ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ಬೆಳೆಗಾರರಿಗೆ ಶ್ರೀಗಂಧದ ರಕ್ಷಣೆ ಚಿಂತೆ

ಬೆಳೆಗಾರರಿಗೆ ಶ್ರೀಗಂಧದ ರಕ್ಷಣೆ ಚಿಂತೆ

ಹತ್ತಾರು ವರ್ಷಗಳ ಕಾಲ ಜೋಪಾನ ಮಾಡಿ ಬೆಳೆಸಿರುವ ಶ್ರೀಗಂಧ ಮರಗಳನ್ನು ಕದಿಯುವ ಕಳ್ಳರು ಮುಂದಾಗಿದ್ದಾರೆ. ಇದರಿಂದ ಬೆಳೆದು ನಿಂತ ಮರಗಳ ರಕ್ಷಣೆಯ ಜಿಲ್ಲೆಯ ಶ್ರೀಗಂಧ ಬೆಳೆಗಾರರಿಗೆ ತಲೆ ನೋವಾಗಿದೆ. ಶ್ರೀಗಂಧದಿಂದ ಲಾಭಗಳಿಸಬಹುದಾ ಎಂಬ ಆತಂಕದಲ್ಲೇ ಜಿಲ್ಲೆಯ ನೂರಾರು ರೈತರು ದಶಕದ ಹಿಂದೆಯೇ ಸಾಲ ಮಾಡಿ, ಶ್ರೀಗಂಧ ಮರಗಳನ್ನು ನಾಟಿ ಮಾಡಿದ್ದಾರೆ. ೮ ರಿಂದ ೧೦ ವರ್ಷಗಳ ಕಾಲ ಅವುಗಳನ್ನು ಮಗುವಿನಂತೆ ಜೋಪಾನ ಮಾಡಿದ್ದಾರೆ.

ಯರಗಟ್ಟಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಬಾರದ ಕಚೇರಿಗಳು

ಯರಗಟ್ಟಿ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಬಾರದ ಕಚೇರಿಗಳು

ಎರಡು ದಶಕಗಳ ಹೋರಾಟದ ಫಲವಾಗಿ 2018ರಲ್ಲಿ ಸವದತ್ತಿ ತಾಲೂಕಿನಿಂದ ಪ್ರತ್ಯೇಕಗೊಳಿಸಿ ಯರಗಟ್ಟಿ ಹೊಸ ತಾಲೂಕು ಎಂದು ಸರಕಾರ ಘೋಷಿಸಿತ್ತು. ಆದರೆ, ಇಲ್ಲಿಯವರೆಗೂ ಯರಗಟ್ಟಿ ಪಟ್ಟಣದಲ್ಲಿ ಯಾವುದೇ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಈಗಲೂ ಸರಕಾರದ ಎಲ್ಲ ಇಲಾಖೆಗಳ ದಾಖಲೆಗಳಲ್ಲಿ ಸವದತ್ತಿ ತಾಲೂಕು ಎಂದೇ ಉಲ್ಲೇಖವಿದೆ.

ಉದ್ಯೋಗ ಮೇಳ ಅಕ್ರಮ: ಸಚಿವರ ಜಾಣ ಮೌನ

ಉದ್ಯೋಗ ಮೇಳ ಅಕ್ರಮ: ಸಚಿವರ ಜಾಣ ಮೌನ

ಇಷ್ಟಾದರೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕಳೆದೊಂದು ವರ್ಷದಿಂದ ಇಲಾಖೆಯ ಉದ್ಯೋಗ ಮತ್ತು ತರಬೇತಿಗೆ ಸಂಬಂಧಿಸಿದಂತೆ ಒಮ್ಮೆ ಯೂ ಸಭೆ ನಡೆಸಿಲ್ಲ, ಅಷ್ಟೇ ಏಕೆ ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆದು ತರಬೇತಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನೂ ಮಾಡಿಲ್ಲ

ಪ್ರವಾಸೋದ್ಯಮಕ್ಕೆ ಎರವಾದ ‌ʼಸಫಾರಿʼ ಬಂದ್

ಪ್ರವಾಸೋದ್ಯಮಕ್ಕೆ ಎರವಾದ ‌ʼಸಫಾರಿʼ ಬಂದ್

ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಸಫಾರಿಯನ್ನು ನಿರ್ಬಂಧಿಸುವ ತೀರ್ಮಾನ ಮಾಡಿತ್ತು. ಇದು ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತಿದೆ ಎನ್ನುವ ಮಾತುಗಳು ಶುರುವಾಗಿದೆ. ಕೆಲ ತಿಂಗಳಿನಿಂದ ಮೈಸೂರು ಭಾಗದಲ್ಲಿ ಜನರ ಮೇಲೆ ಹುಲಿ, ಚಿರತೆ ದಾಳಿಯ ವರದಿಯಾಗುತ್ತಿದೆ.

