ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶಿಶಿರ್‌ ಹೆಗಡೆ

columnist

info11@vishwavani.news

ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಇವರದು ಯಕ್ಷಗಾನ ಕುಟುಂಬ. ಇವರ ಅಜ್ಜ ದೇವರು ಹೆಗಡೆಯವರು ಜನಪ್ರಿಯ ಯಕ್ಷಗಾನ ಕಲಾವಿದರು. ತಂದೆ ಕನ್ನಡದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಕನ್ನಡ ಮತ್ತು ಕಲೆಯ ವಾತಾವರಣದ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದು ಇವರ ಹೆಗ್ಗಳಿಕೆ. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಯಿತು. ಓದಿದ್ದು ಇಂಜಿನಿಯರಿಂಗ್, ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನಗಳಲ್ಲಿ ಭಾಗಿಯಾದವರು. ವೃತ್ತಿಯಲ್ಲಿ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನಿರ್ದೇಶಕ. ದಶಕದಿಂದ ಅಮೆರಿಕಾದಲ್ಲಿ ವಾಸ. ಶಿಕಾಗೋದ ಬೋಲಿಂಗ್ ಬ್ರೂಕ್‌ನಲ್ಲಿ ಹೆಂಡತಿ ಮೇಘಾ ಮತ್ತು ಮಗಳು ಮೈನಾ ಜೊತೆ ಬದುಕು. ಇದಕ್ಕಿಂತ ಮೊದಲು ದಕ್ಷಿಣ ಅಮೆರಿಕಾದ ಉರುಗೈ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಲ್ಲಿ ಕೆಲ ಕಾಲ ವಾಸ. ಹತ್ತಕ್ಕೂ ಹೆಚ್ಚು ದೇಶ ನೋಡಿದ, ತಿರುಗಾಡಿದ ಅನುಭವ. ಕಳೆದ ನಾಲ್ಕು ವರ್ಷದಿಂದ ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯ. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಹವ್ಯಾಸಗಳು.

Articles
‌Shishir Hegde Column: ಮರಗಳಿಗೇಕೆ ಹಾರ್ಟ್ ಅಟ್ಯಾಕ್‌ ಆಗುವುದಿಲ್ಲ ?

ಮರಗಳಿಗೇಕೆ ಹಾರ್ಟ್ ಅಟ್ಯಾಕ್‌ ಆಗುವುದಿಲ್ಲ ?

ಮನುಷ್ಯನಿಗೆ ಕ್ಯಾನ್ಸರ್, ಮಣ್ಣು ಮಸಿ ರೋಗಗಳು ಬರುವಂತೆ. ಅಸಹಜ ಸಾವು ಪ್ರಾಣಿ ಸಸ್ಯಗಳೆರಡ ರಲ್ಲೂ ಇದೆ. ಆದರೆ ಸಸ್ಯಗಳಲ್ಲಿ ಸಹಜ ಸಾವು ಹೇಗೆ? ಮನುಷ್ಯನಲ್ಲಿ ಸಹಜ ಸಾವು ಎಂದರೆ ಯಾವು ದೋ ಒಂದು ಅಥವಾ ಕೆಲವು ಅಂಗಗಳು ಇನ್ನು ತನ್ನ ಕೈಲಾಗುವುದಿಲ್ಲ ಎಂದು ಕೈ ಎತ್ತುವುದು. ಸಸ್ಯಗಳಲ್ಲಿ? ಅವಕ್ಕೆ ಹೃದಯವೂ ಇಲ್ಲ, ಕಿಡ್ನಿ, ಲಿವರ್‌ಗಳೂ ಇಲ್ಲ.

Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ

Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ

ಮನೆಯನ್ನು ತಲುಪಿ ಬಾಗಿಲನ್ನು ಹಾಕಿಕೊಂಡಾಗ ‘ಮನೆಗೆ ಬಂದು ತಲುಪಿದೆವು’ ಎಂಬ ಆ ಭಾವ ವಿದೆಯಲ್ಲ, ಅದು ಸಾರ್ವತ್ರಿಕ. ಎಲ್ಲಿಗೇ ಹೋಗಲಿ, ನಾವು ಮನೆಯವರಿಗಿಂತ ಮನೆಯನ್ನು ಹೆಚ್ಚಿಗೆ ‘ಮಿಸ್’ ಮಾಡಿಕೊಳ್ಳುತ್ತೇವೆ. ಮನೆಯ ವಿರಹಬಾಧೆಯೇ ಜಾಸ್ತಿ. ನಾನು ಭಾರತದ ನಾಲ್ಕಾರು ಮೆಟ್ರೋಪಾಲಿಟನ್ ನಗರಗಳಲ್ಲಿ, ಕುಮಟಾದ ಮೂರೂರು, ಬೆಂಗಳೂರಿನಲ್ಲಿ, ದಕ್ಷಿಣ ಅಮೆರಿಕದ ಉರುಗ್ವೆ, ಅರ್ಜೆಂಟೀನಾ, ಚಿಲಿ, ಉತ್ತರ ಅಮೆರಿಕದ ನಾಲ್ಕಾರು ಊರು ಇಲ್ಲ ವಾಸವಾಗಿದ್ದೆ.

