ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Waqf
Prakash Shesharaghavachar Column: ನಿಮ್ಮ ರಕ್ಷಣೆಗೆ ಇವರು ಯಾರೂ ಬರುವುದಿಲ್ಲ

ನಿಮ್ಮ ರಕ್ಷಣೆಗೆ ಇವರು ಯಾರೂ ಬರುವುದಿಲ್ಲ

ಢೋಂಗಿ ಜಾತ್ಯತೀತವಾದಿಗಳು ದೇಶದ ಬಹುಸಂಖ್ಯಾತರ ಪರ ನಿಲ್ಲುವ ಯಾವುದೇ ಲಕ್ಷಣ ಕಾಣು ವುದೇ ಇಲ್ಲ. ತಮ್ಮ ಮತಬ್ಯಾಂಕ್ ಅನ್ನು ಕಾಪಾಡುವ ಸಲುವಾಗಿ ಹಿಂದೂಗಳ ಹಿತಾಸಕ್ತಿಯ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಮನಸ್ಥಿತಿ ಇವರಲ್ಲಿ ದಟ್ಟವಾಗಿದೆ. ಹಿಂದೂಗಳನ್ನು ಕಾಪಾಡುವ ಅಥವಾ ಅವರ ರಕ್ಷಣೆಗೆ ನಿಲ್ಲುವ ಪ್ರಜ್ಞಾವಂತ ವಿರೋಧ ಪಕ್ಷ ಇಂದು ಮರೆಯಾಗಿದೆ.

Nishikant Dubey Controversy: ಚುನಾವಣಾ ಆಯುಕ್ತರಲ್ಲ, ಮುಸ್ಲಿಂ ಆಯುಕ್ತ- ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ ನಿಶಿಕಾಂತ್ ದುಬೆ..!

Nishikant Dubey Controversy: ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ಬಳಿಕ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಭಾನುವಾರ ಬೆಳಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಸ್.ವೈ.ಖುರೇಶಿ ಅವರೊಂದಿಗೆ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಾಗ್ವಾದ ನಡೆಸಿದ್ದಾರೆ.

NCW: ಮುರ್ಷಿದಾಬಾದ್ ಗಲಭೆ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ; ಭದ್ರತೆ ಒದಗಿಸಿ ಎಂದ ಸಂತ್ರಸ್ತರು

ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ

Vijaya Rahatkar: ಬಹು ಚರ್ಚಿತ ವಕ್ಫ್‌ ತಿದ್ದುಪಡಿ ಕಾಯ್ದೆ ದೇಶದಲ್ಲಿ ಜಾರಿಯಾದ ಬಳಿಕ ಹಿಂಸಾಚಾರ ಭುಗಿಲೆದ್ದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ನಿಯೋಗವು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿತು.

Waqf Amendment Act 2025: ವಕ್ಫ್‌ ಮಂಡಳಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್‌ ತಡೆ

ವಕ್ಫ್‌ ಮಂಡಳಿಗೆ ಮುಸ್ಲಿಮೇತರ ಸದಸ್ಯರ ನೇಮಕಕ್ಕೆ ಸುಪ್ರೀಂ ತಡೆ

Waqf Amendment Act 2025: ಬಹು ಚರ್ಚಿತ ಮತ್ತು ವಿವಾದಿತ 2025 ರ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರವು ಮುಸ್ಲಿಮೇತರರನ್ನು ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ನೇಮಿಸಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

Waqf Amendment Bill: ವಕ್ಫ್ ಕಾಯ್ದೆಯ ಕುರಿತು ಟೀಕಿಸಿದ ಪಾಕ್‌ಗೆ ಆಧಾರರಹಿತ ಆರೋಪ ಎಂದು ತಿರುಗೇಟು ಕೊಟ್ಟ ಭಾರತ

