ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

ಸಾಗರ ಎಂದಾಕ್ಷಣ ಹಲವು ವಿಶೇಷತೆಯೊಂದಿಗೆ ಕಣ್ಮುಂದೆ ಬರುವುದು ಇಲ್ಲಿನ ಮಾರಿಕಾಂಬ ಜಾತ್ರೆಯ ವೈಭವ. ರಾಜ್ಯದಲ್ಲಿ ಶಿರಸಿ ಮತ್ತು ಸಾಗರ ಎರಡು ಪ್ರಸಿದ್ದ ಐತಿಹಾಸಿಕ ಜಾತ್ರೆಗಳಲ್ಲಿ ಎರಡನೇ ದೊಡ್ಡ ಜಾತ್ರೆ ಎನ್ನುವ ಸ್ಥಾನದಲ್ಲಿ ಸಾಗರ ಮಾರಿಜಾತ್ರೆ ನಿಲ್ಲುತ್ತದೆ. ಅದು ಕೇವಲ ದೇವಿ ಪೂಜೆಯ ಉತ್ಸವವಲ್ಲ ಬದಲಾಗಿ ಜನರ ಭಾವನೆಯ ಮಹಾ ತೇರು.

ರಾಜ್ಯದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್‌ ಪಾಟೀಲ್

ರಾಜ್ಯದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್‌ ಪಾಟೀಲ್

400 ಕೋಟಿ ರು. ಹಣ ಇದ್ದ ಜೋಡಿ ಕಂಟೇನರ್ ಹೈಜಾಕ್ ಪ್ರಕರಣದ ಮೂಲ ಹುಡುಕುವುದೇ ಪೊಲೀಸ ರಿಗೆ ಸವಾಲಿನ ಕೆಲಸವಾಗಿದೆ. ಚೋರ್ಲಾ ಘಾಟ್‌ನಲ್ಲಿ ದರೋಡೆ ಆಗಿದ್ದು ಒಂದು ಭಾಗವಾಗಿದ್ದರೆ ಕಂಟೇನರ್‌ನಲ್ಲಿ ಹಣವನ್ನು ಯಾವ ಜಾಗದಲ್ಲಿ ತುಂಬಿಸಲಾಯಿತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ, 2025ರ ಸಪ್ಟೆಂಬರ್‌ನಲ್ಲಿ ಗೋವಾದಲ್ಲಿ ಎರಡು ಕಂಟೇನರ್‌ ನಲ್ಲಿ 2 ಸಾವಿರ ಮುಖಬೆಲೆಯ ನೋಟು ತುಂಬಿಸಲಾಗಿದೆ.

Dream Library: ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಮೈಸೂರಿನ ರಾಜೀವ್ ನಗರ ಬಡಾವಣೆ ನಿವಾಸಿಯಾಗಿರುವ ಇವರು ಓದಿದ್ದು ಕೇವಲ ಒಂದನೇ ತರಗತಿ, ಆದರೆ ನೋಡಿ ಕಲಿತದ್ದು ಅಪಾರ. ಬಡತನದ ಬೇಗೆಯಲ್ಲಿ ನಲುಗಿದ ಕುಟುಂಬದಲ್ಲಿ ಹುಟ್ಟಿದ ಇಸಾಕ್ ಅವರಿಗೆ ಓದು ಹತ್ತಲಿಲ್ಲ ಎಂದಲ್ಲ, ತುಂಬಿದ ಕುಟುಂಬದ ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ. ಅದರ ಪರಿಣಾಮವಾಗಿ ಎಳೆಯ ವಯಸ್ಸಿಗೇ ಬಾಲಕಾರ್ಮಿಕ, ಜೀತದಾಳು.

400 ಕೋಟಿ ರು. ದರೋಡೆಯಲ್ಲಿ ಬೆಳಗಾವಿ ಪೊಲೀಸರು ಭಾಗಿ ?

400 ಕೋಟಿ ರು. ದರೋಡೆಯಲ್ಲಿ ಬೆಳಗಾವಿ ಪೊಲೀಸರು ಭಾಗಿ ?

