ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಉತ್ತರ ಕನ್ನಡ
Book Release: ಮಾಧ್ಯಮ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವವರ ಕೊರತೆ ಸಾಕಷ್ಟಿದೆ: ಡಾ. ನಿರಂಜನ ವಾನಳ್ಳಿ

ಮಾಧ್ಯಮ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡುವವರ ಕೊರತೆ ಸಾಕಷ್ಟಿದೆ

Book Release: ಶಿರಸಿ ನಗರದ ಪಂಚವಟಿ ಸಭಾಂಗಣದಲ್ಲಿ ಮನು ವಿಕಾಸ ಸಂಸ್ಥೆ ಹಾಗೂ ಸಾಹಿತ್ಯ ಪ್ರಕಾಶನ ವತಿಯಿಂದ ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರ 'ಸ್ಫೂರ್ತಿವಂತರು' ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿದ್ದಾರೆ.

Sirsi News: ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆ

ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು

ಸ್ವಾತಂತ್ರ್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊಂಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Electric Shock: ಕಾಡು ಪ್ರಾಣಿ ಹಾವಳಿ ತಡೆಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ 7 ಜಾನುವಾರು ಸಾವು

ಕಾರವಾರದಲ್ಲಿ ವಿದ್ಯುತ್ ತಂತಿ ತಗುಲಿ 7 ಜಾನುವಾರುಗಳ ಸಾವು

Electric Shock: ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗುಲಿ ಏಳು ಜಾನುವಾರುಗಳು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಸಮೀಪದ ಗದ್ದೆಯ ಬಳಿ ಜರುಗಿದೆ. ಸುರೇಖಾ ಫಡ್ನೇಕರ್ ಎಂಬುವವರಿಗೆ ಸೇರಿದ ಎರಡು ಕೋಣ ಹಾಗೂ ಐದು ಎಮ್ಮೆ ಸೇರಿ ಒಟ್ಟು ಏಳು ಜಾನುವಾರು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಜೂ.8 ರಂದು ಭಾರತರತ್ನ ಪಂ. ಭೀಮಸೇನ ಜೋಶಿ ಮೊಮ್ಮಗ, ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌ‌ರ್ ರಿಂದ ಗಾಯನ

ಜೂ.8 ರಂದು ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌ‌ರ್ ಇವರಿಂದ ಗಾಯನ

ಪ್ರಜ್ವಲ ಟ್ರಸ್ಟ್ , ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್ ನಿಂದ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಸ್ಮರಣಾರ್ಥ ತಾರ ಶಡ್ಡ ಕಾರ್ಯಕ್ರಮವನ್ನು ಜೂ.8 ರಂದು ನಗರದ ಟಿ. ಆರ್. ಸಿ ಸಭಾಂಗಣ ಸಂಜೆ 5 ಘಂಟೆಗೆ ಭಾರತರತ್ನ ಪಂ. ಭೀಮಸೇನ ಜೋಶಿಯವರ ಮೊಮ್ಮಗ, ವಿರಾಜ್ ಜೋಶಿ, ವಿದುಷಿ ಜಸ್ಮಿತ ಕೌ‌ರ್ ಇವರಿಂದ ಗಾಯನ ನಡೆಯಲಿದೆ ಎಂದು ವಿನಾಯಕ ಹೆಗಡೆ ಮಾಹಿತಿ ನೀಡಿದರು.

Shivaram Hebbar: ಬಿಜೆಪಿ ಇತಿಹಾಸದ ಬಗ್ಗೆ ಕಾಗೇರಿಯಿಂದ ಕಲಿಯೋ ಅಗತ್ಯ ಇಲ್ಲ: ಶಿವರಾಮ್‌ ಹೆಬ್ಬಾರ್

ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು: ಹೆಬ್ಬಾರ್

Shivaram Hebbar: ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೊಡ್ಡವರು, ಅವರ ಹೇಳಿಕೆಗಳಿಗೆಲ್ಲ ಈಗಲೇ ಪ್ರತಿಕ್ರಿಯಿಸುವುದಿಲ್ಲ. ಬೇರೆ ಯಾರೂ ರಾಜಕೀಯದಲ್ಲಿ ಬೆಳೆಯಬಾರದು ಎಂಬ ಮನೋಸ್ಥಿತಿ ಕಾಗೇರಿಯವರದ್ದಾಗಿದೆ. ಹೀಗಾಗಿ, ತ್ವರಿತವಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸುವವುದಿಲ್ಲ. ಆದರೆ, ಪ್ರತಿಕ್ರಿಯಿಸದೇ ಬಿಡುವುದಿಲ್ಲ ಎಂದು ಶಾಸಕ ಶಿವರಾಮ್‌ ಹೆಬ್ಬಾರ್ ಹೇಳಿದ್ದಾರೆ.

ಮೇ 31ರಂದು ಶ್ರೀರಾಮಚಂದ್ರಾಪುರ ಮಠದಿಂದ ವಿವಿಧ ಪ್ರಶಸ್ತಿ ಪ್ರದಾನ

ಮೇ 31ರಂದು ಶ್ರೀರಾಮಚಂದ್ರಾಪುರ ಮಠದಿಂದ ವಿವಿಧ ಪ್ರಶಸ್ತಿ ಪ್ರದಾನ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಅನುಪಮ ಸಾಧಕರನ್ನು ಗುರುತಿಸಿ ಶ್ರೀರಾಮಚಂದ್ರಾಪುರ ಮಠದಿಂದ ಕೊಡಮಾಡುವ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರಂದು ಉತ್ತರ ಕನ್ನಡದ ಗೋಕರ್ಣದ ಅಶೋಕೆಯ ಪುಣ್ಯಾರಾಮದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Sirsi News: ಶೌಚಾಲಯವನ್ನು ಹೈಟೆಕ್ ಮಾದರಿ ಮಾಡುವವರೆಗೆ ಸದ್ರಿ ಶೌಚಾಲಯ ಬಂದ್

ದುರಹಂಕಾರಿ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಆಗಬೇಕು

ನಗರದ ಹೆಡ್ ಪೋಸ್ಟ್‌ ಆಫೀಸ್ ಪಕ್ಕದಲ್ಲಿ ನಗರಸಭೆಯವರು ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಿದ್ದಾರೆ. ಶೌಚಾಲಯಕ್ಕೆ ಒಂದು ಸಣ್ಣ ಸೆಪ್ಟಿಕ್ ಟ್ಯಾಂಕ್‌ನ್ನು ರಸ್ತೆ ಮಧ್ಯದಲ್ಲಿಯೇ ನಿರ್ಮಿಸಿದ್ದು, ಶೌಚಾಲಯದ ನೀರು ಹರಿದು ಹೋಗಲು ಯಾವುದೇ ಪೈಪ್ ಲೈನ್ ವ್ಯವಸ್ಥೆ ಇಲ್ಲ

Sirsi News: ಜೂನ್ 2 ರಂದು ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ

ಜೂನ್ 2 ರಂದು ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ

ಪಶ್ಚಿಮ ಘಟ್ಟದ ಗ್ರಾಮ ಭೂಮಿ ಸಂರಕ್ಷಣೆಗಾಗಿ ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳ ಜೀವವೈವಿಧ್ಯದ ಉಳಿವಿಗಾಗಿ ಮಲೆನಾಡಿನ ರೈತರ ಸಾಮೂಹಿಕ ನೈಸರ್ಗಿಕ ಸಂಪತ್ತಿನ ಸುಸ್ಥಿರ ಅಭಿವೃದ್ಧಿಗಾಗಿ ಜಾಗೃತಿ ಅಭಿಯಾನವನ್ನು ಜೂನ್ 2 ರಂದು ಶಿರಸಿ ತಾಲೂಕಿನ ಯಡಳ್ಳಿ ಸಹಕಾರಿ ಸಂಘದ ನೇತೃತ್ವದಲ್ಲಿ ವೃಕ್ಷಾರೋಪಣ ಬೆಟ್ಟ ಅಭಿಯಾನ ಕಾರ್ಯಕ್ರಮ ನಡೆಯಲಿದೆ.

