ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻನಿಮಗೆ ಅಪಾಯ ಎದುರಾಗಲಿದೆʼ-ರಿಷಭ್‌ ಪಂತ್‌ ಬ್ಯಾಟಿಂಗ್‌ ಸ್ವಭಾವದ ಬಗ್ಗೆ ಎಬಿಡಿ ಎಚ್ಚರಿಕೆ!

ABD on Rishabh Pant's Batting mindset: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ರಿಷಭ್‌ ಪಂತ್‌ಗೆ ಬ್ಯಾಟಿಂಗ್‌ ಸ್ವಭಾವದ ಬಗ್ಗೆ ಎಬಿಬಿ ಎಚ್ಚರಿಕೆ!

ರಿಷಭ್‌ ಪಂತ್‌ ಆಟದ ಸ್ವಭಾವದ ಬಗ್ಗೆ ಎಬಿಡಿ ಪ್ರತಿಕ್ರಿಯೆ.

Profile Ramesh Kote Jun 26, 2025 3:19 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ ಟೆಸ್ಟ್‌ ಪಂದ್ಯದ(IND vs ENG) ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (Rishabh Pant) ಅವರನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಎಡಗೈ ಬ್ಯಾಟ್ಸ್‌ಮನ್‌ನ ಆಟದ ಸ್ವರೂಪದ ಬಗ್ಗೆ ಆಫ್ರಿಕಾ ಮಾಜಿ ನಾಯಕ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಪಂತ್‌ 178 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 134 ರನ್‌ಗಳನ್ನು ಬಾರಿಸಿದ್ದರು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ 140 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ 118 ರನ್‌ಗಳನ್ನು ಗಳಿಸಿದ್ದಾರೆ. ಪಂತ್‌ ಅವರ ಬ್ಯಾಟಿಂಗ್‌ ಹೊರತಾಗಿಯೂ ಭಾರತ ತಂಡ, ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಈ ಎರಡೂ ಶತಕಗಳ ಮೂಲಕ ರಿಷಭ್‌ ಪಂತ್‌ ವಿಶಷ ದಾಖಲೆಯನ್ನು ಬರೆದಿದ್ದರು. ಅವರು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ಬರೆದಿದ್ದರು. ಅಂದ ಹಾಗೆ ತಮ್ಮ ಭಯ ಮುಕ್ತ ಆಟ ಹಾಗೂ ವಿಭಿನ್ನ ಶೈಲಿಯ ಬ್ಯಾಟಿಂಗ್‌ ಶೈಲಿಯಿಂದ ಪಂತ್‌ ಅವರು ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌, ಭಾರತೀಯ ವಿಕೆಟ್‌ ಕೀಪರ್‌ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ ಪಂತ್‌ ಅವರ ಬ್ಯಾಟಿಂಗ್‌ ಸ್ವಭಾವದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs ENG Test Series: ಮುಂದಿನ ಟೆಸ್ಟ್‌ಗೆ ಬುಮ್ರಾ ಲಭ್ಯತೆ ಬಗ್ಗೆ ಮಾಹಿತಿ ನೀಡಿದ ಕೋಚ್‌ ಗಂಭೀರ್‌

ರಿಷಭ್‌ ಪಂತ್‌ ತೀವ್ರ ಅಪಾಯದೊಂದಿಗೆ ಆಡುತ್ತಾರೆ: ಎಬಿಡಿ

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್‌, "ರಿಷಭ್‌ ಪಂತ್‌ ಅವರು ತೀವ್ರ ಅಪಾಯದೊಂದಿಗೆ ಆಡುತ್ತಾರೆ. ಹಗಲು ರಾತ್ರಿ ಪಂದ್ಯಗಳಲ್ಲಿ ಇದು ನಿಮ್ಮನ್ನು ನಿರಾಶೆಗೊಳಿಸುವ ಸಾಧ್ಯತೆ ಇದೆ," ಎಂದು ಎಚ್ಚರಿಕೆ ನೀಡಿದ ಅವರು, "ಎರಡೂ ಇನಿಂಗ್ಸ್‌ಗಳಲ್ಲಿ ಅವರು 30 ಕ್ಕಿಂತ ಕಡಿಮೆ ರನ್ ಗಳಿಸಿ ಔಟ್ ಆಗಬಹುದಾದ 20 ಸಂದರ್ಭಗಳನ್ನು ನಾನು ಎಣಿಸಬಲ್ಲೆ. ಆದರೆ ಅವರು ಹಾಗೆ ಮಾಡಲಿಲ್ಲ ಮತ್ತು ಅದು ಅತ್ಯಂತ ಮುಖ್ಯವಾದ ವಿಷಯ. ಅವರು ಎದುರಾಳಿ ತಂಡವನ್ನು ತೆಗೆದುಕೊಳ್ಳಬಲ್ಲ ಆಟಗಾರ ಮತ್ತು 100 ರಲ್ಲಿ 99 ರಷ್ಟು ಅವರು ನಿಮ್ಮ ಯಶಸ್ವಿ ಕ್ರೀಡಾಪಟುವಾಗಿದ್ದಾರೆ," ಎಂದು ಗುಣಗಾನ ಮಾಡಿದ್ದಾರೆ.