ಸಂಭಾಷಣೆ ಪ್ರಕಾರ ದರೋಡೆ ಪ್ರಕರಣ ಗುಜರಾತ್ ಮೂಲದ ರಾಜಕಾರಣಿಗೆ ಗೊತ್ತಾಗಿದೆ. ಇಷ್ಟೊಂದು ಹಣ ನಾಪತ್ತೆ ಆಗಲು ಹೇಗೆ ಸಾಧ್ಯ? ಇದರ ಹಿಂದೆ ಕರ್ನಾಟಕ ಪೊಲೀಸರು ಇದ್ದಾರೆ ಎಂದು ಮಾತನಾಡಿದ್ದಾರೆ. ಚೋರ್ಲಾ ಘಾಟ್‌ನಲ್ಲಿ ಸಂಭವಿಸಿದ್ದ ದರೋಡೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರ ಕೈವಾಡ ಕುರಿತು ಹೊರಬಿದ್ದಿರುವ ಸಂಭಾಷಣೆ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

400 ಕೋ. ದರೋಡೆ: ಅಂತೆ, ಕಂತೆಗಳ ಸದ್ದು

400 ಕೋ. ದರೋಡೆ ಅಂತೆ, ಕಂತೆಗಳ ಸದ್ದು

400 ಕೋಟಿ ರು. ಹಣ ಇದ್ದ ಕಂಟೇನರ್ ದರೋಡೆ ಪ್ರಕರಣ ಅಂತೆ ಕಂತೆಗಳ ಮೇಲೆ ಸಾಗಿದೆ. ಈ ನಡುವೆ ಅಪಹರಣ ಪ್ರಕರಣ ಬಂಧನಕ್ಕೆ ಒಳಗಾದ ವಿರಾಟ್ ಗಾಂಧಿ ಹಾಗೂ ಜಯೇಶ್ ಮಧ್ಯೆ ನಡೆದ ವಾಟ್ಸಪ್ ಕರೆ ಸಂಭಾಷಣೆ ವೈರಲ್ ಆಗಿದೆ. ಸಂಭಾಷಣೆ ಪ್ರಕಾರ ಹಣ ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಬಾಲಾಜಿ ಟ್ರಸ್ಟ್ ಹೆಸರು ತಳುಕು ಹಾಕಿಕೊಂಡಿದೆ.

Veda International School new building: ವೇದ ಅಂತಾರಾಷ್ಟ್ರೀಯ ಶಾಲೆ ನೂತನ ಕಟ್ಟಡ ಲೋಕಾರ್ಪಣೆ

ವೇದ ಅಂತಾರಾಷ್ಟ್ರೀಯ ಶಾಲೆ ನೂತನ ಕಟ್ಟಡ ಲೋಕಾರ್ಪಣೆ

ಕೇಂದ್ರಿಯ ಪಠ್ಯಕ್ರಮದ ಅವಶ್ಯಕತೆಯನ್ನು ಅರಿತು ಬರುವ ಶೈಕ್ಷಣಿಕ ವರ್ಷದಿಂದಲೇ ವೇದ ಇಂಟರ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ್ನು ಸಿಬಿಎಸ್ಸಿಯೊಂದಿಗೆ ಸಂಯೋಜಿಸಲು ಉದ್ದೇಶಿಸಲಾಗಿದ್ದು, ಸಮಾಜದ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುನ್ನುಡಿ ಇರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಪ್ರಾರಂಭದಿಂದಲೇ ಎನ್‌ಇಇಟಿ ಮತ್ತು ಜೆಇಇ ಪರೀಕ್ಷೆಗಳ ತಯಾರಿಗೆ ಆದ್ಯತೆ ನೀಡಲಾಗುತ್ತಿದೆ.

ಮುದನೂರಿನಲ್ಲಿ ಹುದುಗಿದ ಇತಿಹಾಸ ಪರಂಪರೆ

ಮುದನೂರಿನಲ್ಲಿ ಹುದುಗಿದ ಇತಿಹಾಸ ಪರಂಪರೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮ ಈ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ನಂತರ ಸದ್ಯ ಪುಣ್ಯ ಕ್ಷೇತ್ರವಾಗಿದೆ. ಹಾಗೆಯೇ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಪರಿಚಯಿಸಿದ 10ನೇ ಶತಮಾನದ ದಾಸಿಮಯ್ಯ ಅವರ ಜನ್ಮಭೂಮಿ ಕೂಡಾ ಇದಾಗಿದೆ.