Sirsi News: ಜೂನ್ 5,6 ರಂದು ಹಲಸಿನ ಮೇಳ, ಹಲಸಿನ ಬೀಜದ ಆನಂದ ಪೌಡರ್ ಬಿಡುಗಡೆ

ಜೂನ್ 5,6 ರಂದು ಹಲಸಿನ ಮೇಳ

ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು

Shivaram Hebbar: ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ: ಶಿವರಾಮ್ ಹೆಬ್ಬಾರ್ ಕಿಡಿ

ಪಕ್ಷ ವಿರೋಧಿ ಚಟುವಟಿಕೆಗೆ ಬಿಜೆಪಿ ಮುಖಂಡರೇ ಕಾರಣ: ಶಿವರಾಮ್ ಹೆಬ್ಬಾರ್

Shivaram Hebbar: ಪಕ್ಷ ನೋಟಿಸ್ ನೀಡಿದಾಗ ನಾನು 16 ಪುಟದ ಉತ್ತರ ನೀಡಿದ್ದೇನೆ. ಪಕ್ಷ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ. ಪಕ್ಷ ಏನೇ ನಿರ್ಣಯ ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದಿದ್ದೇನೆ ಎಂದು ಶಿವರಾಮ್‌ ಹೆಬ್ಬಾರ್‌ ಹೇಳಿದ್ದಾರೆ.

Karnataka Rain: ಮಳೆ ಅನಾಹುತಕ್ಕೆ ನಾಲ್ವರು ಬಲಿ, ಇಂದು 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಮಳೆ ಅನಾಹುತಕ್ಕೆ ನಾಲ್ವರು ಬಲಿ, ಇಂದು 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಮುಂಗಾರು ಕರ್ನಾಟಕ ಪ್ರವೇಶಿಸಿದ ಒಂದೇ ದಿನದಲ್ಲಿ ರಾಜ್ಯದ ವಿವಿಧೆಡೆ ಮಳೆ ಆರ್ಭಟ ತೀವ್ರಗೊಂಡಿದೆ. ಕರಾವಳಿ, ಮಲೆನಾಡು ಹಾಗೂ ಕೊಡಗಿನ ವ್ಯಾಪ್ತಿಯಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಬೆಂಗಳೂರು ಮಹಾನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಭಾರಿ ಮಳೆ ಆಗುತ್ತಿದೆ.

Rain News: ಮಳೆ ಅಬ್ಬರಕ್ಕೆ ಕೊಚ್ಚಿಹೋದ ಹೆದ್ದಾರಿ, ಕುಮಟಾ- ಶಿರಸಿ ಸಂಪರ್ಕ ಬಂದ್

ಮಳೆ ಅಬ್ಬರಕ್ಕೆ ಕೊಚ್ಚಿಹೋದ ಹೆದ್ದಾರಿ, ಕುಮಟಾ- ಶಿರಸಿ ಸಂಪರ್ಕ ಬಂದ್

ಅಬ್ಬರದ ಮಳೆಯಿಂದ (Rain News) ಬೆಣ್ಣೆ ಹೊಳೆ ಹಳ್ಳದ ನೀರು ಹರಿದು ಬಂದು ಹೆದ್ದಾರಿಯ ಬದಿಯಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯೂ ಸಂಪೂರ್ಣ ನಾಶವಾಗಿದೆ. ಇದರಿಂದ ಲಕ್ಷಾಂತರ ರೂಪಾಯ ನಷ್ಟವಾಗಿದೆ. ಹೆದ್ದಾರಿಯಲ್ಲಿ ಇದರಿಂದಾಗಿ ‌ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಶಿರಸಿ- ಕುಮಟಾ ನಡುವಿನ ವಾಹನ ಸಂಚಾರ ಅಸ್ತವ್ಯಸ್ತ ಆಗಿದೆ.

