ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ರೂಪಾ ಗುರುರಾಜ್

[email protected]

ಮೂಲತಃ ಬೆಂಗಳೂರಿನವರಾದ ಶ್ರೀಮತಿ. ರೂಪ ಗುರುರಾಜ್ ರೇಡಿಯೋ ಉದ್ಘೋಷಕಿಯಾಗಿ, ದೂರದರ್ಶನಗಳಲ್ಲಿ ನಿರೂಪಕಿ ಹಾಗೂ ವಾರ್ತಾ ವಾಚಕಿಯಾಗಿ, ಸೃಜನಾತ್ಮಕ ಬರಹಗಾರರಾಗಿ, ರೂಪದರ್ಶಿ, ನಟನೆ, ಸಮಾಜ ಸೇವೆ ಹೀಗೆ ಹಲವು ರಂಗಗಳಲ್ಲಿ ಅನುಭವ ಹೊಂದಿದ್ದಾರೆ.‌ - ಬೆಂಗಳೂರು ದೂರದರ್ಶನದ ಚಂದನ ವಾಹಿನಿ. - ಆಕಾಶವಾಣಿ ನಿಲಯ. - ಎಫ್.ಎಂ ರೈನ್ ಬೋ ಕಂಪನಾಂಕ. - ಅಂತಾರಾಷ್ಟ್ರೀಯ ಡಿಜಿಟಲ್ ರೇಡಿಯೋ "ನಮ್ ರೇಡಿಯೋ" ಕಾರ್ಯಕ್ರಮಗಳಲ್ಲಿ ರೂಪ ಗುರುರಾಜ್ ಅವರ ಧ್ವನಿ ಚಿರಪರಿಚಿತ. ಕಳೆದ ಒಂದೂವರೆ ದಶಕಕ್ಕೂ ಅಧಿಕ ಕಾಲ ನಿರೂಪಣಾ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ 800ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆ ಕಿರುತೆರೆ, ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವುದಲ್ಲದೇ, ರೂಪದರ್ಶಿಯಾಗಿ ಉಡುಪು ಹಾಗೂ ಬೆಳ್ಳಿ ಆಭರಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ವಿಶ್ವವಾಣಿ ದೈನಿಕದಲ್ಲಿ ಅಂಕಣಗಾರ್ತಿಯಾಗಿ "ಒಂದೊಳ್ಳೆ ಮಾತು" ಅಂಕಣವನ್ನು ಕಳೆದ 4 ವರ್ಷಗಳಿಂದ ಪ್ರತಿದಿನ ಬರೆಯುತ್ತಿದ್ದಾರೆ. ಅದಲ್ಲದೇ ಕನ್ನಡದ ಅನುಭವ ಮಂಟಪ ಎಂದೇ ಖ್ಯಾತಿ ಪಡೆದ "ವಿಶ್ವವಾಣಿ ಕ್ಲಬ್ ಹೌಸ್" ನ ಸಹ ನಿರೂಪಕಿಯಾಗಿ ಸತತ0 4 ವರ್ಷಗಳಿಂದ ( 1,100) ಪ್ರತಿದಿನ ನಡೆಸಿಕೊಂಡು ಬರುತ್ತಿದ್ದಾರೆ. ವಿಶ್ವವಾಣಿ ಟಿವಿಯಲ್ಲಿ ( ಯೂಟ್ಯೂಬ್ ಚಾನೆಲ್) ನಲ್ಲಿ ಇವರ “ಒಂದೊಳ್ಳೆ ಮಾತು “ ಸರಣಿ ವಿಡಿಯೋಗಳು ಬಿತ್ತರಗೊಳ್ಳುತ್ತಿವೆ. 50 ಕವನ ಸಂಕಲನಗಳ "ರೂಪಾಂತರ" ಹಾಗೂ ಮೂರು ಸಂಚಿಕೆಗಳ "ಒಂದೊಳ್ಳೆ ಮಾತು" ಪುಸ್ತಕಗಳು ಲೋಕಾರ್ಪಣೆಗೊಂಡಿದೆ. ಮನ: ಪ್ರಸಾದ, ಪ್ರೇರಣ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಮಾಜಸೇವೆಗಾಗಿ ತೊಡಗಿಸಿಕೊಂಡಿದ್ದಾರೆ.‌

Articles
Roopa Gururaj Column: ವರುಣದೇವನ ಅಹಂಕಾರ ಮುರಿದ ಉತಥ್ಯ ಮಹರ್ಷಿಗಳ ತಪಶ್ಯಕ್ತಿ

ವರುಣದೇವನ ಅಹಂಕಾರ ಮುರಿದ ಉತಥ್ಯ ಮಹರ್ಷಿಗಳ ತಪಶ್ಯಕ್ತಿ

ಸಕಲ ಜೀವಜಾಲವೂ ಹನಿ ನೀರಿಗಾಗಿ ಹಾಹಾಕಾರ ಪಡಲಾರಂಭಿಸಿತು. ಅಷ್ಟಕ್ಕೇ ನಿಲ್ಲದೆ, ವರುಣನ ಆಶ್ರಯ ತಾಣವಾಗಿದ್ದ ಅಗಾಧ ಜಲಸಾಮ್ರಾಜ್ಯವೇ ಒಣಗಿ ಬೋಳು ಮರಳುಗಾಡಾಗಿ ಮಾರ್ಪಟ್ಟಿತು. ನೀರಿನ ದೇವತೆಯೇ ಜೀವಜಲವಿಲ್ಲದೆ ಉಸಿರುಗಟ್ಟುವ ದಯನೀಯ ಸ್ಥಿತಿ ತಲುಪಿದನು. ಆಗ ವರುಣನಿಗೆ ಸತ್ಯದ ದರ್ಶನವಾಯಿತು.