Shishir Hegde Column: ನಮ್ಮಲ್ಲಿ ಬಹುತೇಕರು ಮಕ್ಕಳಿಗೆ ಅಷ್ಟೊಂದು ಬಯ್ಯುವುದೇಕೆ ?

ನಮ್ಮಲ್ಲಿ ಬಹುತೇಕರು ಮಕ್ಕಳಿಗೆ ಅಷ್ಟೊಂದು ಬಯ್ಯುವುದೇಕೆ ?

ಇಂದಿನದು ಒತ್ತಡದ ಬದುಕು ನಿಜ, ಆದರೆ ಎಲ್ಲರೂ ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ ಎಂದು ಕಲ್ಪಿಸಿ ಹೇಳುವುದು ಸರಿಯಲ್ಲ. ಯಾವುದೇ ಉದ್ಯೋಗವಿರಲಿ, ಹೊಟ್ಟೆಪಾಡಿರಲಿ- ಕೆಲಸದ ಒತ್ತಡ ಒಂದು ಮಟ್ಟಿಗೆ ಇದ್ದೇ ಇರುತ್ತದೆ. ಹಾಗಂತ ಎಲ್ಲರ ಬದುಕಿನ ಒತ್ತಡಗಳೂ ಮಕ್ಕಳ ಜತೆ ವ್ಯವಹರಿಸುವ ರೀತಿಯನ್ನೇ ಬದಲಾಯಿಸುವ ಮಟ್ಟಿಗಿರುವುದಿಲ್ಲ

Shishir Hegde Column: ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಮಂಗಕ್ಕೇ ಐವತ್ತು ಲಕ್ಷವಾದರೆ- ಮನುಷ್ಯನಿಗೆಷ್ಟು ?

ಮನುಷ್ಯನ ವಂಶವಾಹಿನಿಗೆ ಹೋಲಿಕೆಯಾಗುವ ಇಲಿಗಳ ಮೇಲೆ ಔಷಧಿಯನ್ನು ಅದೆಷ್ಟೇ ಬಾರಿ ಪ್ರಯೋಗಿಸಿ, ದೃಢಪಟ್ಟಿದ್ದರೂ ಮನುಷ್ಯನ ಮೇಲೆ ಅದು ಕೆಲಸವನ್ನೇ ಮಾಡದಿರಬಹುದು. ಔಷಧಿ ದೇಹದೊಳಕ್ಕೆ ಸೇರುತ್ತಿದ್ದಂತೆ ಅದನ್ನು ಮಾನವ ದೇಹ ವಿಷವೆಂದು ಗ್ರಹಿಸಿ ಬಿಡಬಹುದು, ಅಥವಾ ಅದು ಅಂದುಕೊಳ್ಳದ ಅಡ್ಡಪರಿಣಾಮವನ್ನು ಬೀರಬಹುದು.

Shishir Hegde Column: ಪಂಜರದೊಳಗಿನ ಮಂಗಕ್ಕೆ ಐವತ್ತು ಲಕ್ಷ ರೂಪಾಯಿ !

ಪಂಜರದೊಳಗಿನ ಮಂಗಕ್ಕೆ ಐವತ್ತು ಲಕ್ಷ ರೂಪಾಯಿ !

ನಮಗೆ ಧರಿಸಲು ಲ್ಯಾಬ್ ಕೋಟ್, ಶೂಗಳಿಗೆ ಹೊರವಸ್ತ್ರ, ತಲೆಗೆ ಟೊಪ್ಪಿ, ಇತ್ಯಾದಿ. ಕಣ್ಣುಗಳೆರಡು ಬಿಟ್ಟು ಬಾಕಿ ಎಲ್ಲವೂ ‘ಮುಚ್ಕೊಂಡ್’ ಇರಬೇಕು ಎಂಬುದೇ ಅಲ್ಲಿನ ಮೊದಲ ಆದೇಶ. ಪ್ರಯೋಗ ವನ್ನು ನೋಡಲು ಹೋದವರಿಗೆ ಕೆಲವು ನಿಬಂಧನೆಗಳಿದ್ದವು. ಅಲ್ಲಿ ಯಾವುದೇ ಪ್ರಾಣಿಯನ್ನು ಮುಟ್ಟುವಂತಿ ಲ್ಲ ಅಥವಾ ಪ್ರಯೋಗ ನಡೆಯುವಾಗ ಚೆಚ್ಚರ ಅಲುಗಾಡುವಂತಿಲ್ಲ, ಮಾತನಾಡುವಂತಿಲ್ಲ.

Shishir Hegde Column: ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !

ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !

ಭೂಮಿಯ ಸಮುದ್ರದ ಒಳಗಿನ ನೆಲವನ್ನು ಮ್ಯಾಪಿಂಗ್ ಮಾಡಿ, ಆಲ ಅಗಲ ತಿಳಿದಾಗಿದೆ. ಅಣು ವನ್ನು ವಿಭಜಿಸಿ ನೋಡಿ ಆಗಿದೆ. ಚಂದ್ರನ ಮೇಲೆ ಕಾಲಿಟ್ಟಾಗಿದೆ, ಆ ಬಗ್ಗೆ ಅನುಮಾನವೂ ಇದೆ. ಜೀವತಂತು ಡಿಎನ್‌ಎ ರಚನೆಯನ್ನು ತಿಳಿದಾಗಿದೆ. ಇಂಟರ್ನೆಟ್, ಮೊಬೈಲ್, ಸ್ಯಾಟಲೈಟ್, ಕೃತಕ ಬುದ್ಧಿಮತ್ತೆ.. ಹೀಗೆ ಪಟ್ಟಿಯೇ ಉದ್ದ. ಹಾಗಾದರೆ ನಮಗೆ ಎಲ್ಲವೂ ತಿಳಿದಿದೆಯೇ? ಕೆಲ ವೊಂದಿಷ್ಟು ದೊಡ್ಡ ದೊಡ್ಡ ಪ್ರಶ್ನೆಗಳಿವೆ. ಅವುಗಳನ್ನು ನಿಖರವಾಗಿ, ದ್ವಂದ್ವವಿಲ್ಲದೆ ವಿವರಿಸಲು ವಿಜ್ಞಾನಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇಂದಿಗೂ ಅವು ಬಗೆಹರಿಯದ ರಹಸ್ಯಗಳು.

Shishir Hegde Column: ಜಿಮ್ಮಿ ಕಾರ್ಟರ್‌ ಮತ್ತು ಇನ್ನೊಂದೆರಡು ಮರಣಶಯ್ಯೆಯ ಕಥೆಗಳು

ಜಿಮ್ಮಿ ಕಾರ್ಟರ್‌ ಮತ್ತು ಇನ್ನೊಂದೆರಡು ಮರಣಶಯ್ಯೆಯ ಕಥೆಗಳು

ವಯಸ್ಸು ಎಂಬತ್ತು-ತೊಂಬತ್ತು ದಾಟಿದರೂ ರಾಜಕೀಯ ನಿಲ್ಲುವುದಿಲ್ಲ. ಅಧಿಕಾರ- ಇನ್ನೂ ಬೇಕು. ತಾನು ಹೇಳಿದ್ದು- ಇನ್ನೂ ನಡೆಯಬೇಕು. ಜನರು ಜೈಕಾರ ಹಾಕುತ್ತಿರಬೇಕು. ತನ್ನ ಮುಂದಿನ ತಲೆಮಾರು ರಾಜಕೀಯದಲ್ಲಿ ಸ್ಥಾಪಿತವಾಗಬೇಕು. ಥೋ, ಇವರದು ಆಸ್ತಿಯಷ್ಟೇ ಆಸೆಯೂ ಮೂರ್ನಾಲ್ಕು ಜನ್ಮಕ್ಕಾಗುವಷ್ಟು! ತೃಪ್ತಿ-ಮುಕ್ತಾಯ-ನಿವೃತ್ತಿ ಎಂಬುದು ಇಲ್ಲವೇ ಇಲ್ಲ.

Shishir Hegde Column: ಮ್ಯಾಚ್‌ ಮುಗಿದ ಮೇಲೆ ಟಿವಿ ʼಆರ್‌ ಸಿ ಬಿʼ ಡಿ

ಮ್ಯಾಚ್‌ ಮುಗಿದ ಮೇಲೆ ಟಿವಿ ʼಆರ್‌ ಸಿ ಬಿʼ ಡಿ

ದಿನಗಳೆದಂತೆ ಜನರು ಹೆಚ್ಚು ಹೆಚ್ಚು ದರ್ಶಕರಾಗುತ್ತಿದ್ದಾರೆ. ಟಿವಿಯ ಮುಂದೆ 3-4 ತಾಸು, ಜತೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇನ್ನೊಂದಿಷ್ಟು ತಾಸು. ಭಾರತದಲ್ಲಿ ಸ್ಮಾರ್ಟ್ ಫೋನ್ ಉಳ್ಳವರು ಸರಾಸರಿ 5 ತಾಸು ಪ್ರತಿದಿನ ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ಮೊಬೈಲ್ ಅಥವಾ ಟಿವಿ ದೃಶ್ಯ ವ್ಯವಸ್ಥೆ- ಅದರೊಳಗಿರುವವರು ದೃಶ್ಯರು- ಹೊರಗಿರುವವರು ದರ್ಶಕರು. ದರ್ಶಕರ ಸಂಖ್ಯೆ ಅತ್ಯಧಿಕ. ದರ್ಶಕನಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ವೈಯಕ್ತಿಕ ಐಡೆಂಟಿಟಿ- ಗುರುತು ಇರುವುದಿಲ್ಲ.

