ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಕುಟುಂಬಕ್ಕೆ ದೊಡ್ಡ ಆಘಾತ! ಶೋಯೆಬ್‌ ಅಖ್ತರ್‌ ದೊಡ್ಡ ಅಣ್ಣ ನಿಧನ!

ಪಾಕಿಸ್ತಾನ ವೇಗದ ಬೌಲಿಂಗ್‌ ದಿಗ್ಗಜ ಶೋಯೆಬ್‌ ಅಖ್ತರ್‌ ಅವರ ಕುಟುಂಬಕ್ಕೆ ಆಘಾತವಾಗಿದೆ. ಅವರು ಹಿರಿಯ ಅಣ್ಣ ಶಾಹಿದ್‌ ಅಖ್ತರ್‌ ವಿಧಿವಶರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬಹಿರಂಗವಾಗಿದೆ, ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ವೇಗಿಯೇ ಈ ಬಗ್ಗೆ ಖಚಿತಪಡಿಸಿದ್ದಾರೆ.

ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯೆಬ್‌ ಅಖ್ತರ್‌ ದೊಡ್ಡ ಅಣ್ಣ ನಿಧನ!

ಶೋಯಬ್‌ ಅಖ್ತರ್‌ ಅವರ ಅಣ್ಣ ಶಾಹಿದ್‌ ಅಖ್ತರ್‌ ನಿಧನ. -

Profile
Ramesh Kote Jun 24, 2026 4:56 PM

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ (Shoaib Akhtar) ಅವರ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ವೇಗಿಯ ಹಿರಿಯ ಅಣ್ಣ ಶಾಹಿದ್‌ ಅಖ್ತರ್‌ (Shahid Akhtar) ಅವರು ವಿಧಿವಶರಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಸೋಶಿಯಲ್‌ ಮೀಡಿಯಾದಲ್ಲಿಯೂ ಈ ಬಗ್ಗೆ ಪೋಸ್ಟ್‌ಗಳು ಹರಿದಾಡುತ್ತಿವೆ. ಅಂದ ಹಾಗೆ ಸ್ವತಃ ಪಾಕ್‌ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಅವರೇ ಈ ಕಹಿ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ದುಃಖದ ಘಟನೆಯ ಹಿನ್ನೆಲೆಯಲ್ಲಿ ಅನೇಕ ಅಭಿಮಾನಿಗಳು ಹಾಗೂ ಮಾಜಿ ಪಾಕಿಸ್ತಾನಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಶಾಹಿದ್ ಅವರ ನಿಧನಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

"ನನ್ನ ಪ್ರೀತಿಯ ಹಿರಿಯ ಸಹೋದರ ಶಾಹಿದ್‌ ಅಖ್ತರ್‌ ಅವರು ಅಲ್ಲಾಹನ ಸನ್ನಿಧಿಗೆ ಮರಳಿರುವ ದುಃಖದ ಸುದ್ದಿಯನ್ನು ಹಂಚಿಕೊಳ್ಳಬೇಕಾಗಿರುವುದರಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಜನಾಝಾ ನಮಾಜ್‌ನ ಸಮಯ ಮತ್ತು ಸ್ಥಳದ ಮಾಹಿತಿಯನ್ನು ಬೆಳಿಗ್ಗೆ ತಿಳಿಸಲಾಗುವುದು," ಎಂದು ಶೋಯೆಬ್‌ ಅಖ್ತರ್‌ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

ICC ODI Rankings: ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿಗೆ ಹಿನ್ನಡೆ!

