IND vs ENG: ʻಚಾಂಪಿಯನ್ಸ್ ಟ್ರೋಫಿ ಗೆದ್ದ ಹೊರತಾಗಿಯೂ ನನ್ನ ಮೇಲೆ ಒತ್ತಡವಿತ್ತುʼ-ಗೌತಮ್ ಗಂಭೀರ್!
Gautam Gambhir on India's Test series vs ENG: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 20 ರಂದು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆರಂಭಿಸಲಿವೆ. ಇಂಗ್ಲೆಂಡ್ ಪ್ರವಾಸಕ್ಕೂ ತೆರಳುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮೇಲಿನ ಒತ್ತಡದ ಹೇಗಿದೆ ಎಂಬುದರ ಬಗ್ಗೆ ವಿವರಿಸಿದ್ದಾರೆ.

ತಮ್ಮ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್.

ನವದೆಹಲಿ: ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡ (Indian Cricket Team) ಇತ್ತೀಚೆಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy 2025) ಮುಡಿಗೇರಿಸಿಕೊಂಡಿತ್ತು. ಇದರ ಹೊರತಾಗಿಯೂ ನಮ್ಮ ಮೇಲೆ ಒತ್ತಡವಿತ್ತು ಎಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತಿಳಿಸಿದ್ದಾರೆ. ಭಾರತ ತಂಡ ಗೆಲ್ಲಲಿ ಅಥವಾ ಸೋಲಲಿ ಹೆಡ್ ಕೋಚ್ ಆಗಿ ನನ್ನ ಮೇಲೆ ಯಾವಾಗಲೂ ಒತ್ತಡ ಇರುತ್ತದೆ ಎಂದು ಹೇಳಿದ್ದಾರೆ. ಗಂಭೀರ್ ಹೆಡ್ ಕೋಚ್ ಆದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್ವಾಷ್ ಆಘಾತ ಅನುಭವಿಸಿತ್ತು. ನಂತರ ಆಸ್ಟ್ರೇಲಿಯಾ ವಿರುದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿಯೂ ಸೋಲು ಅನುಭವಿಸಿತ್ತು. ಇದರ ಪರಿಣಾಮ ಭಾರತ ತಂಡ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಇದೀಗ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇಂಗ್ಲೆಂಡ್ಗೆ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ನಾಯಕ ಶುಭಮನ್ ಗಿಲ್ ಜೊತೆ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದ ಹೆಡ್ ಗೌತಮ್ ಗಂಭೀರ್ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೂನ್ 20ರಂದು ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.
IND vs ENG Test: ಭಾರತದ ನೂತನ ಕಂಡೀಷನಿಂಗ್ ಕೋಚ್ ಆಗಿ ಆಡ್ರಿಯನ್ ಲೆ ರೌಕ್ಸ್ ನೇಮಕ
ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ನನ್ನ ಮೇಲೆ ಒತ್ತಡವಿತ್ತು
"ನಾವು ನಿರೀಕ್ಷಿತ ಫಲಿತಾಂಶ ಪಡೆಯಲಿ ಅಥವಾ ಇಲ್ಲದೇ ಇರಲಿ, ನಾನು ಯಾವಾಗಲೂ ಒತ್ತಡದಲ್ಲಿರುತ್ತೇನೆ. ನ್ಯೂಜಿಲೆಂಡ್ ಸರಣಿಯ ಬಳಿಕ ನೀವು ಈ ಪ್ರಶ್ನೆಯನ್ನು ಕೇಳಿದ್ದರೂ, ಹೌದು, ನಾನು ಒತ್ತಡದಲ್ಲಿದ್ದೇನೆಂದು ಹೇಳುತ್ತಿದ್ದೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕವೂ ಕೂಡ ನಾನು ಒತ್ತಡದಲ್ಲಿದ್ದೇನೆಂದು ಹೇಳುತ್ತಿದ್ದೆ," ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
"ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಹೊರತಾಗಿಯೂ ನಾನು ಒತ್ತಡದಲ್ಲಿದ್ದೆ, ಏಕೆಂದರೆ ಹೆಡ್ ಕೋಚ್ ಆಗಿ ನಿಮಗೆ ಯಾವಾಗಲೂ ನಿಮಗೆ ನಿರೀಕ್ಷಿತ ಫಲಿತಾಂಶ ಬೇಕಾಗುತ್ತದೆ. ನೀವು ಈ ತಂಡದ ಭಾಗವಾಗಿದ್ದರೆ, ನಿಮಗೆ ಯಾವಾಗಲೂ ಸಕಾರಾತ್ಮಕ ಫಲಿತಾಂಶ ಬೇಕಾಗುತ್ತದೆ," ಎಂದು ಭಾರತ ತಂಡದ ಹೆಡ್ ಕೋಚ್ ಹೇಳಿದ್ದಾರೆ.
IND vs ENG Test: ಇಂಗ್ಲೆಂಡ್ಗೆ ಪ್ರಯಾಣಿಸಿದ ಭಾರತ ತಂಡ
ನಾಯಕತ್ವದ ಬಗ್ಗೆ ಗಿಲ್ ಹೇಳಿದ್ದೇನು?
"ನಾನು ಅನುಸರಿಸಬೇಕಾದ ಯಾವುದೇ ಶೈಲಿ ನನಗೆ ಇಲ್ಲ. ನಾನು ಆಟಗಾರರೊಂದಿಗೆ ಸಂವಹನ ನಡೆಸುವುದನ್ನು ಇಷ್ಟಪಡುತ್ತೇನೆ, ಅವರಿಗೆ ಸುರಕ್ಷಿತ ಭಾವನೆ ಮೂಡಿಸುವುದನ್ನು, ಅವರ ದೌರ್ಬಲ್ಯ ಮತ್ತು ಸಾಮರ್ಥ್ಯಗಳ ಬಗ್ಗೆ ಮಾತನಾಡುವುದನ್ನು, ಅವರಿಗೆ ಸಾಂತ್ವನ ಮತ್ತು ಅವರೊಂದಿಗೆ ಬಾಂಧವ್ಯವನ್ನು ನೀಡುವುದನ್ನು ಇಷ್ಟಪಡುತ್ತೇನೆ... ನೀವು ಯಾವುದೇ ತಂಡದ ನಾಯಕನಾಗಿದ್ದಾಗ ಅದು ಬಹಳ ಮುಖ್ಯವಾಗುತ್ತದೆ. ಸುರಕ್ಷಿತ ಭಾವನೆ ಇದ್ದಾಗ ಮಾತ್ರ ಆಟಗಾರರು ಶೇ 100ರಷ್ಟು ಕೊಡುಗೆಯನ್ನು ನೀಡಲು ಸಾಧ್ಯ," ಎಂದು ಭಾರತ ತಂಡದ ನೂತನ ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ.