ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶಿಶಿರ್‌ ಹೆಗಡೆ

columnist

info11@vishwavani.news

ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಇವರದು ಯಕ್ಷಗಾನ ಕುಟುಂಬ. ಇವರ ಅಜ್ಜ ದೇವರು ಹೆಗಡೆಯವರು ಜನಪ್ರಿಯ ಯಕ್ಷಗಾನ ಕಲಾವಿದರು. ತಂದೆ ಕನ್ನಡದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಕನ್ನಡ ಮತ್ತು ಕಲೆಯ ವಾತಾವರಣದ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದು ಇವರ ಹೆಗ್ಗಳಿಕೆ. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಯಿತು. ಓದಿದ್ದು ಇಂಜಿನಿಯರಿಂಗ್, ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನಗಳಲ್ಲಿ ಭಾಗಿಯಾದವರು. ವೃತ್ತಿಯಲ್ಲಿ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನಿರ್ದೇಶಕ. ದಶಕದಿಂದ ಅಮೆರಿಕಾದಲ್ಲಿ ವಾಸ. ಶಿಕಾಗೋದ ಬೋಲಿಂಗ್ ಬ್ರೂಕ್‌ನಲ್ಲಿ ಹೆಂಡತಿ ಮೇಘಾ ಮತ್ತು ಮಗಳು ಮೈನಾ ಜೊತೆ ಬದುಕು. ಇದಕ್ಕಿಂತ ಮೊದಲು ದಕ್ಷಿಣ ಅಮೆರಿಕಾದ ಉರುಗೈ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಲ್ಲಿ ಕೆಲ ಕಾಲ ವಾಸ. ಹತ್ತಕ್ಕೂ ಹೆಚ್ಚು ದೇಶ ನೋಡಿದ, ತಿರುಗಾಡಿದ ಅನುಭವ. ಕಳೆದ ನಾಲ್ಕು ವರ್ಷದಿಂದ ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯ. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಹವ್ಯಾಸಗಳು.

Articles
Shishir Hegde Column: ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

Shishir Hegde Column: ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ಇಂಥ ಅರ್ಥವಾಗದ ಬಯಕೆಗಳನ್ನು ಈಡೇರಿಸಿಕೊಳ್ಳುವುದನ್ನು ‘ಅದೇನೋ ಥ್ರಿಲ್’ ಎಂದು ಆಡುಮಾತಿನಲ್ಲಿ ಹೇಳುವುದಿದೆ. ‘ಥ್ರಿಲ್’ ಎಂದರೆ ಅತ್ಯುತ್ಸುಕತೆ. ಈ ಅತಿಯಾದ ಕುತೂಹಲವೇಕೆ? ಕಾರಣವಿದೆ. ನಮ್ಮೆಲ್ಲರಲ್ಲೂ ವಿಷಯ ಯಾವುದೇ ಇರಲಿ, ಅದರ ಪರಮಾವಧಿ ಸಾಧ್ಯತೆಯನ್ನು ತಿಳಿದುಕೊಳ್ಳುವ ಒಂದು ಅದಮ್ಯ ಕುತೂಹಲವಿರುತ್ತದೆ.

Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ನಾವೆಲ್ಲರೂ ವಾಟ್ಸ್ ಆಪ್ ಬಳಸುತ್ತೇವೆ. ಅದರಲ್ಲಿ ನಾವು ಕಳುಹಿಸಿದ ಸಂದೇಶ ಹೊರ ಹೋದರೆ ಒಂದು ಟಿಕ್ ಮಾರ್ಕ್ (ಸರಿ ಗುರುತು). ಅವರಿಗೆ ತಲುಪಿದರೆ ಎರಡು ಟಿಕ್ ಮಾರ್ಕ್ ಮತ್ತು ಅದನ್ನು ಅವರು ಓದಿದರೆ ಆ ಎರಡು ಟಿಕ್ ಮಾರ್ಕ್ ನೀಲಿ ಬಣ್ಣಕ್ಕೆ ತಿರುಗುತ್ತವೆ ಅಲ್ಲವೇ? ನೀವೇನೋ ಒಂದು ಸಂದೇಶ ಕಳುಹಿಸಿರುತ್ತೀರಿ, ಅತ್ತ ಕಡೆ ಆ ವ್ಯಕ್ತಿ ಆ ಸಂದೇಶವನ್ನು ಓದಿದ್ದು ನೀಲಿ ಗುರುತಿ ನಿಂದ ತಿಳಿಯುತ್ತದೆ. ಆದರೆ ಓದಿಯೂ ಉತ್ತರಿಸದಿದ್ದರೆ? ಆ ಕ್ಷಣದಲ್ಲಿ ನಮ್ಮ ಯೋಚನೆಗಳು ಶುರುವಾಗುತ್ತವೆ