Roopa Gururaj Column: ಅಂತರಂಗದ ಅಯೋಧ್ಯೆ ಮತ್ತು ಪರಮ ಸತ್ಯದ ಸಾಕ್ಷಾತ್ಕಾರ

ಅಂತರಂಗದ ಅಯೋಧ್ಯೆ ಮತ್ತು ಪರಮ ಸತ್ಯದ ಸಾಕ್ಷಾತ್ಕಾರ

ಮುಕ್ತಿಯನ್ನು ಮರಳಿ ಪಡೆಯಲು ನಮಗೆ ಮದವೆಂಬ ‘ವಾಲಿ’ಯ ಭಯ ಕಳೆದುಕೊಂಡ‘ ಸುಗ್ರೀವ’ ನೆಂಬ ಶುದ್ಧ ಮನಸ್ಸು ಮತ್ತು ‘ಹನು ಮಂತ’ನೆಂಬ ತೀಕ್ಷ ಶುದ್ಧ ಬುದ್ಧಿಯ ನೆರವು ಬೇಕು. ಪರಿಶುದ್ಧ ಬುದ್ಧಿ ಮಾತ್ರ ಅಜ್ಞಾನದ ಲಂಕೆಯನ್ನು ಹೊಕ್ಕು ಸತ್ಯದ ನೆಲೆ ಕಂಡುಕೊಳ್ಳಬಲ್ಲದು. ಮುಂದೆ ಎಪ್ಪತ್ತೆ ರಡು ಸಾವಿರ ನರನಾಡಿಗಳೆಂಬ ವಾನರ ಶಕ್ತಿಯಿಂದ ‘ಭಕ್ತಿ’ಯೆಂಬ ಸೇತುವೆ ಕಟ್ಟಿ, ಸತ್ಯವನ್ನು ಒಪ್ಪುವ ‘ವಿವೇಕ’ವೆಂಬ ವಿಭೀಷಣನ ಆಸರೆ ಪಡೆದು, ಕಾಮ-ಕ್ರೋಧಗಳೆಂಬ ಅರಿಷಡ್ವರ್ಗ ‘ರಾಕ್ಷಸ’ರನ್ನು ಸಂಹರಿಸಬೇಕು.

Roopa Gururaj Column: ಉಲೂಪಿಯ ಕಥನ ಕಲಿಸುವ ಜೀವನ ಪಾಠ

ಉಲೂಪಿಯ ಕಥನ ಕಲಿಸುವ ಜೀವನ ಪಾಠ

ಅರ್ಜುನನು ಗಂಗಾದ್ವಾರದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಿದ್ದಾಗ, ನಾಗರಾಜ ಕೌರವ್ಯನ ಮಗಳಾದ ಉಲೂಪಿಯು ಅರ್ಜುನನನ್ನು ಕಂಡು ಆತನ ತೇಜಸ್ಸಿಗೆ ಮಾರುಹೋದಳು. ಆತನನ್ನು ಪಾತಾಳ ಲೋಕಕ್ಕೆ ಕರೆದೊಯ್ದು, ಹೇ ಧನಂಜಯ, ನಿನ್ನ ರೂಪ ಮತ್ತು ಪರಾಕ್ರಮಕ್ಕೆ ಮನಸೋತಿದ್ದೇನೆ. ನನ್ನನ್ನು ಪತ್ನಿ ಯಾಗಿ ಸ್ವೀಕರಿಸು ಎಂದು ಪ್ರಾರ್ಥಿಸಿದಳು.

Roopa Gururaj Column: ಸತ್ಯ ಅಪ್ರಿಯವಾದರೂ, ಔಷಧದಂತೆ

Roopa Gururaj Column: ಸತ್ಯ ಅಪ್ರಿಯವಾದರೂ, ಔಷಧದಂತೆ

ಇಂದಿನ ವಾಸ್ತವ ಬದುಕಿನಲ್ಲೂ ನಾವು ಇದನ್ನೇ ಕಾಣುತ್ತಿದ್ದೇವೆ. ತಂದೆ ತನ್ನ ಮಗನ ಅನ್ಯಾಯ ಗಳನ್ನು ಪ್ರೀತಿಯ ಹೆಸರಿನಲ್ಲಿ ಸಮರ್ಥಿಸುತ್ತಾನೆ; ಸ್ನೇಹಿತ ದುಶ್ಚಟಗಳಿಗೆ ದಾಸನಾಗುತ್ತಿದ್ದರೂ ‘ಸ್ನೇಹ ಕೆಡಬಾರದು’ ಎಂದು ಸುಮ್ಮನಿರುತ್ತೇವೆ; ಸಂಗಾತಿಯ ತಪ್ಪುಗಳನ್ನು ಮುಚ್ಚಿಟ್ಟು ಬದುಕು ಸಾಗಿಸಲು ನೋಡುತ್ತೇವೆ; ಯಾರಾದರೂ ನಮ್ಮ ಲೋಪಗಳನ್ನು ಎತ್ತಿ ತೋರಿಸಿದರೆ ‘ಅವರು ನನ್ನ ಏಳಿಗೆಯನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ’ ಎಂದು ದೂರವಿಡುತ್ತೇವೆ.

