ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕೆ. ರಾಘವ ಶರ್ಮ ನಿಡ್ಲೆ

ಅಂಕಣಕಾರ, ವಿಶೇ಼ಷ ಭಾತ್ಮೀದಾರ

vishwavani.social@gmail.com

ರಾಘವ ಶರ್ಮ ನಿಡ್ಲೆ ಅವರು ರಾಜಧಾನಿ ದೆಹಲಿಯಲ್ಲಿ 18 ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ದ ಸಂಡೇ ಇಂಡಿಯನ್ ಸುದ್ದಿ ವಾರ ಪತ್ರಿಕೆಗೆ ದೆಹಲಿಯಲ್ಲಿ 2007ರಿಂದ 3 ವರ್ಷ, ಜನಶ್ರೀ ಕನ್ನಡ ಸುದ್ದಿ ವಾಹಿನಿಯಲ್ಲಿ 2 ವರ್ಷ ಮತ್ತು ವಿಜಯವಾಣಿ ದಿನಪತ್ರಿಕೆಗೆ ದೆಹಲಿ ವಿಶೇಷ ಪ್ರತಿನಿಧಿಯಾಗಿ 2012ರಿಂದ 2025ರ ತನಕ ಕಾರ್ಯನಿರ್ವಹಿಸಿದ್ದಾರೆ. 2017ರಿಂದ 2023ರ ತನಕ ವಿಜಯವಾಣಿ ಸೋದರ ಸಂಸ್ಥೆ ದಿಗ್ವಿಜಯ ಸುದ್ದಿ ವಾಹಿನಿಗೂ ವಿಶೇಷ ಪ್ರತಿನಿಧಿ ಆಗಿದ್ದರು 2014, 2019, 2024ರ ಲೋಕಸಭೆ ಚುನಾವಣೆ, ಹಾಗೇ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪ್ರತ್ಯಕ್ಷ ವರದಿ ಮಾಡಿದ ಅನುಭವ ಹೊಂದಿರುವ ಅವರು, ಹತ್ತು ಹಲವು ಕೇಸುಗಳ ಸುಪ್ರೀಂಕೋರ್ಟ್ ಕಲಾಪಗಳ ಬಗ್ಗೆಯೂ ವರದಿ, ವಿಶ್ಲೇಷಣೆಗಳನ್ನು ಮಾಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಸಂಪಾದಕೀಯ ಸಲಹೆಗಾರ ರಾಗಿ ಕೆಲಸ ಮಾಡುತ್ತಿರುವ ಜತೆಗೆ ವಿಶ್ವವಾಣಿ ಪತ್ರಿಕೆಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿದ್ದಾರೆ.

Articles
Raghav Sharma Nidle Column: ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?

ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?

ಇಂತಿಪ್ಪ ಶಿವಕುಮಾರ್, 2023ರ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ ರಿಂದಲೇ, ಎರಡೂವರೆ ವರ್ಷಗಳ ಹಿಂದೆ ವಾಗ್ದಾನ ಮಾಡಿದಂತೆ, ‘ನನ್ನ ಕೆಲಸಕ್ಕೆ ನ್ಯಾಯ ಕೊಡಿ, ವಚನಭ್ರಷ್ಟರಾಗಬೇಡಿ. ನಮ್ಮ ಸಮುದಾಯ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗ‌ ಬೇಡಿ’ ಎಂದು ದಿಲ್ಲಿ ದೊರೆಗಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ, ತಮ್ಮ ಪಟ್ಟಾಭಿಷೇಕದ ಸಮಯ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.

Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

35 ವರ್ಷಗಳಿಂದ ಬಿಹಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಖ್ಯ ಟಾರ್ಗೆಟ್ ಸಿಎಂ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರೇ ಆಗಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕರ ನಿದ್ದೆಗೆಡಿಸಿರುವ ಪಿಕೆ, ಎನ್‌ಡಿಎ ಮತಬ್ಯಾಂಕ್ ಬೇಧಿಸುವ ಪಕ್ಕಾ ಲೆಕ್ಕಾಚಾರ ಹಾಕಿ ಕೊಂಡಂತಿದೆ.

Raghava Sharma Nidle Column: ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಫೇಕ್‌ ನ್ಯೂಸ್‌ ಫ್ಯಾಕ್ಟರಿಗೆ ಇನ್ನೆಷ್ಟು ಬಲಿ ಬೇಕು ?

