ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉತ್ತರ ಕನ್ನಡ

Yellapur News: ಯಲ್ಲಾಪುರದಲ್ಲಿ ಆಲದ ಮರ ಬಿದ್ದು 5 ತಿಂಗಳ ಗರ್ಭಿಣಿ ಸಾವು, ನಾಲ್ವರು ಮಕ್ಕಳಿಗೆ ಗಾಯ

ಯಲ್ಲಾಪುರದಲ್ಲಿ ಆಲದ ಮರ ಬಿದ್ದು 5 ತಿಂಗಳ ಗರ್ಭಿಣಿ ಸಾವು

Yellapur News: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡೊಮಗೇರಿ-ಕಿರವತ್ತಿಯಲ್ಲಿ ಘಟನೆ ನಡೆದಿದೆ. ಅಂಗನವಾಡಿಯಲ್ಲಿದ್ದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ರಸ್ತೆಯ ಬದಿಯಲ್ಲಿದ್ದ ಹಳೆಯ ಆಲದ ಮರ ಬಿದ್ದು ಗರ್ಭಿಣಿ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ 4 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಆರೋಪಗಳ ತನಿಖೆ; ಲೋಕಸಭಾ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ಗಣಪತಿ ಭಟ್ ನೇಮಕ

ಲೋಕಸಭಾ ತನಿಖಾ ಸಮಿತಿಗೆ ಗಣಪತಿ ಭಟ್ ನೇಮಕ

Justice Yashwant Varma: ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತ್ರಿಸದಸ್ಯ ಸಮಿತಿಯನ್ನು ಘೋಷಿಸಿದ್ದಾರೆ. ನಿವೃತ್ತ ಐಆರ್‌ಎಸ್‌ ಅಧಿಕಾರಿ ಗಣಪತಿ ಭಟ್ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

Air gun misfire: ಶಿರಸಿ ಏರ್‌ ಗನ್‌ ದುರಂತ: ಅಣ್ಣನ ಸಾವಿಗೆ ತಮ್ಮ ಕಾರಣನಲ್ಲ, ಘಟನೆ ನಡೆದದ್ದು ಹೇಗೆ?

ಶಿರಸಿ ಏರ್‌ ಗನ್‌ ದುರಂತ: ಅಣ್ಣನ ಸಾವಿಗೆ ತಮ್ಮ ಕಾರಣನಲ್ಲ, ಹೇಗಾಯ್ತು ಘಟನೆ?

Sirsi: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಇದರಿಂದ ಅಣ್ಣ ಕರಿಯಪ್ಪ ( 9 ) ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಸಲಿ ವಿಷಯ ಹೊರಬಂದಿದೆ.

Miss Firing: ಏರ್‌ಗನ್‌ನಿಂದ ಶೂಟ್‌; 9 ವರ್ಷದ ಬಾಲಕ ಸಾವು

ಏರ್‌ಗನ್‌ನಿಂದ ಶೂಟ್‌; ಬಾಲಕ ಸಾವು

ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್‌ ಟ್ರಿಗರ್‌ (Air Gun) ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ganeshotsava in Police Station: ಶ್ರೀ ಸತ್ಯನಾರಾಯಣ  ಮಹಾ ಪೂಜೆ ಹಾಗೂ ಅನ್ನ ಸಂತರ್ಪಣಾ ಕಾರ್ಯಕ್ರಮ

ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ಅಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಗಿದ್ದು, ಮುಂಜಾನೆ ಪಿಎಸ್ಐ ಮಾಂತೇಶ ಕುಂಬಾರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಪ್ರತಿನಿತ್ಯ ಒತ್ತಡದ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕುಟುಂಬದ ಸದಸ್ಯರೊಂದಿಗೆ ಸೇರಿ ಸಂಭ್ರಮದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Sirsi news: ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆ

ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆ

15ನೇ ಹಣಕಾಸು ಹಾಗೂ MGNREGA ಯೋಜನೆಗಳ ಅಡಿಯಲ್ಲಿ ಮಂಜೂರಾದ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತದ ನೂತನ ಕಟ್ಟಡ ಉದ್ಘಾಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ, ಅಧ್ಯಕ್ಷೆ ಮಂಜಮ್ಮ ಬೋವಿ, ಸುಮಾ ಉಗ್ರಾಣಕರ್, ತಾಪಂ ಸದಸ್ಯೆ ರತ್ನಾ ಶೆಟ್ಟಿ, ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಸಿಎಫ್ ನಾಯ್ಕ, ತಾಪಂ ಅಧಿಕಾರಿ ಚನ್ನಬಸಪ್ಪ ಹಾವಣಗಿ ಉಪಸ್ಥಿತರಿದ್ದರು.

