ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Avinash GR

Senior Digital Content Editor

raamsuta@gmail.com

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಫಿನಾಲೆ ಪ್ರಸಾರಕ್ಕೂ ಮುನ್ನ ಸ್ಪೆಷಲ್‌ ಪೋಸ್ಟ್‌ ಶೇರ್‌ ಮಾಡಿದ ‌ʻಕಿಚ್ಚʼ ಸುದೀಪ್; ಏನಿದೆ ಅದರಲ್ಲಿ?

ಬಿಗ್‌ ಬಾಸ್‌ ಕನ್ನಡ 12 ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಸ್ಪೆಷಲ್‌ ಪೋಸ್ಟ್

Kiccha Sudeep: ಸತತ 112 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ 12ಕ್ಕೆ ಇಂದು ಅದ್ದೂರಿ ತೆರೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಟ್ವಿಟರ್ ಮೂಲಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಪ್ರತಿ ಸೀಸನ್ ಕಳೆದಂತೆ ಬಿಗ್ ಬಾಸ್ ಏಳಿಗೆಗೆ ಸಾಕ್ಷಿಯಾಗಿದೆ, ಈ ಪಯಣ ಅಸಾಧಾರಣವಾದುದು" ಎಂದು ಬಣ್ಣಿಸಿರುವ ಅವರು, ವೀಕ್ಷಕರಿಗೆ ಮತ್ತು ತಾಂತ್ರಿಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಧನುಷ್‌ - ಅಶ್ವಿನಿ ಗೌಡ ಯಾವ್ಯಾವ ವಿಷಯಗಳಲ್ಲಿ ಪಂಟ್ರು ಗೊತ್ತಾ? ಇವರಿಬ್ಬರಿಗೆ ಬಿಗ್ ಬಾಸ್ ಕೊಟ್ಟ 'ಪಂಚಿಂಗ್' ಬಿರುದುಗಳೇನು?

ಧನುಷ್ 'ಸೈಲೆಂಟ್', ಅಶ್ವಿನಿ 'ವೈಲೆಂಟ್'! ಇವರಲ್ಲಿ ಯಾರು ಪವರ್‌ಫುಲ್?

Bigg Boss Kannada 12 Finale: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ವೇದಿಕೆಯಲ್ಲಿ ನಿಂತಿರುವ ಧನುಷ್ ಗೌಡ ಮತ್ತು ಅಶ್ವಿನಿ ಗೌಡ ಅವರ 112 ದಿನಗಳ ಜರ್ನಿಯನ್ನು ಬಿಗ್ ಬಾಸ್ ತಂಡ ಅದ್ಭುತವಾಗಿ ವರ್ಣಿಸಿದೆ. ಧನುಷ್ ಅವರನ್ನು "ಟಾಸ್ಕ್ ಮಾಸ್ಟರ್" ಎಂದು ಕರೆದರೆ, ಅಶ್ವಿನಿ ಅವರನ್ನು "ಸವಾಲಿಗೇ ಸವಾಲು ಹಾಕುವ ಎದೆಗಾತಿ" ಎಂದು ಬಣ್ಣಿಸಲಾಗಿದೆ.

ʻಬಿಗ್‌ ಬಾಸ್‌ ಕನ್ನಡ ಸೀಸನ್ 12‌ʼ ಶೋ ಫಿನಾಲೆ ತಲುಪಿದರೂ ತಪ್ಪುತ್ತಿಲ್ಲ ಸಂಕಷ್ಟ; ಸುದೀಪ್‌ ಹೇಳಿದ ಆ ಒಂದು ಮಾತಿನ ಬಗ್ಗೆ ಸಿಗಲಿದೆಯಾ ಸ್ಪಷ್ಟೀಕರಣ?

ಫಿನಾಲೆಗೂ ಮುನ್ನ ಬಿಗ್ ಶಾಕ್; ʻಬಿಗ್ ಬಾಸ್ʼ ತಂಡಕ್ಕೆ ನೋಟಿಸ್ ನೀಡಿದ್ಯಾರು?

Bigg Boss Kannada 12 Finale: ಬಿಗ್‌ ಬಾಸ್‌ 12 ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಕಾರ್ಯಕ್ರಮಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಣಹದ್ದುಗಳ ಬಗ್ಗೆ ಮಾತನಾಡಿದ್ದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅರಣ್ಯ ಇಲಾಖೆ ಈಗ ತಂಡಕ್ಕೆ ನೋಟಿಸ್ ನೀಡಿದೆ.

