IND vs ENG: ರಿಷಭ್ ಪಂತ್ ತನ್ನ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕೆಂದ ಆರ್ ಅಶ್ವಿನ್!
ಲೀಡ್ಸ್ನಲ್ಲಿ ಭಾರತ ತಂಡದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್, ಪ್ರವಾಸಿ ತಂಡ ಬ್ಯಾಟಿಂಗ್ನಲ್ಲಿ ಹೆಚ್ಚಿನ ಸಮಯ ಕಳೆಯುವತ್ತ ಗಮನಹರಿಸಬೇಕು ಎಂದು ಹೇಳಿದರು. ಇದೇ ವೇಳೆ ರಿಷಭ್ ಪಂತ್ ಅವರನ್ನು ಶ್ಲಾಘಿಸಿದ ಅವರು, ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದ್ದಾರೆ.

ರಿಷಭ್ ಪಂತ್ಗೆ ದ್ವಿಶತಕ ಬಾರಿಸುವಂತೆ ಆರ್ ಅಶ್ವಿನ್ ಸಲಹೆ.

ನವದೆಹಲಿ: ಲೀಡ್ಸ್ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿನ (IND vs ENG) ಭಾರತ ತಂಡದ ಐದು ವಿಕೆಟ್ಗಳ ಸೋಲಿನ ಬಗ್ಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ತಂಡದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಹೆಚ್ಚು ಸಮಯ ಕಡೆಯುವತ್ತ ಗಮನಹರಿಸಬೇಕು ಹಾಗೂ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ನ 'ಸರಾಸರಿ' ಬೌಲಿಂಗ್ ದಾಳಿಯ ವಿರುದ್ಧ ರಿಷಭ್ ಪಂತ್ (Rishabh Pant) ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಭಾರತ ತಂಡದ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು ಐದು ಶತಕಗಳು ಮೂಡಿಬಂದಿದ್ದವು. ಆದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲ್ಲಿ. ಇದರ ಲಾಭ ಪಡೆದ ಇಂಗ್ಲೆಂಡ್ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್' ನಲ್ಲಿ ಮಾತನಾಡಿ "ಭಾರತ ತಂಡದ ಬ್ಯಾಟಿಂಗ್ ಗಮನಹರಿಸಬಹುದಾದ ಒಂದು ವಿಷಯವೆಂದರೆ ನೀವು ಪ್ರತಿ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸಮಯವನ್ನು ಹೆಚ್ಚಿಸಬೇಕು, ರನ್ಗಳ ವಿಷಯದಲ್ಲಿ ಅಲ್ಲ. ಇಂಗ್ಲೆಂಡ್ನ ಫೀಲ್ಡಿಂಗ್ ಸಮಯವನ್ನು ಹೆಚ್ಚಿಸಿ ಮತ್ತು ಅವರು ಮೈದಾನದಲ್ಲಿ ಹೆಚ್ಚು ಸಮಯವನ್ನು ಕಳೆಯುವಂತೆ ಮಾಡಿ. " ಎಂದು ಹೇಳಿದ್ದಾರೆ.
IND vs ENG: ʻನಿಮಗೆ ಅಪಾಯ ಎದುರಾಗಲಿದೆʼ-ರಿಷಭ್ ಪಂತ್ ಬ್ಯಾಟಿಂಗ್ ಸ್ವಭಾವದ ಬಗ್ಗೆ ಎಬಿಡಿ ಎಚ್ಚರಿಕೆ!
