ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಬೆಂಗಳೂರು ಜಲಮಂಡಳಿ ಈಗಾಗಲೇ ಕಾವೇರಿ ಐದನೇ ಹಂತವನ್ನು ಅನುಷ್ಠಾನಗೊಳಿಸಿದ್ದರೂ, ನಿರೀ ಕ್ಷಿತ ಪ್ರಮಾಣದಲ್ಲಿ ಸಂಪರ್ಕ ಪಡೆಯಲು ಗೃಹಬಳಕೆದಾರರು ಮುಂದೆ ಬಂದಿಲ್ಲ. ಆದ್ದರಿಂದ ಇದೀಗ ಬೆಂಗಳೂರು ಜಲಮಂಡಳಿ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು ನೂತನ ಕಾವೇರಿ ನೀರಿನ ಸಂಪರ್ಕ ಪಡೆಯಲು ನೀಡಬೇಕಿರುವ ಡೆಪಾಸಿಟ್ ಹಣವನ್ನು ಆರಂಭಿಕ ಹಂತದಲ್ಲಿ ಶೇ.20ರಷ್ಟು ಪಾವತಿಸಿ, ಇನ್ನುಳಿದ ವರ್ಷದ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಮೂರು ಬಾರಿಯ ವಿಫಲತೆಯ ಬಳಿಕ, ಅಂತಿಮ ಪ್ರಯತ್ನದಲ್ಲಿ ಗೆಲುವು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಸಿಕ್ಕಿರುವ ಈ ಯಶಸ್ಸು ನೆಮ್ಮದಿ ಎನಿಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ ಯುಪಿಎಸ್‌ಸಿಯ ಟಾಪ್ 25ರೊಳಗೆ ಬಂದಿರುವುದಕ್ಕೆ ಖುಷಿ‌ ಯಿದೆ ಎಂದು ಯುಪಿಎಸ್‌ಸಿ ರ‍್ಯಾಂಕ್‌ನಲ್ಲಿ ಕರ್ನಾಟಕಕ್ಕೆ ಮೊದಲ ಹಾಗೂ ದೇಶದಲ್ಲಿ 24ನೇ ರ‍್ಯಾಂಕ್ ಪಡೆದಿ ರುವ ರಂಗಮಂಜು ಹೇಳಿದ್ದಾರೆ.

Chikkaballapur News: ಕನ್ನಡ ಭವನ ಲೋಕಾರ್ಪಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಒಲಿದು ಬರದ ಶುಭ ಮುಹೂರ್ತ

ಮೊದಲ ಬಾರಿ ಇಲಾಖೆ ಸಚಿವರ ನಿರೀಕ್ಷೆಯಲ್ಲಿ ಮುಂದೂಡಿಕೆ

ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಛಾಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ

ಕೊನೆಯ ಭಾಗದ ಭತ್ತ, ನೀರು ಹೋಗೇತೆ ಎತ್ತ ?

ಕೊನೆಯ ಭಾಗದ ಭತ್ತ, ನೀರು ಹೋಗೇತೆ ಎತ್ತ ?

ಈ ವರ್ಷ ಜಿಲ್ಲೆಯಲ್ಲಿ ಸುಮಾರು 52 ಸಾವಿರ ಹೆಕ್ಟೇರ್ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಇನ್ನೂ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಕ್ಕೆ ನೀರು ಹರಿದಿಲ್ಲ. ಅಂತಹ ಗದ್ದೆ ಪ್ರದೇಶ ಬಿಕೋ ಎನ್ನುತ್ತಿದೆ. ಭತ್ತದ ನಾಟಿಯನ್ನೇ ನಂಬಿದ್ದ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರ ಪರಿಸ್ಥಿತಿ ಆತಂಕದಲ್ಲಿದೆ. ಹಾಗಾಗಿ, ರೈತರ ಜತೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತಿತರ ಸಂಘಟನೆ ಗಳು ಪ್ರತಿಭಟನೆ ನಡೆಸಿವೆ.

