ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ; ಜನವರಿ 2ರಿಂದಲೇ ಜಾರಿಗೆ ಬಂತು ಹೊಸ ಕಾನೂನು

New criminal code: ಇಂಡೋನೇಷ್ಯಾದ ಹೊಸ ಕ್ರಿಮಿನಲ್ ಕೋಡ್ ಜನವರಿ 2ರಿಂದ ಜಾರಿಯಾಗಿದ್ದು, ವಿವಾಹ ಪೂರ್ವ ಲೈಂಗಿಕ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಪರಾಧ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ಕಾನೂನು ಜನರ ಹಕ್ಕುಗಳು ಹಾಗೂ ಮಾತಿನ ಸ್ವಾತಂತ್ರ್ಯ ಮೇಲೆ ಪರಿಣಾಮ ಬೀರಬಹುದೆಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ. -

Priyanka P
Priyanka P Jan 3, 2026 4:53 PM

ಜಕಾರ್ತಾ, ಜ. 3: ವಿವಾಹ ಪೂರ್ವ ಲೈಂಗಿಕ ಕ್ರಿಯೆ ನಡೆಸಿದರೆ ಇಂಡೋನೇಷ್ಯಾದಲ್ಲಿ (Indonesia) ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ದೇಶದಲ್ಲಿ ಹೊಸ ಕ್ರಿಮಿನಲ್ ಕೋಡ್ ಅನ್ನು ಪರಿಚಯಿಸಲಾಗಿದ್ದು, ಜನವರಿ 2ರಿಂದಲೇ ಜಾರಿಯಾಗಿದೆ. ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅದನ್ನು ರಾಷ್ಟ್ರಕ್ಕೆ ಅವಮಾನ ಮಾಡುವುದು ಎಂಬ ಅಪರಾಧದಡಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಕಾನೂನಿನ ದುರ್ಬಳಕೆಯನ್ನು ತಡೆಯಲು ಸಾರ್ವಜನಿಕ ಮೇಲ್ವಿಚಾರಣೆ ಅಗತ್ಯವಿರುವುದಾಗಿ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ.

345 ಪುಟಗಳಿರುವ ಈ ಕೋಡ್ 2022ರಲ್ಲಿ ಅಂಗೀಕೃತವಾಗಿದ್ದು, ಡಚ್ ಕಾಲದ ವೇಳೆ ಜಾರಿಗೆ ತಂದ ಹಳೆಯ ಕಾನೂನುಗಳನ್ನು ಬದಲಾಯಿಸುತ್ತದೆ. ತಮ್ಮ ಹೆಂಡತಿ ಅಥವಾ ಗಂಡನನ್ನು ಹೊರತುಪಡಿಸಿ ಬೇರೆಯವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಅಂಥವರಿಗೆ ವ್ಯಭಿಚಾರದ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಸಂಗಾತಿ, ಪೋಷಕರು, ಮಕ್ಕಳು ಈ ಬಗ್ಗೆ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ಈ ಹೊಸ ಕಾನೂನು ನಾಗರಿಕ ಹಕ್ಕುಗಳು ಮತ್ತು ಮಾತಿನ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು ಎಂಬ ಟೀಕೆಗಳು ವ್ಯಕ್ತವಾಗಿವೆ.

ದೃಶ್ಯಂ ಸ್ಟೈಲ್​ ಮರ್ಡರ್‌; ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಕೆಲಸದಾಳು ಕಥೆ ಮುಗಿಸಿದ ಮಗ!

ನಾವು ಕುರುಡರಲ್ಲ. ಆದರೆ ಮುಖ್ಯವಾದುದು ಸಾರ್ವಜನಿಕ ನಿಯಂತ್ರಣ. ಹೊಸ ಕಾನೂನು ಬಂದಾಗ ತಕ್ಷಣವೇ ಅಳವಡಿಸಲಾಗುವುದಿಲ್ಲ. ದಶಕಗಳ ಕಾಲ ನಡೆದಿದ್ದ ಈ ಪ್ರಕ್ರಿಯೆಯಲ್ಲಿ, ಆಗಿನ ಅಧ್ಯಕ್ಷ ಜೋಕೊ ವಿಡೋಡೊ ಅವರ ಅಂತಿಮ ಅವಧಿಯಲ್ಲಿ ಕ್ರಿಮಿನಲ್ ಸಂಹಿತೆಯ ಪರಿಷ್ಕರಣೆಗಳನ್ನು ಅಂಗೀಕರಿಸಲಾಯಿತು ಎಂದು ಕಾನೂನು ಸಚಿವ ಸುಪ್ರತ್ಮಾನ್ ಆಂಡಿ ಅಗ್ಟಾಸ್ ಹೇಳಿದರು.

ಹೊಸ ಕಾನೂನಿನ ಪ್ರಕಾರ, ವಿವಾಹ ಪೂರ್ವ ಹಾಗೂ ಅಕ್ರಮ ಸಂಬಂಧದ ಲೈಂಗಿಕ ಕ್ರಿಯೆ ಅಪರಾಧವಾಗಿದೆ. ಈ ಅಪರಾಧ ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಆದರೆ ಅಪರಾಧಿಯ ಸಂಗಾತಿ, ಪೋಷಕರು ಅಥವಾ ಮಕ್ಕಳು ದೂರು ನೀಡಿದರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಪ್ರಸ್ತುತ, ಇಂಡೋನೇಷ್ಯಾದಲ್ಲಿ ವ್ಯಭಿಚಾರ ಮಾತ್ರ ಅಪರಾಧವಾಗಿದೆ.

ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ಬಿಷ್ಣೋಯ್ ಗ್ಯಾಂಗ್ ಸದಸ್ಯನ ಮೇಲೆ ಫೈರಿಂಗ್

ಕುಖ್ಯಾತ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಅಶೋಕ್ ಬಿಷ್ಣೋಯ್ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಗುಂಡು ಹಾರಿಸಿರುವ ಘಟನೆ ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ತಂಡವು ಆತನನ್ನು ಅಸ್ಸಾಂನಲ್ಲಿ ಬಂಧಿಸಿದ ನಂತರ ಗಾಂಧಿನಗರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಈ ಎನ್‌ಕೌಂಟರ್ ಸಂಭವಿಸಿದೆ.

ವರದಿಗಳ ಪ್ರಕಾರ, ಅಸ್ಸಾಂನಲ್ಲಿ ಅಶೋಕ್ ಬಿಷ್ಣೋಯ್‍ನನ್ನು ಪೊಲೀಸರು ಬಂಧಿಸಿದರು. ಬಂಧನದ ನಂತರ ಆತನನ್ನು ಗಾಂಧಿನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಪೊಲೀಸ್ ಬೆಂಗಾವಲು ಪಡೆ ದಾಹೋದ್ ಬಳಿ ಬಂದಾಗ, ಕುಖ್ಯಾತ ಅಪರಾಧಿ ಅಶೋಕ್ ಪೊಲೀಸ್ ತಂಡದ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಪೊಲೀಸರು ಆತ್ಮರಕ್ಷಣೆಗಾಗಿ ಮತ್ತು ಆರೋಪಿಯನ್ನು ತಪ್ಪಿಸಿಕೊಳ್ಳದಂತೆ ತಡೆಯಲು ಗುಂಡು ಹಾರಿಸಿದರು. ಪೊಲೀಸರ ಗುಂಡೇಟಿನಲ್ಲಿ ಅಶೋಕ್ ಬಿಷ್ಣೋಯ್ ಗಾಯಗೊಂಡಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.