Kalaburagi Fort: ಇಚ್ಛಾಶಕ್ತಿ ಕೊರತೆ: ಅವನತಿಯತ್ತ ಕಲಬುರಗಿ ಕೋಟೆ

ಇಚ್ಛಾಶಕ್ತಿ ಕೊರತೆ: ಅವನತಿಯತ್ತ ಕಲಬುರಗಿ ಕೋಟೆ

ಸ್ಮಾರಕದ ಒಳಭಾಗದಲ್ಲೇ ಅಕ್ರಮ ವಾಸಿಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದು ಅತಿಕ್ರಮಣ ಕ್ಕೆ ನೇರ ಬೆಂಬಲ ನೀಡಿದಂತೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಕೆಲವರ ಇಚ್ಛಾಶಕ್ತಿಯ ಕೊರತೆಯಿಂದ, ವಿಶ್ವವಿಖ್ಯಾತವಾಗಬೇಕಿದ್ದ ಐತಿಹಾಸಿಕ ಪರಂಪರೆಗೆ ಅನ್ಯಾಯ ವಾಗುತ್ತಿರುವುದು ನಿರಾಕರಣೀಯ ಸತ್ಯ.

Mahakutumba: ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

ಒಬ್ಬ ವ್ಯಕ್ತಿಗೆ ಮರಿ ಮಗ ಹುಟ್ಟಿ, ಆ ಮಗುವಿಗೆ ನಾಮಕರಣವಾದ ನಂತರ ಈ ಆಚರಣೆ ನಡೆಯುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಮಗನ ಮಗನನ್ನು ನೋಡಿದಾಗ ಇದು ನಡೆಯುತ್ತದೆ. ಸಾಮಾನ್ಯವಾಗಿ 90 ರಿಂದ 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಹೊಂದಿದವರಿಗೆ ಈ ಗೌರವ ಸಲ್ಲಿಕೆಯಾಗುತ್ತದೆ.

Corporation, Board Term: ನಿಗಮ, ಮಂಡಳಿ ಅವಧಿ ನಾಳೆ ಅಂತ್ಯ, ಹಾಲಿ ಅಧ್ಯಕ್ಷರ ಅಧಿಕಾರಕ್ಕೆ ಅಪಾಯವಿಲ್ಲ

ನಿಗಮ, ಮಂಡಳಿ ಅವಧಿ ನಾಳೆ ಅಂತ್ಯ

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಬಿಎಯ ವಿವಿಧ ಪಾಲಿಕೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರನ್ನು ಅಧಿಕಾರದಿಂದ ಬಿಡುಗಡೆ ಗೊಳಿಸಿದರೆ ಅದರಿಂದ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಈ ಅಚ್ಚರಿಯ ನಿರ್ಧಾರಕ್ಕೆ ಮುಂದಾಗಿದೆ.

National Girl Child Day: ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

‘ಒಂದು ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ.‘ ಈ ಮಾತು ಹೆಣ್ಣು ಮಗುವಿನ ಮಹತ್ವವನ್ನು ಸಾರುತ್ತದೆ. ಪ್ರತಿ ವರ್ಷ ಜ.24ರಂದು ಭಾರತದಾದ್ಯಂತ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಆಚರಿಸಲಾಗುತ್ತದೆ.

Fund for Badami Development: ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ನಡೆದ ಚಾಲುಕ್ಯ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅಭಿವೃದ್ಧಿಗೆ ಬದ್ಧ ಎಂಬ ಮಾತು ಗಳನ್ನು ಹೇಳಿರುವುದು ಜನರು ಸಂತಸಗೊಂಡಿದ್ದಾರೆ.