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

ಅಸಲಿಗೆ ‘ಹೆಸರು’ ಎಂದರೇನು? ಒಂದು ಅನನ್ಯ ಶಬ್ದ -ಧ್ವನಿ. ಬಾಯಿಂದ ಹೊರಡಿಸುವ ಒಂದು ಸದ್ದು sound. ಅದನ್ನು ಚಿಕ್ಕ ಮಗುವಿಗೆ ಕಿವಿಯಲ್ಲಿ ಹೇಳಿ ಕರೆಯುವುದು - ನಾಮ ಸಂಸ್ಕಾರ. ಅಲ್ಲಿಂದ ಮುಂದೆ ಆ ಮಗುವಿಗೆ ಅದನ್ನೇ ಕರೆದು ಕರೆದು ಕ್ರಮೇಣ ಆ ಸದ್ದೇ ನಾನು, ಅದು ನನ್ನ ಗಮನವನ್ನು ಸೆಳೆಯಲು, ಸಂಬೋಧಿಸಲು ಬಳಸುವ ಸದ್ದು ಎನ್ನುವುದು ಮಗುವಿಗೆ ಮನದ ಟ್ಟಾಗುತ್ತದೆ.

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಚಳಿಗಾಲ ಶುರುವಾದರೆ ಮತ್ತೆ ಉತ್ತರದ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ. ಅವು ಧ್ರುವದಿಂದ ಧ್ರುವಕ್ಕೆ ವಲಸೆ ಹೋಗುವುದು ಏಕೆ, ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ/ವರೆಗೆ ಬಂದರಾಗದೇ? ಈ ರೀತಿ ವಲಸೆ ಹೋಗುವಾಗ ಅವು ಮಧ್ಯದಲ್ಲಿ ತಂಗು ತ್ತವೆ, ಅಲ್ಲಿಯೇ ಏಕೆ ಉಳಿದುಬಿಡುವುದಿಲ್ಲ ಎಂಬ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಇಲ್ಲ

Shishir Hegde Column: ಬುಗರಿಬೈಲ್‌ ಬಸ್ಸು ಕಲಿಸಿದ ಶರಣಾಗತಿಯ ಪಾಠ

ಬುಗರಿಬೈಲ್‌ ಬಸ್ಸು ಕಲಿಸಿದ ಶರಣಾಗತಿಯ ಪಾಠ

ಕುಮಟೆಯಿಂದ ನಮ್ಮೂರಿನ ಮಾರ್ಗಮಧ್ಯೆ ಸಿಗುವ ಅಂಗಡಿಗಳೂ ಮನೆಯವರಂತೆ ಹಾಲ್ಟಿಂಗ್ ಗಾಡಿಗೆ ಕಾಯುತ್ತಿದ್ದವು. ಅದು ಅವರ ಗಿರಾಕಿಗಳ ಕೊನೆಯ ಸಾಧ್ಯತೆಯಾಗಿತ್ತು. ಹಾಗಾಗಿ ಬಸ್ಸು ಮುಂದೆ ಮುಂದೆ ಹೊರಟಂತೆ ಅಂಗಡಿಗಳು ಲೈಟ್ ಆರಿಸಿ ಮುಚ್ಚಿ ಕೊಳ್ಳುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ‘ಹಾಲ್ಟಿಂಗ್ ಗಾಡಿ’ ಬಂದಾಯ್ತು ಎಂದು ಮಲಗಲು ಗಡಿಬಿಡಿ ಬೀಳುತ್ತಿದ್ದವು.

