IPL 2025:ʻದಿಗ್ವೇಶ್ ಸಿಂಗ್ ರನ್ಔಟ್ ವಿವಾದʼ-ರಿಷಭ್ ಪಂತ್ ವಿರುದ್ಧ ಅಶ್ವಿನ್ ಕಿಡಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ದಿಗ್ವೇಶ್ ಸಿಂಗ್ ಅವರ ಮಾಡಿದ ವಿವಾದಾತ್ಮಕ ರನ್ಔಟ್ ಸಂಬಂಧ ನಾಯಕ ರಿಷಭ್ ಪಂತ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ಆರ್ ಅಶ್ವಿನ್ ಟೀಕಿಸಿದ್ದಾರೆ.

ರಿಷಭ್ ಪಂತ್ ನಿರ್ಧಾರವನ್ನು ಟೀಕಿಸಿದ ಅಶ್ವಿನ್.

ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಲಖನೌ ಸೂಪರ್ ಜಯಂಟ್ಸ್ (LSG) ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ದಿಗ್ವೇಶ್ ಸಿಂಗ್ ರಾಠಿ ಅವರು ಮಾಡಿದ್ದ ವಿವಾದಾತ್ಮಕ ರನ್ಔಟ್ ಸಂಬಂಧ ಎಲ್ಎಸ್ಜಿ ನಾಯಕ ರಿಷಭ್ ಪಂತ್ (Rishabh Pant) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ. ಟೂರ್ನಿಯ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುವ ಸಲುವಾಗಿ ಆರ್ಸಿಬಿಗೆ ಈ ಪಂದ್ಯದ ಗೆಲುವು ತುಂಬಾ ಮುಖ್ಯವಾಗಿತ್ತು. ಅದರಂತೆ ಈ ಪಂದ್ಯದಲ್ಲಿ 228 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್ಸಿಬಿ ತಂಡ ಗೆಲ್ಲುವ ಸನಿಹದಲ್ಲಿ ಸಾಗುತ್ತಿದ್ದಾಗ ದಿಗ್ವೇಶ್ ಸಿಂಗ್ ಬೌಲಿಂಗ್ ಸಮಯದಲ್ಲಿ ನಾನ್ಸ್ಟ್ರೈಕ್ ಕಡೆ ಜಿತೇಶ್ ಶರ್ಮಾ ಅವರನ್ನು ರನ್ ಔಟ್ ಮಾಡಿದ್ದರು.
ದಿಗ್ವೇಶ್ ಸಿಂಗ್ ಬೌಲ್ ಮಾಡುತ್ತಿದ್ದ ವೇಳೆ ಜಿತೇಶ್ ಶರ್ಮಾ ಕ್ರೀಸ್ ತೊರೆದು ಮುಂದೆ ಸಾಗುತ್ತಿದ್ದರು. ಈ ವೇಳೆ ದಿಗ್ವೇಶ್ ರಾಠಿ ಬೌಲಿಂಗ್ ಮುಗಿಸದೆ, ರನ್ಔಟ್ ಮಾಡಿದರು. ಈ ವೇಳೆ ಅಂಪೈರ್ಗೆ ಮನವಿ ಸಲ್ಲಿಸಿದ್ದರು. ಆದರ, ಎಲ್ಎಸ್ಜಿ ನಾಯಕ ರಿಷಭ್ ಪಂತ್, ಔಟ್ ಮನವಿಯನ್ನು ವಾಪಸ್ ತೆಗೆದುಕೊಂಡು ಕ್ರೀಡಾ ಸ್ಪೂರ್ತಿ ಮೆರೆದರು. ಇದರ ಸಲುವಾಗಿ ರಿಷಭ್ ಪಂತ್ ಅವರನ್ನುಆರ್ಸಿಬಿ ಅಭಿಮಾನಿಗಳು ಕೂಡ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಸ್ಪಿನ್ ದಿಗ್ಗಜ ಆರ್ ಅಶ್ವಿನ್, ನಾಯಕ ರಿಷಭ್ ಪಂತ್ ಅವರ ಕೆಲಸ ತಮ್ಮ ಆಟಗಾರ ದಿಗ್ವೇಶ್ ಸಿಂಗ್ ಅವರನ್ನು ಬೆಂಬಲಿಸುವುದು. ಅದು ಬಿಟ್ಟು ಅವರಿಗೆ ಹಿನ್ನಡೆ ತಂದುಕೊಡುವುದು ಅಲ್ಲ ಎಂದು ಹೇಳಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಬೌಲರ್ ಜೊತೆ ಮಾತನಾಡಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
"ಆಟಗಾರನನ್ನು ಬೆಂಬಲಿಸುವುದು ನಾಯಕನ ಕರ್ತವ್ಯವಾಗಿದೆ. ಒಬ್ಬ ಬೌಲರ್ ಅನ್ನು ಸಣ್ಣವನೆಂದು ಭಾವಿಸುವುದು ನಾಯಕನ ಕೆಲಸವಲ್ಲ. ಅಪೀಲ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಒಮ್ಮೆ ಬೌಲರ್ ಜೊತೆ ಆರಂಭದಲ್ಲಿ ಚರ್ಚೆ ನಡೆಸಬೇಕಾಗಿತ್ತು," ಎಂದು ಅಶ್ವಿನ್ ಹೇಳಿದ್ದಾರೆ.