Roopa Gururaj Column: ಸಾಯುವೆನೆಂಬ ಎಂಬ ಮಾತು ಬರದಿರಲಿ ನಾಲಿಗೆಯಲ್ಲಿ

ಸಾಯುವೆನೆಂಬ ಎಂಬ ಮಾತು ಬರದಿರಲಿ ನಾಲಿಗೆಯಲ್ಲಿ

ಜೀವನದಲ್ಲಿ ನಾವು ಬಹಳವಾಗಿ ನೊಂದುಕೊಂಡಾಗ, ನಮ್ಮ ಆಸೆಗಳು ನೆರವೇರದಿzಗ ಬದುಕು ಸಾಕೆನಿಸಿ ಸಾಯುವ ಆಕಾಂಕ್ಷೆಗಳು ಬರುವುದು ಸಹಜ. ಈ ರೀತಿ ವ್ಯರ್ಥ ಜೀವನ ನಡೆಸುವುದಕ್ಕಿಂತ, ಸಾವೇ ಎಷ್ಟೋ ಮೇಲು ಎನಿಸುವುದು ಸಹಜ. ಆದರೆ ನಿಜವಾಗಿಯೂ ಯಾರಿಗೂ ಸಾಯಬೇಕೆಂಬ ಆಸೆ ಇರುವುದಿಲ್ಲ, ಎಲ್ಲರೂ ಬದುಕಿರುವುದನ್ನೇ ಬಯಸುವುದು

Roopa Gururaj Column: ಅರ್ಧಜ್ಞಾನ ಅಭಿಮನ್ಯುವಿನ ಜೀವಕ್ಕೆ ತಂದ ಆಪತ್ತು

ಅರ್ಧಜ್ಞಾನ ಅಭಿಮನ್ಯುವಿನ ಜೀವಕ್ಕೆ ತಂದ ಆಪತ್ತು

ದುರ್ಯೋಧನನ ಮಗ ಲಕ್ಷ್ಮಣನನ್ನು ಸಂಹರಿಸಿದ ಅಭಿಮನ್ಯು, ಕೌರವ ಸೇನೆಯ ರಥ-ಗಜ- ಪದಾತಿ ಗಳನ್ನು ಧೂಳೀಪಟ ಮಾಡಿದ. ಆ ಬಾಲಕನ ಪರಾಕ್ರಮವನ್ನು ತಡೆಯಲು ಸಾಕ್ಷಾತ್ ದ್ರೋಣ-ಕರ್ಣರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಯುದ್ಧಧರ್ಮವನ್ನೆಲ್ಲ ಗಾಳಿಗೆ ತೂರಿದ ಕೌರವರ ಮಹಾರಥಿಗಳು ಒಟ್ಟಾಗಿ ಆತನನ್ನು ಸುತ್ತುವರಿದರು.

Roopa Gururaj Column: ಅರ್ಜುನನ ಅಹಂಕಾರ ಕರಗಿಸಿದ ಕರ್ಣನ ಎರಡಿಂಚಿನ ಜಯ

ಅರ್ಜುನನ ಅಹಂಕಾರ ಕರಗಿಸಿದ ಕರ್ಣನ ಎರಡಿಂಚಿನ ಜಯ

ಸಹನೆಯಿಳಿದ ಪಾರ್ಥನು, ಹೇ ಮಧುಸೂದನಾ! ನನ್ನ ಬಾಣದ ಪ್ರಹಾರಕ್ಕೆ ಆ ರಾಧೇಯನ ರಥವು ಧೂಳೀಪಟವಾಗುವಂತೆ ಹತ್ತಾರು ಗಜಗಳಷ್ಟು ದೂರ ತಳ್ಳಲ್ಪಡುತ್ತಿದೆ. ಆದರೆ ಆತ ಬಿಟ್ಟ ಬಾಣಕ್ಕೆ ನಮ್ಮ ರಥವು ಕಿಂಚಿತ್ತೂ ಅಲುಗಾಡದೆ ಕೇವಲ ಎರಡು ಇಂಚು ಸರಿದಿದೆ. ಹೀಗಿರುವಾಗ ನನ್ನ ಭುಜಬಲವನ್ನು ಕಡೆಗಣಿಸಿ, ಶತ್ರುವಿನ ಅಲ್ಪ ಶೌರ್ಯವನ್ನು ಹೊಗಳುವುದರ ಔಚಿತ್ಯವೇನು ಕೃಷ್ಣಾ? ಎಂದು ರೋಷದಿಂದ ನುಡಿದನು.