ವಕ್ಫ್ ಕಾಯ್ದೆಯ ಕುರಿತು ಟೀಕಿಸಿದ ಪಾಕ್‌ಗೆ ತಿರುಗೇಟು ಕೊಟ್ಟ ಭಾರತ

ವಕ್ಫ್ (ತಿದ್ದುಪಡಿ) ಕಾಯ್ದೆಯ ಬಗ್ಗೆ ಪಾಕಿಸ್ತಾನದ ಟೀಕೆಯನ್ನು ಭಾರತ ಮಂಗಳವಾರ ಬಲವಾಗಿ ತಿರಸ್ಕರಿಸಿದೆ. ಭಾರತದ ಆಂತರಿಕ ವಿಷಯದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಹಕ್ಕು ಇಲ್ಲ ಮತ್ತು ಇತರರಿಗೆ ಉಪದೇಶ ಮಾಡುವ ಬದಲು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದೆ.

Viral Video: ವಕ್ಫ್ ತಿದ್ದುಪಡಿ ಕಾಯ್ದೆ: ವಲಸೆ ಹೋದ ಹಿಂದೂಗಳ ಬಗ್ಗೆ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ

ವಕ್ಫ್ ತಿದ್ದುಪಡಿ ಕಾಯ್ದೆ; ಧೀರೇಂದ್ರ ಶಾಸ್ತ್ರಿ ಕಳವಳ

ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದಿದ್ದು, ಈ ಹಿನ್ನೆಲೆಯಲ್ಲಿ ಮುರ್ಷಿದಾಬಾದ್‍ನಿಂದ ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ. ಈ ಬಗ್ಗೆ ಬಾಗೇಶ್ವರ ಧಾಮ್ ಪಂಡಿತ ಧೀರೇಂದ್ರ ಶಾಸ್ತ್ರಿ ಕಳವಳ ವ್ಯಕ್ತಪಡಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Waqf Amendment Act: ವಕ್ಫ್ ಕಾನೂನನ್ನು ರಾಜ್ಯ ಸರ್ಕಾರಗಳು ನಿರಾಕರಿಸುವಂತಿಲ್ಲ: ಬಿಜೆಪಿ

ವಕ್ಫ್ ಕಾನೂನು ಪ್ರಶ್ನಿಸಿದವರಿಗೆ ಬಿಜೆಪಿ ತಿರುಗೇಟು

ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ದೇಶಾದ್ಯಂತ ಕಾನೂನು ಜಾರಿಗೆ ಬಂದಿದೆ. ಜತೆಗೆ ಕೆಲವು ರಾಜ್ಯಗಳು ತಾವು ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದಿವೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲಎಂದು ಹೇಳಿದೆ.

Pralhad Joshi: ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ, ವಕ್ಫ್‌ ಆಸ್ತಿ ಸಂರಕ್ಷಣೆಗೆ: ಜೋಶಿ ಸ್ಪಷ್ಟನೆ

ಜನರ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದೆ ಕಾಂಗ್ರೆಸ್‌: ಜೋಶಿ ಆರೋಪ

Pralhad Joshi: ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ. ವಕ್ಫ್‌ ಆಸ್ತಿ ಸಂರಕ್ಷಣೆಗಾಗಿಯೇ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲೆಂದೇ ಜಾರಿ ತಂದಿದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Anti-Waqf Act Protest:  ವಕ್ಫ್ ಕಾಯ್ದೆಗೆ ವಿರೋಧ; ಪಶ್ವಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: 3 ಬಲಿ

ಪಶ್ವಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ: 3 ಬಲಿ

Waqf (Amendment) Act 2025: ಬಹು ಚರ್ಚಿತ ವಕ್ಫ್ ಕಾಯ್ದೆ ಜಾರಿಯಾಗಿದೆ. ಈ ಮಧ್ಯೆ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 3 ಮಂದಿ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಹಿಂಸಾಚಾರ ಭುಗಿಲೆದ್ದಿದೆ ಎಂದು ಮೂಲಗಳು ತಿಳಿಸಿವೆ.