Shishir Hegde Column: ಸ್ಟೇಸಿ ಮಾರ್ಕಮ್‌ ಹೇಳಿದ ಮರಣಶಯ್ಯೆಯ ಕಥೆಗಳು

ಸ್ಟೇಸಿ ಮಾರ್ಕಮ್‌ ಹೇಳಿದ ಮರಣಶಯ್ಯೆಯ ಕಥೆಗಳು

ರೋಗಿಯ ಬಳಿ ಹೆಚ್ಚೆಂದರೆ 6 ತಿಂಗಳಿಗಿಂತ ಕಡಿಮೆ ಸಮಯವಿರಬೇಕು. ವೈದ್ಯರು ಪ್ರಮಾಣೀಕರಿಸಿರ ಬೇಕು. ಕುಟುಂಬ ಒಪ್ಪಬೇಕು. ಈ ವ್ಯವಸ್ಥೆ ಭಾರತ ದಲ್ಲಿಯೂ ಹಲವೆಡೆ ಬಹಳ ಕಾಲದಿಂದ ಇದೆ, ಅಷ್ಟು ವ್ಯಾಪಕವಲ್ಲ. ಕೆಲ ವರ್ಷಗಳ ಹಿಂದೆ ನನ್ನ ಪರಿಚಯದವರೊಬ್ಬರು ತಮ್ಮ ಬದುಕಿನ ಕೊನೆಯ ಹಂತದಲ್ಲಿದ್ದರು.

Shishir Hegde Column: ಓದದವರಿಗೇನ್‌ ಗೊತ್ತು ಪುಸ್ತಕ ಪಸರಿಸುವ ಪರಿಮಳ !

ಓದದವರಿಗೇನ್‌ ಗೊತ್ತು ಪುಸ್ತಕ ಪಸರಿಸುವ ಪರಿಮಳ !

ನನಗೋ, ಪುಸ್ತಕಗಳನ್ನು ಕಂಡಕೂಡಲೇ ಒಮ್ಮೆ ಮುಟ್ಟಿ, ಎರಡು ಹಾಳೆ ತಿರುವಿಸಬೇಕು, ಆಗಲೇ ಸಮಾಧಾನ. ಆಗೆಲ್ಲ ಧೂಳ್ಪದರಗಳು ಕೈಗೆ ತಾಕುತ್ತಿದ್ದವು. ಒಳಕ್ಕೆ ಹಾಳೆ ತೆಗೆದರೆ ಪ್ರಿಂಟಿಂಗ್ ಪ್ರೆಸ್‌ನ ಪರಿಮಳ ಆರಿಹೋಗಿರುತ್ತಿರಲಿಲ್ಲ. ಇನ್ನು ಕೆಲವರ ಮನೆಗಳಿಗೆ ಹೋದಾಗ ಪುಸ್ತಕ ನೋಡಲು ನಿಂತರೆ ಅವರೂ ಪಕ್ಕದಲ್ಲಿಯೇ ಬಂದು ನಿಲ್ಲೋರು.

Shishir Hegde Column: ಮರೆಯಲಿ ಹ್ಯಾಂಗ ಮರೆವಿನ ಹಂಗ: ಮರೆವು ಒಳ್ಳೆಯದು

ಮರೆಯಲಿ ಹ್ಯಾಂಗ ಮರೆವಿನ ಹಂಗ: ಮರೆವು ಒಳ್ಳೆಯದು

ಮರುಜನ್ಮವನ್ನು ಭಾರತೀಯರಷ್ಟೇ ಅಲ್ಲ, ಬಹುತೇಕ ಸಂಸ್ಕೃತಿಯವರು ನಂಬುತ್ತಾರೆ. ಇನ್ನು ಕೆಲವರಿಗೆ ‘ಇದ್ದರೂ ಇರಬಹುದು’. ಅಲ್ಲಲ್ಲಿ-ಆಗೀಗ ಎಳೆಯ ಪ್ರಾಯದ ಹುಡುಗ ಹುಡುಗಿಯರು ಹಿಂದಿನ ಜನ್ಮದ್ದೆಲ್ಲ ಹೇಳಿ ಬೆರಗುಮೂಡಿಸುವುದಿದೆ. ‘ನಾನು ಹಿಂದಿನ ಜನ್ಮದಲ್ಲಿ ಅಲ್ಲಿ ಹುಟ್ಟಿದ್ದೆ, ಆ ವ್ಯಕ್ತಿ ಯಾಗಿದ್ದೆ, ಹೀಗೆ ಸತ್ತೆ’ ಎಂಬ ಪ್ರಸಂಗಗಳು ಭಾರತದಲ್ಲಷ್ಟೇ ಅಲ್ಲ, ಅಮೆರಿಕ, ಇಂಗ್ಲೆಂಡಿನಲ್ಲಿಯೂ ನಡೆಯುತ್ತಿರುತ್ತದೆ