ನಮ್ಮ ಮೆಟ್ರೋದಲ್ಲಿ ಹೆಚ್ಚುತ್ತಿವೆ ದುರಂತಗಳು

ನಮ್ಮ ಮೆಟ್ರೋದಲ್ಲಿ ಹೆಚ್ಚುತ್ತಿವೆ ದುರಂತಗಳು

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಳಿ ಹಾರುವ ಅಥವಾ ಆಕಸ್ಮಿಕವಾಗಿ ಬೀಳುವವರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಗ್ರಹಿಸಲು ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಿ ದರೂ, ಹಳಿಗೆ ಬೀಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ ಪಿಎಸ್‌ಡಿ ಡೋರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಭಾನುವಾರವೇ ಬೆಳಗಾವಿ ನಗರಕ್ಕೆ ಆಗಮಿಸಿದ್ದಜ ಜಿಲ್ಲಾ ಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಬಂದೆರಗಿದ ಯುದ್ಧೋತ್ಸಾಹ ಬರ

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಬಂದೆರಗಿದ ಯುದ್ಧೋತ್ಸಾಹ ಬರ

ಬೆಳಗಾವಿಯಲ್ಲಿ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಯುದ್ಧ ಸಿದ್ಧತೆ ಯಂತೆ ಸಜ್ಜಾಗಬೇಕಿದ್ದ ಪ್ರತಿಪಕ್ಷ ಬಿಜೆಪಿಯಲ್ಲಿ ಅಷ್ಟೇನೂ ಹೋರಾಟದ ಆಸಕ್ತಿ ಕಾಣುತ್ತಿಲ್ಲ. ಅಷ್ಟೇ ಅಲ್ಲ, ಈ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಸವಾಲು ಹಾಕಬೇಕಿದ್ದ ಬಿಜೆಪಿಯೇ ಕಾಂಗ್ರೆಸ್ ಸವಾಲು ಎದುರಿಸಲು ಹೆದರುವಂತಾಗಿದೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ರಾಜು ಕಾಗೆ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ರಾಜು ಕಾಗೆ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಲಕ್ಷ್ಮಣ ಸವದಿಗೆ ನಿರ್ದೇಶಕ ಸ್ಥಾನ ಕೈತಪ್ಪುವಂತೆ ಮಾಡಿರುವ ಜಾರಕಿಹೊಳಿ ಸಹೋ ದರರು, ಮುಂದೆ ಮಂತ್ರಿ ಸ್ಥಾನ ವಿಚಾರದಲ್ಲಿ ಶಾಸಕ ರಾಜು ಕಾಗೆ ಅಸ್ತ್ರ ಪ್ರಯೋಗಿಸಲು ರಣತಂತ್ರ ಹೆಣೆದಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಪ್ರತಿಭಟನೆಗೆ 50 ಸಂಘಟನೆಗಳು ಸಜ್ಜು: ಕಟ್ಟೆಚ್ಚರ

ಪ್ರತಿಭಟನೆಗೆ 50 ಸಂಘಟನೆಗಳು ಸಜ್ಜು: ಕಟ್ಟೆಚ್ಚರ

ಅಧಿವೇಶನ ಸಂದರ್ಭದಲ್ಲಿ ರೈತರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವ ದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಇನ್ನೂ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ರಾಜ್ಯ ರೈತ ಸಂಘ ಹೋರಾಟಕ್ಕೆ ಕರೆ ನೀಡಿದೆ. ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಜನ ಪ್ರತಿಭಟನೆಗೆ ಆಗಮಿಸು ತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಬಾರಿ ೬ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋ ಜನೆ ಮಾಡಲಾಗುತ್ತಿದೆ.

ಬುರುಡೆ ಪ್ರಕರಣ: ಎಸ್‌ಐಟಿ ಪಾಳೆಯದ ಸ್ಮಶಾನ ಮೌನಕ್ಕೆ ಕಾರಣವೇನು ?