Roopa Gururaj Column: ನಾಮದ ಬಲವೊಂದಿದ್ದರೇ ಸಾಕೋ ! ಭಗವಂತನ ನಾಮಸ್ಮರಣೆಯ ಮಹತ್ವ

ನಾಮದ ಬಲವೊಂದಿದ್ದರೇ ಸಾಕೋ ! ಭಗವಂತನ ನಾಮಸ್ಮರಣೆಯ ಮಹತ್ವ

ಒಂದು ಊರಿನಲ್ಲಿ ಅತ್ಯಂತ ಬಡ ಕೃಷಿಕನೊಬ್ಬನಿದ್ದ. ದಿನವಿಡೀ ದುಡಿದರೂ ಅವನಿಗೆ ಹೊಟ್ಟೆ ತುಂಬ ಊಟ ಸಿಗುತ್ತಿರಲಿಲ್ಲ. ಒಮ್ಮೆ ಆ ಊರಿಗೆ ಬಂದ ಹರಿದಾಸರ ಬಳಿ ಹೋಗಿ, ತನ್ನ ದಾರಿದ್ರ್ಯ ನೀಗಿಸಲು ಉಪಾಯ ಕೇಳಿದ. ದಾಸರು ಪೂಜೆ ಮಾಡು, ದೇವಸ್ಥಾನಕ್ಕೆ ಹೋಗು ಎಂದಾಗ, ಅದಕ್ಕೆ ಹಣವೂ ಇಲ್ಲ, ಎತ್ತುಗಳನ್ನು ಬಿಟ್ಟು ಹೋಗಲು ಸಮಯವೂ ಇಲ್ಲ ಎಂದ.

Roopa Gururaj Column: ದೇವಿಯ ಮಹಾತ್ಮೆ ನುತಿಸುವ ಲಲಿತಾ ಸಹಸ್ರನಾಮದ ವೈಶಿಷ್ಟ್ಯ

ದೇವಿಯ ಮಹಾತ್ಮೆ ನುತಿಸುವ ಲಲಿತಾ ಸಹಸ್ರನಾಮದ ವೈಶಿಷ್ಟ್ಯ

ಮಹಾ ವಿಷ್ಣುವಿನ ಅವತಾರವಾದ ಹಯಗ್ರೀವರು ತಪಸ್ವಿ ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಸಂವಾದ ರೂಪದಲ್ಲಿ ಇದು ಉಪಲಬ್ಧವಿದೆ. ಲೋಕಕಲ್ಯಾಣಕ್ಕಾಗಿ ಮತ್ತು ಭಕ್ತರ ಅಜ್ಞಾನ, ಪಾಪಗಳನ್ನು ಕಳೆದು ಮುಕ್ತಿ ನೀಡಲು ಜಗನ್ಮಾತೆಯೇ ಸ್ವತಃ ಅನುಗ್ರಹಿಸಿದ ಶ್ರೇಷ್ಠ ರಹಸ್ಯವಿದು. ಈ ಸ್ತೋತ್ರದಲ್ಲಿರುವ ಪ್ರತಿಯೊಂದು ಹೆಸರೂ ಕೇವಲ ಅಕ್ಷರಗಳ ಜೋಡಣೆಯಲ್ಲ; ಅವು ಬ್ರಹ್ಮಾಂಡದ ಶಕ್ತಿಯನ್ನು ಹೊಮ್ಮಿಸುವ ಒಂದೊಂದು ಜೀವಂತ ಮಂತ್ರಗಳು.

Roopa Gururaj Column: ಉದ್ಧಟತನದಿಂದ ತನ್ನ ನಾಶಕ್ಕೇ ಕಾರಣನಾದ ಕೃಷ್ಣನ ಪುತ್ರ ಸಾಂಬ

ಉದ್ಧಟತನದಿಂದ ತನ್ನ ನಾಶಕ್ಕೇ ಕಾರಣನಾದ ಕೃಷ್ಣನ ಪುತ್ರ ಸಾಂಬ

ಶಮಂತಕ ಮಣಿಯ ಘಟನೆಯ ನಂತರ ಶ್ರೀಕೃಷ್ಣನು ಜಾಂಬವತಿಯನ್ನು ವಿವಾಹವಾದರೂ ಅವರಿಗೆ ಬಹಳ ಕಾಲ ಸಂತಾನವಿರಲಿಲ್ಲ. ಜಾಂಬವತಿಯ ಕೋರಿಕೆಯ ಮೇರೆಗೆ ಶ್ರೀಕೃಷ್ಣನು ಉಪಮನ್ಯು ಮಹರ್ಷಿ ಗಳ ಮಾರ್ಗದರ್ಶನದಲ್ಲಿ ಕೈಲಾಸನಾಥನನ್ನು ಕುರಿತು ಕಠಿಣ ತಪಸ್ಸು ಆಚರಿಸಿದನು. ಸಾಂಬಶಿವನ ಅನುಗ್ರಹದಿಂದ ಜನಿಸಿದ ಬಾಲಕನಿಗೆ ‘ಸಾಂಬ’ ಎಂದು ನಾಮಕರಣ ಮಾಡಲಾಯಿತು.

Roopa Gururaj Column: ಅಹಂಕಾರ ಮುರಿದು ಕರುಣಾಮಯಿಯಾಗಿ ನೆಲೆನಿಂತ ತಿರುಮಲ ಶ್ರೀನಿವಾಸ

ಅಹಂಕಾರ ಮುರಿದು ಕರುಣಾಮಯಿಯಾಗಿ ನೆಲೆನಿಂತ ತಿರುಮಲ ಶ್ರೀನಿವಾಸ

ಮಹಾವಿಷ್ಣುವಿನ ಹೃದಯವು ತಾಯಿ ಮಹಾಲಕ್ಷ್ಮಿಯ ಶಾಶ್ವತ ನಿವಾಸ. ಶ್ರೀಹರಿ ಸಿಟ್ಟಿಗೇಳುವ ಬದಲು, ಶಾಂತಚಿತ್ತದಿಂದ ಎದ್ದು ನಿಂತು, ಮುನಿಶ್ರೇಷ್ಠರೇ, ವಜ್ರದಂತಿರುವ ನನ್ನ ಎದೆ ತಾಗಿ ನಿಮ್ಮ ಕೋಮಲ ಪಾದಗಳಿಗೆ ನೋವಾಯಿತೇ? ಎಂದು ಪಾದವನ್ನೊತ್ತಿದ. ಆ ಮೃದುಸ್ಪರ್ಶದ ಮುನಿಯ ಪಾದದಲ್ಲಿದ್ದ ಅಹಂಕಾರದ ಕಣ್ಣು ಕರಗಿ, ಜ್ಞಾನೋದಯವಾಯಿತು.