Wrestling: ಹಳಿಯಾಳದ ಮಣ್ಣಿನಲ್ಲಿ ಹಬ್ಬಿದ ಕುಸ್ತಿ ಸಂಭ್ರಮ

ಹಳಿಯಾಳದ ಮಣ್ಣಿನಲ್ಲಿ ಹಬ್ಬಿದ ಕುಸ್ತಿ ಸಂಭ್ರಮ

ಉತ್ತರ ಕನ್ನಡ ಜಿಲ್ಲೆಯ ಕುಸ್ತಿ ಕಾಶಿ ಎಂದೇ ಕರೆಯಲ್ಪಡುವ ಹಳಿಯಾಳದಲ್ಲಿ ಇತ್ತೀಚೆಗೆ ನಡೆದ ‘ರಾಷ್ಟ್ರೀಯ ಮಟ್ಟದ ಬೃಹತ್ ಕುಸ್ತಿ ದಂಗಲ್‘ ಇಡೀ ರಾಜ್ಯದ ಗಮನ ಸೆಳೆದಿದೆ. ಕಳೆದ ಭಾನುವಾರ ನಡೆದ ಈ ಪಂದ್ಯಾವಳಿಯು ವೀಕ್ಷಕರ ಜನಸಾಗರದಿಂದಾಗಿ ಹೊಸ ಇತಿಹಾಸ ಬರೆದಿದ್ದು, ಕುಸ್ತಿ ಕ್ರೀಡೆಯ ಬಗೆಗಿನ ಜನರ ಅಭಿಮಾನವನ್ನು ಸಾಬೀತುಪಡಿಸಿದೆ.

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

ಕಾರ್ಮಿಕರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ ಈಗ ಕಾರ್ಖಾನೆ ನೀಡುವ ಕಟಾವು ದರದ ಜೊತೆಗೆ ರೈತರಿಗೆ ಎಕರೆಗೆ 3 ರಿಂದ 4 ಸಾವಿರ ಹೆಚ್ಚುವರಿ ಹಣವನ್ನು ಏಜೆಂಟರ್‌ ಮೂಲಕ ಕೇಳುತ್ತಾರೆ. ಬೇಗ ಬರಲು ಚಿಕನ್ ಮಟನ್ ಗೆ ಹಣ ನೀಡಬೇಕು ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈಗ ಎಷ್ಟು ಅಲೆದರೂ ಕಬ್ಬು ಕಡಿಯುವವರು ಸಿಗುತ್ತಿಲ್ಲ.

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

ಗೋಕರ್ಣ ಕೇವಲ ಧಾರ್ಮಿಕ ತಾಣವಾಗಿ ಉಳಿದಿಲ್ಲ. ಇಲ್ಲಿಯ ಬೀಚ್ಗಳಿಂದಾಗಿ ಸಾಕಷ್ಟು ಪ್ರವಾಸೋ ದ್ಯಮ ಬೆಳೆದಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೆ, ಗೋಕರ್ಣ ಕೂಡ ಪ್ರವಾಸಿಗರ ನೆಚ್ಚಿನ ತಾಣ ಎನಿಸಿಕೊಳ್ಳುವುದರಲ್ಲಿ ಯಾವುದೇ ಶಂಕೆಯಿಲ್ಲ. ಆದರೆ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಗೋಕರ್ಣದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Real Estate at Chamundi Hills: ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್‌ ಏಸ್ಟೇಟ್

ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್‌ ಏಸ್ಟೇಟ್

ನಾಡಿನ ಅದಿ ದೇವತೆ, ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟದ ರಕ್ಷಣೆಗಾಗಿ ಮೀಸಲಾದ ವಿಶೇಷ ಸೂಕ್ಷ್ಮ ಪರಿಸರ ವಲಯದ ಸಾವಿರಾರು ಕೋಟ್ಯಾಂತರ ರು. ಮೌಲ್ಯದ ಜಾಗಕ್ಕೆ ಕನ್ನ ಹಾಕಲಾಗುತ್ತಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಭಿವೃದ್ಧಿ ನಿಷೇಧಿತ ವಿಶೇಷ ಸೂಕ್ಷ್ಮ ಪರಿಸರ ವಲಯದಲ್ಲಿ ಸುಮಾರು 80 ಎಕರೆ ಜಾಗವನ್ನು ಬಡಾವಣೆ ಮಾಡಿ ರಿಯಲ್ ಎಸ್ಟೇಟ್ ನಡೆಸಲು (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಎಂಡಿಎ ಒಪ್ಪಿಗೆ ನೀಡಿದೆ.