Shishir Hegde Column: ಮೆಚ್ಚಬೇಕು ಇಲ್ಲ ಚಚ್ಚಬೇಕು: ಇದು ಸಾ.ಜಾ.ಡೆಮೋಕ್ರಸಿ

ಮೆಚ್ಚಬೇಕು ಇಲ್ಲ ಚಚ್ಚಬೇಕು: ಇದು ಸಾ.ಜಾ.ಡೆಮೋಕ್ರಸಿ

ಕ್ರಿಸ್ ರಾಕ್’ ಎಂಬ ಕಾಮೆಡಿಯನ್ (ಹಾಸ್ಯಗಾರ) ಆ ವರ್ಷದ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಕಾರ್ಯಕ್ರಮ ವನ್ನು ನಡೆಸಿಕೊಡುತ್ತಿದ್ದ. ವೇದಿಕೆಯ ಎದುರಿಗೆ ಪ್ರಶಸ್ತಿಗೆ ನಾಮನಿರ್ದೇಶಿತರಾದ ನಟನಟಿಯರೆಲ್ಲ ಕೂತಿದ್ದರು. ಕ್ರಿಸ್ ಮಾತಿನ ಮಧ್ಯೆ ಅವರಿವರ ಮೇಲೆ ತಮಾಷೆ ಮಾಡುತ್ತಿದ್ದ. ಎದುರಿಗೆ ಆ ವರ್ಷದ ಆಸ್ಕರ್ ಪ್ರಶಸ್ತಿಯ ಸಂಭವನೀಯರ ಪಟ್ಟಿಯಲ್ಲಿದ್ದ ‘ವಿಲ್ ಸ್ಮಿತ್’ ಕೂಡ ಕೂತಿದ್ದ.

Shishir Hegde Column: ಊರವರೆಲ್ಲ ಉಗ್ರಗಾಮಿಗಳಾದರೆ ಏನು ಮಾಡಬೇಕು ?

ಊರವರೆಲ್ಲ ಉಗ್ರಗಾಮಿಗಳಾದರೆ ಏನು ಮಾಡಬೇಕು ?

ಒಂದಂತೂ ಸಾರ್ವಕಾಲಿಕ ಸತ್ಯ- ಯಾವುದೇ ದೇಶವಿರಲಿ, ನೆಲವಿರಲಿ, ವ್ಯವಸ್ಥೆಯಿರಲಿ, ಅಲ್ಲಿನ ಜೈಲಿನ ಒಳಗಿರುವ ಕ್ರಿಮಿನಲ್‌ಗಳಿಗಿಂತ ಹೊರಗಿರುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ಕಾಶ್ಮೀರದ ಉಗ್ರಗಾಮಿ ಗಳ ಮಟ್ಟಿಗೂ ಇದೇ ವಾಕ್ಯ ಲಾಗುವಾಗುತ್ತದೆ. ಕಾಶ್ಮೀರದಲ್ಲಿ ಗುರುತಿಸಲಾಗದ ಉಗ್ರಗಾ ಮಿಗಳೇ ಊರಿಡೀ ತುಂಬಿಕೊಂಡಂತೆ ಅನಿಸುವುದು ಸುಳ್ಳಲ್ಲ. ಕಾಶ್ಮೀರದ್ದು ಇಸ್ಲಾಮಿಕ್ ಭಯೋ ತ್ಪಾದನೆ.

Shishir Hegde Column: ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಮನುಷ್ಯನಿಗೆ ಒಂದು ‘ಪರಮಮಿತಿ’ ಎಂಬುದಿದೆ. ಉದಾಹರಣೆಗೆ ಮನುಷ್ಯ ಹೆಚ್ಚೆಂದರೆ ಎಷ್ಟು ಭಾರ ಎತ್ತಬಹುದು? ಗ್ರೆಗ್ ಅರ್ನ್ಸ್‌ಟ್ ಎನ್ನುವ ಕೆನೆಡಿಯನ್ 24 ಕ್ವಿಂಟಲ್ ಎತ್ತಿದ್ದ. ಅದು 1993ರಲ್ಲಿ. ಆ ದಾಖಲೆಯನ್ನು ಇಂದಿಗೂ, ಯಾರಿಗೂ ಮುರಿಯಲಾಗಿಲ್ಲ. ವೇಗದ ಓಟ ಎಂದರೆ- ಹೆಚ್ಚೆಂದರೆ ಉಸೇನ್ ಬೋಲ್ಟನಷ್ಟು. ಉಸೇನ್ ಬೋಲ್ಟ್‌ ನ ನೂರು ಮೀಟರ್ ಓಟದ ದಾಖಲೆ 9.58 ಸೆಕೆಂಡ್. ಹಿಂದಿನ ದಾಖಲೆಯೂ ಅವನದೇ- 9.63 ಸೆಕೆಂಡ್. ಇಲ್ಲಿನ ಎರಡು ದಾಖಲೆಯ ಸಮಯದ ಅಂತರ ನೋಡಿ. 0.18 ಸೆಕೆಂಡ್- ಅಷ್ಟರಲ್ಲಿ ಉಸೇನ್ ಬೋಲ್ಟ್‌ ಕ್ರಮಿಸಿದ್ದು 1.87 ಮೀಟರ್! ಆತ ಅಷ್ಟು ವೇಗದಲ್ಲಿ ಓಡಿದ್ದು 2009ರಲ್ಲಿ. ಅದಾಗಿ ಒಂದೂ‌ ವರೆ ದಶಕವೇ ಕಳೆದಿದೆ.