Shishir Hegde Column: ಚಿಕ್ಕಪುಟ್ಟ 'ರಿಪೇರಿ' ಕೊಡುವ ಖುಷಿ, ಕಲಿಸುವ ಪಾಠ

Shishir Hegde Column: ಚಿಕ್ಕಪುಟ್ಟ 'ರಿಪೇರಿ' ಕೊಡುವ ಖುಷಿ, ಕಲಿಸುವ ಪಾಠ

ಮಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ- ‘ಈ ಡೈನಿಂಗ್ ಟೇಬಲ್ ನಾನು ಹುಟ್ಟಿದಾಗಿನಿಂದ ಇದೆ, ಇದನ್ನೇ ಬದಲಿಸಬೇಕು’ ಎಂದಳು. ಇದರ ಮೇಲೆ ಕೂತಾಗ ಮುರಿದುಬಿದ್ದು, ಯಾರಾದರೂ ಕೈಕಾಲು ನೋವು ಮಾಡಿಕೊಂಡರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ. ಕೊನೆಯಲ್ಲಿ ಹೊಂದುವ ಒಂದು ಕುರ್ಚಿ ಸಿಗುವುದಿಲ್ಲ, ಹಾಗಾಗಿ ಹೊಸತೊಂದು ಡೈನಿಂಗ್ ಸೆಟ್ ಅನ್ನೇ ಖರೀದಿಸಬೇಕೆಂದು ಮೀಟಿಂಗ್‌ನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Shishir Hegde Column: ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು

ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು

‘ಹಚ್ಚೆ ಸಮ್ಮೇಳನ’. ನಮ್ಮಲ್ಲಿ ಸಾಹಿತ್ಯೋತ್ಸವ ಮೊದಲಾದ ಕಾರ್ಯಕ್ರಮಗಳಾದಾಗ ಚಿಕ್ಕ ಬೂತ್ ಮಾದರಿಯಲ್ಲಿ ಹತ್ತಿಪ್ಪತ್ತು ಪುಸ್ತಕದ ಅಂಗಡಿಗಳು ತೆರೆದಿರುತ್ತಾರಲ್ಲ, ಅದೇ ರೀತಿಯಲ್ಲಿ ಹಚ್ಚೆಯ ಗುಡಾರ (ಬೂತ್) ಗಳು. ಏನಿಲ್ಲವೆಂದರೂ ಸುಮಾರು 300 ಗುಡಾರಗಳು; ಹಚ್ಚೆ ಹಾಕುವ ನುರಿತ ಕಲಾ ವಿದರು ಅಮೆರಿಕದ ಮೂಲೆಮೂಲೆಗಳಿಂದ ಅಲ್ಲಿಗೆ ಬಂದಿದ್ದರು.

Shishir Hegde Column: ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!

ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!

ಒಬ್ಬ ಒಳ್ಳೆಯ ತಂದೆ-ತಾಯಿಯ ಲಕ್ಷಣವೇನು? ಮಕ್ಕಳಿಗೆ ಮಾರ್ಗದರ್ಶಿಸುವುದು ಅಲ್ಲವೇ? “ಹೀಗೆ ಮಾಡು, ಹಾಗೆ ಮಾಡಬೇಡ, ಇದು ಮಾಡಿದರೆ ಹೀಗಾಗುತ್ತದೆ, ನೋಡು ನಾನು ಮೊದಲೇ ಹೇಳಿದ್ದೆ, ಹಿಂದೆಯೇ ಎಚ್ಚರಿಸಿದ್ದೆ, ನಿನಗೆ ಎಷ್ಟು ಹೇಳಿದರೂ ಅಷ್ಟೆ.. ಇತ್ಯಾದಿ. ಇದುವೇ ಮುಂದುವರಿದು ನೀನು ಅಲಸಿ, ಎಂಟಾಣೆ ಪ್ರಯೋಜನಕ್ಕೆ ಬರುವುದಿಲ್ಲ, ನೀನು ಹಾಗೆ ಹೇಳಿದ್ದು ಸರಿಯಲ್ಲ, ಹಾಗೆ ಮಾಡಿದ್ದು, ಮಾತನಾಡಿದ್ದು ಸರಿಯಲ್ಲ ಇತ್ಯಾದಿ.