Bigg Boss Kannada 12 Finale: ಮೂವರು ಫೈನಲಿಸ್ಟ್‌ಗಳಿಗೆ ತಲಾ 33 ವೋಟ್ ಹಾಕಿದ ಈ ಸೀಸನ್‌ನ ಮಾಜಿ ಸ್ಪರ್ಧಿ; ಯಾರವರು? ಕೊಟ್ಟ ಕಾರಣವೇನು?

99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಹಂಚಿದ ಈ ಸೀಸನ್‌ನ ಮಾಜಿ ಸ್ಪರ್ಧಿ!

ಬಿಗ್ ಬಾಸ್ ಕನ್ನಡ 12ರ ಮಹಾ ಫಿನಾಲೆಯ ಸಂಭ್ರಮದ ನಡುವೆ, ಮಾಜಿ ಸ್ಪರ್ಧಿ ಮಂಜು ಭಾಷಿಣಿ ಅವರು ತಮ್ಮ 99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಸಮಾನವಾಗಿ ಹಂಚಿದ್ದಾರೆ. ಗಿಲ್ಲಿ ನಟ, ಧನುಷ್ ಮತ್ತು ರಕ್ಷಿತಾ ಶೆಟ್ಟಿಗೆ ತಲಾ 33 ಮತಗಳನ್ನು ನೀಡಿರುವ ಅವರು, ಈ ಮೂವರು ತಮಗೆ ಅತ್ಯಂತ ಪ್ರೀತಿಪಾತ್ರರು ಎಂದು ತಿಳಿಸಿದ್ದಾರೆ.

Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ ಗೊತ್ತಾ?

ʻಬಿಗ್‌ ಬಾಸ್‌ʼ ಫಿನಾಲೆಗೆ ಕೌಂಟ್‌ಡೌನ್; ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ?

Bigg Boss Kannada 12: ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಧ್ರುವಂತ್ ಎಲಿಮಿನೇಷನ್ ನಂತರ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ವಿನ್ನರ್‌ ಯಾರಾಗಬೇಕು ಎಂಬುದಕ್ಕೆ ವೋಟಿಂಗ್ ಲೈನ್ಸ್ ಲೀಡ ತೆರೆದಿವೆ.

Bigg Boss 12: ʻಈ ಉತ್ಸಾಹವನ್ನ ಎಲೆಕ್ಷನ್‌ ಬಂದಾಗ ತೋರಿಸಿ, ದೇಶ ಉದ್ಧಾರ ಆಗತ್ತೆʼ; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ರಾ ಜಾಹ್ನವಿ?

ಅಶ್ವಿನಿ ಪರ ಜಾಹ್ನವಿ ಬ್ಯಾಟಿಂಗ್; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷ ಟಾಂಗ್?

Bigg Boss Kannada 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಹಂತ ತಲುಪಿದ್ದು, ಗೆಳತಿ ಅಶ್ವಿನಿ ಗೌಡ ಪರವಾಗಿ ಮಾಜಿ ಸ್ಪರ್ಧಿ ಜಾಹ್ನವಿ ಅವರು ಮತ ಯಾಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ನೀಡುತ್ತಿರುವ ಬೆದರಿಕೆಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Seetha Payanam Movie: 7 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್

'ಸೀತಾ ಪಯಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನೂಪ್ ರೂಬೆನ್ಸ್ ಕಮ್‌ಬ್ಯಾಕ್

Anoop Rubens: ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರು 7 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

ಫಿನಾಲೆಗೆ ಎರಡೇ ದಿನ ಬಾಕಿ; ದಿಢೀರ್‌ ಅಂತ ಶಾಕ್‌ ನೀಡಿದ ʻಬಿಗ್‌ ಬಾಸ್‌ʼ, ಬೇಕು ಅಂದಾಗೆಲ್ಲಾ ಇನ್ನೇಲೆ ಸ್ಪರ್ಧಿಗಳನ್ನ ನೋಡೋಕಾಗಲ್ಲ!

ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ಬಿಗ್ ಬಾಸ್ ʻಬಿಗ್ʼ ಟ್ವಿಸ್ಟ್!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ವಿದಾಯ ಹೇಳಿದ್ದಾರೆ.