Shishir Hegde Column: ದೊಡ್ಡಣ್ಣ ಟ್ರಂಪನ ಸುಂಕಸಂಧಾನ; ಮಾರುಕಟ್ಟೆ ಕಂಪನ

ದೊಡ್ಡಣ್ಣ ಟ್ರಂಪನ ಸುಂಕಸಂಧಾನ; ಮಾರುಕಟ್ಟೆ ಕಂಪನ

ಇತ್ತ ಭಾರತ, ಯುರೋಪ್ ರಾಷ್ಟ್ರಗಳು ಮಾತ್ರ ಮನೆಯ ಅಪ್ಪ ಮಗನಂತೆ- ಅತ್ತ ಸೊಸೆಯ ಪಕ್ಷವನ್ನೂ ವಹಿಸಲಾಗದೆ, ಇತ್ತ ಅಮ್ಮನ ಪಕ್ಕಕ್ಕೂ ನಿಲ್ಲಲಾಗದೆ ಕಂಗಾಲಾಗಿವೆ. ಅಮೆರಿಕವು ಚೀನಾದ ಮೇಲೆ ಅದೆಷ್ಟು ಅವಲಂಬಿಸಿದೆ ಎಂದು ತಿಳಿಯಲು ಯಾವುದೇ ವಿಶೇಷ ಲೆಕ್ಕಾಚಾರ ಬೇಕಾಗಿಲ್ಲ. ನನ್ನದೇ ಮನೆಯ ಅಜಮಾಸು ಹದಿನೈದು ಸಾವಿರ ವಸ್ತುಗಳಲ್ಲಿ ಹೆಚ್ಚು ಕಡಿಮೆ ಎಂಟರಿಂದ ಹತ್ತು ಮಾತ್ರ ‘ಮೇಡ್ ಇನ್ ಅಮೆರಿಕ’. ಬಾಕಿ ಎಲ್ಲವೂ ‘ಮೇಡ್ ಇನ್ ಚೀನಾ

Shishir Hegde Column: ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ

ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ

ಅಗಾಧ ನೆನಪಿನ ಶಕ್ತಿ ಕೋಳಿಯ ಇನ್ನೊಂದು ವಿಶೇಷ. ನೂರಕ್ಕಿಂತ ಜಾಸ್ತಿ ಮುಖಗಳನ್ನು ನೆನಪಿಟ್ಟು ಕೊಳ್ಳಬಲ್ಲವು ಎಂದೆನಲ್ಲ. ಅಷ್ಟೇ ಅಲ್ಲ, ಒಮ್ಮೆ ಕೋಳಿಯನ್ನು ನೀವು ಹೆದರಿಸಿದರೆಂದು ಕೊಳ್ಳಿ, ನಿಮ್ಮ ಮುಖ ಮತ್ತು ಆ ಘಟನೆಯನ್ನು ವರ್ಷಗಳ ಕಾಲ ಅವು ನೆನಪಿಟ್ಟುಕೊಳ್ಳಬಲ್ಲವು. ಕೋಳಿಗಳಲ್ಲಿ ಕರುಣಾರಸ ಜಾಸ್ತಿ. ಅವು ತನ್ನ ಸುತ್ತಲಿನ ಜೀವಿಗಳಿಗೆ ಗಾಯವಾದಾಗ ಅದಕ್ಕೆ ಸ್ಪಂದಿಸಬಲ್ಲವು.

Shishir Hegde Column: ಗಡ್ಡಕಿಂತ ವಾಸಿ ಕಣೋ ಬ್ಲೇಡಿನ ದಾಸ್ಯ !

ಗಡ್ಡಕಿಂತ ವಾಸಿ ಕಣೋ ಬ್ಲೇಡಿನ ದಾಸ್ಯ !

ಜಗತ್ತಿನ ಗಂಡಸರನ್ನು ಎರಡು ವಿಭಾಗವಾಗಿ ವಿಂಗಡಿಸಬಹುದು- ಗಡ್ಡ ಬಿಡುವವರು ಮತ್ತು ಗಡ್ಡ ಬೋಳಿಸುವವರು. ಅಂತೆಯೇ ಹೆಂಗಸರನ್ನು ಕೂಡ ಎರಡು ವಿಭಾಗವಾಗಿಸಬಹುದು- ಗಡ್ಡವನ್ನು ಒಪ್ಪು ವವರು ಮತ್ತು ಗಡ್ಡವನ್ನು ಸಹಿಸದವರು. ಇಬ್ಬರಲ್ಲೂ ಎರಡನೇ ಗುಂಪಿನವರದ್ದೇ ಬಹುಮತ !

Shishir Hegde Column: ಸುಂದರ ಯಶಸ್ವಿ ಬದುಕೆಂದರೆ ಏನೆಂಬ ಕಥೆಗಳು

ಸುಂದರ ಯಶಸ್ವಿ ಬದುಕೆಂದರೆ ಏನೆಂಬ ಕಥೆಗಳು

ನಮಗೆಲ್ಲ ಅಂಥ ಕೆಲವು ಕಥೆಗಳನ್ನು ಪದೇ ಪದೆ ಹೇಳಲಾಗಿದೆ. ನಾವೂ ಆ ಕಥೆಯನ್ನು ಬೇರೆ ಯವರಿಗೆ ಹೇಳಿರುತ್ತೇವೆ. ಏನದು ಕಥೆ? ಅದೇ ಇಂದಿನ ವಿಷಯ. ‘ಯಶಸ್ವಿ ಬದುಕೆಂದರೆ ಏನು?’ ಎಂಬ ಕಥೆ. ‘ಚೆನ್ನಾಗಿ ಓದಬೇಕು, ಉತ್ತಮ ನೌಕರಿ ಪಡೆಯಬೇಕು, ಬೇಕಾದಷ್ಟು ಸಂಪಾದಿಸ ಬೇಕು, ಸಂಪಾದಿಸಿದ ಮೇಲೆ ಬೇಕಾದ ವಸ್ತುವನ್ನು ಖರೀದಿಸುವ ಸ್ವಾತಂತ್ರ್ಯ.