West Bengal Violence: ಪಶ್ಚಿಮ ಬಂಗಾಳದಲ್ಲಿ ಭಾರೀ ಹಿಂಸಾಚಾರ; ರೈಲಿಗೆ ಕಲ್ಲು ತೂರಾಟ-  ಕಚ್ಚಾ ಬಾಂಬ್‌ ಎಸೆದು ಅಟ್ಟಹಾಸ

ಭಾರೀ ಹಿಂಸಾಚಾರ; ರೈಲಿಗೆ ಕಲ್ಲು ತೂರಾಟ- ವಾಹನಗಳಿಗೆ ಬೆಂಕಿ

West Bengal violence: ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯ ನಿಮ್ಟಿಟಾ ಮತ್ತು ಸುಟಿಯಲ್ಲಿ ಶುಕ್ರವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯ ನಂತರ ಉದ್ವಿಗ್ನತೆ ಉಂಟಾಗಿತ್ತು. ನಿಮ್ಟಿಟಾ ರೈಲು ನಿಲ್ದಾಣದಲ್ಲಿ, ಪ್ರತಿಭಟನಾಕಾರರು ಗಂಟೆಗಳ ಕಾಲ ರೈಲ್ವೆ ಹಳಿಗಳನ್ನು ತಡೆದು ರೈಲ್ವೆ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ.

Mohan Vishwa Column: ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಪುರಾತನ ವಕ್ಫ್‌ ಕಾಯ್ದೆಗೆ ಎಳ್ಳು-ನೀರು

ಬ್ರಿಟಿಷರ ಕಾಲದಿಂದಲೂ ಮುಸ್ಲಿಮರನ್ನು ಓಲೈಸುವ ಕೆಲಸವು ವಕ್ಫ್ ಕಾಯಿದೆಯ ಮೂಲಕ ನಡೆದು ಕೊಂಡು ಬಂದಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ಗಳು ಅಂದಾಜು 8,94,509 ಆಸ್ತಿ ಗಳನ್ನು ಹೊಂದಿವೆ. 2013ರಲ್ಲಿ ಅಂದಾಜು 18 ಲಕ್ಷ ಎಕರೆಯಷ್ಟಿದ್ದ ವಕ್ಫ್ ಆಸ್ತಿ, 2025ರ ಹೊತ್ತಿಗೆ 37 ಲಕ್ಷ ಎಕರೆಯಷ್ಟಾಗಿತ್ತು.

Prakash Shesharaghavachar Column: 'ವಕ್ಫ್ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

'ವಕ್ಫ್‌ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯವಾಗಿತ್ತು.

Droupadi Murmu: ವಕ್ಫ್​  ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ವಕ್ಫ್​ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ

ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪಾಸ್​ ಆಗಿದ್ದ ಮಹತ್ವದ ವಕ್ಫ್​ (ತಿದ್ದುಪಡಿ) ಮಸೂದೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಗೀಕರಿಸಿದ್ದಾರೆ. ಜೊತೆಗೆ, ರಾಷ್ಟ್ರಪತಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ-2025ಕ್ಕೂ ಕೂಡ ತಮ್ಮ ಒಪ್ಪಿಗೆ ನೀಡಿದ್ದಾರೆ.

Kangana Ranaut: ಕಾಂಗ್ರೆಸ್‌ ಬೆಂಬಲದಿಂದಲೇ ವಕ್ಫ್‌ ಮಂಡಳಿ ನಿಯಮ ಉಲ್ಲಂಘಿಸಿದ್ದು: ಕಂಗನಾ ರಾಣಾವತ್‌ ವಾಗ್ದಾಳಿ

ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ಕಂಗನಾ ಹೇಳಿದ್ದೇನು?

