ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ ಟೆಸ್ಟ್‌ ತಂಡದ ನಾಯಕತ್ವ ತಪ್ಪಲು ಕಾರಣ ತಿಳಿಸಿದ ಜಸ್‌ಪ್ರೀತ್‌ ಬುಮ್ರಾ!

ಭಾರತ ಟೆಸ್ಟ್‌ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ನಾಯಕನಾಗುವ ಸಾಧ್ಯತೆ ಇತ್ತು. ಆದರೆ, ಕೊನೆಯ ಹಂತದಲ್ಲಿ ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ಗೆ ಭಾರತ ಟೆಸ್ಟ್‌ ತಂಡದ ನಾಯಕತ್ವವನ್ನು ನೀಡಲಾಯಿತು. ಈ ಬಗ್ಗೆ ಟೀಮ್‌ ಇಂಡಿಯಾ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ಟೆಸ್ಟ್‌ ತಂಡದ ನಾಯಕತ್ವ ಕೈತಪ್ಪಲು ಕಾರಣ ತಿಳಿಸಿದ ಜಸ್‌ಪ್ರೀತ್‌ ಬುಮ್ರಾ!

ಟೆಸ್ಟ್‌ ನಾಯಕತ್ವ ಕೈತಪ್ಪಿದ ಬಗ್ಗೆ ಜಸ್‌ಪ್ರೀತ್‌ ಬುಮ್ರಾ ಸ್ಪಷ್ಟನೆ.

Profile Ramesh Kote Jun 17, 2025 9:17 PM

ನವದೆಹಲಿ: ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ಟೆಸ್ಟ್‌ (India Test Team) ತಂಡದ ನಾಯಕತ್ವ ತನಗೆ ನೀಡುವ ಬದಲು ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ಗೆ (Shubman Gill) ನೀಡಲು ಕಾರಣವೇನೆಂದು ಟೀಮ್‌ ಇಂಡಿಯಾ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಬಹಿರಂಗಪಡಿಸಿದ್ದಾರೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ಹಲವು ಬಾರಿ ಭಾರತ ತಂಡವನ್ನು ಮುನ್ನಡೆಸಿದ್ದರು ಹಾಗೂ ಯಶಸ್ವಿಯಾಗಿದ್ದರು. ಇದರ ಆಧಾರದ ಮೇಲೆ ಬುಮ್ರಾಗೆ ಟೆಸ್ಟ್‌ ತಂಡದ ನಾಯಕತ್ವವನ್ನು ನೀಡಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಬಿಸಿಸಿಐ ಸೆಲೆಕ್ಟರ್‌ಗಳು ಯುವ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ಗೆ ನಾಯಕತ್ವವನ್ನು ನೀಡಿತ್ತು.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ನಿಮಿತ್ತ ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಜಸ್‌ಪ್ರೀತ್‌ ಬುಮ್ರಾ, ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಜೊತೆ ಚರ್ಚೆ ನಡೆಸಿದ್ದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೆಡಿಕಲ್‌ ಹಾಗೂ ಕಂಡೀಷನಿಂಗ್‌ ತಂಡದ ಸಲಹೆಯಿಂದ ಟೆಸ್ಟ್‌ ನಾಯಕತ್ವ ಕೈ ತಪ್ಪಿದೆ ಎಂದು ಅವರು ಹೇಳಿಕೊಂಡಿದ್ದಾರೆ.

IND vs ENG: ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ರವಿ ಶಾಸ್ತ್ರಿ!

ಬುಮ್ರಾಗೆ ಟೆಸ್ಟ್‌ ನಾಯಕತ್ವ ಕೈ ತಪ್ಪಲು ಕಾರಣವೇನು?

"ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಿಮಿತ್ತ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಬಿಸಿಸಿಐಗೆ ಬಳಿ ಮಾತನಾಡಿದ್ದೆ. ನನ್ನ ಬೆನ್ನು ಗಾಯವನ್ನು ಗುಣಪಡಿಸಲು ನೆರವು ನೀಡಿದ್ದ ಜನರ ಜೊತೆ ಕೂಡ ನಾನು ಮಾತನಾಡಿದ್ದೆ ಹಾಗೂ ನಾವು ಸ್ವಲ್ಪಬುದ್ದಿವಂತರಾಗಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ," ಎಂದು ಜಸ್‌ಪ್ರೀತ್‌ ಬುಮ್ರಾ ತಿಳಿಸಿದ್ದಾರೆ.