ಎದ್ದಾಗ ಹಾಸಿಗೆಯ ಪಕ್ಕ ನೂರು ಅಪರಿಚಿತರು ನಿಂತಿದ್ದರೆ ?

ಎದ್ದಾಗ ಹಾಸಿಗೆಯ ಪಕ್ಕ ನೂರು ಅಪರಿಚಿತರು ನಿಂತಿದ್ದರೆ ?

ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ‘ಬೇಗ ಮಲಗುವುದು’ ಎನ್ನು ವುದು ನೇರ ಉತ್ತರ. ನಿಗದಿತ ಸಮಯಕ್ಕೆ ಮಲಗಲು ಹೋಗುವುದು, ಮಲಗುವುದಕ್ಕಿಂತ ಒಂದು ಗಂಟೆ ಮೊದ ಲು ಯಾವುದೇ ಸ್ಕ್ರೀನ್ (ಮೊಬೈಲ, ಟಿವಿ) ನೋಡದಿರುವುದು, ಲಘು ರಾತ್ರಿಯೂಟ, ಖುಷಿಯ ಮನಸ್ಸಿ ನೊಂದಿಗೆ ಮಲಗಲು ಹೋಗುವುದು- ಇವು ಉತ್ತಮ ನಿದ್ರೆಗೆ ಕೆಲವು ಸುಲಭೋ ಪಾಯಗಳು. ನಮ್ಮ ದೇಹದೊಳಗಿನ ಗಡಿಯಾರ (Circadian Rhythm) ಸರಿಹೊಂದಲಿಕ್ಕೆ ಮೂರರಿಂದ ಆರು ದಿನ ಬೇಕಾಗುತ್ತದೆಯಂತೆ.

Shishir Hegde Column: ಪ್ರೀತಿಯ ಹೆಂಡತಿಗೊಂದು ಬಹಿರಂಗ ಪತ್ರ

ಪ್ರೀತಿಯ ಹೆಂಡತಿಗೊಂದು ಬಹಿರಂಗ ಪತ್ರ

ಬದುಕಿನ ಸಾಧ್ಯತೆಯಲ್ಲಿ ನಾನು ನೀನು ಸಮಾನರು ಎನ್ನುವ ವಿಷಯ ಹೌದು, ಒಪ್ಪುತ್ತೇನೆ. ಆದರೆ ನಮ್ಮಿಬ್ಬರ ಸಾಮರ್ಥ್ಯದಲ್ಲಿ ಭಿನ್ನತೆಯಂತೂ ಇದೆ ಎನ್ನುವುದು ಸತ್ಯ. ಇದನ್ನು ಇಡೀ ಜಗತ್ತು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ನಿನ್ನ ಜತೆ ಬದುಕುತ್ತ ಅದರ ಅರಿವು ದಿನಗಳೆದಂತೆ ಇನ್ನಷ್ಟು ಸ್ಪಷ್ಟವೇ ಆಗಿದೆ.

Shishir Hegde Column: ನಮ್ಮ ತಲೆ ಹಿಂದಿಗಿಂತ ದೊಡ್ಡದಾಗುತ್ತಿದೆಯೇ ?

ನಮ್ಮ ತಲೆ ಹಿಂದಿಗಿಂತ ದೊಡ್ಡದಾಗುತ್ತಿದೆಯೇ ?

ರೂಪಾಂತರ-ಮ್ಯುಟೇಷನ್ ಎಂಬ ಶಬ್ದಗಳನ್ನು ಅಜೀರ್ಣವಾಗುವಷ್ಟು ಕೇಳುತ್ತಲೇ ಇದ್ದೇವೆ. ವೈರಸ್‌ನಿಂದ ಹಿಡಿದು ಸಕಲ ಜೀವವೂ ರೂಪಾಂತರ ಹೊಂದಲೇಬೇಕು. ಆದರೆ ಈಗ ಬಂದಿ ರುವ ಪ್ರಶ್ನೆ ಮನುಷ್ಯ ಇಂದಿಗೂ ರೂಪಾಂತರವಾಗುತ್ತಿದ್ದಾ ನೆಯೇ? ರೂಪಾಂತರ ಎನ್ನುವುದು ಜೀವಿಗಳ ಸ್ಪರ್ಧೆಯಲ್ಲಿ ಆಗುವ ಬದಲಾವಣೆ ಅಥವಾ ಹೊಂದಾಣಿಕೆ. ಬ್ಯಾಕ್ಟೀರಿಯಾ ಆಂಟಿ ಬಾಡಿ ರೆಸಿಸ್ಟನ್ಸ್ ಹೊಂದುವುದರಿಂದ ಹಿಡಿದು ಹಮ್ಮಿಂಗ್ ಹಕ್ಕಿಯ ಚುಂಚು ಉದ್ದವಾಗುವವ ರೆಗೆ ಎಲ್ಲವೂ ರೂಪಾಂತರ ಗಳೇ. ಅವೆಲ್ಲ ಅವುಗಳ ಉಳಿವಿನ ಪ್ರಶ್ನೆಯಿಂದಾಗಿ ಆದ ಬದಲಾ ವಣೆಗಳು.