Waqf Boards: ʼʼಕಾಂಗ್ರೆಸ್‌ನ ಕೃಪಕಟಾಕ್ಷದಿಂದಲೇ ವಕ್ಫ್‌ ಮಂಡಳಿಗೆ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಾಯಿತು. ಸ್ವಾತಂತ್ರ್ಯ ಪೂರ್ವದಲ್ಲೇ ದೊಡ್ಡ ಪಿತೂರಿ ನಡೆಸಿ ವಕ್ಫ್‌ ಮಂಡಳಿ ರಚಿಸಲಾಯಿತುʼʼ ಎಂದು ಬಿಜೆಪಿ ಸಂಸದೆ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ವಾಗ್ದಾಳಿ ನಡೆಸಿದ್ದಾರೆ.

Waqf Amendment Bill: ಯಾವುದೇ ಮಸೀದಿ ಟಚ್‌ ಮಾಡಲ್ಲ... ವಕ್ಫ್‌ ಮಸೂದೆ ಬಗ್ಗೆ ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ

ಯಾವುದೇ ಮಸೀದಿ ಟಚ್‌ ಮಾಡಲ್ಲ...ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ

Ravi Shankar Prasad:ಭಾರೀ ವಿವಾದಗಳ ನಡುವೆಯೇ ವಕ್ಫ್‌ ಮಸೂದೆ ಸಂಸತ್‌ನಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಬಗ್ಗೆ ಮಾಜಿ ಕೇಂದ್ರ ಸಚಿವ ರವಿ ಶಂಕರ್‌ ಪ್ರಸಾದ್‌ ಸ್ಪಷ್ಟನೆ ಕೊಟ್ಟಿದ್ದು, ಈ ಮಸೂದಯಿಂದ ದೇಶದ ಯಾವುದೇ ಮಸೀದಿಗೆ ಹಾನಿಯಾಗಲ್ಲ ಎಂದಿದ್ದಾರೆ.

Waqf Bill: ಕರ್ನಾಟಕದಲ್ಲಿ ವಕ್ಫ್‌ ಆಸ್ತಿ ಕಬಳಿಸಿದ ನಾಯಕರ ಹೆಸರು ಬಹಿರಂಗ; ಪಟ್ಟಿ ಇಲ್ಲಿದೆ

ಕರ್ನಾಟಕದಲ್ಲಿ ವಕ್ಫ್‌ ಆಸ್ತಿ ಕಬಳಿಸಿದ ನಾಯಕರ ಹೆಸರು ಬಹಿರಂಗ

Radha Mohan Das Agarwal: ಸುದೀರ್ಘ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದೇ ವೇಳೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನದಾಸ್‌‍ ಅಗರ್ವಾಲ್‌ ರಾಜ್ಯದಲ್ಲಿ ಯಾವ ಯಾವ ಕಾಂಗ್ರೆಸ್‌ ನಾಯಕರು ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎನ್ನುವ ಪಟ್ಟಿ ಮಂಡಿಸಿದ್ದಾರೆ.

Waqf Bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ- ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಮುಸಲ್ಮಾನರು! ವಿಡಿಯೊ ಇದೆ

ವಕ್ಫ್ ಮಸೂದೆ ಅಂಗೀಕಾರವಾಗ್ತಿದ್ದಂತೆ ಮುಸ್ಲಿಮರಿಂದಲೇ ಸಂಭ್ರಮಾಚರಣೆ

ವಕ್ಫ್ ಕಾಯ್ದೆಗೆ(Waqf Bill) ತಿದ್ದುಪಡಿಯಿಂದ ಬಡ ಮತ್ತು ಪಸ್ಮಾಂಡ ಮುಸ್ಲಿಮರಿಗೆ ಅನುಕೂಲವಾಗುತ್ತದೆ. ಇದು ಅವರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ದಾರಾ ಶಿಕೋಹ್ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ವಿರೋಧಿಸಿದವರನ್ನು ಟೀಕಿಸುತ್ತಿರುವವರು ಹುಸಿ-ಜಾತ್ಯತೀತರು. ಅವರು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