"ನಾನು ಎಲ್ಲಾ ಟೆಸ್ಟ್‌ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ, ಹಾಗಾಗಿ ನನ್ನನ್ನು ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ಪರಿಗಣಿಸಬೇಡಿ ಎಂದು ಬಿಸಿಸಿಐಗೆ ಕರೆ ಮಾಡಿ ತಿಳಿಸಿದ್ದೆ. ಕೇವಲ ಮೂರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಬಳಿಕ ಇನ್ನುಳಿದ ಪಂದ್ಯಗಳಲ್ಲಿ ಬೇರೆ ಆಟಗಾರ ಮುನ್ನಡೆಸುವುದು ಒಳಿತಲ್ಲ. ಇದು ತಂಡದ ಪಾಲಿಗೆ ಮಾದರಿಯಲ್ಲ. ನನಗೆ ತಂಡವೇ ಮುಖ್ಯ," ಎಂದು ಟೀಮ್‌ ಇಂಡಿಯಾ ವೇಗಿ ಹೇಳಿದ್ದಾರೆ.

IND vs ENG: ವಿರಾಟ್‌ ಕೊಹ್ಲಿಯ ಲಂಡನ್‌ ಮನೆಯಲ್ಲಿ ಶುಭಮನ್‌ ಗಿಲ್‌, ರಿಷಭ್‌ ಪಂತ್‌ ಮೀಟಿಂಗ್‌!

ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಅಜಿತ್‌ ಅಗರ್ಕರ್‌ ಹೇಳಿದ್ದೇನು?

ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಕೂಡ ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಹೇಳಿಕೊಂಡಿದ್ದರು. "ಜಸ್‌ಪ್ರೀತ್‌ ಬುಮ್ರಾ ಆಸ್ಟ್ರೇಲಿಯಾದಲ್ಲಿ ಉಪ ನಾಯಕನಾಗಿದ್ದರು ಆದರೆ, ಅವರು ಎಲ್ಲಾ ಪಂದ್ಯಗಳನ್ನು ಆಡಲು ಸಾಧ್ಯವಾಗಿಲ್ಲವಾದರೆ, ಆಟಗಾರನಾಗಿ ಅವರು ನಮಗೆ ತುಂಬಾ ಮುಖ್ಯವಾಗುತ್ತಾರೆ. ಅವರು ಫಿಟ್‌ ಆಗಿ ಇರಬೇಕು. ನೀವು ತಂಡವನ್ನು ಮುನ್ನಡೆಸಿ, 15-16 ಓವರ್‌ಗಳನ್ನು ಬೌಲ್‌ ಮಾಡುವುದು ಹೆಚ್ಚುವರಿ ಹೊರೆಯಾಗುತ್ತದೆ. ಇದೀಗ ಬೇರೆ ಆಟಗಾರರು ನಿಮ್ಮಲ್ಲಿನ ಒತ್ತಡವನ್ನು ಪಡೆದುಕೊಳ್ಳುವವರು ಇದ್ದಾರೆ," ಎಂದು ಅಜಿತ್‌ ಅಗರ್ಕರ್‌ ತಿಳಿಸಿದ್ದರು.

"ಅವರ ಮೇಲೆ ಹೆಚ್ಚುವರಿ ಹೊರೆ ಹಾಕುವ ಬದಲು ಅವರು ಚೆನ್ನಾಗಿ ಬೌಲ್‌ ಮಾಡುವುದನ್ನು ನಾವು ಬಯಸುತ್ತೇವೆ. ಅವರಿಗೆ ಅದರ ಬಗ್ಗೆ ಅರಿವಿದೆ ಮತ್ತು ಅವರು ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ ಮತ್ತು ಫಿಟ್ ಆಗಿ ಬೌಲ್‌ ಮಾಡುತ್ತಾರೆ," ಎಂದು ಅಗರ್ಕರ್ ಹೇಳಿದ್ದರು.