ಪಾಕಿಸ್ತಾನದ ಮಾಜಿ ನಾಯಕ ರಶೀದ್‌ ಲತೀಫ್ ಕೂಡ ಶೋಯೆಬ್ ಅಖ್ತರ್ ಅವರ ಸಹೋದರರ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ, "ನಾವೆಲ್ಲರೂ ಅಲ್ಲಾಹನವರೇ ಮತ್ತು ಆತನ ಬಳಿಗೇ ಮರಳುವವರು. ಶೋಯೆಬ್ ಅಖ್ತರ್ ಅವರ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ. ಅಂತ್ಯಕ್ರಿಯೆಯ ಪ್ರಾರ್ಥನೆ ಎಚ್‌8 ಸಮಾಧಿ ಸ್ಥಳದಲ್ಲಿ ನಡೆಯಲಿದೆ. ದಯವಿಟ್ಟು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ," ಎಂದು ಬರೆದುಕೊಂಡಿದ್ದಾರೆ.

5 ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಅಖ್ತರ್‌

ಸುಮಾರು ಐದು ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್‌ ಅಖ್ತರ್‌ ಅವರು ಮತ್ತೊಂದು ವೈಯಕ್ತಿಕ ದುಃಖವನ್ನು ಅನುಭವಿಸಿದ್ದರು. ಅವರ ತಾಯಿ ನಿಧನರಾಗಿದ್ದರು. ಇದೀಗ ತಮ್ಮ ಸಹೋದರರ ನಿಧನದೊಂದಿಗೆ, ಶೋಯೆಬ್ ಅಖ್ತರ್ ತಮ್ಮ ಕುಟುಂಬದ ಮತ್ತೊಬ್ಬ ಪ್ರೀತಿಪಾತ್ರ ಸದಸ್ಯರನ್ನು ಕಳೆದುಕೊಂಡಿದ್ದಾರೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ, ಶೋಯೆಬ್ ಅಖ್ತರ್ ಸಕ್ರಿಯ ಕ್ರಿಕೆಟ್ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಮುಖ ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಅವರು ನಿಯಮಿತವಾಗಿ ಸುದ್ದಿ ವಾಹಿನಿಗಳು ಹಾಗೂ ಚರ್ಚಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಅತಿವೇಗದ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದ ರಾವಲ್ಪಿಂಡಿ ಎಕ್ಸ್‌ಪ್ರೆಸ್‌, 2026ರ ಟಿ20 ವಿಶ್ವಕಪ್ ವೇಳೆ ಕೂಡ ಪಾಕಿಸ್ತಾನದ ವಿವಿಧ ಮಾಧ್ಯಮಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಕಾಣಿಸಿಕೊಂಡಿದ್ದರು. ಆ ಟೂರ್ನಿಯಲ್ಲಿ ಭರತ ತಂಡ ಚಾಂಪಿಯನ್ ಆಗಿತ್ತು.

ಶೋಯೆಬ್‌ ಅಖ್ತರ್‌ ಅವರು ಪಾಕಿಸ್ತಾನ ಪರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಸದಾ ನೇರವಾಗಿ ಮಾತನಾಡುತ್ತ ಬಂದಿದ್ದಾರೆ. 1990ರ ದಶಕ ಮತ್ತು 2000ರ ಆರಂಭಿಕ ವರ್ಷಗಳಲ್ಲಿ ಪಾಕಿಸ್ತಾನ ತಂಡ ಸಾಧಿಸಿದ್ದ ಎತ್ತರವನ್ನು ಮತ್ತೆ ತಲುಪಲು ಅಡ್ಡಿಯಾಗುತ್ತಿರುವ ಹಲವು ಕಾರಣಗಳನ್ನು ಅವರು ಆಗಾಗ್ಗೆ ಪ್ರಸ್ತಾಪಿಸುತ್ತಾರೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ಪಾಕಿಸ್ತಾನ ಕ್ರಿಕೆಟ್‌ನ ಆಡಳಿತಾತ್ಮಕ ದೋಷಗಳು ಹಾಗೂ ಆಟಗಾರರ ಪ್ರದರ್ಶನಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅವರು ಅನೇಕ ಬಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗಳು ದೇಶದ ಕ್ರಿಕೆಟ್ ಪ್ರಗತಿಗೆ ಮತ್ತು ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಇನ್ನೂ ಹಿನ್ನಡೆಯಾಗುತ್ತಿವೆ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.