Waqf Amendment Bill: ಸಂಸತ್ತಿನಲ್ಲಿ ಅಂಗೀಕಾರಗೊಂಡ ವಕ್ಫ್ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಕಾಂಗ್ರೆಸ್

ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲಿದೆ ಕಾಂಗ್ರೆಸ್

Waqf Amendment Bill: ಸಂಸತ್ತಿನ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿರುವ ವಕ್ಫ್‌ (ತಿದ್ದುಪಡಿ) ಮಸೂದೆ 2025ರ ವಿರುದ್ಧ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಕಾಂಗ್ರೆಸ್‌ ಶುಕ್ರವಾರ ಹೇಳಿದೆ. ಮಸೂದೆ ಅಂಗೀಕಾರಗೊಂಡಿದ್ದು, ಭಾರತೀಯ ಸಂವಿಧಾನದ ಮೇಲೆ ನರೇಂದ್ರ ಮೋದಿ ಸರ್ಕಾರದ ದಾಳಿ" ಎಂದು ಕರೆದಿರುವ ಕಾಂಗೆಸ್‌ ರಾಷ್ಟ್ರೀಯ ವಕ್ತಾರ ಜೈರಾಂ ರಮೇಶ್‌, ಈ ಮಸೂದೆಯ ವಿರುದ್ಧ ಕಾಂಗ್ರೆಸ್‌ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

Waqf Amendment Bill: ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಯಾವ ರೀತಿ ಇತ್ತು? ಇಲ್ಲಿದೆ ಸಂಪೂರ್ಣ ವರದಿ

ತೀವ್ರ ವಿರೋಧ ನಡುವೆಯೂ ಜಾರಿಯಾಯ್ತು ವಕ್ಫ್ ತಿದ್ದುಪಡಿ ಮಸೂದೆ

Waqf Amendment Bill: ಭಾರೀ ವಿವಾದಕ್ಕೀಡಾಗಿರುವ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ, ಏ. 2ರಂದು ಲೋಕಸಭೆಯಲ್ಲಿ ಮಂಡಿಸಿತು. ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು. ಆದರೆ, ವಿಪಕ್ಷಗಳಿಂದ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಮಧ್ಯರಾತ್ರಿಯವರೆಗೆ ಈ ಕುರಿತಂತೆ ಪರ ವಿರೋಧ ಚರ್ಚೆಗಳು ನಡೆದವು. ಈ ಮಸೂದೆಯು ಕಾಯ್ದೆಯಾಗಿ ಬಂದಾಗ ಇದಕ್ಕೆ ಉಮೀದ್ ಎಂದು ಹೆಸರಿಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

Tejaswi Surya: ಹಿಂದೂಗಳಿಗೆ ಒಂದು ಇಂಚು ಭೂಮಿಯ ಅಗತ್ಯವಿಲ್ಲ- ಓವೈಸಿ ವಿರುದ್ಧ ತೇಜಸ್ವಿ ಸೂರ್ಯ ಅಬ್ಬರ; ಭಾರೀ ವೈರಲಾಗ್ತಿದೆ ಈ ವಿಡಿಯೊ

ಓವೈಸಿ ವಿರುದ್ಧ ಅಬ್ಬರಿಸಿದ ತೇಜಸ್ವಿ ಸೂರ್ಯ-ವಿಡಿಯೊ ಇದೆ

Waqf Bill: ಸಂಸದ ಓವೈಸಿ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ( Tejaswi Surya) ಅವರು ಹಿಂದುಗಳಿಗೆ ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಬೇಕಾಗಿಲ್ಲ. ಇದು ನನ್ನ ವಚನ. ನಿಮ್ಮ ಮೂಲಕ ಎಲ್ಲ ಮುಸ್ಲಿಂ ಸಮುದಾಯಕ್ಕೆ ನಾನು ಹೇಳ ಬಯಸುತ್ತೇನೆ. ನಿಮ್ಮ ಸ್ವಂತ ಭೂಮಿಯ ಒಂದು ಇಂಚು ಕೂಡ ಹಿಂದೂಗಳಿಗೆ ಬೇಕಾಗಿಲ್ಲ ಎಂದರು.