RCB vs LSG: ಹೈಸ್ಕೋರಿಂಗ್ ಪಂದ್ಯದ ಗೆಲುವಿನ ಶ್ರೇಯ ಈ ಇಬ್ಬರಿಗೆ ಸಲ್ಲಬೇಕೆಂದ ಅಗರ್ವಾಲ್!
"ಅವರು ಚರ್ಚೆ ನಡೆಸಿದ್ದಾರೆಂದು ನಮಗೆ ಗೊತ್ತಿಲ್ಲ. ಆದರೆ ಕೋಟಿ ಕೋಟಿ ಜನರ ಮುಂದೆ ಆ ಯುವಕನ ಮೇಲಿನ ಈ ಅವಹೇಳನವನ್ನು ನಿಲ್ಲಿಸೋಣ. ನಾವು ಬೇರೆಯವರಿಗೆ ಹಾಗೆ ಮಾಡುತ್ತೇವೆಯೇ? ಬೌಲರ್ ಏಕೆ ಸಣ್ಣವನಾಗಿ ಕಾಣುತ್ತಾನೆ? ಅದು ನಿಜಕ್ಕೂ ಅವಮಾನ," ಎಂದು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ತಿಳಿಸಿದ್ದಾರೆ.
ಬೌಲರ್ ಸಣ್ಣವನಾಗುತ್ತಾನೆ: ಅಶ್ವಿನ್
"ಒಬ್ಬ ಬೌಲರ್ ತುಂಬಾ ಸಣ್ಣವನಾಗಿ ಭಾವಿಸುತ್ತಾನೆ ಮತ್ತು ಅವರು ಮತ್ತೊಮ್ಮೆ ಈ ರೀತಿ ಮಾಡಲು ಬಯಸುವುದಿಲ್ಲವಾದರೆ ಮತ್ತೇನು ಮಾಡುವುದು? ಅವರು ಮತ್ತೊಮ್ಮೆ ಹಾಗೆ ಮಾಡಬಾರದು (ನಾನ್-ಸ್ಟ್ರೈಕರ್ನ ತುದಿಯಲ್ಲಿ ರನ್ ಔಟ್) ಜನರು ಎಂದು ಹೇಳುತ್ತಾರೆ. ಅವರು ಹಾಗೆ ಏಕೆ ಮಾಡಬಾರದು? ಅಂದಹಾಗೆ ಇದು ನಿಯಮದ ಬಗ್ಗೆಯೂ ಅಲ್ಲ. ಎರಡು ರನ್ ಅನ್ನು ಪೂರ್ಣಗೊಳಿಸಲು ಬ್ಯಾಟ್ಸ್ಮನ್ಗೆ ಎರಡು ಹೆಜ್ಜೆ ನೀಡಿದಂತಾಗುತ್ತದೆ," ಎಂದು ಅಶ್ವಿನ್ ಗುಡುಗಿದ್ದಾರೆ.