Electric Shock: ಅಂಕೋಲಾದಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವು

ಅಂಕೋಲಾದಲ್ಲಿ ವಿದ್ಯುತ್ ತಂತಿ ತಗುಲಿ ಯುವಕ ಸಾವು

Electric Shock: ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದ ದಂಡೆಭಾಗದಲ್ಲಿ ಜರುಗಿದೆ. ಮಹಂತೇಶ್ ಬಾನಾವಳಿಕರ್ (28) ಎಂದು ಗುರುತಿಸಲಾಗಿದೆ. ಭಾರೀ ಗಾಳಿ, ಮಳೆಯಿಂದಾಗಿ ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಯುವಕ ಮಹಂತೇಶ್‌ ಬಾನಾವಳಿಕರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Sirsi Crime: ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಸಾವು

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಸಾವು

ಓಣಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂ ಕಿನ ಅವರ್ಸಾದ ದಂಡೆ ಭಾಗದಲ್ಲಿ ನಡೆದಿದೆ. ಮಹಂತೇಶ್ ಬಾನಾವಳಿಕರ್ (28) ಎಂದು ಗುರುತಿಸ ಲಾಗಿದೆ. ಭಾರೀ ಗಾಳಿ ಮಳೆ ಯಿಂದಾಗಿ ವಿದ್ಯುತ್ ತಂತಿಯೊಂದು ತುಂಡಾಗಿ ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ.

Sirsi News: ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ, ಪ್ರಥಮ ದರ್ಜೆ ಲೆಕ್ಕಾಧಿಕಾರಿ ಬಂಧನ

ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ

ಕಾರಿನ ಬಾಡಿಗೆ ಸಂಬಂಧ ಸಚಿನ ಕೋಡ್ಕಣಿ ಅವರಿಂದ 20 ಸಾವಿರ ರೂ. ಹಣ ಸ್ವೀಕರಿಸು ತ್ತಿದ್ದ ವೇಳೆ ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಸಂದರ್ಭ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಅವರನ್ನು ವಶಕ್ಕೆ ಪಡೆಯಲಾಯಿತು.

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ ಎಫ್.ಐ.ಆರ್‌ ರದ್ದು ಮಾಡಿದ ಹೈ-ಕೋರ್ಟ್

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ FIR ರದ್ದು ಮಾಡಿದ ಹೈ-ಕೋರ್ಟ್

ಶಿರಸಿಯ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ್ ಹೆಗಡೆ ಅವರ ಮನೆಯಲ್ಲಿ ಗ್ರಾಮೀಣ ಪೊಲೀಸರು ಏಪ್ರಿಲ್ 9 ರಂದು ಅಂದರ್ ಬಾಹರ್ ಆಡುತ್ತಿರುವುದಾಗಿ ಆರೋಪಿಸಿ ರೈಡ್ ಮಾಡಿ ಒಟ್ಟು 13 ಜನರ ಮೇಲೆ FIR ದಾಖಲಿಸಿದ್ದರು. ಇದನ್ನು ಹೈ ಕೋರ್ಟ್ನಲ್ಲಿ ಎಲ್ಲಾ ಆರೋಪಿಗಳು ಪ್ರಶ್ನಿಸಿದರು

Sirsi News: ಪೂರ್ಣ ಪ್ರಮಾಣದ ಎಸಿ, ಪೌರಾಯುಕ್ತರನ್ನು ನೀಡಲಾಗದ ಸರಕಾರ ಮನೆಗೆ ಹೋಗಲಿ

ಪೂರ್ಣ ಪ್ರಮಾಣದ ಎಸಿ, ಪೌರಾಯುಕ್ತರನ್ನು ನೀಡಲಾಗದ ಸರಕಾರ ಮನೆಗೆ ಹೋಗಲಿ

ಕೆಡಿಪಿ ಸಭೆಗೂ ಕಬಡ್ಡಿ ಮ್ಯಾಚಿಗೂ ವ್ಯತ್ಯಾಸ ಗೊತ್ತಿಲ್ಲದ ಶಾಸಕರು ಭೀಮಣ್ಣ ನಾಯ್ಕ ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಲೇವಡಿ ಮಾಡಿದರು. ಸರಿಯಾದ ತಹಸೀಲ್ದಾರ್, ಪೂರ್ಣ ಪ್ರಮಾಣದ ಎಸಿ, ಪೌರಾಯುಕ್ತರನ್ನು ನೀಡಲಾಗದ ಸರಕಾರ ಮನೆಗೆ ಹೋಗಲಿ. ಸರಿಯಾದ ಆಡಳಿತ ನೀಡಲು ಸಾಧ್ಯವಾಗದ ಸರಕಾರ. ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ನೀಡಲು ಸಾಧ್ಯವಿಲ್ಲ ಎಂದ ಅವರು, ನಂತರ ಹಲವರೊಂದಿಗೆ ಕಚೇರಿಯಲ್ಲಿಂದು ಮನವಿ ನೀಡಿದರು.