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

ಬಿಸಿಲಿನ ತಾಪಕ್ಕೆ ಹೆದರಿ ವಯಸ್ಕರೇ ಹೊರಬಾರದ ಸ್ಥಿತಿ ಜಿಲ್ಲೆಯಲ್ಲಿ ಸದ್ಯಕ್ಕಿದ್ದು, ಬೆಳಗ್ಗೆ 7ಕ್ಕೆ ನೆತ್ತಿ ಸುಡುವ ಬಿಸಿಲು, ಸಂಜೆ 6 ಗಂಟೆವರೆಗೂ ಸೂರ್ಯನ ತಾಪಮಾನ ಕಡಿಮೆಯಾಗಿರುವುದಿಲ್ಲ. ಇದರ ನಡುವೆ ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಫ್ಯಾನ್ ಗಾಳಿಯೂ ಇಲ್ಲದೇ ಜನ ತತ್ತರಿಸಿ ಜೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ತಂಪು ಪಾನೀಯ ಮಾರಾಟ ವ್ಯಾಪಾರ ಜೋರಾಗಿದೆ

ಬಿಎಂಸಿಯಲ್ಲಿ ಪ್ರಭಾರಿ ಡೀನ್‌ ಅಕ್ರಮದ್ದೇ ಭಾರೀ ಆಟ !

ಬಿಎಂಸಿಯಲ್ಲಿ ಪ್ರಭಾರಿ ಡೀನ್‌ ಅಕ್ರಮದ್ದೇ ಭಾರೀ ಆಟ !

ಹೊಸ ನಿರ್ದೇಶಕರ ನೇಮಕ ಮಾಡುವ ಸಂಬಂಧ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿ ದ್ದರೂ ಸರಕಾರ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಲು ಉತ್ಸಾಹ ತೋರಿಸುತ್ತಿಲ್ಲ. ಹೀಗಾಗಿ ನಿರ್ದೇಶಕರ ಹುದ್ದೆ ಆಕಾಂಕ್ಷಿಗಳು ಮತ್ತು ಬಿಎಂಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರೋಧ ಹೋರಾಟ ನಡೆಸುತ್ತಿರುವ ವೈದ್ಯರು, ಪ್ರೊಫೆಸರ್‌ಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!

ವಾಡಿಕೆಗಿಂತ ಮುಂಗಾರು ಜೋರು

ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು

ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್‌ನಲ್ಲಿ ಮುಂಗಾರು ಮಳೆ ಆರಂಭ ವಾಗುತ್ತದೆ ಎನ್ನಲಾಗಿದೆ. ವಾಡಿಕೆಗಿಂತ ಕೊಂಚ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, ಸುಮಾರು ಶೇ.105 ರಷ್ಟು ಮಳೆಯಾಗಲಿದೆ. ಈ ಬಾರಿಯ ಮುಂಗಾರು ಮಾರುತಗಳು, ಮೇ ಕೊನೆಯ ವಾರದಲ್ಲಿ ದಕ್ಷಿಣದ ಕೇರಳ ಪ್ರವೇಶಿಸಿ, ಸೆಪ್ಟೆಂಬರ್‌ವರೆಗೂ ಮಳೆಯಾಗಲಿದೆ ಎನ್ನಲಾಗುತ್ತಿದೆ.

Caste Census: ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

ವಾಸ್ತವದಲ್ಲಿ ಜಾತಿಗಣತಿ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡಿದರೆ ಈಗಿರುವ ಮೀಸಲು ಪ್ರಮಾಣ ಶೇ.85 ಮೀರುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವುದು ದೂರದ ಮಾತು. ಅದರಲ್ಲೂ ಇದನ್ನು ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸದ್ಯಕ್ಕೆ ಕನಸಿನ ಮಾತು. ಈ ನಿಟ್ಟಿನಲ್ಲಿ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ವಿಫಲ ಯತ್ನ ನಡೆಸಿವೆ

ಚಿನ್ನ ಎಗರಿಸಿದ ಇನ್ಸ್‌ ಪೆಕ್ಟರ್‌ ವಿರುದ್ದ ತನಿಖೆಗೆ ಆಗ್ರಹ !

