ಓದುವವರಿಲ್ಲ ಎಂದು ಕೊರಗುವವರು ಇವರತ್ತ ನೋಡಬೇಕು
ಕನ್ನಡ ಪತ್ರಿಕೋದ್ಯಮವನ್ನು ಹಳೆಯ ಜಾಡಿನಿಂದ, ಗೂಡಿನಿಂದ ಹೊರ ತಂದು ಅದಕ್ಕೊಂದು ಹೊಸ ಜೀವ, ಹೊಸತನ ತಂದವರು ಅವರು. ಕನ್ನಡ ಪತ್ರಿಕೆಗಳನ್ನು ಜನಪ್ರಿಯವಾಗಿಸಿದವರು ಮತ್ತು ಜನಪರವಾಗಿಸಿದವರು ಅವರು. ‘ತಲೆ ಬರಹ’ ಗಳನ್ನು ಬರೆಯುವ ರೀತಿಯಲ್ಲಂತೂ ಮೂಲಭೂತ ಬದಲಾವಣೆ ತಂದವರು ಭಟ್.