Shishir Hegde Column: ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

ರಾತ್ರಿಯಿಡೀ ಪ್ರಖರವಾಗಿದ್ದ ಬಸ್ಸಿನ ಬೆಳಕು ಕತ್ತಲೆ ಸರಿಯುತ್ತಿದ್ದಂತೆ ಸೋತು ದುರ್ಬಲವಾಗುತ್ತದೆ. ಈಗ ಬಸ್ಸಿಗೆ ಹೆಡ್‌ಲೈಟ್ ಹಂಗಿಲ್ಲ, ಆದರೂ ಬೇಕು. ಸ್ವಲ್ಪ ದೂರದಲ್ಲಿ ಪೇಪರಿನ ಹುಡುಗ ರಸ್ತೆಯ ಹೊಂಡ ಗಳನ್ನು ತಪ್ಪಿಸಿಕೊಂಡು ನಾಜೂಕಾಗಿ ಸೈಕಲ್ ಸವಾರಿ ಮಾಡುತ್ತಿದ್ದಾನೆ. ಅತ್ತಿಂದ ಬೈಕಿನಲ್ಲಿ ಹುಲ್ಲಿನ ರಾಶಿಯನ್ನು ಯಾರೋ ರೈತ ಅಷ್ಟು ಬೆಳಗ್ಗೆ ಎಲ್ಲಿಗೋ ಸಾಗಿಸುತ್ತಿದ್ದಾನೆ.

Shishir Hegde Column: ಮೌನ ಬಂಗಾರ, ಹೇಳಲಾರದ ಮಾತು ಮಣಭಾರ !

Shishir Hegde Column: ಮೌನ ಬಂಗಾರ, ಹೇಳಲಾರದ ಮಾತು ಮಣಭಾರ !

ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಸ್ಪ್ಯಾನಿಷ್ ಭಾಷೆಯಲ್ಲಿಯೇ ವ್ಯವಹರಿಸಿದ್ದಾಯಿತು. ಸ್ನೇಹಿತನಿಗೆ ಬಂದದ್ದು ಬರೀ ಜ್ವರವಾಗಿರಲಿಲ್ಲ. ಅದು ಸಂಕೀರ್ಣ ದೈಹಿಕ ಸಮಸ್ಯೆಯಾಗಿತ್ತು. ಅದು ಎಷ್ಟು ಆಂತರಿಕ ಉಲ್ಬಣವಾಗಿತ್ತೆಂದರೆ ದೇಹದ ನಾಲ್ಕಾರು ಭಾಗಗಳು ಈಗಾಗಲೇ ಹಾನಿಗೊಳಗಾಗಿದ್ದವು. ಆತನ ದೇಹ ಸೋತು ಕೊನೆಯಲ್ಲಿ ಜ್ವರ ಬಂದಿತ್ತು. ಆ ನಂತರ ಅಲ್ಲಿಯೇ ಆಸ್ಪತ್ರೆಯಲ್ಲಿ ದಾಖಲಿಸಿ ದೆವು ಮತ್ತು ಶುಶ್ರೂಷೆ ಆರಂಭವಾಯಿತು.

Shishir Hegde Column: ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

ಟ್ರಂಪ್ ಸಹಿ ಹಾಕಿದ್ದು ಲಾಗು ಆದರೆ ಹತ್ತು-ಹನ್ನೆರಡು ಲಕ್ಷ ಭಾರತೀಯರು- ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳನ್ನು ದಿನಒಪ್ಪತ್ತಿನಲ್ಲಿ ಅಮೆರಿಕದ ಕಂಪನಿಗಳು ಕಳೆದುಕೊಳ್ಳುತ್ತಿದ್ದವು. ಅವರೆಲ್ಲರನ್ನು ಅಮೆರಿಕದ ಕಂಪನಿಗಳು ಬೀಳ್ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪರಿಣಾಮ ಅಮೆರಿಕದ ಮತ್ತು ಭಾರತದ ಆರ್ಥಿಕತೆಗೆ ನೇರ ಹೊಡೆತ ಬೀಳುತ್ತಿತ್ತು. ಏಕೆಂದರೆ ಅಷ್ಟೊಂದು ದೊಡ್ಡ ಮೊತ್ತದ ವ್ಯವಹಾರ ಇದು.

Shishir Hegde Column: ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಕಾರ್ಪೊರೇಟ್ ವೃತ್ತಿಯಲ್ಲಿ ಮ್ಯಾನೇಜರ್ ತನ್ನ ಕೆಳಗಿನವರಿಗೆ, ಕೆಳಗಿನವರು ಮ್ಯಾನೇಜರ್‌ಗೆ ಫೀಡ್‌ ಬ್ಯಾಕ್ ಕೇಳುವುದು-ಕೊಡುವುದು ವಾರ್ಷಿಕ ಪರಿಪಾಠ. ಈ ‘ಅಭಿಪ್ರಾಯ’ದ್ದೊಂದು ಪೀಕಲಾಟವಿದೆ. ಅಭಿಪ್ರಾಯವನ್ನು ಎಲ್ಲರೂ ಕೇಳುತ್ತಾರೆ, ಅಭಿಪ್ರಾಯವೇನೆಂಬ ಪ್ರಶ್ನೆಯನ್ನು ಎಲ್ಲರೂ ಎದುರಿಸುತ್ತಾರೆ. ಆದರೆ ಬಹುತೇಕರು ನಿಜವಾದ ಅಭಿಪ್ರಾಯ ಬಯಸಿರುವುದಿಲ್ಲ.