ಸಿದ್ದೇಶ್ವರ ಸನ್ನಿಧಿಯಲ್ಲಿ ಜಟ್ಟಿಗಳ ಶಕ್ತಿ ಪ್ರದರ್ಶನ

ಸಿದ್ದೇಶ್ವರ ಸನ್ನಿಧಿಯಲ್ಲಿ ಜಟ್ಟಿಗಳ ಶಕ್ತಿ ಪ್ರದರ್ಶನ

ಪೈಗಂಬರ ಮಮದಾಪೂರ ಎಂಬ ಜಟ್ಟಿ 80ಕ್ಕೂ ಹೆಚ್ಚು ಕಿಲೋ ಭಾರದ ಸಂಗ್ರಾಣಿ ಕಲ್ಲನ್ನು ಸರಳವಾಗಿ ಎತ್ತಿ ಸಾಹಸ ಪ್ರದರ್ಶಿಸಿದರೆ, ಶಂಕ್ರಪ್ಪ ಭಾವಿ ತನ್ನ ಮೀಸೆ ಯಿಂದ 75 ಕೆಜಿ ಭಾರತದ ಕಲ್ಲನ್ನು ಎತ್ತಿದ, ಜೈ ಹನುಮಾನ ಪಾದಗಟ್ಟಿ 300 ಕೆಜಿಯಷ್ಟು ಉಸುಕಿನ ಚೀಲವನ್ನು ಹತ್ತಾರು ಬಾರಿ ಎತ್ತಿದೆ, ರಮೇಶ ಪಾಟೀಲ 50 ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಹಲ್ಲಿನಿಂದ ಎತ್ತಿದರು, ಕಾಂತಪ್ಪ ಯರಗಲ್ 75 ಕೆಜಿ ಸಂಗ್ರಾಣಿ ಕಲ್ಲನ್ನು ಗಡ್ಡಕ್ಕೆ ಹಗ್ಗ ಕಟ್ಟಿಕೊಂಡು ಎಳೆದದ್ದು ನೋಡುಗರನ್ನು ರೋಮಾಂಚನವಾಗಿಸಿತು.

Tender Coconut Price Fall: ತೀವ್ರ ಕುಸಿತ ಕಂಡ ಎಳನೀರು ಬೆಲೆ

Tender Coconut Price Fall: ತೀವ್ರ ಕುಸಿತ ಕಂಡ ಎಳನೀರು ಬೆಲೆ

ಬೆಂಗಳೂರಿನಲ್ಲಿ ಎಳನೀರಿನ ಬೆಲೆ ಎರಡು ತಿಂಗಳ ಹಿಂದಿನ ವರೆಗೂ 50-60 ರು. ಇತ್ತು, ಆದರೆ ಈಗ 30-40 ರು.ಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಗೆ ಪೂರೈಕೆ ಕುಸಿದಿದ್ದರಿಂದ ಸ್ಥಳೀಯ ವಾಗಿ ಮಾತ್ರ ಎಳನೀರಿನ ವ್ಯಾಪಾರ-ವಹಿವಾಟು ನಡೆಯುತ್ತಿರುವುದರಿಂದ ರೈತರಿಗೆ ನಷ್ಟವಾಗು ತ್ತಿದ್ದು, ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ.

Bus Stop Issue: ನಿಲುಗಡೆಯಾಗದ ಸಾರಿಗೆ ಬಸ್‌ಗಳಿಗಾಗಿ ಗ್ರಾಮಸ್ಥರ ಪರದಾಟ

ನಿಲುಗಡೆಯಾಗದ ಸಾರಿಗೆ ಬಸ್‌ಗಳಿಗಾಗಿ ಗ್ರಾಮಸ್ಥರ ಪರದಾಟ

ಕಳೆದ ಡಿಸ್ಸೆಂಬರ-2025 ತಿಂಗಳಾಂತ್ಯದಲ್ಲಿ ಚಿಕ್ಕೋಡಿ, ಸಂಕೇಶ್ವರ ಹಾಗೂ ನಿಪ್ಪಾಣಿ ಘಟಕದ ಬಸ್ಸು ಗಳು ಚಿಕಾಲಗುಡ್ಡ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗ್ರಾಮಗಳಿಗೆ ನಿಲ್ಲುಗಡೆ ಮಾಡುವಂತೆ ಚಿಕ್ಕೋಡಿ ಯ ಸಾರಿಗೆ ಅಧಿಕಾರಿಗಳು ಆದೇಶ ಹೊರಡಿಸಿ ತಿಂಗಳು ಕಳೆದರೂ ಇಂದಿಗೂ ಅಗತ್ಯ ವಿರುವ ಸಾರಿಗೆ ಬಸ್ಸುಗಳು ನಿಲ್ಲುಗಡೆಯಾಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವು ದಾಗಿ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದರೂ, ಆ ಸಚಿವಾಲಯಕ್ಕೆ ಅಗತ್ಯವಾದ ಆಡಳಿತಾ ತ್ಮಕ ಶಕ್ತಿ ಇನ್ನೂ ಒದಗಿಲ್ಲ. ಬೆಂಗಳೂರಿನ ಸಚಿವಾಲಯದ ಯಾವುದೋ ಮೂಲೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಕಡತಗಳು ಧೂಳು ಹಿಡಿದು ಮಲಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Karnataka cabinet: ಸಂಕ್ರಾಂತಿ ನಂತರ ಸಂಪುಟ ಸರ್ಜರಿಗೆ ಸಿಎಂ ಸಿದ್ಧತೆ