ಬುರುಡೆ ಪ್ರಕರಣ: ಎಸ್‌ಐಟಿ ಪಾಳೆಯದ ಸ್ಮಶಾನ ಮೌನಕ್ಕೆ ಕಾರಣವೇನು ?

ಧರ್ಮಸ್ಥಳ ಪ್ರಕರಣದಲ್ಲಿ ಉತ್ಖನನ ನಡೆಸಿದಾಗ ೧೭ ಕಡೆಯೂ ಒಂದೇ ಒಂದು ಹೆಣ್ಣಿನ ಬುರುಡೆ ಸಿಗದೇ ಇದ್ದಾಗ ಇಲ್ಲೇನೋ ಷಡ್ಯಂತ್ರ ಇದೆ ಎನ್ನುವ ಬಲವಾದ ಸಂಶಯ ಮೂಡಿತ್ತು. ತನಿಖಾಧಿ ಕಾರಿಗಳು ಚಿನ್ನಯ್ಯನ ಬೆಂಡೆತ್ತಿದಾಗ ಆತನೇ ಇಡೀ ಪ್ರಕರಣವನ್ನು ಹೆಣೆದಿರುವುದು, ಇದರ ಹಿಂದಿರುವ ‘ಗ್ಯಾಂಗ್’ನ ಮಂದಿಯ ಹೆಸರನ್ನೂ ಬಾಯಿ ಬಿಟ್ಟ

ತುಮಕೂರು ಇಬ್ಭಾಗ ಮಾಡಲು ಪಟ್ಟು

ತುಮಕೂರು ಇಬ್ಭಾಗ ಮಾಡಲು ಪಟ್ಟು

ಕಲ್ಪವೃಕ್ಷ ಸೀಮೆಯ ಹತ್ತು ತಾಲೂಕುಗಳನ್ನು ಹೊಂದಿರುವ ಬೃಹತ್ತಾದ ತುಮಕೂರು ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಇಬ್ಬಾಗ ಮಾಡಿ ಎರಡು ಜಿಲ್ಲೆ ಯಾಗಿಸಬೇಕು ಎನ್ನುವುದು ಹಳೇ ಬೇಡಿಕೆ. ಆದರೆ ಯಾವ ತಾಲೂಕು ಕೇಂದ್ರವನ್ನು ಹೊಸ ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಗೊಂದಲ ಮಾತ್ರ ಬಗೆಹರಿದಿಲ್ಲ.

ʼಬುರುಡೆʼ ಷಡ್ಯಂತ್ರ ಆರೋಪಿಗಳ ವಿಚಾರಣೆಯೇ ಇಲ್ಲ !

ʼಬುರುಡೆʼ ಷಡ್ಯಂತ್ರ ಆರೋಪಿಗಳ ವಿಚಾರಣೆಯೇ ಇಲ್ಲ !

ಧರ್ಮಸ್ಥಳ ಪರಿಸರದಲ್ಲಿ ಯುವತಿಯರ ಅತ್ಯಾಚಾರಗೈದು ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ದೂರು ನೀಡಿದ್ದ ಪ್ರಕರಣದಲ್ಲಿ, ದೂರುದಾರರೇ ಸುಳ್ಳು ಮಾಹಿತಿ ನೀಡಿದ್ದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ದೂರು ದಾಖಲಾಗಿದ್ದರೂ, ಆರೋಪಿಗಳ ವಿಚಾರಣೆ ಮಾತ್ರ ನಡೆಯುತ್ತಿಲ್ಲ.

ನುಗ್ಗೆಕಾಯಿ ಕೆ.ಜಿ ಗೆ 500 ರು.

ನುಗ್ಗೆಕಾಯಿ ಕೆ.ಜಿ ಗೆ 500 ರು.

ಹವಾಮಾನ ವೈಪರೀತ್ಯ ಅಂದರೆ ಚಳಿ, ಮಳೆ, ಗಾಳಿ, ಚಂಡಮಾರುತ ಹೀಗೆ ನಾನಾ ಕಾರಣಗಳಿಂದ ತೋಟಗಾರಿಕೆ ಬೆಳೆಗಳಿಗೆ ಇಳುವರಿ ಕುಂಠಿತ ಆಗುತ್ತಿರುವುದರಿಂದ ರೈತರಿಗೆ ಸಕಾಲಕ್ಕೆ ಬೆಳೆ ಬಾರದೆ ನಿವ್ವಳ ಲಾಭ ಇಲ್ಲದಂತಾಗಿದೆ. ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದರೂ ಆದರೆ ಬೆಳೆಯೇ ಕೈಕೊಟ್ಟಿದೆ.

