RCB Celebration in Chikkaballapur: 18 ವರ್ಷಗಳ ಬಳಿಕ ಆರ್ಸಿಬಿ ಐತಿಹಾಸಿಕ ಚೊಚ್ಚಲ ಐಪಿಎಲ್ ಕಿರೀಟ : ಬಾಗೇಪಲ್ಲಿಯಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಗಳ ವಿಜಯೋತ್ಸವ
ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೊಹ್ಲಿಯ ೧೮ ವರ್ಷಗಳ ಕಾಲದ ತಪಸ್ಸಿದೆ. ನಿಷ್ಠೆ, ಬದ್ಧತೆ ಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದೆ, ಆರ್.ಸಿ.ಬಿ ವಿರುದ್ಧ ಮಾತನಾಡಿವವರಿಗೆ ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಮೂಲಕ ಬಾಯಿ ಮುಚ್ಚಿಸಿದ್ದಾರೆ

ಆರ್ಸಿಬಿಗೆ ಪುರಸಭೆ ನಾಮ ನಿರ್ದೇಶನದ ಸದಸ್ಯರಾದ ಕ್ರಿಕೆಟ್ ಮೂರ್ತಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಬಾಗೇಪಲ್ಲಿ: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ೨೦೨೫ ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಆರ್ಸಿಬಿಗೆ ಪುರಸಭೆ ನಾಮ ನಿರ್ದೇಶನದ ಸದಸ್ಯರಾದ ಕ್ರಿಕೆಟ್ ಮೂರ್ತಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಅವರು ಬಾಗೇಪಲ್ಲಿ ಪಟ್ಟಣದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೊಡ್ಡ ಎಲ್.ಇ.ಡಿ ಪರದೆಯ ಮೇಲೆ ಸಾವಿರಾರು ವಿರಾಟ್ ಕೋಹ್ಲಿಯ ಅಭಿಮಾನಿಗಳು ಐಪಿಎಲ್ ಪಂದ್ಯವನ್ನು ನೇರ ಪ್ರಸಾರ (ಲೈವ್) ವೀಕ್ಷಿಸಲು ನಿರ್ಮಿಸಲಾಗಿದೆ ಹಾಗೂ ಅವರ ಅಭಿಮಾನಿಗಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಶಾಂತಿ, ಸೌಹಾರ್ಧತೆಯಿಂದ ಎಲ್ಲಾ ಸಮುದಾಯಗಳ ಸಹಯೋಗದೊಂದಿಗೆ ಬಕ್ರೀದ್ ಹಬ್ಬ ಆಚರಿಸಿ.
ಈ ವೇಳೆ ಮಾತನಾಡಿ ಆರ್ಸಿಬಿಯ ಈ ವಿಜಯದಲ್ಲಿ ವಿರಾಟ್ ಕೊಹ್ಲಿಯ ೧೮ ವರ್ಷಗಳ ಕಾಲದ ತಪಸ್ಸಿದೆ. ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದೆ,ಆರ್.ಸಿ.ಬಿ ವಿರುದ್ಧ ಮಾತನಾಡಿವವರಿಗೆ ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಮೂಲಕ ಬಾಯಿ ಮುಚ್ಚಿಸಿದ್ದಾರೆ ಎಂದರು.
ಬಾಗೇಪಲ್ಲಿ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ನಿನ್ನೆ ರಾತ್ರಿ ಅಕ್ಷರಶಃ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ರಸ್ತೆಗಳಲ್ಲಿ, ಮನೆ ಟೆರೇಸ್ಗಳಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.
'ಈ ಸಲ ಕಪ್ ನಮ್ದೆ' ಎಂಬ ಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದೆ 'ಈ ಸಲ ಕಪ್ ನಮ್ದೇ' ಎಂದು ಗೊತ್ತಾದ ಮರುಕ್ಷಣವೇ ಬೀದಿಗಿಳಿದ ಆರ್ಸಿಬಿ ಅಭಿಮಾನಿಗಳ ಸಂಭ್ರಮೋ ಸಂಭ್ರಮ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು 'ಈ ಸಲ ಕಪ್ ನಮ್ದೆ' ಎಂಬ ಘೋಷಣೆಗಳನ್ನು ಮೊಳಗಿಸಿದರು. ಆರ್ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ.ಆರ್ಸಿಬಿ....ಆರ್ಸಿಬಿ....ಆರ್ಸಿಬಿ... ಎಂದು ಕೂಗಿ ಕುಪ್ಪಳಿಸಿ ವಿಜಯೋತ್ಸವದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಅಪ್ಪಣ್ಣ,ರಾಜು, ಸಲೀಮ್, ಅಸೀಫ್, ಕೃಷ್ಣಪ್ಪ, ವೆಂಕಟೇಶ್, ಶ್ರೀನಾಥ್, ವೆಂಕಿ, ಬಾಲು, ಮಂಜುನಾಥ, ಬಾಬು,ನಾಗೇಶ್ ಹಾಗೂ ಸಾರ್ವಜನಿಕರು ಇದ್ದರು.