Roopa Gururaj Column: ಬ್ರಹ್ಮಾಂಡ ಸ್ವರೂಪದ ಕಾಲದ ಕನ್ನಡಿ ಮತ್ತು ಕರಗುವ ಅಹಂಕಾರ

ಬ್ರಹ್ಮಾಂಡ ಸ್ವರೂಪದ ಕಾಲದ ಕನ್ನಡಿ ಮತ್ತು ಕರಗುವ ಅಹಂಕಾರ

ಸತ್ಯಯುಗದಲ್ಲಿ ಕುಶಸ್ಥಳಿಯ (ಇಂದಿನ ದ್ವಾರಕೆ) ಕಕುದ್ಮಿ ಎಂಬ ಧೀಮಂತ ರಾಜನಿಗೆ ರೇವತಿ ಎಂಬ ಅಪ್ರತಿಮ ಸುಂದರಿ ಮತ್ತು ಸಕಲ ವಿದ್ಯಾವಂತೆಯಾದ ಮಗಳಿದ್ದಳು. ಆಕೆಯ ದಿವ್ಯ ತೇಜಸ್ಸು ಹಾಗೂ ಅಸಾಧಾರಣ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವರ ಭೂಮಂಡಲದಲ್ಲೂ ಸಿಗದೆ ಕಂಗಾಲಾದ ರಾಜನು, ಸೃಷ್ಟಿಕರ್ತನಾದ ಬ್ರಹ್ಮದೇವನನ್ನೇ ಮುಖಾಮುಖಿ ಭೇಟಿ ಮಾಡಿ ಸೂಕ್ತ ವರನನ್ನು ಕೇಳಲು ನಿರ್ಧರಿಸಿದನು.

Roopa Gururaj Column: ಹನುಮಂತನನ್ನು ಸಂಪ್ರೀತಗೊಳಿಸಲು ವೀಳ್ಯದೆಲೆ ಹಾರ

ಹನುಮಂತನನ್ನು ಸಂಪ್ರೀತಗೊಳಿಸಲು ವೀಳ್ಯದೆಲೆ ಹಾರ

ಅಶೋಕವನದಲ್ಲಿ ಬೇರೆ ಹೂವುಗಳು ಕಾಣದೆ, ಅಲ್ಲಿಯೇ ಬೆಳೆದಿದ್ದ ಹಸಿರಾದ ವೀಳ್ಯದೆಲೆಗಳನ್ನು ಕೊಯ್ದು ಪ್ರೀತಿಯಿಂದ ಒಂದು ಸುಂದರ ಹಾರವನ್ನು ಕಟ್ಟಿ ಹನುಮಂತನ ಕೊರಳಿಗೆ ಹಾಕಿದಳು. ಜಗನ್ಮಾತೆಯ ಈ ಪ್ರೀತಿಯ ಉಡುಗೊರೆಯಿಂದ ಪುಳಕಿತನಾದ ಆಂಜನೇಯನು, ತಾಯೇ, ಇಂದಿನಿಂದ ಯಾರೇ ಭಕ್ತರು ಭಕ್ತಿ ಯಿಂದ ನನಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸುತ್ತಾರೋ, ಅವರ ಕಷ್ಟ-ಕಾರ್ಪಣ್ಯ, ಮಾಟ-ಮಂತ್ರದ ದೋಷ, ಭಯ ಮತ್ತು ಗ್ರಹದೋಷಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ ಎಂದು ವರವಿತ್ತನು.

Roopa Gururaj Column: ಸಮೃದ್ಧಿಯ ಸಾಕಾರಮೂರ್ತಿ ಶ್ರೀಲಕ್ಮೀಯ ಹದಿನೆಂಟು ಸದ್ಗುಣ ತತ್ವಗಳು

ಸಮೃದ್ಧಿಯ ಸಾಕಾರಮೂರ್ತಿ ಶ್ರೀಲಕ್ಮೀಯ ಹದಿನೆಂಟು ಸದ್ಗುಣ ತತ್ವಗಳು

ಋಗ್ವೇದದ ಅತ್ಯಂತ ಪವಿತ್ರ ಭಾಗವಾದ ಶ್ರೀಸೂಕ್ತದಲ್ಲಿ ಲಕ್ಷ್ಮೀದೇವಿಯ ನಾಲ್ವರು ಪ್ರಮುಖ ಪುತ್ರರ ಅಥವಾ ಋಷಿಗಳ ಉಲ್ಲೇಖ ಬರುತ್ತದೆ: ‘ಆನಂದಃ ಕರ್ದಮಶ್ಬೈವ ಚಿಕ್ಲೀತ ಇತಿ ವಿಶ್ರುತಃ | ಋಷಯಃ ಶ್ರಿಯಃ ಪುತ್ರಾಶ್ಚ ಮಯಿ ಶ್ರೀರ್ದೇವಿ ದೇವತಾ’ ಈ ಮಂತ್ರದಲ್ಲಿ ಉಲ್ಲೇಖಿಸಲಾದ ಆನಂದ, ಕರ್ದಮ, ಚಿಕ್ಲೀತ ಮತ್ತು ಶ್ರೀದ ಕೇವಲ ಪೌರಾಣಿಕ ವ್ಯಕ್ತಿಗಳಲ್ಲ