Bigg Boss 12: ಅಯ್ಯೋ, ʻಗಿಚ್ಚಿ ಗಿಲಿ ಗಿಲಿʼ ಟೀಮ್‌ ಬಂದರೂ ರಕ್ಷಿತಾಗೆ ಗಿಲ್ಲಿದೇ ಚಿಂತೆ! ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

BBK 12: ಗಿಚ್ಚಿ ಗಿಲಿ ಗಿಲಿ ಟೀಮ್ ಬಂದರೂ ರಕ್ಷಿತಾಗೆ ಗಿಲ್ಲಿದೇ ಧ್ಯಾನ!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲರ್ಸ್ ಕನ್ನಡದ ನೂತನ ಶೋ 'ಗಿಚ್ಚಿ ಗಿಲಿ ಗಿಲಿ' ಜೂನಿಯರ್ಸ್ ತಂಡದ ಕಲಾವಿದರು ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಅವರು "ನನಗೆ ಗಿಲ್ಲಿ ಇಷ್ಟ" ಎಂದು ಹೇಳಿದ್ದು ಮನೆಯಲ್ಲಿ ನಗು ಉಕ್ಕಿಸಿದೆ.

ʻಗಿಲ್ಲಿ ನಟ ಬಂದಾಗ 6 ಬಾಡಿಗಾರ್ಡ್ಸ್‌ ಇದ್ರು, ಗಿಲ್ಲಿ ಕ್ರೇಜ್‌ ಬಿಗ್‌ ಬಾಸ್‌ಗೂ ಗೊತ್ತಿದೆʼ; ದೊಡ್ಮನೆಯೊಳಗೆ ನಡೆದ  ಫ್ಯಾನ್ಸ್ ಮೀಟ್‌ನ ಅಸಲಿ ಸತ್ಯ!

ಬಿಗ್‌ ಬಾಸ್‌ ಫ್ಯಾನ್ಸ್ ಮೀಟ್‌ನಲ್ಲಿ ಗಿಲ್ಲಿ ಬಂದಾಗ 6 ಬಾಡಿಗಾರ್ಡ್ಸ್‌ ನೇಮಕ

Bigg Boss 12 Gilli Nata: ಬಿಗ್ ಬಾಸ್ ಕನ್ನಡ 12ರ ಫಿನಾಲೆ ವಾರದಲ್ಲಿ ನಡೆದ ಫ್ಯಾನ್ಸ್ ಮೀಟ್, ಗಿಲ್ಲಿ ನಟನ ಬೃಹತ್ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಇತರೆ ಸ್ಪರ್ಧಿಗಳಿಗೆ ಇಬ್ಬರು ಬಾಡಿಗಾರ್ಡ್‌ಗಳಿದ್ದರೆ, ಗಿಲ್ಲಿ ಬಂದಾಗ ಭದ್ರತೆಗಾಗಿ ಆರು ಮಂದಿ ಬೌನ್ಸರ್‌ಗಳನ್ನು ನೇಮಿಸಲಾಗಿತ್ತು ಎಂದು ಅಭಿಮಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

Bigg Boss 12: ʻಇಲ್ಲಿಂದ ಹೋದ್ಮೇಲೆ ನಿನ್ನ ಬ್ಲಾಕ್‌ ಮಾಡ್ತಿನಿʼ ಎಂದ ಕಾವ್ಯ; ʻI Am Waiting..ʼ ಅಂತ ಕೌಂಟರ್‌ ಕೊಟ್ಟ ಗಿಲ್ಲಿ ನಟ!

ಸೀರಿಯಸ್ ಆಗಿ ಕ್ಷಮೆ ಕೇಳಿದ ಕಾವ್ಯ; ಮತ್ತೆ ಕಾಲೆಳೆದ ಗಿಲ್ಲಿ ನಟ!

Bigg Boss Kannada 12: ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ 'ಕ್ಷಮೆ ಕೇಳುವ' ವಿಶಿಷ್ಟ ಚಟುವಟಿಕೆ ನೀಡಿದ್ದರು. ಇದರಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ತಾನು ಈ ಹಿಂದೆ ಹರ್ಟ್ ಮಾಡಿದ್ದಕ್ಕಾಗಿ ಮತ್ತು ಜನರ ಮುಂದೆ ಕೂಗಾಡಿದ್ದಕ್ಕಾಗಿ ಮನಸಾರೆ ಕ್ಷಮೆ ಕೇಳಿದ್ದಾರೆ.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಜೋಡಿಯಾದ ನಟ ಪೃಥ್ವಿ ಅಂಬಾರ್‌; ʻಚೌಕಿದಾರ್‌ ʼ ಸಿನಿಮಾ ಟ್ರೇಲರ್‌ ಹೇಗಿದೆ?