Shishir Hegde Column: ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್‌ ಆಟ ?‌

ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್‌ ಆಟ ?

ಮೊದಲ ಅವಧಿಯ ಟ್ರಂಪ್‌ಗೂ, ಸೋತು ನಾಲ್ಕು ವರ್ಷದ ನಂತರ ಎರಡನೇ ಅವಧಿಗೆ ಗದ್ದುಗೆ ಯೇರಿದ ಟ್ರಂಪ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಟ್ರಂಪ್ ಅಧಿಕಾರ ಕಳೆದಾದ ನಾಲ್ಕು ವರ್ಷದಲ್ಲಿ ಸಾಕಷ್ಟು ಹೋಂ ವರ್ಕ್ ಮಾಡಿರುವುದಂತೂ ಸ್ಪಷ್ಟ. ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ರಾದಾಗ ಟ್ರಂಪ್‌ಗೆ ರಾಜಕಾರಣ ಸಂಪೂರ್ಣ ಹೊಸತು. ಅಲ್ಲಿಯವರೆಗೆ ‘ಪಂಚಾಯ್ತಿ’ ಚುನಾವಣೆ ಯನ್ನೂ ಎದುರಿಸದ ಟ್ರಂಪ್ ದೇಶದ ಅಧ್ಯಕ್ಷರಾಗಿ ಕೂತಿದ್ದರು. ಎಲ್ಲವೂ ಬೆರಗು.

Shishir Hegde Column: ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

ಅಮೆರಿಕದಲ್ಲಿ ಜೈಲಿನಲ್ಲಿ ಸರಿಯಾಗಿ ವ್ಯವಹರಿಸದಿದ್ದರೆ, ಇನ್ನೊಬ್ಬ ಖೈದಿಗೆ/ಜೈಲಿನ ಅಧಿಕಾರಿಗಳಿಗೆ ಹಾನಿ ಮಾಡಿದರೆ ಸುಮಾರು ಮೂರು ತಿಂಗಳವರೆಗಿನ ಏಕಾಂತವಾಸದ ಶಿಕ್ಷೆಯಿದೆ. ಅದು ಬಿಟ್ಟು ಇಲ್ಲಿ ದೀರ್ಘಾವಧಿ ಏಕಾಂತ ಜೈಲುಶಿಕ್ಷೆಯೂ ಇದೆ. ಏಕಾಂತ ವೆಂದರೆ ಸಂಪೂರ್ಣ ಏಕಾಂತ. ದಿನದಲ್ಲಿ ಒಂದೇ ತಾಸು ಆ ಜೈಲುಕೋಣೆಯಿಂದ ಹೊರಬರಲು ಅವಕಾಶ.

Shishir Hegde Column: ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು

ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು

ಆಂಬುಲೆನ್ಸ್‌ ಗೆ ದಾರಿ ಹೇಗೆ ಕೊಡಬೇಕು ಎಂಬುದನ್ನು ಅಮೆರಿಕವನ್ನು ನೋಡಿ ಕಲಿಯಬೇಕು ಎಂಬುದು ಸುಳ್ಳಲ್ಲ. ಸಾಮಾನ್ಯವಾಗಿ ಹೆಚ್ಚಿನ ರಸ್ತೆಯ ಒಂದು ಲೇನ್ ಅನ್ನು ಎಮರ್ಜೆನ್ಸಿ ಕಾರಣಕ್ಕೆಂದೇ ಬಿಟ್ಟಿಡ ಲಾಗುತ್ತದೆ. ಅದರಲ್ಲಿ ಪೊಲೀಸರು ಅಥವಾ ಆಂಬುಲೆನ್ಸ್ ಮೊದಲಾದವು ಗಳು ಹೋಗಲಿಕ್ಕಷ್ಟೇ ಅನುಮತಿ. ಆ ಲೇನ್ ಅನ್ನು ಜನಸಾಮಾನ್ಯರು ಬಳಸಿದರೆ ಅದು ಅಪರಾಧ. ಅದಿಲ್ಲದ ಜಾಗದಲ್ಲಿಯೂ ಯಾವುದೇ ಆಂಬುಲೆನ್ಸ್ ಅಥವಾ ಪೊಲೀಸರು ಬ್ಲಿಂಕರ್ ಹಾಕಿ ಬಂದರೆ ಸಾವಿರಾರು ಕಾರುಗಳು ದಾರಿಮಾಡಿಕೊಡಬೇಕು. ‌