Waqf Bill: ವಕ್ಫ್‌ ಮಸೂದೆಗೆ ಜೆಡಿ(ಯು) ಬೆಂಬಲ; ನಿತೀಶ್ ಬಣಕ್ಕೆ ಗುಡ್‌ಬೈ ಹೇಳಿದ ಹಿರಿಯ ನಾಯಕರು

ವಕ್ಫ್ ಮಸೂದೆಗೆ ಬೆಂಬಲ; ನಿತೀಶ್ ಬಣಕ್ಕೆ ಗುಡ್‌ಬೈ ಹೇಳಿದ ನಾಯಕರು

Waqf Bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಲು ತಮ್ಮ ಪಕ್ಷ ಬೆಂಬಲ ನೀಡಿದ್ದನ್ನು ಖಂಡಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ)ದ ಇಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿರುವುದನ್ನು ಯೋಚಿಸಿ ನಾನು ನಿರಾಶನಾಗಿದ್ದೇನೆ” ಎಂದು ಹಿರಿಯ ಜೆಡಿ(ಯು) ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ, ನಿತೀಶ್ ಕುಮಾರ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

Waqf Bill: ಐತಿಹಾಸಿಕ ಕ್ಷಣ... ವಕ್ಫ್‌ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಪ್ರಧಾನಿ ಮೋದಿ ಹರ್ಷ

ವಕ್ಫ್‌ ಮಸೂದೆ ಅಂಗೀಕಾರ; ಪ್ರಧಾನಿ ಮೋದಿ ಹರ್ಷ

PM Narendra Modi:ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ, ಪ್ರಧಾನಿ ಮೋದಿ, ಸಂಸತ್ತಿನ ಎರಡೂ ಸದನಗಳಿಂದ ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯ ಅಂಗೀಕಾರವು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ಅವಕಾಶ ವಂಚಿತರಿಗೆ ಸಹಾಯ ಮಾಡುತ್ತದೆ ಎಂದರು.

Waqf Bill: ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ವಕ್ಫ್‌ ವಿಧೇಯಕ ಅಂಗೀಕಾರ

ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ವಕ್ಫ್‌ ವಿಧೇಯಕ ಅಂಗೀಕಾರ

ರಾಜ್ಯಸಭೆಯಲ್ಲಿ ವಕ್ಫ್‌ ತಿದ್ದುಪಡಿ ವಿಧೇಯಕದ ಪರವಾಗಿ 138 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.ಇದರಿಂದ ಉಭಯ ಸದನಗಳಲ್ಲೂ ವಿಧೇಯಕ ಅಂಗೀಕಾರವಾದಂತಾಗಿದ್ದು, ಕಾನೂನಾಗಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ ಅದು ಕಾಯಿದೆಯಾಗಲಿದೆ.

Kiren Rijiju: ಲೋಕಸಭೆಯ ಬಳಿಕ ರಾಜ್ಯಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ

ರಾಜ್ಯಸಭೆಯಲ್ಲಿಯೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಿದ ಕೇಂದ್ರ

Waqf Amendment Bill: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಬುಧವಾರ (ಏ. 2) ಮಂಡಿಸಿದ ವಕ್ಫ್‌ ತಿದ್ದುಪಡಿ ಮಸೂದೆ ಬಹುಮತದೊಂದಿಗೆ ಅಂಗೀಕಾರವಾಗಿದ್ದು, ಗುರುವಾರ (ಏ. 3) ರಾಜ್ಯಸಭೆಯ ಮುಂದಿಟ್ಟಿದೆ. ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆದ ಬಳಿಕ ವೋಟಿಂಗ್‌ಗೆ ಹಾಕಲಾಗುತ್ತದೆ.