ಪೃಥ್ವಿ ಅಂಬಾರ್-ಧನ್ಯಾ ರಾಮ್‌ಕುಮಾರ್ ನಟನೆಯ ‌ʻಚೌಕಿದಾರ್ʼ ಟ್ರೇಲರ್ ರಿಲೀಸ್

Chowkidar Trailer: ಪೃಥ್ವಿ ಅಂಬಾರ್‌ ಮತ್ತು ಧನ್ಯಾ ರಾಮ್‌ಕುಮಾರ್ ನಟನೆಯ ಚೌಕಿದಾರ್‌ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಪ್ಪ - ಮಗನ ಬಾಂಧವ್ಯದ ಎಮೋಷನಲ್ ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಜ್ಜಾಗಿದ್ದಾರೆ.

Photos: ಬೆಜ್ಜವಳ್ಳಿಯಲ್ಲಿ ಸಂಭ್ರಮದ ಸಂಕ್ರಾಂತಿ; ಇರುಮುಡಿ ಹೊತ್ತು ಸಾಗಿದ ನಟ ಶಿವರಾಜ್‌ಕುಮಾರ್

ಬೆಜ್ಜವಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ; ಅಯ್ಯಪ್ಪನ ದರ್ಶನ ಪಡೆದ ಶಿವಣ್ಣ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಉತ್ಸವವು ಸಡಗರದಿಂದ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್ ದಂಪತಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಅವಧೂತ ವಿನಯ್ ಗುರೂಜಿ ಭಾಗವಹಿಸಿದ್ದರು.‌ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವದ ವೇಳೆ ಆಕಾಶದಲ್ಲಿ ಗರುಡ ದರ್ಶನವಾಗಿದ್ದು, ನೂರಾರು ಭಕ್ತರು ದರ್ಶನವನ್ನು ಪಡೆದರು. ಇನ್ನೂ, ಕ್ಷೇತ್ರದ ಸಂಪ್ರದಾಯದಂತೆ ನಟ ಶಿವರಾಜ್‌ಕುಮಾರ್ ಅವರು ಇರುಮುಡಿ ಹೊತ್ತು, ಅಯ್ಯಪ್ಪ ಸ್ವಾಮಿಗೆ ಪವಿತ್ರ ಅಭಿಷೇಕವನ್ನು ನೆರವೇರಿಸಿದರು. ಇಲ್ಲಿವೆ ನೋಡಿ ಫೋಟೋಗಳು.

ನಟಿ ಅಮೂಲ್ಯ ಕಮ್‌ಬ್ಯಾಕ್ ಸಿನಿಮಾಕ್ಕೆ ಹೀರೋ ಸಿಕ್ಕೇಬಿಟ್ರು! ʻಪೀಕಬೂʼ ಚಿತ್ರಕ್ಕೆ ಹೀರೋ ಆದ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ ನಟ ಶ್ರೀರಾಮ್‌

ʻಪೀಕಬೂʼ ಹೀರೋ ಫಿಕ್ಸ್: 'ಗೋಲ್ಡನ್ ಕ್ವೀನ್' ಅಮೂಲ್ಯಗೆ ನಟ ಶ್ರೀರಾಮ್ ಜೋಡಿ

Peekaboo Kannada Movie: ನಟಿ ಅಮೂಲ್ಯ ಅವರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿದ್ದು, ಅವರ ಹೊಸ ಚಿತ್ರದ ನಾಯಕನಾಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಸಿನಿಮಾದ ಹೀರೋ ರಿವಿಲ್ ಟೀಸರ್ ಬಿಡುಗಡೆಯಾಗಿದ್ದು, ಶ್ರೀರಾಮ್ ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