ಗಗನಕ್ಕೇರಿದ ಟೊಮೆಟೋ ಬೆಲೆ

ಗಗನಕ್ಕೇರಿದ ಟೊಮೆಟೋ ಬೆಲೆ

ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ ಆಗಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ಶೇ, 50 ರಷ್ಟು ಕುಸಿತವಾಗಿದೆ ಎಂದು ಟೊಮ್ಯಾಟೋ ವರ್ತಕರು ಹೇಳುತ್ತಾರೆ.

ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ

ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ

ಸಾಮಾನ್ಯ ಜನರಿಗೆ ಎಂದು ಕೈಗೆಟುಕುವ ಬೆಲೆಯಲ್ಲಿ ಸಿಗುವ ವಸ್ತು ಎಂದರೆ ಅದು ಮೊಟ್ಟೆ ಯೊಂದೇ. ಹೆಚ್ಚು ಎಂದರೆ ಮೊಟ್ಟೆ ಬೆಲೆ 6 ರಿಂದ 6.50 ರೂ ಇರುತ್ತೆ. ಈ ಕಾರಣದಿಂದಲೇ ನೂರಾರು ರೂಪಾಯಿ ಕೊಟ್ಟು ಮಾಂಸ ಖರೀದಿ ಮಾಡುವ ಬದಲು ಹಲವರು ಮೊಟ್ಟೆ ಖರೀದಿ ಮಾಡುತ್ತಾರೆ.

Karnataka Congress: ಕೈ ನಾಯಕರ ಜಾಣಮೌನ, ಬಣ ರಾಜಕಾರಣ ಉಲ್ಬಣ

ಕೈ ನಾಯಕರ ಜಾಣಮೌನ, ಬಣ ರಾಜಕಾರಣ ಉಲ್ಬಣ

ನಾಯಕತ್ವ ಗೊಂದಲಕ್ಕೆ ಪಕ್ಷ ವರಿಷ್ಠರು ಹಿಂದೆಯೇ ತೆರೆ ಎಳೆಯಬೇಕಿತ್ತು. ನಾಯಕತ್ವ ವಿಚಾರ ದಲ್ಲಿ ನಿಜಕ್ಕೂ ಮಾತುಕತೆ ಆಗಿಯೇ ಇಲ್ಲವೇ ಎನ್ನುವುದನ್ನು ಹೇಳಬೇಕಿತ್ತು, ಈ ವಿಚಾರ ಚರ್ಚೆಗೆ ಬಾರದಂತೆ ಮಾಡಬೇಕಿತ್ತು. ಆದರೆ ವರಿಷ್ಠರು ಗರಿಷ್ಠ ನಿರ್ಲಕ್ಷ್ಯ ಮಾಡಿದ್ದ ರಿಂದ ಈಗ ಕನಿಷ್ಠ ಎನ್ನುವ ಸಂದೇಶ ನೀಡಿದೆ.

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ !

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ !

ರಾಜ್ಯ ಕಾಂಗ್ರೆಸ್ ರಾಜಕಾರಣ ಸದ್ಯ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾ ರಚನೆಯೋ ಇಲ್ಲವೇ ಸದ್ಯಕ್ಕೆ ಮುಂದೂಡಿಕೆಯೇ ಎನ್ನುವ ಚರ್ಚೆಗೆ ಉತ್ತರಿಸಲಾಗದ ಸ್ಥಿತಿ ಯಲ್ಲಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿ ಪ್ರವಾಸ ಕೈಗೊಳ್ಳ ಲಿದ್ದು, ಮುಖ್ಯಮಂತ್ರಿ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

‌ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

ಜಲಮಂಡಳಿಯ ಈ ರೊಬೋಟ್ ತಂತ್ರಜ್ಞಾನದಲ್ಲಿ ಆಟಿಕೆ ಕಾರಿನ ಗ್ರಾತದ ರೋಬೋಟ್‌ ನ್ನು ಪೈಪಿನ ಒಳಕಳುಹಿಸಿ ಮೇಲಿನಿಂದ ನಿಂತು ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಕಾರ್ಮಿ ಕರು ಹೋಗಲು ಕಷ್ಟಕರವಾಗಿರುವ ಪೈಪಿನಲ್ಲಿಯೂ ಸರಾಗವಾಗಿ ಈ ರೋಬೋಟ್‌ನ್ನು ಕಳುಹಿಸಬಹುದು. ಈ ರೋಬೋಟ್‌ನಲ್ಲಿ ಎಚ್‌ಡಿ ವಿಡಿಯೊ ಸಂಗ್ರಹಿಸುವ ಕ್ಯಾಮೆರಾ ಇರುವು ದರಿಂದ ಪೈಪಿನ ಒಳಭಾಗದ ಸ್ಪಷ್ಟ ಚಿತ್ರಣವನ್ನು ನೀಡಲಿದೆ.