ಸಂಕ್ರಾಂತಿ ನಂತರ ಸಂಪುಟ ಸರ್ಜರಿಗೆ ಸಿಎಂ ಸಿದ್ಧತೆ

ನಾಯಕತ್ವ ಬದಲಾವಣೆ ಆಗುವುದೋ, ಇಲ್ಲವೋ ನಮಗೆ ಮಾತ್ರ ಸಂಪುಟದಲ್ಲಿ ಅವಕಾಶ ಕೊಡಿಸ ಬೇಕು, ಈ ನಿಟ್ಟಿನಲ್ಲಿ ಕೂಡಲೇ ಪಕ್ಷದ ವರಿಷ್ಠರ ಒಪ್ಪಿಗೆ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಆಕಾಂಕ್ಷಿಗಳು ತೀವ್ರ ಒತ್ತಡ ಹೇರಿದ್ದಾರೆ. ಇದರಿಂದ ಅನಿವಾರ್ಯ ಸ್ಥಿತಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ.

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಬಸವನವಾಗೇವಾಡಿ ಪುರಸಭೆಯಿಂದ ಸಾವಿನ ಗುಂಡಿಗೆ ಸ್ವಾಗತ !

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಜಾವೀಧ್, ಊಟ ತಯಾರಿದೆ ಎಂದು ಖಾನಾವಳಿ ಮುಂಭಾಗದಲ್ಲಿ ನಿಲ್ಲಿಸುವ ಬೋರ್ಡ ಮಾದರಿಯಲ್ಲಿ ಪುರಸಭೆ ಯಿಂದ ಸಾವಿನ ಗುಂಡಿಗೆ ಸ್ವಾಗತ, ನಿಧಾನವಾಗಿ ಚಲಿಸಿ ಎಂಬ ಬರಹದೊಂದಿಗೆ ಬೋರ್ಡ್ ನಿಲ್ಲಿಸಿ ಆಕ್ರೋಶ ಹೊರ ಹಾಕಿದ್ದಾನೆ. ನಂತರ ಮಧ್ಯಾಹ್ನದ ಹೊತ್ತಿಗೆ ಪುರಸಭೆ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ.

ನದಿ ಉಳಿವಿಗಾಗಿ ಸಮಾವೇಶ ಇಂದು

ನದಿ ಉಳಿವಿಗಾಗಿ ಸಮಾವೇಶ ಇಂದು

ಪಶ್ಚಿಮ ಘಟ್ಟಗಳು ಜಗತ್ತಿನ ಎಂಟು ಅತೀ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದು. ಇಲ್ಲಿನ ನದಿಗಳನ್ನು ತಡೆಯುವುದು ಎಂದರೆ ನಮ-- ಕೈಯಾರೆ ನಾವು ವಿನಾಶವನ್ನು ಆಮಂತ್ರಿಸಿದಂತೆ. ಅಭಿವೃದ್ಧಿಯು ಪರಿಸರ ಪೂರಕವಾಗಿರಬೇಕೇ ಹೊರತು ಪರಿಸರ ಮಾರಕವಾಗಬಾರದು.‘ ಎಂದು ಪರಿ ಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Navavrundavana: ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನವು ಇಷ್ಟು ದಿನಗಳ ಕಾಲ ಕುರುಕ್ಷೇತ್ರ ದಂತಿದ್ದದ್ದು ನಿಜ. ಈಗ ಅದಕ್ಕೆ ಶಾಂತಿ ಲಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಈ ಶಾಂತಿ ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಸ್ತುತ ನಡೆದಿರುವ ಉತ್ತರಾದಿ ಮಠ ಮತ್ತು ರಾಯರ ಮಠಗಳ ನಡುವಿನ ಒಪ್ಪಂದವಷ್ಟೇ ಸಾಕಾಗುವುದಿಲ್ಲ.

Loading...