ಮೆಜೆಸ್ಟಿಕ್‌ನಲ್ಲಿ ಮಹೇಶ್ ಬಾಬು ಒಡೆತನದ‌ AMB ಸಿನಿಮಾಸ್ ಹೇಗಿದೆ ನೋಡಿ

AMB Cinemas Bengaluru:‌ ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಅತ್ಯುತ್ತಮ ಸಿನೆಮಾ ಅನುಭವಕ್ಕೆ ಹೆಸರಾಗಿರುವ ಮಹೇಶ್‌ ಬಾಬು ಒಡೆತನದ ಎಎಂಬಿ ಸಿನಿಮಾಸ್, ಈಗ ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತರುತ್ತಿದೆ. ಈ ಮಲ್ಟಿಪ್ಲೆಕ್ಸ್‌ನ ಒಳಾಂಗಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ವೈಶಿಷ್ಠ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

Bigg Boss 12: ʻವಯಸ್ಸಲ್ಲಿ ನೀವು ದೊಡ್ಡವರು, ನಿಮ್‌ ಮನಸ್ಸಿಗೆ ತುಂಬಾ ನೋವು ಮಾಡಿಬಿಟ್ಟಿದ್ದೀನಿʼ; ಅಶ್ವಿನಿಗೆ ಕ್ಷಮೆ ಕೇಳಿದ ಗಿಲ್ಲಿ ನಟ!

ʻಕ್ಷಮೆʼ ಕೇಳಿದ ಗಿಲ್ಲಿಗೆ ʻಥ್ಯಾಂಕ್ಸ್‌ʼ ಹೇಳಿದ ಅಶ್ವಿನಿ ಗೌಡ; ಯಾಕೆ?

Bigg Boss Kannada 12 Finale: ಬಿಗ್‌ ಬಾಸ್‌ ಕನ್ನಡ 12ರ ಮಹಾ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ದೀರ್ಘಕಾಲದ ವೈಷಮ್ಯಕ್ಕೆ ಸುಖಾಂತ್ಯ ಸಿಕ್ಕಿದೆ. ಆರಂಭದಿಂದಲೂ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಸಖತ್ ಜಗಳ ಆಡುತ್ತಿದ್ದ ಇಬ್ಬರೂ ಈಗ ಭಾವುಕರಾಗಿ ಒಂದಾಗಿದ್ದಾರೆ.

IMDb: 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿವೀಲ್; ಮೊದಲ ಸ್ಥಾನ ಯಾರಿಗೆ? ಈ ಲಿಸ್ಟ್‌ನಲ್ಲಿ ಕನ್ನಡದ ಯಾವ ಚಿತ್ರವಿದೆ?

2026ರ IMDb ಭಾರತದ ‌ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್‌ ರಿಲೀಸ್!

ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರು IMDb ವೆಬ್‌ ಸೈಟ್‌ಗೆ ಭೇಟಿ ನೀಡಿದ ಆಧಾರದ ಮೇಲೆ 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಶಾರುಖ್‌ ಖಾನ್‌ ಅವರ ಕಿಂಗ್‌ ಸಿನಿಮಾವು ಮೊದಲ ಸ್ಥಾನದಲ್ಲಿದ್ದರೆ, ಯಶ್‌ ನಟಿಸಿ, ನಿರ್ಮಾಣ ಮಾಡುತ್ತಿರುವ ರಾಮಾಯಣ: ಭಾಗ 1 ಮತ್ತು ಟಾಕ್ಸಿಕ್‌ ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಐದನೇ ಸ್ಥಾನ ಪಡೆದುಕೊಂಡಿದೆ. ಮಿಕ್ಕಂತೆ ಯಾವೆಲ್ಲಾ ಸಿನಿಮಾಗಳಿವೆ? ಇಲ್ಲಿದೆ ನೋಡಿ ಫುಲ್‌ ಲಿಸ್ಟ್‌.

Bigg Boss 12: ʻಕಿಚ್ಚʼ ಸುದೀಪ್‌ಗೆ ತಂದೆಯ ಸ್ಥಾನ ನೀಡಿದ ರಕ್ಷಿತಾ ಶೆಟ್ಟಿ; ʻಬಿಗ್‌ ಬಾಸ್‌ʼ ಮನೆಯಲ್ಲಿ ತುಳುನಾಡ ಹುಡುಗಿಯ ಭರ್ಜರಿ ಜರ್ನಿ