Bihar Election ground report by Raghav Sharma Nidle: ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಬಿಹಾರದಲ್ಲಿ ಈ ಸಲ ಮತ ಪ್ರಮಾಣ ಶೇ.66ರಷ್ಟು ದಾಖಲಾದ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ, ಬಿಜೆಪಿ-ಜೆಡಿಯು-ಎಲ್‌ಜೆಪಿ- ಆರ್‌ಎಲ್ಎಂ-ಎಚ್‌ಎಎಂ ಒಳಗೊಂಡ ಬಲಿಷ್ಠ ಎನ್ ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಹಲವು ಇತಿಹಾಸ, ದಾಖಲೆ ಗಳ ಸೃಷ್ಟಿಗೂ ಈ ಚುನಾವಣೆ ನಾಂದಿ ಹಾಡಿದೆ.

ನಡೆಯದು ನವೆಂಬರ್ ಕ್ರಾಂತಿ, ಸದ್ಯಕ್ಕೇನಿದ್ದರೂ ಶಾಂತಿ ಜಪ

ನಡೆಯದು ನವೆಂಬರ್ ಕ್ರಾಂತಿ, ಸದ್ಯಕ್ಕೇನಿದ್ದರೂ ಶಾಂತಿ ಜಪ

ನವೆಂಬರ್ ೧೪ರ ವರೆಗೂ ಬಿಹಾರ ಚುನಾವಣೆ ಗುಂಗಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ನಂತರದಲ್ಲೂ ರಾಜ್ಯ ಕಾಂಗ್ರೆಸ್ ಸರಕಾರದ ವಿಚಾರಕ್ಕೆ ತಲೆ ಹಾಕುವ ಚಿಂತನೆಯಲ್ಲಿಲ್ಲ. ಇದರ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಬಹುತೇಕ ನವೆಂಬರ್ ಪ್ರವಾಸದಲ್ಲಿರು ತ್ತಾರೆ. ಆದ ಕಾರಣ ಅಂತ್ಯದವರೆಗೂ ವಿದೇಶ ರಾಜ್ಯ ಕಾಂಗ್ರೆಸ್‌ನಲ್ಲಾಗಲಿ, ಕಾಂಗ್ರೆಸ್ ಸರಕಾರದಲ್ಲಾಗಲಿ ಭಾರೀ ಬದಲಾವಣೆಗಳು ನಡೆಯುತ್ತವೆ.

Bihar Election ground report by Raghav Sharma Nidle: ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು

ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು

ಶರಾಬ್ ಬಂದ್ ಮಾಡಿ ಏನು ಪ್ರಯೋಜನ. ಇಲ್ಲಿ ಲಿಕ್ಕರ್ ಹೋಮ್ ಡೆಲಿವರಿ ಆಗುತ್ತದೆ. ನಿಮಗೆ ಬೇಕಿದ್ದರೆ ಈಗ ತಂದುಕೊಡುತ್ತೇನೆ ಎಂದು ನನಗೂ ಕೆಲವರು ಆಫರ್ ಮಾಡಿದರು. ನಾನು ಬೇಡ ಎಂದು ನಯವಾಗಿ ತಿರಸ್ಕರಿಸಿದೆ. ನಾವು 150 ರು. ಮದ್ಯವನ್ನು 500 ರು. ಕೊಟ್ಟು ಖರೀದಿ ಮಾಡಬೇಕು. ಇಲ್ಲಿ ಮದ್ಯ ನಿಷೇಧ ತೆಗೆಯಬೇಕು, ನಮ್ಮ ಕಷ್ಟಕ್ಕೂ ಸ್ಪಂದಿಸಬೇಕು ಎನ್ನುವುದು ಮದ್ಯಪ್ರಿಯರ ಡಿಮ್ಯಾಂಡ್. ಹಾಗಂತ, ಮಹಿಳಾಪರ ನಿಲುವಿನ ಸಿಎಂ ನಿತೀಶ್ ಕುಮಾರ್ ಇದಕ್ಕೆ ತಲೆಕೆಡಿಸಿ ಕೊಂಡಂತಿಲ್ಲ.