Shishir Hegde Column: ಹಸಿವೆಯಾದಾಗ ನಮಗೇಕೆ ಸಿಟ್ಟು ಬರುತ್ತದೆ ?

ಹಸಿವೆಯಾದಾಗ ನಮಗೇಕೆ ಸಿಟ್ಟು ಬರುತ್ತದೆ ?

ಉಪವಾಸದ ಹೆಸರಿನ ಫಲಾಹಾರದಲ್ಲಿ ಯಾವುದೇ ‘ಫಲ’ವೂ ಇರಲಿಲ್ಲ, ಪ್ರತಿ-ಫಲವೂ ಇರಲಿಲ್ಲ. ಅಂಥ ಉಪವಾಸಗಳು ಅರ್ಥಹೀನವಾಗಿ ರೂಢಿಯಲ್ಲಿ ಮಾತ್ರ ಉಳಿದಿದ್ದವು. ಈ ಗೊಂದು ದಶಕದಿಂದೀಚೆ ಎಲ್ಲ ಫಿಟ್ನೆಸ್ ಪಂಡಿತರು ಉಪವಾಸ ಮಾಡಿ ಎನ್ನುವುದು ಜಾಸ್ತಿ ಆಗಿದೆ. ಜಪಾನಿನ ಯೋಷಿಮೊರಿ ಅಸುಮಿ ಎನ್ನುವ ವಿಜ್ಞಾನಿಗೆ ಉಪವಾಸದ ಪರಿಣಾಮಗಳ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಬಂದ ಮೇಲೆ ಉಪವಾಸ ಎಲ್ಲಿಲ್ಲದ ಜನಪ್ರಿಯತೆ ಪಡೆದಿದೆ

Shishir Hegde Column: ಇವಳೇಕೆ ಚಂದ, ಅವಳೇಕೆ ಮಂದ- ಏನಿದು ಲೆಕ್ಕಾಚಾರ ?

ಇವಳೇಕೆ ಚಂದ, ಅವಳೇಕೆ ಮಂದ- ಏನಿದು ಲೆಕ್ಕಾಚಾರ ?

ಸೌಂದರ್ಯವನ್ನು ನಿರ್ದೇಶಿಸುವ ಒಂದು ಗುಣವೆಂದರೆ ಬಣ್ಣ. ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಿಗುವ ಹಣ್ಣು ಮತ್ತಿತರ ಆಹಾರವಸ್ತುಗಳು ತಿನ್ನಲು ಯೋಗ್ಯ ಎಂದು ನಾವು ಗುರುತಿಸುವುದು ಅವುಗಳು ಕೆಲವೊಂದು ಬಣ್ಣವನ್ನು ಪಡೆದಾಗ. ಆ ಕಾರಣಕ್ಕೆ ಕೆಂಪು, ಹಳದಿ ಮತ್ತು ಅಚ್ಚ ಹಸಿರು ನಮಗೆ ಎಲ್ಲಿಲ್ಲದ ಆಕರ್ಷಣೆ. ಆ ಬಣ್ಣಗಳು ತಕ್ಷಣ ನಮ್ಮ ಗಮನ ಸೆಳೆಯಬಲ್ಲವು.

Shishir Hegde Column: ವೃದ್ಧಾಪ್ಯದಲ್ಲಿ ಮನಸ್ಥಿತಿ ಹೇಗಿರುತ್ತದೆಂಬ ಪ್ರಯೋಗ

ವೃದ್ಧಾಪ್ಯದಲ್ಲಿ ಮನಸ್ಥಿತಿ ಹೇಗಿರುತ್ತದೆಂಬ ಪ್ರಯೋಗ

ನನ್ನ ದೇಹಕ್ಕೆ ಮುಪ್ಪು ಆವರಿಸಿಬಿಡುತ್ತದೆ ಎಂಬ ಯೋಚನೆ ಅವನನ್ನು ಖಿನ್ನನನ್ನಾಗಿಸುತ್ತದೆ. ಹೀಗಿರು ವಾಗ ಒಂದು ದಿನ ಅವನಿಗೆ ದೆವ್ವವೊಂದು ಎದುರಾಗುತ್ತದೆ. ದೆವ್ವವು “ಏನು ವರ ಬೇಕು?" ಎಂದು ಕೇಳುತ್ತದೆ. “ಇಲ್ಲಿಂದ ಮುಂದೆ ನನಗೆ ವಯಸ್ಸಾಗಬಾರದು- ನನ್ನ ಬದಲು ನನ್ನ ತೈಲಚಿತ್ರಕ್ಕೆ ವಯಸ್ಸಾ ಗಬೇಕು" ಎನ್ನುತ್ತಾನೆ.

Loading...