Roopa Gururaj Column: 250 ವರ್ಷಗಳ ಅವಿರತ ಭಕ್ತಿ ಪರಂಪರೆ: ಮಹೇಶ್ವರದ ಪಾರ್ಥಿವ ಲಿಂಗಾರ್ಚನೆ

250 ವರ್ಷಗಳ ಅವಿರತ ಭಕ್ತಿ ಪರಂಪರೆ: ಮಹೇಶ್ವರದ ಪಾರ್ಥಿವ ಲಿಂಗಾರ್ಚನೆ

1767ರಲ್ಲಿ ಅಹಲ್ಯಾ ಬಾಯಿಯವರು ತಮ್ಮ ರಾಜಧಾನಿಯನ್ನು ಇಂದೋರ್‌ನಿಂದ ಮಹೇಶ್ವರಕ್ಕೆ ಸ್ಥಳಾಂತರಿಸಿ, ನರ್ಮದಾ ನದಿಯ ಸುಂದರ ಘಾಟ್‌ಗಳ ಮೇಲೆ ಭವ್ಯವಾದ ಅಹಲ್ಯಾ ಕೋಟೆ (ರಾಜವಾಡ) ನಿರ್ಮಿಸಿ ದರು. ಕೋಟೆಯ ಆವರಣದಲ್ಲಿರುವ ರಾಣಿಯ ಖಾಸಗಿ ಪೂಜಾ ಮಂದಿರದ ಪಕ್ಕದಲ್ಲಿ ಆರಂಭವಾದ ಒಂದು ಆಧ್ಯಾತ್ಮಿಕ ವ್ರತ, ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅದೇ ಪವಿತ್ರ ಪಾರ್ಥಿವ ಲಿಂಗಾರ್ಚನೆ

Roopa Gururaj Column: ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸಹೋದರರನ್ನು ಬದುಕಿಸಿಕೊಂಡ ಧರ್ಮರಾಯ

ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸಹೋದರರನ್ನು ಬದುಕಿಸಿಕೊಂಡ ಧರ್ಮರಾಯ

ಯಾವುದೇ ಗಾಯವಿಲ್ಲದೆ ಬಿದ್ದಿದ್ದ ವೀರ ಸಹೋದರರನ್ನು ನೋಡಿ, ಇದು ಸಾಮಾನ್ಯ ಶತ್ರುವಿನ ಕೆಲಸ ವಲ್ಲ, ಯಾವುದೋ ದೈವಿಕ ಪರೀಕ್ಷೆ ಎಂಬುದು ಆತನಿಗೆ ಅರ್ಥವಾಯಿತು. ದುಃಖದ ನಡುವೆಯೂ ನೀರಿಗಿಳಿದಾಗ, ಬಕರೂಪಿ ಯಕ್ಷ ಪ್ರತ್ಯಕ್ಷನಾಗಿ ಅದೇ ಸಾವಿನ ಎಚ್ಚರಿಕೆ ನೀಡಿದ. ಧರ್ಮರಾಯ ಧಾವಂತಕ್ಕೆ ಬೀಳದೆ, ಕೈಮುಗಿದು, ‘ಮಹಾತ್ಮನೇ, ನಿಮ್ಮ ಪ್ರಶ್ನೆಗಳನ್ನು ಕೇಳಿ, ನನ್ನ ಬುದ್ಧಿಗನುಸಾರ ಉತ್ತರಿಸುವೆ’, ಎಂದು ಶಾಂತಚಿತ್ತನಾಗಿ ನಿಂತ.

Roopa Gururaj Column: ಗುವಾಹಟಿಯ ನವಗ್ರಹ ದೇವಾಲಯ: ಬ್ರಹ್ಮನ ಅಧ್ಯಯನ ತಾಣ

ಗುವಾಹಟಿಯ ನವಗ್ರಹ ದೇವಾಲಯ: ಬ್ರಹ್ಮನ ಅಧ್ಯಯನ ತಾಣ

ನವಗ್ರಹಗಳಾದ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳ ಶಕ್ತಿಯನ್ನು ನಿಯಂತ್ರಿಸಿ ಲೋಕಕಲ್ಯಾಣ ಮಾಡಲು, ಆತ ಒಂಬತ್ತು ಗ್ರಹಗಳ ಪ್ರತೀಕವಾಗಿ ಒಂಬತ್ತು ಶಿವಲಿಂಗಗಳನ್ನು ಸ್ವತಃ ಪ್ರತಿಷ್ಠಾಪಿಸಿದನು. ಬ್ರಹ್ಮನೇ ಇಲ್ಲಿ ಗ್ರಹ- ನಕ್ಷತ್ರಗಳ ಜ್ಯೋತಿಷ್ಯ ಅಧ್ಯಯನ ನಡೆಸಿದ್ದರಿಂದ, ಈ ನಗರಕ್ಕೆ ‘ಪ್ರಾಗ್ಜ್ಯೋತಿಷಪುರ’ (ಪೂರ್ವದ ಜ್ಯೋತಿಷ್ಯದ ಅಥವಾ ಬೆಳಕಿನ ನಗರಿ) ಎಂಬ ಹೆಸರು ಶಾಶ್ವತವಾಯಿತು.

