ಬೆಳೆಗಾರರಿಗೆ ಶ್ರೀಗಂಧದ ರಕ್ಷಣೆ ಚಿಂತೆ
ಹತ್ತಾರು ವರ್ಷಗಳ ಕಾಲ ಜೋಪಾನ ಮಾಡಿ ಬೆಳೆಸಿರುವ ಶ್ರೀಗಂಧ ಮರಗಳನ್ನು ಕದಿಯುವ ಕಳ್ಳರು ಮುಂದಾಗಿದ್ದಾರೆ. ಇದರಿಂದ ಬೆಳೆದು ನಿಂತ ಮರಗಳ ರಕ್ಷಣೆಯ ಜಿಲ್ಲೆಯ ಶ್ರೀಗಂಧ ಬೆಳೆಗಾರರಿಗೆ ತಲೆ ನೋವಾಗಿದೆ. ಶ್ರೀಗಂಧದಿಂದ ಲಾಭಗಳಿಸಬಹುದಾ ಎಂಬ ಆತಂಕದಲ್ಲೇ ಜಿಲ್ಲೆಯ ನೂರಾರು ರೈತರು ದಶಕದ ಹಿಂದೆಯೇ ಸಾಲ ಮಾಡಿ, ಶ್ರೀಗಂಧ ಮರಗಳನ್ನು ನಾಟಿ ಮಾಡಿದ್ದಾರೆ. ೮ ರಿಂದ ೧೦ ವರ್ಷಗಳ ಕಾಲ ಅವುಗಳನ್ನು ಮಗುವಿನಂತೆ ಜೋಪಾನ ಮಾಡಿದ್ದಾರೆ.