Shishir Hegde Column: ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಬಹುತೇಕ ಕಟ್ಟುಕಥೆಗಳು. ಬಹುಶಃ ಇಂಥ ಕೆಲವು ಕಲ್ಪಿತ ಕಥೆಗಳನ್ನು ರಾಜಾಶ್ರಯದಲ್ಲಿಯೇ ಇತಿಹಾಸ ವೆಂಬಂತೆ ಸುಳ್ಳುಸುಳ್ಳೇ ಕಟ್ಟಿರಲೂಬಹುದು. ಉದಾಹರಣೆಗೆ ಅಕ್ಬರನ ಬಗ್ಗೆ ಇರುವ ಅದೆಷ್ಟೋ ನ್ಯಾಯ ಪರ ಕಥೆಗಳು. ಚಿತ್ತೋರ್‌ಗಢದ ರಜಪೂತರನ್ನು ಗೆದ್ದ ನಂತರ ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ- ಕೋಟೆಯೊಳಗಿದ್ದ ಸುಮಾರು ಐವತ್ತು ಸಾವಿರ ಮುಗ್ಧ ಹಿಂದೂಗಳನ್ನು ಕೊಂದ ಇತಿಹಾಸ ವಿರುವ ಅಕ್ಬರ್ ಇಂಥ ಚಿಲ್ಲರೆ ಕಥೆಗಳಲ್ಲಿ ನ್ಯಾಯದೇವತೆಯ ರೂಪ ಪಡೆದು ಬಿಡುತ್ತಾನೆ.

Shishir Hegde Column: ಅಪರಾಧಿಯೆಂದು ನಿರ್ಧರಿಸುವುದು ನ್ಯಾಯಾಧೀಶರ ಕೆಲಸವಲ್ಲ !

ಅಪರಾಧಿಯೆಂದು ನಿರ್ಧರಿಸುವುದು ನ್ಯಾಯಾಧೀಶರ ಕೆಲಸವಲ್ಲ !

ಬ್ಲಿಟ್ಜ್ ಟ್ಯಾಬ್ಲಾಯ್ಡ್ ಇದಕ್ಕೆ ತನ್ನದೇ ಹೊಸತೊಂದು ನಿರೂಪಣೆ ನೀಡಿತು. ನಾನಾವತಿ ಶ್ರೀರಾಮ‌ ಚಂದ್ರ, ಸಿಲ್ವಿಯಾ ಸೀತೆ. ಅಹುಜಾ ಮೋಸದಿಂದ ಸಿಲ್ವಿಯಾನನ್ನು ವಶೀಕರಿಸಿಕೊಂಡಿದ್ದಾನೆ. ಅವನ ಕಿಸೆಯಲ್ಲಿ ಯಾವತ್ತೂ ಒಂದು ಹಳದಿ ಬಣ್ಣದ ಪುಡಿ ಇರುತ್ತಿತ್ತು ಇತ್ಯಾದಿ. ಈ ಕೇಸಿನ ವಿವರ ನೋಡುತ್ತಿದ್ದರೆ ಇಂದಿನ ಕನ್ನಡ ಟಿವಿ ವಾಹಿನಿಗಳು ಯಾವ ಲೆಕ್ಕವೂ ಅಲ್ಲ - ಅಷ್ಟು ಸಂಚಲನ ವನ್ನು ಪತ್ರಿಕೆಗಳು ಮೂಡಿಸಿದ್ದವು.

Shishir Hegde Column: ಇಲ್ಲಿ ಶೇ.98 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಗೆ ಬರುವುದೇ ಇಲ್ಲ!

ಇಲ್ಲಿ ಶೇ.98 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಗೆ ಬರುವುದೇ ಇಲ್ಲ!