Bihar Election ground report by Raghav Sharma Nidle: ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಬಿಹಾರದ ಗಯಾದಿಂದ ಅತ್ರಿ ವಿಧಾನಸಭೆ ವ್ಯಾಪ್ತಿಯ ಗೆಹ್ಲೋರ್ ಇತಿಹಾಸ ಪ್ರಸಿದ್ಧ ಸ್ಥಳ. ಈ ಹಳ್ಳಿ ವಿಶ್ವದ ಗಮನ ಸೆಳೆದಿದ್ದು ಬಿಹಾರದ ಪರ್ವತ ಪುರುಷ ದಶರಥ ಮಾಂಜಿ ಕಾರಣದಿಂದ. ಬರೀ ಸುತ್ತಿಗೆ ಮತ್ತು ಉಳಿ ಬಳಸಿ ೨೨ ವರ್ಷಗಳ ಕಾಲ ಗೆಹ್ಲೋರ್‌ನ ಬೃಹತ್ ಬೆಟ್ಟವನ್ನು ಏಕಾಂಗಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ಪರ್ವತ ಪುರುಷ ಆತ.

B‌ihar Election ground report by Raghav Sharma Nidle: ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್

ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್

ನೀರು, ರಸ್ತೆ, ಶಿಕ್ಷಣ, ಉದ್ಯೋಗ, ವಲಸೆಗೆ ಕಡಿವಾಣ, ಆರೋಗ್ಯ ಇವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಅದನ್ನು ನಾವು ಪಡೆಯಲೇಬೇಕು ಎಂಬ ಜಾಗೃತ ಮಾನಸಿಕತೆಯನ್ನು ಮುಖ್ಯವಾಗಿ ಬಿಹಾರದ ಯುವಕರಲ್ಲಿ ಬಿಟ್ಟಿರುವುದು ಪ್ರಶಾಂತ್ ಕಿಶೋರ್ ಸಾಧನೆ. ಜಾತಿಗಳ ಸಂಕೋಲೆಯಿಂದ ಹೊರಬಂದು ಯೋಚಿಸಬೇಕು ಹಾಗೂ ನಮ್ಮ ಮಕ್ಕಳ ಭದ್ರ ಭವಿಷ್ಯಕ್ಕಾಗಿ ಬದಲಾವಣೆಗೆ ತೆರೆದುಕೊಳ್ಳಬೇಕು ಎಂಬ ಚಿಂತನೆ-ಚರ್ಚೆಗಳು ಬಿಹಾರ ಜನರ ಮಧ್ಯೆ ನಡೆದಿರುವುದು ಹೊಸ ಬೆಳವಣಿಗೆ.

Bihar Election ground report by Raghav Sharma Nidle: ಬಿಹಾರ ಚುನಾವಣಾ ಸಮರಕಣದಲ್ಲಿ ಜಾತಿಗಣಿತದ ತಕಧಿಮಿತ

ಬಿಹಾರ ಚುನಾವಣಾ ಸಮರಕಣದಲ್ಲಿ ಜಾತಿಗಣಿತದ ತಕಧಿಮಿತ

ಬಿಹಾರದಲ್ಲಿ ಈಗಲೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ ಮತ್ತು ಅದನ್ನು ಅಳಿಸಿ ಹಾಕುವುದು ಅಷ್ಟೊಂದು ಸುಲಭವೂ ಅಲ್ಲ. ರಾಜ್ಯದ ಮೇಲ್ವರ್ಗದ ರಜಪೂತರು, ಭೂಮಿ ಹಾರ್, ಬ್ರಾಹ್ಮಣ, ಕಾಯಸ್ಥರು ಮತ್ತು ಇತರೆ ಹಿಂದುಳಿದ ವರ್ಗದ ಯಾದವರನ್ನು (ರಾಜಕೀಯ ಪ್ರಾಬಲ್ಯ ಹೊಂದಿದ ಮತ್ತೊಂದು ಜಾತಿ) ಪರಸ್ಪರ ದ್ವೇಷ ಇರುವುದನ್ನು ರಾಜ್ಯದ ಹಲವೆಡೆ ಕಾಣಬಹುದು.

Loading...