Bigg Boss 12: ʻಕಿಚ್ಚʼ ಸುದೀಪ್‌ಗೆ ತಂದೆಯ ಸ್ಥಾನ ನೀಡಿದೆ ರಕ್ಷಿತಾ ಶೆಟ್ಟಿ

Rakshitha Shetty: ಬಿಗ್ ಬಾಸ್ ಕನ್ನಡ 12ರ ಫಿನಾಲೆ ತಲುಪಿರುವ ಸಂಭ್ರಮದಲ್ಲಿರುವ ರಕ್ಷಿತಾ ಶೆಟ್ಟಿ, ನಿರೂಪಕ ಕಿಚ್ಚ ಸುದೀಪ್ ಅವರಿಗೆ ತಮ್ಮ ಜೀವನದಲ್ಲಿ 'ಎರಡನೇ ಅಪ್ಪ'ನ ಸ್ಥಾನ ನೀಡಿದ್ದಾರೆ. ಮೊದಲ ದಿನವೇ ಮನೆಯವರಿಂದ ಹೊರದಬ್ಬಲ್ಪಟ್ಟು, ಪುನಃ ವಾಪಸ್‌ ಬಂದು ಇದೀಗ ಫಿನಾಲೆ ತಲುಪಿರುವ ರಕ್ಷಿತಾ, ಸುದೀಪ್ ಅವರ ಗುಣವನ್ನು ಅಭಿಮಾನಿಗಳ ಮುಂದೆ ಕೊಂಡಾಡಿದ್ದಾರೆ.

Mango Pachcha: ಸಂಕ್ರಾಂತಿ ಸಂಭ್ರಮಕ್ಕೆ ʻಅರಗಿಣಿಯೇʼ ಎನ್ನುತ್ತಾ ಬಂದ ಸಂಚಿತ್‌ ಸಂಜೀವ್‌; ʻಕಿಚ್ಚʼ ಸುದೀಪ್‌ ಪುತ್ರಿ ಹಾಡಿದ 2ನೇ ಸಾಂಗ್‌ ರಿಲೀಸ್‌

ಸಂಚಿತ್ ಸಂಜೀವ್ `ʻಮ್ಯಾಂಗೋ ಪಚ್ಚʼ ಚಿತ್ರಕ್ಕೆ ಸಾನ್ವಿ ಸುದೀಪ್ ಸಾಥ್

Mango Pachcha Movie: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಗಾಯಕಿಯಾಗಿ ತಮ್ಮ ಎರಡನೇ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಎಂಬ ರೊಮ್ಯಾಂಟಿಕ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಹಾಡಿದ್ದಾರೆ.

Bigg Boss Kannada 12 Finale: ಮಿಡ್‌ ವೀಕ್‌ನಲ್ಲಿ ಶಾಕ್ ಕೊಟ್ಟ ʻಬಿಗ್‌ ಬಾಸ್‌ʼ; ʻಕಿಚ್ಚನ ಚಪ್ಪಾಳೆʼ ಪಡೆದ ನಾಲ್ಕೇ ದಿನಕ್ಕೆ ದೊಡ್ಮನೆಗೆ ಧ್ರುವಂತ್ ವಿದಾಯ!

BBK 12 Mid Week Elimination: ಧ್ರುವಂತ್‌ - ಕಾವ್ಯ ನಡುವೆ ʻಬಿಗ್ʼ ಫೈಟ್!

BBK 12 Mid Week Elimination: ಬಿಗ್‌ ಬಾಸ್‌ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಮಿಡ್‌-ವೀಕ್ ಎಲಿಮಿನೇಷನ್ ಮೂಲಕ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಮನೆಯಲ್ಲಿದ್ದ ಏಳು ಮಂದಿಯಲ್ಲಿ ಧನುಷ್ ಈಗಾಗಲೇ ಫಿನಾಲೆ ತಲುಪಿದ್ದು, ಉಳಿದ ಆರು ನಾಮಿನೇಟೆಡ್ ಸದಸ್ಯರಲ್ಲಿ ಧ್ರುವಂತ್ ಮನೆಯಿಂದ ಹೊರಬಿದ್ದಿದ್ದಾರೆ.

Bigg Boss 12 Finale: ʻಕಿಚ್ಚʼ ಸುದೀಪ್‌ರನ್ನು ಕರವೇ ನಾರಾಯಣ ಗೌಡ ಮೀಟ್‌ ಮಾಡಿದ್ದೇಕೆ? ವೈರಲ್‌ ಆಗ್ತಿರುವ ಫೋಟೋಗಳ ಹಿಂದಿದೆ ಬೇರೆಯದೇ ಕಾರಣ!

