ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?
ರದ್ದಾದ ಅಬಕಾರಿ ನೀತಿಯ ಬಗ್ಗೆ ಮನೀಷ್ ಸಿಸೋಡಿಯಾ ಬಳಿ ಕೇಳಿದ್ದಾಗ, “ಅದೊಂದು ಅದ್ಭುತವಾದ ಮಾದರಿ ಅಬಕಾರಿ ನೀತಿ" ಎಂದೇನೂ ಅವರು ಬೆನ್ನು ತಟ್ಟಿಕೊಳ್ಳಲಿಲ್ಲ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಧೀಶರು ಕೂಡ “ಅಬಕಾರಿ ಹಗರಣ ನಡೆದಿಲ್ಲ. ಎಲ್ಲವೂ ಶುಭ್ರವಾಗಿದೆ" ಎಂದೂ ಹೇಳಿಲ್ಲ. ಬದಲಿಗೆ, “ಸಿಬಿಐ ಮಾಡಿದ ಆರೋಪಗಳಿಗೆ ಶಕ್ತಿ ತುಂಬುವ ಸಾಕ್ಷ್ಯಗಳಿಲ್ಲ ಮತ್ತು ಕೋರ್ಟ್ ಮುಂದೆ ಪ್ರಸ್ತುತಪಡಿಸಲಾದ ಸಾಕ್ಷ್ಯಗಳನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನೂ ಒದಗಿಸಿಲ್ಲ.