಸ್ಯಗಳೊಂದಿಗೆ ಬೆರೆತು ಮಾನಸಿಕ ಶಾಂತಿ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ತರುತ್ತದೆ.

ದಕ್ಷಿಣ ಅಥವಾ ಪಶ್ಚಿಮದಲ್ಲಿ ಸಸ್ಯಗಳನ್ನು ಇಡಲೇ ಬೇಕಾದರೆ ಅವುಗಳ ಬಳಿ ತಾಮ್ರದ ತಟ್ಟೆಯನ್ನು ಹೂತುಹಾಕಿ. ಜತೆಗೆ ಪ್ರತಿದಿನ ಅವುಗಳಿಗೆ ಸೂರ್ಯನ ಬೆಳಕು ಸಿಗುವಂತೆ ಮಾಡಿ. ಇದರಿಂದ ಸಮಸ್ಯೆಗಳು ದೂರವಾಗುತ್ತದೆ.