ನಿಸರ್ಗದಿಂದಲೇ ಸಕಲ ರೋಗಗಳಿಗೂ ಮದ್ದು; ಡಾ. ವೆಂಕಟರಮಣ ಹೆಗಡೆ ಬಿತ್ತಿದ ಬೀಜ ಇಂದು ಹೆಮ್ಮರ! ನಿಸರ್ಗ ಮನೆ ವೇದ ವೆಲ್‌ನೆಸ್‌ ಸೆಂಟರ್‌ನಿಂದ ಶೇ. 100 ಆರೋಗ್ಯ

ನಿಸರ್ಗ ಮನೆ ವೇದ ವೆಲ್‌ನೆಸ್‌ ಸೆಂಟರ್‌ನಿಂದ ಶೇ. 100 ಆರೋಗ್ಯ

Pravasi Prapancha: ನಿಸರ್ಗ ಚಿಕಿತ್ಸೆಯ ಮೂಲಕವೇ ಸಕಲ ರೋಗಗಳಿಗೂ ಮದ್ದು ನೀಡುತ್ತಿರುವ ಮತ್ತು ದೇಶವ್ಯಾಪಿ ಪ್ರಸಿದ್ಧಿಯಾಗಿರುವ, ಉತ್ತರ ಕನ್ನಡದ ಶಿರಸಿಯಲ್ಲಿ ನಿಸರ್ಗ ಮನೆ ವೇದ ವೆಲ್‌ನೆಸ್‌ ಸೆಂಟರ್ ಬಗ್ಗೆ ಈ ಬಾರಿಯ ಪ್ರವಾಸಿ ಪ್ರಪಂಚ ಸಂಚಿಕೆಯಲ್ಲಿದೆ ವಿವರ.

Sirsi News: ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಪತ್ರಿಕಾ ದಿನಾಚರಣೆ ಹಾಗೂ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಎಲ್ಲ ವ್ಯಕ್ತಿಗಳಂತೆ ರಾಜಕಾರಣಿಗಳಾದ ನಮ್ಮಿಂದಲೂ ಲೋಪ ದೋಷಗಳು ಸಂಭವಿಸುತ್ತವೆ. ಆಗ ಬೇಕಾದ ಕೆಲಸವನ್ನು ಪತ್ರಕರ್ತರು ತಮ್ಮ ಲೇಖನಿ ಮೂಲಕ ನಮ್ಮ ಗಮನಕ್ಕೆ ತಂದು ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಆದರೆ, ಉತ್ತರ ಕನ್ನಡದ ಪತ್ರಕರ್ತರ ಕಾರ್ಯ ವಿಧಾನ ಪ್ರಶಂಸನಾರ್ಹವಾಗಿದೆ. ಆಯಾ ಸಂದರ್ಭಕ್ಕೆ ಸರಿಯಾಗಿ ಹೇಳಿ, ಅಲ್ಲಿಗೇ ಬಿಡುವ ವ್ಯವಸ್ಥೆಯನ್ನು ನಮ್ಮ ಪತ್ರಕರ್ತರು ಅಳವಡಿಸಿಕೊಂಡಿದ್ದಾರೆ

Sirsi News: ಪ್ರಸರಣದಿಂದ ಪತ್ರಿಕೆಯ ತಾಕತ್ತು, ಪ್ರಭಾವ ಗುರುತಿಸಲು ಸಾಧ್ಯವಿಲ್ಲ: ವಿಶ್ವೇಶ್ವರ ಭಟ್

ಪ್ರಸರಣದಿಂದ ಪತ್ರಿಕೆಯ ತಾಕತ್ತು, ಪ್ರಭಾವ ಗುರುತಿಸಲು ಸಾಧ್ಯವಿಲ್ಲ

Tatva Nishta and Tech Vaidya News Paper: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೂತನವಾಗಿ ಆರಂಭವಾದ ತತ್ವ ನಿಷ್ಠ ಹಾಗೂ ಟೆಕ್ ವೈದ್ಯ ಪತ್ರಿಕೆಯನ್ನು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಬಿಡುಗಡೆ ಮಾಡಿದರು.