Roopa Gururaj Column: ಭಾಗವತದ ಉದ್ಧವಗೀತೆ: ಭೂಮಿಯ ಕ್ಷಮಾ ಗುಣ

ಭಾಗವತದ ಉದ್ಧವಗೀತೆ: ಭೂಮಿಯ ಕ್ಷಮಾ ಗುಣ

ಪ್ರಕೃತಿಯ ಯಾವುದೇ ವೈಪರೀತ್ಯ ಪರ್ವತದ ದೃಢತೆಯನ್ನು ಅಡಿ ಸಲಾರವು. ಇದು ಮಾನವನ ಜೀವನಕ್ಕೆ ಅತ್ಯಂತ ಪ್ರಸ್ತುತವಾದ ಸಂದೇಶ. ಮನುಷ್ಯನ ಜೀವನದಲ್ಲಿ ಸುಖ-ದುಃಖಗಳು, ಲಾಭ-ನಷ್ಟಗಳು, ಮಾನ-ಅವಮಾನಗಳು ನಿರಂತರವಾಗಿ ಬರುತ್ತಿರುತ್ತವೆ. ಪರ್ವತದಂತೆ ಮನಸ್ಸನ್ನು ಗಟ್ಟಿ ಗೊಳಿಸಿಕೊಂಡಾಗ ಮಾತ್ರ ಈ ದ್ವಂದ್ವಗಳಿಂದ ಪಾರಾಗಲು ಸಾಧ್ಯ

Roopa Gururaj Column: ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

ಪಿಂಗಳೆಯ ಕಥೆ: ನಿರೀಕ್ಷೆಗಳಿಂದ ಮುಕ್ತಿಯೆಡೆಗೆ

ಅವಳು ತನ್ನೊಳಗೆ ಚಿಂತಿಸಿದಳು ಕ್ಷಣಿಕವಾದ ಸುಖ, ಹಣ ಮತ್ತು ಜನರ ಮೆಚ್ಚುಗೆಗಾಗಿ ನಾನು ಎಷ್ಟು ನಿಕೃಷ್ಟವಾಗಿ ಇತರರನ್ನು ಅವಲಂಬಿಸಿದ್ದೆ! ನಶ್ವರವಾದ ದೇಹವನ್ನು ಪ್ರೀತಿಸುವ, ಕ್ಷಣಮಾತ್ರದಲ್ಲಿ ಬದಲಾಗುವ ಮನುಷ್ಯರಿಂದ ನಾನು ಶಾಶ್ವತ ಸುಖವನ್ನು ನಿರೀಕ್ಷಿ ಸುತ್ತಿದ್ದೆ. ಆದರೆ ನನ್ನ ಹೃದಯದಲ್ಲೇ ಸದಾ ನೆಲೆಸಿರುವ ಪರಮಾತ್ಮನನ್ನು (ಶ್ರೀಕೃಷ್ಣನನ್ನು) ಮರೆತಿದ್ದೆ.

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

Roopa Gururaj Column: ಸೋಲಿನ ದವಡೆಯಿಂದ ಗೆಲುವಿನ ದಡಕ್ಕೆ

ನಷ್ಟದಲ್ಲಿದ್ದ ನೂರಾರು ಮಳಿಗೆಗಳನ್ನು ಮುಚ್ಚಿ, ಸುಮಾರು 450 ರಿಂದ 500 ಅತ್ಯಂತ ಲಾಭದಾಯಕ ಕೆಫೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದರು. ನಿರ್ವಹಣಾ ವೆಚ್ಚ ಕಡಿಮೆ ಇರುವ ಕಾರ್ಪೊರೇಟ್ ಕಾಫಿ ವೆಂಡಿಂಗ್ ಮೆಷಿನ್‌ಗಳ ಸಂಖ್ಯೆಯನ್ನು 50000ಕ್ಕೂ ಹೆಚ್ಚು ಕಚೇರಿಗಳಿಗೆ ವಿಸ್ತರಿಸಿದರು. ಈ ನಿಖರ ನಿರ್ಧಾರಗಳ ಫಲವಾಗಿ, 2019ರಲ್ಲಿ ರು.7200 ಕೋಟಿಗೂ ಅಧಿಕವಾಗಿದ್ದ ಸಾಲವು, 2021ರ ವೇಳೆಗೆ ರು.1731 ಕೋಟಿಗೆ, ನಂತರ ರು.800 - ರು.1000 ಕೋಟಿಯ ಆಸುಪಾಸಿಗೆ ಇಳಿಯಿತು

Roopa Gururaj Column: ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಶ್ರೀಕೃಷ್ಣನ ಆದರ್ಶ ವ್ಯಕ್ತಿತ್ವ: ಬದುಕಿಗೊಂದು ಜೀವಂತ ದರ್ಶನ