Murder Case: ಆಸ್ತಿಗಾಗಿ ನಾಲ್ಕು ಜನರ ಕೊಲೆ ಮಾಡಿದ ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ

ಆಸ್ತಿಗಾಗಿ ನಾಲ್ವರ ಕೊಲೆ ಮಾಡಿದ ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ

2023 ರ ಫೆಬ್ರುವರಿ 23ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಘೋರ ಕೊಲೆಗಳು (Murder Case) ನಡೆದಿದ್ದವು. ಆಸ್ತಿಗಾಗಿ ಮನೆಯ ಸೊಸೆ ಮಾಡಿದ ಪುಸಲಾವಣೆಯ ಪರಿಣಾಮ, ಆಕೆಯ ತಮ್ಮ ಹಾಗೂ ತಂದೆ ಇದೀಗ ಕಂಬಿಗಳ ಹಿಂದೆ ತಮ್ಮ ಕೊನೆಯ ಕ್ಷಣ ಎಣಿಸುವಂತಾಗಿದೆ.

Karnataka Rain: ರಾಜ್ಯಾದ್ಯಂತ ಪ್ರತಾಪ ತೋರಿಸಿದ ಮಳೆ, ವಿವಿಧಡೆ 8 ಮಂದಿ ಸಾವು

ರಾಜ್ಯಾದ್ಯಂತ ಪ್ರತಾಪ ತೋರಿಸಿದ ಮಳೆ, ವಿವಿಧಡೆ 8 ಮಂದಿ ಸಾವು

ಕೊಪ್ಪಳದಲ್ಲೇ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿಯಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಒಬ್ಬರು, ವಿಜಯಪುರದಲ್ಲೂ ಸಹ ಓರ್ವ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಗದಗದಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾನೆ. ಮತ್ತೊಂದಡೆ ಗೋಕಾಕ್​ನಲ್ಲಿ ವ್ಯಕ್ತಿ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾನೆ.

Sirsi News: ತುಳಸಿಯ ಮುಡಿಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್

ತುಳಸಿಯ ಮುಡಿಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್

ಜಗತ್ತಿನ ನೂರಾ ಮೂವತ್ತು ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ‌ ವಿವಿಧ‌ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕ ಮಕ್ಕಳ ಪಟ್ಟಿಗೆ ಯಕ್ಷಗಾನ ಯುವ ಕಲಾವಿದೆ, ಶಿರಸಿಯ ತುಳಸಿ ಹೆಗಡೆ ಹೆಸರು ಸೇರ್ಪಡೆಗೊಂಡಿದೆ .ಮಕ್ಕಳ ಅರ್ಹತೆ, ಸಾಧನೆ, ಅವರ ನಿರಂತರ ಶ್ರಮ ಪರಿಗಣಿಸಿ ತಜ್ಞರ‌ ಸಮಿತಿ ನೂರು ಸಾಧಕ ಮಕ್ಕಳನ್ನು ಆಯ್ಕೆ ಮಾಡಿದ್ದು ಈ ಪಟ್ಟಿಯಲ್ಲಿ ಕನ್ನಡದ ಕಲೆ ಯಕ್ಷಗಾನದ ಮೂಲಕ ಹೆಸರಾದ ತುಳಸಿ ಹೆಗಡೆ ಕೂಡ ಒಬ್ಬರು

ಶಿರಸಿಯ ಬಾಲ ಪ್ರತಿಭೆ ತುಳಸಿಯ ಮುಡಿಗೆ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್