"ನಾನು ಒಂದು ವಿಷಯವನ್ನು ಹೇಳುತ್ತೇನೆ, ಭಯಪಡಬೇಡಿ ಮತ್ತು ಹೆಚ್ಚು ಬದಲಾವಣೆಗಳನ್ನು ಮಾಡಬೇಡಿ. ಮುಂದಿನ ಟೆಸ್ಟ್ನಲ್ಲಿ ಭಾರತ ಸರಣಿಯಲ್ಲಿ ಸಮಬಲಗೊಳಿಸಬಹುದು, ಆದರೆ ನಾವು ಇಂಗ್ಲೆಂಡ್ನ ತಂತ್ರವನ್ನು ಅರ್ಥಮಾಡಿಕೊಳ್ಳದಿದ್ದರೆ, ಈ ಸರಣಿಯು ನಮ್ಮಿಂದ ಬಹಳ ಬೇಗನೆ ದೂರವಾಗಬಹುದು," ಎಂದು ಸ್ಪಿನ್ ದಿಗ್ಗಜ ಪ್ರವಾಸಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬ್ಯಾಟ್ಸ್ಮನ್ಗಳನ್ನು ದೂರಿದ ಆರ್ ಅಶ್ವಿನ್
ನಾಲ್ಕನೇ ದಿನದ ಆರಂಭದಲ್ಲಿ ವಿಕೆಟ್ಗಳನ್ನು ಒಪ್ಪಿಸಿದ ಬಳಿಕ ಪಂದ್ಯ ಭಾರತ ತಂಡದ ಕೈಯಿಂದ ಜಾರಿತು ಎಂದು ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಐದನೇ ದಿನದವರೆಗೆ ನೀವು ಬ್ಯಾಟಿಂಗ್ ಮುಂದುವರಿಸದಿದ್ದರೆ, ಆಟ ಮುಗಿದಂತೆ. ಈ ಇಂಗ್ಲೆಂಡ್ ತಂಡವು ಯಾವುದೇ ಗುರಿಯನ್ನು ಚೇಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದೆ. ಆದ್ದರಿಂದ ಅವರಿಗೆ ಕಡಿಮೆ ಬ್ಯಾಟಿಂಗ್ ಸಮಯವನ್ನು ನೀಡಬೇಕು. ಆದರೆ ದೊಡ್ಡ ಗುರಿಯನ್ನು ನೀಡಬೇಕು ಎಂಬುದನ್ನು ನೆನಪಿನಲ್ಲಿಡಬೇಕು," ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.
IND vs ENG: ಇಂಗ್ಲೆಂಡ್ 4-0 ಅಂತರದಲ್ಲಿ ಗೆಲ್ಲಬಹುದಾ? ಎಂದ ಮೈಕಲ್ ವಾನ್ಗೆ ಜಾಫರ್ ತಿರುಗೇಟು!
ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಬೇಕು
"ಕೆಲವು ವಿಶೇಷ ಬ್ಯಾಟ್ಸ್ಮನ್ಗಳು ಸಾಧ್ಯವಾದಷ್ಟು ಬೇಗ ಚೆಂಡನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಲೈನ್ ಅಂಡ್ ಲೆನ್ತ್ ಅನ್ನು ಬೇಗನೆ ಗುರುತಿಸುತ್ತಾರೆ. ಈ ವಿಶೇಷ ಕೌಶಲ ಹೊಂದಿರುವ ಅಪರೂಪದ ಆಟಗಾರರಲ್ಲಿ ರಿಷಭ್ ಪಂತ್ ಒಬ್ಬರು," ಎಂದ ಹೊಗಳಿದ ಅವರು, "ರಿಷಭ್ ಒಬ್ಬ ಬ್ಯಾಟ್ಸ್ಮನ್ ಆಗಿ ಅದ್ಭುತವಾಗಿ ಆಡಿದ್ದಾರೆ. ಆದರೆ ಅವರ ರಕ್ಷಣಾ ವಿಭಾಗವು ತುಂಬಾ ಉತ್ತಮವಾಗಿದೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಅವರು ಆಡಲು ಸಾಧ್ಯವಾಗದ ಯಾವುದೇ ಶಾಟ್ ಪುಸ್ತಕದಲ್ಲಿ ಇಲ್ಲ, ಮುಂದಿನ ಬಾರಿ ನೀವು 130 ರನ್ಗಳಲ್ಲಿ ಬ್ಯಾಟ್ ಮಾಡುವಾಗ ದ್ವಿಶತಕ ಗಳಿಸಲು ನಾನು ನಿಮ್ಮನ್ನು ವಿನಂತಿಸಬಹುದೇ?" ಎಂದು ಆರ್ ಅಶ್ವಿನ್ ಹೇಳಿದ್ದಾರೆ.