Mankala Vaidya: "ಆರೋಗ್ಯದ ಕಡೆ ಗಮನ ಕೊಡದೆ ಪತ್ರಕರ್ತರು ಕೆಲಸ ಮಾಡುತ್ತಾರೆ"; ಸಚಿವ ಮಂಕಾಳ ವೈದ್ಯ

ಶಿರಸಿಯಲ್ಲಿ ಪತ್ರಕರ್ತರ ಕುರಿತು ಮಾತನಾಡಿದ ಸಚಿವ

ಹಿರಿಯ ಪತ್ರಕರ್ತರು, ಈ ರಂಗದಿಂದ ನಿವೃತ್ತರಾದವರಿಂದ ಇಂದಿನ ಪತ್ರಕರ್ತರು ಕಲಿಯುವ ಅಂಶಗಳು ಜಾಸ್ತಿ ಇರುತ್ತವೆ. ಹಿರಿಯರನ್ನು ಪ್ರೇರಣೆಯಾಗಿಸಿಕೊಳ್ಳಬೇಕು ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಿರಸಿಯಲ್ಲಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉಳಿದ ಜಿಲ್ಲೆಯಂತಲ್ಲ. ತಮ್ಮ ಆರೋಗ್ಯದ ಕಡೆ ಗಮನ ಸಹ ಕೊಡದೇ ಸದಾ ಹೊಸತನದ ಸುದ್ದಿಗಳನ್ನು ಬರೆಯುವ ತುಡಿತ, ಕ್ರಿಯಾಶೀಲತೆ ಹೊಂದಿದ್ದಾರೆ.

Sirsi News: ಹುಳಗೋಳ ಪ್ರಸಾದಗೆ ಲಂಡನ್ ನಲ್ಲಿ ಎಲ್ಎಲ್‌ಎಂ ಪದವಿ

ಹುಳಗೋಳ ಪ್ರಸಾದಗೆ ಲಂಡನ್ ನಲ್ಲಿ ಎಲ್ಎಲ್‌ಎಂ ಪದವಿ

ಹೆಗಡೆ ಅವರು ಭಾರತದ ಹಿರಿಯ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯಪ್ರಕಾಶ ವಿ.ರಾಜು ಅವರೊಂದಿಗೆ‌ ಸುಫ್ರಿಂ ಕೋರ್ಟನಲ್ಲಿ ಭಾರತದ ತನಿಖಾ‌ ಸಂಸ್ಥೆಗಳ ಕೆಲವು ಪ್ರಕರಣದ ನ್ಯಾಯದಾನ ವಿಚಾರದಲ್ಲೂ ಕೆಲಸ ಮಾಡುತ್ತಿದ್ದಾರೆ. ಪ್ರಸಾದ ಹೆಗಡೆ ಎಳೆಯ ವಯಸ್ಸಿನಲ್ಲೇ ಸುಫ್ರೀಂ ಕೋರ್ಟನಲ್ಲಿ ವಕೀಲ ವೃತ್ತಿಯ ಆರಂಭದ ಜೊತೆಗೆ ಹಿರಿಯರ ಸಾಂಗತ್ಯ ಹಾಗೂ ಪ್ರಮುಖ ಪ್ರಕರಣಗಳ ಪರ ವಾದ‌ ಮಂಡನೆಗಳಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ.

Uttara Kannada Rains: ಭಾರಿ ಮಳೆ; ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ನಾಳೆ ಉ. ಕನ್ನಡ ಜಿಲ್ಲೆಯ 10 ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ

Karnataka Rains: ಆ.27 ಮತ್ತು 28ರವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ

ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಯಪ್ಪ ಹುಲೇಕಲ್ ಕಾಲೇಜ್ ಹತ್ತಿರ ಇಂದು ಇಂದಿರಾ ಕ್ಯಾಂಟಿನ್ ಅನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ, ನಮ್ಮ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ನಗರದ ವಾರ್ಡ್ ಗಳಲ್ಲಿಯೂ ಇದನ್ನು ಮಾಡಲು ನಾವು ಸಿದ್ದರಿದ್ದೇವೆ ಎಂದರು