ವ್ಯವಸ್ಥೆ ನಿಂತಿರುವುದೇ ನಂಬಿಕೆಯ ಮೇಲೆ. ನಂಬಿಕೆಯ ಜತೆ ವ್ಯವಸ್ಥೆ ಅಲುಗಾಡಿದ್ದು ಈ ಕಾರಣಕ್ಕೆ. ಆಗ ನನಗೆ ‘ಇಂಥದ್ದೊಂದು ಘಟನೆ ಅಮೆರಿಕದಲ್ಲಿ ನಡೆದದ್ದಾಗಿದ್ದರೆ ಅವನು ದೇಶ ಬಿಟ್ಟು ಹೋಗಲು ಸಾಧ್ಯವೇ ಇರಲಿಲ್ಲ’ ಎಂದೆಲ್ಲ ಹೋಲಿಸಿ ಬೇಸರವೆನಿಸಿತ್ತು. ಏಕೆಂದರೆ ಇಂಥದ್ದನ್ನೇ ಹೋಲುವ ಕೆಲವು ಘಟನೆಗಳು ಇಲ್ಲಿಯೂ ನಡೆದಿದ್ದವು. ಆದರೆ ಯಾರೊಬ್ಬರೂ ದೇಶ ಬಿಟ್ಟು ಓಡಿಹೋಗಲು ಸಾಧ್ಯವಾಗ ಲಿಲ್ಲ.

Shishir Hegde Column: ಬಿಂಜ್‌ ಟ್ಯೂಬ್‌ ಡಿಸಾರ್ಡರ್:‌ ಯೂಟ್ಯೂಬ್‌ ಎಂಬ ಸಸ್ತಾ ನಶೆ

ಬಿಂಜ್‌ ಟ್ಯೂಬ್‌ ಡಿಸಾರ್ಡರ್:‌ ಯೂಟ್ಯೂಬ್‌ ಎಂಬ ಸಸ್ತಾ ನಶೆ

ಇನ್ನೊಂದು ಓದುಗರ ವರ್ಗವಿದೆ. ಅವರಿಂದ ಇ-ಮೇಲ್ ಬಂದಿದೆ ಎಂದರೆ ನಾನು ಆ ವಾರದ ಲೇಖನದಲ್ಲಿ ಏನೋ ಒಂದು ‘ತಪ್ಪ’ನ್ನು ಮಾಡಿದ್ದೇನೆ ಎಂದೇ ಅರ್ಥ. ತಪ್ಪು ಮಾಡಿದಾಗ ಮಾತ್ರ ಇ-ಮೇಲ್ ಮಾಡುವವರು ಅವರು. ನನ್ನ ಮಟ್ಟಿಗೆ ಅವರ, ಅಂಥ ಪ್ರತಿಕ್ರಿಯೆ ಅತ್ಯಮೂಲ್ಯ. ಅದು ಅತ್ಯವಶ್ಯಕತೆ. ಕೆಲ ವರ್ಷದ ಹಿಂದೆ ‘ಜಪಾನ್ ಕರ್ನಾಟಕದ ದುಪ್ಪಟ್ಟು ದೊಡ್ಡದು’ ಎಂದು ಬರೆಯು ವಾಗ ವಾಕ್ಯ ತದ್ವಿರುದ್ಧವಾಗಿತ್ತು.

‌Shishir Hegde Column: ಮರಗಳಿಗೇಕೆ ಹಾರ್ಟ್ ಅಟ್ಯಾಕ್‌ ಆಗುವುದಿಲ್ಲ ?

ಮರಗಳಿಗೇಕೆ ಹಾರ್ಟ್ ಅಟ್ಯಾಕ್‌ ಆಗುವುದಿಲ್ಲ ?

ಮನುಷ್ಯನಿಗೆ ಕ್ಯಾನ್ಸರ್, ಮಣ್ಣು ಮಸಿ ರೋಗಗಳು ಬರುವಂತೆ. ಅಸಹಜ ಸಾವು ಪ್ರಾಣಿ ಸಸ್ಯಗಳೆರಡ ರಲ್ಲೂ ಇದೆ. ಆದರೆ ಸಸ್ಯಗಳಲ್ಲಿ ಸಹಜ ಸಾವು ಹೇಗೆ? ಮನುಷ್ಯನಲ್ಲಿ ಸಹಜ ಸಾವು ಎಂದರೆ ಯಾವು ದೋ ಒಂದು ಅಥವಾ ಕೆಲವು ಅಂಗಗಳು ಇನ್ನು ತನ್ನ ಕೈಲಾಗುವುದಿಲ್ಲ ಎಂದು ಕೈ ಎತ್ತುವುದು. ಸಸ್ಯಗಳಲ್ಲಿ? ಅವಕ್ಕೆ ಹೃದಯವೂ ಇಲ್ಲ, ಕಿಡ್ನಿ, ಲಿವರ್‌ಗಳೂ ಇಲ್ಲ.

Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ

Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ

ಮನೆಯನ್ನು ತಲುಪಿ ಬಾಗಿಲನ್ನು ಹಾಕಿಕೊಂಡಾಗ ‘ಮನೆಗೆ ಬಂದು ತಲುಪಿದೆವು’ ಎಂಬ ಆ ಭಾವ ವಿದೆಯಲ್ಲ, ಅದು ಸಾರ್ವತ್ರಿಕ. ಎಲ್ಲಿಗೇ ಹೋಗಲಿ, ನಾವು ಮನೆಯವರಿಗಿಂತ ಮನೆಯನ್ನು ಹೆಚ್ಚಿಗೆ ‘ಮಿಸ್’ ಮಾಡಿಕೊಳ್ಳುತ್ತೇವೆ. ಮನೆಯ ವಿರಹಬಾಧೆಯೇ ಜಾಸ್ತಿ. ನಾನು ಭಾರತದ ನಾಲ್ಕಾರು ಮೆಟ್ರೋಪಾಲಿಟನ್ ನಗರಗಳಲ್ಲಿ, ಕುಮಟಾದ ಮೂರೂರು, ಬೆಂಗಳೂರಿನಲ್ಲಿ, ದಕ್ಷಿಣ ಅಮೆರಿಕದ ಉರುಗ್ವೆ, ಅರ್ಜೆಂಟೀನಾ, ಚಿಲಿ, ಉತ್ತರ ಅಮೆರಿಕದ ನಾಲ್ಕಾರು ಊರು ಇಲ್ಲ ವಾಸವಾಗಿದ್ದೆ.

Shishir Hegde Column: ನಮ್ಮಲ್ಲಿ ಬಹುತೇಕರು ಮಕ್ಕಳಿಗೆ ಅಷ್ಟೊಂದು ಬಯ್ಯುವುದೇಕೆ ?

ನಮ್ಮಲ್ಲಿ ಬಹುತೇಕರು ಮಕ್ಕಳಿಗೆ ಅಷ್ಟೊಂದು ಬಯ್ಯುವುದೇಕೆ ?

ಇಂದಿನದು ಒತ್ತಡದ ಬದುಕು ನಿಜ, ಆದರೆ ಎಲ್ಲರೂ ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ ಎಂದು ಕಲ್ಪಿಸಿ ಹೇಳುವುದು ಸರಿಯಲ್ಲ. ಯಾವುದೇ ಉದ್ಯೋಗವಿರಲಿ, ಹೊಟ್ಟೆಪಾಡಿರಲಿ- ಕೆಲಸದ ಒತ್ತಡ ಒಂದು ಮಟ್ಟಿಗೆ ಇದ್ದೇ ಇರುತ್ತದೆ. ಹಾಗಂತ ಎಲ್ಲರ ಬದುಕಿನ ಒತ್ತಡಗಳೂ ಮಕ್ಕಳ ಜತೆ ವ್ಯವಹರಿಸುವ ರೀತಿಯನ್ನೇ ಬದಲಾಯಿಸುವ ಮಟ್ಟಿಗಿರುವುದಿಲ್ಲ

Shishir Hegde Column: ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಮನುಷ್ಯನ ವಂಶವಾಹಿನಿಗೆ ಹೋಲಿಕೆಯಾಗುವ ಇಲಿಗಳ ಮೇಲೆ ಔಷಧಿಯನ್ನು ಅದೆಷ್ಟೇ ಬಾರಿ ಪ್ರಯೋಗಿಸಿ, ದೃಢಪಟ್ಟಿದ್ದರೂ ಮನುಷ್ಯನ ಮೇಲೆ ಅದು ಕೆಲಸವನ್ನೇ ಮಾಡದಿರಬಹುದು. ಔಷಧಿ ದೇಹದೊಳಕ್ಕೆ ಸೇರುತ್ತಿದ್ದಂತೆ ಅದನ್ನು ಮಾನವ ದೇಹ ವಿಷವೆಂದು ಗ್ರಹಿಸಿ ಬಿಡಬಹುದು, ಅಥವಾ ಅದು ಅಂದುಕೊಳ್ಳದ ಅಡ್ಡಪರಿಣಾಮವನ್ನು ಬೀರಬಹುದು.

Loading...