ತುಳಸಿಯ ಮುಡಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಚೆನ್ನೈನ ಹಿಂದೂಸ್ತಾನ್ ಹಾಗೂ ಚಾರ್ಲ್ಸ್‌ ಗ್ರೂಪ್‌ಗಳ ಸಹಕಾರದಲ್ಲಿ ನಡೆಸಲಾದ ಗ್ಲೋಬಲ್ ಚೈಲ್ಡ್ ಪ್ರೊಡಿಜಿ ಅವಾರ್ಡ್‌ಗೆ ಶಿರಸಿಯ ತುಳಸಿ ಹೆಗಡೆ ಆಯ್ಕೆಯಾಗಿದ್ದಾರೆ. ಜಗತ್ತಿನ 130 ದೇಶಗಳಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ ಸೇರಿದಂತೆ‌ ವಿವಿಧ‌ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕ ಮಕ್ಕಳ ಪಟ್ಟಿಗೆ ಯಕ್ಷಗಾನ ಯುವ ಕಲಾವಿದೆ, ಶಿರಸಿಯ ತುಳಸಿ ಹೆಗಡೆ ಹೆಸರು ಸೇರ್ಪಡೆಗೊಂಡಿದೆ.

Sirsi News: ದೇಶದ ಏಕತೆ, ಸಮಗ್ರತೆ, ರಕ್ಷಣೆಯ ವಿಷಯದಲ್ಲಿ ರಾಜಕೀಯ ಬೇಡ: ಎನ್.ಎಸ್.ಹೆಗಡೆ

ದೇಶದ ಏಕತೆ, ಸಮಗ್ರತೆ, ರಕ್ಷಣೆಯ ವಿಷಯದಲ್ಲಿ ರಾಜಕೀಯ ಬೇಡ

ದೇಶದ ಏಕತೆ, ಸಮಗ್ರತೆ, ರಕ್ಷಣೆಯ ವಿಷಯದಲ್ಲಿ ರಾಜಕೀಯ ಬೇಡ. ಈಗಾಗಲೇ ನಮ್ಮ ಸೇನೆ ಸಮಗ್ರವಾಗಿ ಉಗ್ರರ ಸದೆ ಬಡಿಯಲು ಕಾರ್ಯನಿರ್ವಹಿಸಿದ್ದು, ದೇಶದ ವಿಷಯದಲ್ಲಿ ಪ್ರಧಾನಿ ಯವರ ದಿಟ್ಟ ನಡೆ ಶ್ಲಾಘನೀಯ.‌ ಅಲ್ಲದೇ ಕಾಂಗ್ರೆಸ್ ನಾಯಕರೂ ಸಹ ಇದನ್ನು ಬೆಂಬಲಿಸಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು

Mock Drill: ನಾಳೆ ಸಂಜೆ 4 ಗಂಟೆಗೆ ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್

ನಾಳೆ ಸಂಜೆ 4 ಗಂಟೆಗೆ ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್

ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 7ರಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಾಕ್‌ ಡ್ರಿಲ್‌ (mock drill) ನಡೆಸಲಾಗುತ್ತದೆ ಎನ್ನುವ ಮಾಹಿತಿಯನ್ನೂ ನೀಡಿದೆ. ಕರ್ನಾಟಕದ ಎರಡು ಜಿಲ್ಲೆ ಹಾಗೂ ಕೈಗಾ ಅಣುಸ್ಥಾವರ ಇರುವ ಕಾರವಾರ ತಾಲೂಕಿನಲ್ಲಿ ನಾಳೆ ಮಾಕ್‌ ಡ್ರಿಲ್‌ ನಡೆಯಲಿದೆ. ಆ ಮೂಲಕ ಯುದ್ಧದ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ಮಾಕ್‌ ಡ್ರಿಲ್‌ ನಡೆಯಲಿದೆ.

Jagdeep Dhankhar: "ಶಿರಸಿಯ ಪರಿಸರ ಕಂಡು ಇಲ್ಲೇ ನೆಲೆಸಬೇಕು ಅನ್ನಿಸುತ್ತಿದೆ " ; ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಶಿರಸಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಉಪರಾಷ್ಟ್ರಪತಿ ಜಗದೀಪ ಧನಕರ್‌ ಅವರು ಸೋಮವಾರ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿದ್ದಾರೆ. ನಂತರ ಅವರು ಪತ್ನಿಯೊಂದಿಗೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ದರ್ಶನ ಪಡೆದಿದ್ದಾರೆ.