ಕೃಷ್ಣನ ಬದುಕು ಹುಟ್ಟಿನಿಂದಲೇ ಸವಾಲುಗಳಿಂದ ಕೂಡಿತ್ತು. ಹುಟ್ಟುವ ಮುನ್ನವೇ ಸೋದರ ಮಾವ ಕಂಸನ ರೂಪದಲ್ಲಿ ಸಾವು ಕಾಯುತ್ತಿತ್ತು. ಕತ್ತಲೆಯ ಸೆರೆಮನೆಯಲ್ಲಿ ಜನಿಸಿ, ಹೆತ್ತ ತಾಯಿ ದೇವಕಿಯ ಮಡಿಲನ್ನು ಜನಿಸಿದ ರಾತ್ರಿಯೇ ತೊರೆದ. ಮುದ್ದಿಸಿ, ಸಾಕಿದ ಯಶೋದೆಗೂ ಆತ ಕೊನೆತನಕ ಉಳಿಯ ಲಿಲ್ಲ.

Roopa Gururaj Column: ಶಿವನು ಕೇದಾರನಾಥದಲ್ಲಿ ನೆಲೆಸಲು ಕಾರಣ

Roopa Gururaj Column: ಶಿವನು ಕೇದಾರನಾಥದಲ್ಲಿ ನೆಲೆಸಲು ಕಾರಣ

‘ಹೇ ಪ್ರಭು, ಭವಿಷ್ಯದಲ್ಲಿ ಮಾನವಕುಲದ ಉದ್ದಾರ ಕ್ಕಾಗಿ ಮತ್ತು ಭಕ್ತರ ರಕ್ಷಣೆಗಾಗಿ ನೀನು ಈ ಪವಿತ್ರ ವಾದ ‘ಕೇದಾರ’ ಕ್ಷೇತ್ರದಲ್ಲಿ ಜ್ಯೋತಿಲಿಂಗದ ರೂಪದಲ್ಲಿ ಶಾಶ್ವತವಾಗಿ ನೆಲೆಸಬೇಕು’ ಎಂದು ಪ್ರಾರ್ಥಿಸು ತ್ತಾರೆ. ಅವರ ನಿಸ್ವಾರ್ಥ ಕೋರಿಕೆಯನ್ನು ಮನ್ನಿಸಿದ ಕರುಣಾಮಯಿ ಶಿವನು, ಭಕ್ತರ ಪಾಪಗಳನ್ನು ನಾಶ ಮಾಡಲು ಮತ್ತು ಅವರ ಇಷ್ಟಾರ್ಥಗಳನ್ನು ಈಡೇರಿಸಲು ಹಿಮಾಲ ಯದ ಆ ಬೆಟ್ಟಗಳ ನಡುವೆ ‘ಕೇದಾರೇಶ್ವರ’ ಎಂಬ ಹೆಸರಿನಿಂದ ಜ್ಯೋತಿಲಿಂಗವಾಗಿ ಶಾಶ್ವತವಾಗಿ ನೆಲೆಸಲು ನಿರ್ಧರಿಸುತ್ತಾನೆ.

Roopa Gururaj Column: ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಶಂಕರರ ಮಾತೃಭಕ್ತಿಗೊಲಿದು ದಾರಿ ಬದಲಿಸಿದ ಪೂರ್ಣಾ ನದಿ

ಊಟದ ಹೊತ್ತು ಮೀರುತ್ತಾ, ತಾಯಿಯನ್ನು ಕಾಣದೆ ಅವಳನ್ನು ಅರಸುತ್ತಾ ಹೋದ ಬಾಲ ಶಂಕರನಿಗೆ ದಾರಿಯಲ್ಲಿ ಕಂಡ ದೃಶ್ಯ ಆಘಾತ ಉಂಟು ಮಾಡಿತ್ತು. ಈ ಸ್ಥಿತಿಯಲ್ಲಿ ತಾಯಿಯನ್ನು ಕಂಡ ಶಂಕರನ ಪುಟ್ಟ ಹೃದಯ ಕಂಪಿಸಿ ಹೋಗಿತ್ತು. ತಾಯಿಯನ್ನು ಎಚ್ಚರಿಸಿ ಮನೆಗೆ ಕರೆ ತಂದರೂ ಶಂಕರನಿಗೆ ನೆಮ್ಮದಿ ಇಲ್ಲದಾಗಿತ್ತು

Roopa Gururaj Column: ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

ಕತ್ತಲು ಆವರಿಸಿದಾಗ ಬೆಳಕಾಗಿ, ಕರಾಳತೆ ಮುತ್ತಿ ಕೊಂಡಾಗ ರಕ್ಷಕನಾಗಿ ನಿಲ್ಲುವ ಹನುಮಂತನ ಅತ್ಯಂತ ಪ್ರಭಾವಶಾಲಿ ಕಥೆ ತೆರೆದುಕೊಳ್ಳುವುದು ರಾಮಾಯಣದ ಯುದ್ಧದ ಕೊನೆಯ ಘಟ್ಟದಲ್ಲಿ. ಲಂಕೆಯ ಯುದ್ಧಭೂಮಿಯಲ್ಲಿ ರಾವಣನಿಗೆ ಸೋಲಿನ ಸುಳಿವು ಸಿಕ್ಕಿಯಾಗಿತ್ತು. ತನ್ನೆ ಶಕ್ತಿ ಕುಂದಿದಾಗ ಆತ ಕತ್ತಲ ಲೋಕದ ಮೊರೆ ಹೋಗುತ್ತಾನೆ.

Loading...