ಅ.24 ರಂದು ವಿಶ್ವ ಬಂಧಿತ್ವ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ

ಅ.24 ರಂದು ಬೃಹತ್ ರಕ್ತದಾನ ಅಭಿಯಾನ

ದಾದಿ ಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣಾರ್ಥ ವಿಶ್ವ ಬಂಧಿತ್ವ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ ಅ.24 ರಂದು ಬೆಳಗ್ಗೆ 10 ರಿಂದ 1.30 ರ ವರೆಗೆ ನಗರದ ಪಂಡಿತ್ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಈಶ್ವರೀಯ ಪ್ರಾಂಶುಪಾಲೆ ಡಾ.ವೀಣಾ ಜೀ ಹೇಳಿದರು.

Sirsi News: ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ಹೇಳಿಕೆಗಳು ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ

ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ ಮೀನುಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಲಿ

ಮೋದಿಯವರು ಆರ್ ಎಸ್ ಎಸ್ ಬಗ್ಗೆ ಗೌರವಿಸಿ ಮಾತನಾಡುವುದು ತಪ್ಪು ಎನ್ನುವ ಸಿದ್ಧರಾಮಯ್ಯ ತಾವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವುದು ಎಷ್ಟು ಸರಿ? ಮಾತು ಮಾತಿಗೆ ತಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಸಾಂವಿಧಾನಿಕ ಸಂಸ್ಥೆಗಳಿಗೆ, ನ್ಯಾಯಾಲಯದ ತೀರ್ಮಾನಗಳಿಗೆ ಗೌರವ ಕೊಡುವುದನ್ನು ಮೊದಲು ರೂಢಿಸಿಕೊಳ್ಳಲಿ

Sirsi News: 19 ರಂದು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

19 ರಂದು ನಾವು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಅನಾಮಧೇಯ ವ್ಯಕ್ತಿಯ ಹೇಳಿಕೆಯ ಮೇರೆಗೆ ಎಸ್ ಐ ಟಿಯೂ ಸಹ ಮಾನದಂಡ ಚೌಕಟ್ಟನ್ನು ಮೀರಿ ಅನಾಮಧೇಯ ವ್ಯಕ್ತಿಯ ಹೇಳಿಕೆ ಯ ಮೇಲೆ ಕಾರ್ಯ ನಡೆಯುತ್ತಿದೆ. ಇದನ್ನು ನಾವೆಲ್ಲ ಖಂಡಿಸುತ್ತೇವೆ. ಧರ್ಮಸ್ಥಳ ಕೊಡುಗೆಯ ಬಗ್ಗೆ ನಾವು ಯಾರು ಏನನ್ನೂ ಹೇಳಬೇಕಿಲ್ಲ

Road Accident: ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಮೂವರ ಮರಣ

Uttara Kannada: ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಚಾಲಕ ಇಂಡಿಕೇಟರ್​ ಹಾಕದೆ ಕತ್ತಲೆಯಲ್ಲಿ ಲಾರಿ ನಿಲ್ಲಿಸಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನ ಒಂದು ಬದಿ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ದೇಶದ ಹಲವಾರು ವಿರಳ ಹಾಗೂ ನಶಿಸಿ ಹೋಗುತ್ತಿರುವಂತಹ ಪುರಾತನ ಕಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿ ವಿಶ್ವದೆಲ್ಲೆಡೆ ಅದನ್ನ ಪಸರಿಸೋ ಕಾರ್ಯಗಳನ್ನ ಮಾಡ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್ ಗೆ ಇಂತಹ ವಿರಳ ಕಲೆಗಾರರನ್ನ ಕರೆಸಿ ಅವರಿಗೆ ಗೌರವ ನೀಡೋ ಕಾರ್ಯಕ್ರಮಗಳನ್ನ ಮಾಡ್ತಿದೆ. ಅದರಂತೆ ಈ ವರ್ಷದ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳೋಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ.