IND vs ENG: ಇಂಗ್ಲೆಂಡ್‌ 4-0 ಅಂತರದಲ್ಲಿ ಗೆಲ್ಲಬಹುದಾ? ಎಂದ ಮೈಕಲ್‌ ವಾನ್‌ಗೆ ಜಾಫರ್‌ ತಿರುಗೇಟು!

ಪಂತ್‌ ಶಾಟ್‌ ಸೆಲೆಕ್ಷನ್‌ನಿಂದ ಗೊಂದಲಕ್ಕೆ ಒಳಗಾಗಿದ್ದೆ

ರಿಷಭ್‌ ಪಂತ್ ಅವರ ದಿಟ್ಟ ಶಾಟ್ ಸೆಲೆಕ್ಷನ್‌ ಕೆಲವೊಮ್ಮೆ ತಮ್ಮನ್ನು ಗೊಂದಲಕ್ಕೀಡು ಮಾಡಿದೆ ಎಂದು ಡಿವಿಲಿಯರ್ಸ್ ಒಪ್ಪಿಕೊಂಡರು. ಆದರೆ ಫಲಿತಾಂಶಗಳು ಅವರ ಸಾಮರ್ಥ್ಯವನ್ನು ಸಾಬೀತುಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

"ರಿಷಭ್‌ ಪಂತ್‌ ಏನು ಮಾಡುತ್ತಿದ್ದಾರೆ? ಎಂದು ಹಲವು ಬಾರಿ ನನಗೆ ಅನಿಸಿತ್ತು. ಈ ರೀತಿ ಆಡಲು ಇದು ಸೂಕ್ತ ಸಮಯ ಅಲ್ಲ ಎಂದು ಭಾವಿಸಿದ್ದೆ. ಆದರೆ, ಫಲಿತಾಂಶಗಳನ್ನು ನೀವು ಒಮ್ಮೆ ನೋಡಿ. ಇದು ತುಂಬಾ ಮುಖ್ಯವಾಗುತ್ತದೆ. ಭಾರತ ತಂಡ ಈ ಪಂದ್ಯವನ್ನು ಗೆದ್ದಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ, ಏಕೆಂದರೆ ರಿಷಭ್‌ ಪಂತ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು," ಎಂದು ಎಬಿ ಡಿ ವಿಲಿಯರ್ಸ್‌ ಹೇಳಿದ್ದಾರೆ.

IND vs ENG: ಎರಡನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ನಿಂದ ತವರಿಗೆ ಮರಳಿದ ಟೀಮ್‌ ಇಂಡಿಯಾ ಯುವ ವೇಗಿ?

ಭಯ ಪಡುವ ಅಗತ್ಯವಿಲ್ಲ

"ಸಾಕಷ್ಟು ಮಂದಿ ತಕ್ಷಣ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಮಗೆ ಬದಲಾವಣೆ ಅಗತ್ಯವಿದೆ ಎಂದು ಮಾಧ್ಯಮದ ಜನರು ದೊಡ್ಡ ಹೆಡ್‌ ಲೈನ್‌ಗಳನ್ನು ಬರೆಯುತ್ತಿದ್ದಾರೆಂದು ನನಗೆ ತಿಳಿದಿದೆ. ಇನ್ನೂ ಭಯಪಡುವ ಸಮಯ ಬಂದಿಲ್ಲ ಎಂದು ನನಗನ್ನಿಸುತ್ತದೆ. ಏಕೆಂದರೆ ಇದು ಐದು ಪಂದ್ಯಗಳ ಟೆಸ್ಟ್‌ ಸರಣಿಯಾಗಿದೆ," ಎಂದು ದಕ್ಷಿಣ ಆಫ್ರಿಕಾ ದಿಗ್ಗಜ ತಿಳಿಸಿದ್ದಾರೆ.