ʻಕಿಚ್ಚʼ ಸುದೀಪ್‌ರನ್ನು ಕರವೇ ನಾರಾಯಣ ಗೌಡ ಭೇಟಿಯಾಗಿದ್ದೇಕೆ? ಸತ್ಯ ಇಲ್ಲಿದೆ

Bigg Boss Kannada 12‌ Ashwini Gowda: ಬಿಗ್‌ ಬಾಸ್ ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್‌ರನ್ನು ಕರವೇ ಅಧ್ಯಕ್ಷ ನಾರಾಯಣ ಗೌಡ ಭೇಟಿ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಕರವೇಯಲ್ಲಿ ಗುರುತಿಸಿಕೊಂಡಿರುವುದರಿಂದ, ಅವರ ಪರ ಪ್ರಚಾರಕ್ಕೆ ಈ ಭೇಟಿ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅಸಲಿ ವಿಚಾರವೇ ಬೇರೆ!

Mohanlal: ʻಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲʼ; ಭಾರತದ ಬಹುನಿರೀಕ್ಷಿತ ಸಿಕ್ವೇಲ್‌ ʻದೃಶ್ಯಂ 3ʼ ರಿಲೀಸ್‌ ಡೇಟ್‌ ಘೋಷಣೆ!

ʻದೃಶ್ಯಂ 3ʼ ರಿಲೀಸ್ ಡೇಟ್ ಫಿಕ್ಸ್, ಮತ್ತೆ ಬರ್ತಾನೆ ಜಾರ್ಜ್‌ ಕುಟ್ಟಿ!

Drishyam 3 Update: ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಈ ಸರಣಿಯ ಮೂರನೇ ಭಾಗವು ವಿಶ್ವಾದ್ಯಂತ ಏಪ್ರಿಲ್ 2ರಂದು ತೆರೆಗೆ ಬರಲಿದೆ. "ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯ ಬಯಲಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ʻಕೂಲಿʼ ಡೈರೆಕ್ಟರ್‌ ಲೋಕೇಶ್‌ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್‌; ಅಭಿಮಾನಿಗಳಿಗೆ ಸದ್ದಿಲ್ಲದೇ ಸಂಕ್ರಾಂತಿ ಬೆಲ್ಲ ತಿನ್ನಿಸಿದ ʻಐಕಾನ್‌ ಸ್ಟಾರ್‌ʼ!

ತಮಿಳು ನಿರ್ದೇಶಕರಿಗೆ ಅಲ್ಲು ಅರ್ಜುನ್ ಫಿದಾ! ಲೋಕೇಶ್ ಜೊತೆ ಹೊಸ ಸಿನಿಮಾ

AA23 Announcement: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ #AA23 ಅಧಿಕೃತವಾಗಿ ಘೋಷಣೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯೋಗವಾಗಿ ಬಿಡುಗಡೆಯಾದ ಅನಿಮೇಷನ್ ಮೋಷನ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Chiranjeevi: ಎರಡೇ ದಿನಕ್ಕೆ ಶತಕೋಟಿ ಕ್ಲಬ್‌ಗೆ ಸೇರಿಕೊಂಡ ʻಮನ ಶಂಕರ ವರ ಪ್ರಸಾದ್‌ ಗಾರುʼ; ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟಾಯ್ತು ಕಲೆಕ್ಷನ್?

'ಮನ ಶಂಕರ ವರ ಪ್ರಸಾದ್‌ ಗಾರು' ಅಬ್ಬರ; ಎರಡೇ ದಿನಕ್ಕೆ 120 ಕೋಟಿ ಕಲೆಕ್ಷನ್!

Mana Shankara Vara Prasada Garu Collection: 'ಮೆಗಾ ಸ್ಟಾರ್' ಚಿರಂಜೀವಿ ಮತ್ತು ನಯನತಾರಾ ಅಭಿನಯದ 'ಮನ ಶಂಕರ ವರ ಪ್ರಸಾದ್‌ ಗಾರು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಈ ಚಿತ್ರವು ವಿಶ್ವಾದ್ಯಂತ ₹120 ಕೋಟಿ ಗಳಿಸಿ ಶತಕೋಟಿ ಕ್ಲಬ್ ಸೇರಿದೆ.

Loading...