ED Raid: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ರೇಡ್

ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ರೇಡ್

Satish Sail: 24ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಸತೀಶ್ ಸೈಲ್ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಕಾರಣ ಶಾಸಕ ಸೈಲ್ ಬೆಂಗಳೂರಿನಲ್ಲಿದ್ದಾರೆ. ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ ಸೈಲ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

Sirsi News: ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆ: ಬಹುಮಾನ ವಿತರಣೆ

ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆ: ಬಹುಮಾನ ವಿತರಣೆ

ಉಜ್ಜಯಿನಿಯ ಶ್ರೀ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಗಸ್ಟ್ 7, 8, 9ರಂದು ನಡೆದ ಸ್ಥಾಪನಾ ಮಹೋತ್ಸವದ ಅಂಗವಾಗಿ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಲ್ಲಿ ಸ್ವರ್ಣವಲ್ಲಿಯ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ

Sirsi News: ಶಿರಸಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಶಿರಸಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಶಿರಸಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ರಸ್ತೆ ಗುಂಡಿ ಮುಚ್ಚುವುದು, ಬಸ್ ಸಮಸ್ಯೆ, ಮಳೆ ಮಾಪನ ಯಂತ್ರ ದುರಸ್ತಿ ಸೇರಿದಂತೆ ಸಾರ್ವಜನಿಕರ ಮೂಲಭೂತ ಸೌಕರ್ಯದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ಗುರುವಾರ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನೂರಾರು ಜನರು ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಧರಣಿ ನಡೆಸಿದರು.

ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ 'ಕೈʼ ಗೆ ಟಾಂಗ್

ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಾಂಗ್

ಎರಡು ವರ್ಷದಿಂದ ಹೊಂಡ ಬಿದ್ದಿದೆ ಎಂದರೆ 30 ವರ್ಷದ ಮಾತನಾಡುವ ನಿಮಗೆ ಯಾವ ರಾಜಕೀಯದ ಪರಿಜ್ಞಾನ ಇದೆ? ಹೊಂಡ ವನ್ನು ಮುಚ್ಚಿಸುವುದು ಶಾಸಕರ ಕರ್ತವ್ಯ ಅಲ್ಲವೇ? ಗ್ರಾಮೀಣಾಭಿವೃದ್ಧಿ ರಸ್ತೆಗಳು ಶಿರಸಿಯಲ್ಲಿ ಒಂದು ಸಾವಿರದ ಆರುನೂರು ಕಿಲೋ ಮೀಟರ್ ಇದೆ, ಮತ್ತು ಪಿ ಡಬ್ಲ್ಯೂ ಡಿ ರಸ್ತೆಯನ್ನು ಕೂಡ ನಿರ್ವಹಣೆ ಮಾಡಬೇಕು, ಹೊಂಡವನ್ನು ಮುಚ್ಚಬೇಕಾಗಿದೆ. ದಿನಕ್ಕೊಬ್ಬರು ಹೊಂಡದಲ್ಲಿ ಬೀಳುತ್ತಿದ್ದಾರೆ ಅವರ ಜೀವಕ್ಕೆ ನೀವು ಹೊಣೆಗಾರರಾಗುತ್ತೀರಾ?

Sirsi News: ಶಿರಸಿ ನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ; ಗಾಂಜಾ ಸಾಗಾಟ ಮಾಡುತ್ತಿದ್ದವನ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿಯ ಅಬ್ದುಲ್ ರಜಾಕ್ ಅಬ್ದುಲ್ ಮುನಾಫ್ ಬಾಗಲಕೋಟೆ (30) ಬಂಧಿತ ವ್ಯಕ್ತಿ. ಈತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಗಾಂಜಾ ಖರೀದಿಸಿ, ಅಕ್ರಮವಾಗಿ ಶಿರಸಿಗೆ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Chandrashekhar Siddi: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

Chandrashekhar Siddi: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚಿದ ನಂತರ ಚಂದ್ರಶೇಖರ್‌ ಸಿದ್ದಿ ಅವರಿಗೆ ಇನ್ನಷ್ಟು ಅವಕಾಶಗಳು ಅರೆಸಿಬಂದಿದ್ದವು. ಕೆಲ ಧಾರಾವಾಹಿಗಳಲ್ಲಿ ಸಹ ಪಾತ್ರ ನಿಭಾಯಿಸಿದ್ದ ಅವರು, ಸ್ಥಳೀಯವಾಗಿ ಸಹ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

Loading...