ಧರ್ಮಸ್ಥಳದ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ಸಲ್ಲಿಸಿ, ಈಗ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ (ಮುಸುಕುಧಾರಿ) ಸಿ.ಎನ್. ಚಿನ್ನಯ್ಯ ಹಾಗೂ ಆತನ ಸಹಚರರು ಯೂಟ್ಯೂಬ್ ಚಾನೆಲ್‌ ಗಳನ್ನು ಬಳಸಿಕೊಂಡು ಧರ್ಮಸ್ಥಳದ ಬಗ್ಗೆ ಎಂತೆಂಥಾ ಕಥೆಗಳನ್ನು ಹೆಣೆದರು ಎಂಬುದನ್ನು ಇಡೀ ದೇಶವೇ ನೋಡಿದೆ.

Raghava Sharma Nidle Column: ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ

ಚರ್ಚೆ ಹುಟ್ಟು ಹಾಕಿದ ಕೊಲಿಜಿಯಂ ತೀರ್ಮಾನ

ದೇಶದಲ್ಲಿ ನ್ಯಾ. ಪಾಂಚೋಲಿ ಅವರಿಗಿಂತ ಹೆಚ್ಚು ಸೇವಾ ಹಿರಿತನ ಹೊಂದಿದ ಅನೇಕ ನ್ಯಾಯ ಮೂರ್ತಿ ಗಳಿರುವಾಗ, ನ್ಯಾ.ಪಾಂಚೋಲಿಯವರನ್ನೇ ಆಯ್ಕೆ ಮಾಡುವುದಕ್ಕೆ ನನ್ನ ಸಹಮತಿಯಿಲ್ಲ ಎಂದಿದ್ದ ನ್ಯಾ.ಬಿ.ವಿ. ನಾಗರತ್ನ, ತಮ್ಮ ವಿರೋಧದ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲೂ ಪ್ರಕಟಿಸಬೇಕು ಎಂದು ಈಜಿooಛ್ಞಿಠಿ ಘೆಟಠಿಛಿ (ಅಸಮ್ಮತಿಯ ಟಿಪ್ಪಣಿ)ನಲ್ಲಿ ದಾಖಲಿಸಿದ್ದಾರೆ.

Raghava Sharma Nidle Column: ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೂ, ಅವರನ್ನು ಸಚಿವ ಸ್ಥಾನದಿಂದ ಸಿಎಂ ಎಂ.ಕೆ. ಸ್ಟ್ಯಾಲಿನ್ ತೆಗೆದುಹಾಕಿರಲಿಲ್ಲ. ಹೀಗಾಗಿ, ಇದನ್ನು ತಡೆಯಲು ಹೊಸ ಕಾನೂನು ತರುವ ಮೂಲಕ, ‘ರಾಜಕೀಯ ನೈತಿಕತೆ’ಯ ಸಂದೇಶ ಸಾರಲು ಬಿಜೆಪಿ ಯತ್ನಿಸಿದೆ.

Raghav Sharma Nidle Column: ಸೋಶಿಯಲ್‌ ಮೀಡಿಯಾ ಟ್ರಯಲ್‌ ಗೆ ಬೇಕಿದೆ ಮೂಗುದಾರ

ಸೋಶಿಯಲ್‌ ಮೀಡಿಯಾ ಟ್ರಯಲ್‌ ಗೆ ಬೇಕಿದೆ ಮೂಗುದಾರ

ನಿರ್ದಿಷ್ಟ ಪ್ರದೇಶದಲ್ಲಿ ನಡೆದ/ನಡೆಯುತ್ತಿರುವ ಘಟನೆಯನ್ನು ಯಥಾವತ್ತಾಗಿ ವರದಿ ಮಾಡುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಮಾಧ್ಯಮಗಳಿಗಿದೆ, ಸೋಷಿಯಲ್ ಮೀಡಿಯಾಗಳೂ ಈ ಹಕ್ಕನ್ನು ಬಳಸಿಕೊಳ್ಳುತ್ತಿವೆ. ಅದೇ ರೀತಿ ಅಪರಾಧ ತನಿಖೆಯ ಸಮಯದಲ್ಲಿ ಆರೋಪಿಗಳಿಗೂ ಕಾನೂನಾತ್ಮಕ ರಕ್ಷಣೆ ಪಡೆಯುವ ಹಕ್ಕಿದೆ ಎನ್ನುವುದೂ ಗಮನಾರ್ಹ.

