ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಸಂಜು ಸ್ಯಾಮ್ಸನ್‌ ಅಲ್ಲ! ಸಿಎಸ್‌ಕೆಗೆ ಗೇಮ್‌ ಚೇಜಿಂಗ್‌ ಬ್ಯಾಟರ್‌ಆರಿಸಿದ ಚೇತೇಶ್ವರ್‌ ಪೂಜಾರ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಮಾಜಿ ಸಿಎಸ್‌ಕೆ ಆಟಗಾರ ಚೇತೇಶ್ವರ್‌ ಪುಜಾರಾ, ಎಂಎಸ್ ಧೋನಿ ಬ್ಯಾಟಿಂಗ್ ಕ್ರಮದಲ್ಲಿ ಮೇಲ್ಭಾಗದಲ್ಲಿ ಆಡಬೇಕೆಂಬ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಪಂದ್ಯಗಳ ಫಲಿತಾಂಶವನ್ನು ಬದಲಾಯಿಸುವ ವಿಶಿಷ್ಟ ಸಾಮರ್ಥ್ಯ ಧೋನಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಎಸ್‌ಕೆಗೆ ಗೇಮ್‌ ಚೇಜಿಂಗ್‌ ಬ್ಯಾಟರ್‌ ಆರಿಸಿದ ಚೇತೇಶ್ವರ್‌ ಪೂಜಾರ!

ಸಿಎಸ್‌ಕೆಗೆ ಪಂದ್ಯ ಬದಲಿಸುವ ಬ್ಯಾಟರ್‌ ಆರಿಸಿದ ಪೂಜಾರ. -

Profile
Ramesh Kote Mar 12, 2026 9:24 PM

ನವದೆಹಲಿ: ಟಿ20 ವಿಶ್ವಕಪ್ ಮುಗಿದ ನಂತರ ಕ್ರಿಕೆಟ್ ಅಭಿಮಾನಿಗಳ ಚಿತ್ತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026) ಟೂರ್ನಿಯ ಕಡೆಗೆ ನೆಟ್ಟಿದೆ. ಮಾರ್ಚ್ 28 ರಂದು ಆರಂಭವಾಗುವ ಈ ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕೂಡ ಒಂದಾಗಿದೆ. 2025ರ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸಿಎಸ್‌ಕೆ, ಈ ಬಾರಿ ಹೊಸ ತಂಡದೊಂದಿಗೆ ಮತ್ತೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಇದರ ನಡುವೆ ಭಾರತ ಟೆಸ್ಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (Cheteshwar Pujara) ಅವರು, ಸಿಎಸ್‌ಕೆಗೆ ತಂಡಕ್ಕೆ ಪಂದ್ಯ ಬದಲಿಸುವ ಆಟಗಾರನನ್ನು ಆರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದಿಂದ ಟ್ರೇಡ್ ಮೂಲಕ ಸೇರಿಕೊಂಡಿರುವ ಸಂಜು ಸ್ಯಾಮ್ಸನ್ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಈ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಆದರೆ ಸಿಎಸ್‌ಕೆ ಮಾಜಿ ಆಟಗಾರ ಚೇತೇಶ್ವರ್‌ ಪೂಜಾರ ಅವರ ಅಭಿಪ್ರಾಯದಲ್ಲಿ, ಬ್ಯಾಟಿಂಗ್‌ನಲ್ಲಿ ಪಂದ್ಯವನ್ನು ಟರ್ನ್‌ ಮಾಡುವ ಪ್ರಮುಖ ಆಟಗಾರ ಇನ್ನೂ ಎಂಎಸ್ ಧೋನಿಯೇ ಎಂದಿದ್ದಾರೆ.

IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಜಿಯೋಹಾಟ್‌ಸ್ಟಾರ್‌ ಜೊತೆ ಮಾತನಾಡಿದ ಪೂಜಾರ, ಎಂಎಸ್ ಧೋನಿ 8 ಅಥವಾ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಪಂದ್ಯವನ್ನು ಒಬ್ಬರೇ ತಿರುಗಿಸುವ ಸಾಮರ್ಥ್ಯ ಧೋನಿಯಲ್ಲಿದ್ದು, ಸಿಎಸ್‌ಕೆ ತಂಡದ ಇತರ ಬ್ಯಾಟರ್‌ಗಳಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

“ಎಂಎಸ್ ಧೋನಿ 8 ಅಥವಾ 9ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದರಲ್ಲಿ ನನಗೆ ಅರ್ಥ ಕಾಣುತ್ತಿಲ್ಲ. ಅವರು ಒಬ್ಬರೇ ಪಂದ್ಯವನ್ನು ತಿರುವುಮಾಡುವ ಸಾಮರ್ಥ್ಯ ಹೊಂದಿದ್ದಾರೆ, ಸಿಎಸ್‌ಕೆ ತಂಡದ ಇತರ ಯಾವುದೇ ಬ್ಯಾಟರ್ ಅದನ್ನು ಮಾಡಲಾರರು. ಅವರು ಕೇವಲ ಐದು ಅಥವಾ ಹತ್ತು ಚೆಂಡುಗಳನ್ನು ಮಾತ್ರ ಎದುರಿಸುತ್ತಾರೆ. ಆದರೆ ಮಾಹಿ ಭಾಯ್ 25 ಅಥವಾ 30 ಚೆಂಡುಗಳನ್ನು ಆಡಿದರೆ ಏನು ಮಾಡಬಹುದು ಎಂದು ಊಹಿಸಿ ನೋಡಿ,” ಎಂದು ಪುಜಾರಾ ಹೇಳಿದ್ದಾರೆ.

IPL 2026: ಗುಜರಾತ್‌ ಟೈಟನ್ಸ್‌ ತಂಡಕ್ಕೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

ಸಿಎಸ್‌ಕೆ ತಂಡದ ವಾತಾವರಣದ ಬಗ್ಗೆ ಪುಜಾರ ಹೇಳಿಕೆ

ಇದೇ ವೇಳೆ, ಸಿಎಸ್‌ಕೆ ತಂಡದ ಒಳಗಿನ ವಾತಾವರಣದ ಬಗ್ಗೆ ಕೂಡ ಪುಜಾರ ಮಾತನಾಡಿದರು. ಸಿಎಸ್‌ಕೆ ವ್ಯವಸ್ಥೆಯಲ್ಲಿ ಆಟಗಾರರಿಗೆ ತುಂಬಾ ಸುಲಭ ಮತ್ತು ಆರಾಮದಾಯಕ ವಾತಾವರಣ ಇರುತ್ತದೆ, ಅದು ಒಂದು ಕುಟುಂಬದಂತೆಯೇ ಎಂದು ಅವರು ಹೇಳಿದರು.

“ನಾನು ಸಿಎಸ್‌ಕೆ ವ್ಯವಸ್ಥೆಯ ಭಾಗವಾಗಿದ್ದೇನೆ. ಅಲ್ಲಿ ಆಟಗಾರರು ತುಂಬಾ ಆರಾಮವಾಗಿ ಇರುತ್ತಾರೆ; ಅದು ಒಂದು ಕುಟುಂಬದಂತಿದೆ. ಆ ತಂಡದಲ್ಲಿ ಇದ್ದಾಗ ಆಟಗಾರರಿಂದ ಏನು ನಿರೀಕ್ಷಿಸಲಾಗುತ್ತದೆ ಎಂಬುದರಲ್ಲಿ ಸ್ಪಷ್ಟತೆ ಇರುತ್ತದೆ. ನಿಷ್ಠೆ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ, ಏಕೆಂದರೆ ಸಿಎಸ್‌ಕೆ ತಂಡದಲ್ಲಿ ಸೇರಿದ ಆಟಗಾರರು ಸಾಮಾನ್ಯವಾಗಿ ಬಹಳ ವರ್ಷಗಳ ಕಾಲ ತಂಡದ ಭಾಗವಾಗಿರುತ್ತಾರೆ. ಈಗ ತಂಡದಲ್ಲಿ ಸ್ವಲ್ಪ ಪರಿವರ್ತನೆಯ ಹಂತ ನಡೆಯುತ್ತಿದೆ, ಆದ್ದರಿಂದ ಯುವ ಆಟಗಾರರಿಗೆ ಸ್ವಲ್ಪ ಹೆಚ್ಚು ಆದ್ಯತೆ ನೀಡಲಾಗುತ್ತಿದೆ,” ಎಂದು ಪುಜಾರಾ ತಿಳಿಸಿದ್ದಾರೆ.