Raghava Sharma Nidle Column: ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?

ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?

ಒಂದು ವೇಳೆ ರಾಜ್ಯ ಸರಕಾರ ಯಾವುದೇ ಅನುಮತಿಯಿಲ್ಲದೆ ಕಾಮಗಾರಿ ಶುರು ಮಾಡಿದಲ್ಲಿ ಅದು ರಾಜ್ಯಕ್ಕೆ ಕಾನೂನಾತ್ಮಕವಾಗಿ ತಿರುಗುಬಾಣವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ರಾಜ್ಯದ ಕ್ರಮವನ್ನು ಗೋವಾ ಖಂಡಿತವಾಗಿಯೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ, ಅಲ್ಲಿಂದ ಕರ್ನಾಟಕಕ್ಕೆ ಪ್ರತಿಕೂಲ ಆಗಬಲ್ಲ ಆದೇಶ ಪಡೆದುಕೊಳ್ಳಲು ಮುಂದಾಗಬಹುದು.

Raghava Sharma Nidle Column: ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

ನಿತೀಶ್‌ ರನ್ನು ಮುಗಿಸಲು ಚಿರಾಗ್‌, ಪಾಸ್ವಾನ್‌ ವ್ಯೂಹ

1990ರ ನಂತರದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2020ರ ಚುನಾವಣೆ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. 30 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವೊಂದು (ಬಿಜೆಪಿ) ರಾಜ್ಯ ಚುನಾವಣೆಯಲ್ಲಿ ಅಗ್ರಮಾನ್ಯ ಪಕ್ಷವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಜೆಡಿಯು ಎಂಬ ಎರಡು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಹಿರಿಯಣ್ಣನ ಸ್ಥಾನ ಸಿಕ್ಕಿತ್ತು.

Raghav Sharma Nidle Column: ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

‘ರಾಜ್ಯ ಕಾಂಗ್ರೆಸ್‌ನ ಪರಮೋಚ್ಚ ನಾಯಕ ನಾನೇ ಮತ್ತು ಶಾಸಕರೂ ನನ್ನೊಂದಿಗಿದ್ದಾರೆ’ ಎನ್ನುವ ಮೂಲಕ ಶಿವಕುಮಾರ್ ಪಕ್ಷದೊಳಗಿನ ವಿಶ್ವಾಸಾರ್ಹ ನಾಯಕ ಅಲ್ಲ ಎಂಬುದನ್ನೂ ಅವರೂ ಪರೋಕ್ಷವಾಗಿ ತಿಳಿಸಿದ್ದಾರೆ. ಸಿಎಂ ಸ್ಥಾನದ ಕನಸು ಕಾಣಬಹುದು. ಆದರೆ, ‘ಅದಕ್ಕೆ ನಾ ಬಿಡಲಾರೆ’ ಎಂದಿರುವ ಸಿದ್ದರಾಮಯ್ಯ, ‘ಶಿವಕುಮಾರ್ ಕನಸು ನನಸಾಗದು’ ಎಂಬ ಸಂದೇಶ ಕೊಟ್ಟಿದ್ದಾರೆ.

Raghava Sharma Nidle Column: ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

ಕೃಷ್ಣಾ ನ್ಯಾಯಾಧೀಕರಣದ 2013ರ ಸ್ಪಷ್ಟೀಕರಣ ತೀರ್ಪುಗಳನ್ನು ಪ್ರಶ್ನಿಸಿ ಮೂರೂ ರಾಜ್ಯಗಳ ಸಿವಿಲ್ ಅಪೀಲ್‌ಗಳು ಸುಪ್ರೀಂಕೋರ್ಟ್ ಕಡತಗಳಲ್ಲಿ ಈಗಲೂ ಧೂಳು ತಿನ್ನುತ್ತಿವೆ. ಸಿವಿಲ್ ಅಪೀಲ್‌ಗಳ ಬಗ್ಗೆ ಈ ಹಿಂದೆ ಹಲವು ಸುದೀರ್ಘ ವಿಚಾರಣೆ ಗಳು ನಡೆದಿದ್ದರೂ, ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಇನ್ನೂ ಹೊರ ಬೀಳದಿರುವುದು ರಾಜ್ಯದ ಕೃಷ್ಣಾ ಕಣಿವೆ ಭಾಗದ ಜನರ ಗೋಳನ್ನು ಹೆಚ್ಚಿಸುತ್ತಲೇ ಇದೆ.