ಆರೋಪ ರುಜುವಾತು ಹೊತ್ತಲ್ಲಿ ತನಿಖಾಧಿಕಾರಿ ಬದಲಾವಣೆ

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಮಾಡಿದ ಸಾಧನೆಗೆ ಬಾಲಕೃಷ್ಣ ನಾಯಕ್‌ಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೇ ಅವರನ್ನು ವರ್ಗಾಯಿಸುವಂತೆ ಅಲ್ಲಿನ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್‌ಗೆ ದೂರು ನೀಡಿದ್ದರು

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

ದೇಶಪ್ರೇಮ, ಬಿಜೆಪಿ ಸಂಬಂಧಿತ ಮಾಹಿತಿಗಳನ್ನು ವಿನಯ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುತ್ತಿದ್ದರು. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅನೇಕ ವಾಟ್ಸಪ್ ಗ್ರೂಪ್ ಗಳಂತೆಯೇ ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಪ್ ಗ್ರೂಪ್ ಕಾರ್ಯಪ್ರವೃತ್ತ ವಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಬಳಗಕ್ಕೆ ಸೇರ್ಪಡೆಯಾಗಿದ್ದ ವಿನಯ್ ನನ್ನು ಆ ಬಳಗದ ಇತರರು ಅಡ್ಮಿನ್ ಮಾಡಿದ್ದರು. ಆದರೆ, ಅಡ್ಮಿನ್ ಆದ ಕೇವಲ 5 ದಿನಗಳಲ್ಲಿಯೇ ವಿನಯ್ ಪಾಲಿಗೆ ಆಘಾತ ಕಾದಿತ್ತು.

ಭ್ರಷ್ಟರಿಗೆ ಪ್ರಾಮಾಣಿಕ ಅಧಿಕಾರಿಗಳೇ ಟಾರ್ಗೆಟ್‌, ಮಂಗಳೂರಿನಲ್ಲಿ ಹೆಚ್ಚುತ್ತಿದೆ ಭ್ರಷ್ಟಾಚಾರಿಗಳ ಲಾಬಿ

ಭ್ರಷ್ಟಾಚಾರ- ವಾಮಾಚಾರ ಅಬ್ಬರ

ಮಂಗಳೂರಿನಲ್ಲಿ ಪ್ರಾಮಾಣಿಕರ ಮೇಲೆ ವಾಮಾಚಾರ ಮಾಡುವ ಭ್ರಷ್ಟಾ ಚಾರಿಗಳು ಹೆಚ್ಚತೊಡಗಿ ದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿ ಮೀರಿದ್ದು ಮುಡಾ ಕಮಿಷನರ್ ಅವರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕಿಳಿ ದಿದ್ದಾರೆ. ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್‌ ಐಆರ್ ದಾಖಲಾಗಿದೆ.

ಜಿಲ್ಲೆಯಲ್ಲಿಲ್ಲ ವಾಣಿಜ್ಯ ಬೆಳೆಗಳ ಕಾಪಾಡುವ ಸರಕಾರಿ ಶೈತ್ಯಾಗಾರ

ಬೆಲೆಯಿಳಿಕೆಯಿಂದ ಪಾರಾಗಲು ರೈತರ ಪರದಾಟ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಯನ್ನು ರೈತರು ಸುಮಾರು ೪ ಸಾವಿರ ಹೆಕ್ಟೇರ್‌ ನಲ್ಲಿ ಬೆಳೆಯಲಾಗಿದೆ.ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಆಲೂಗಡ್ಡೆಗೆ ಬೆಂಗಳೂರು ಸೇರಿದಂತೆ ಆಂಧ್ರ, ಮಹಾರಾಷ್ಟ್ರ ,ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಈ ಬಾರಿ ಎಲ್ಲೆಡೆ ಉತ್ತಮ ಬೆಳೆಯಾಗಿರುವ ಕಾರಣ ರಾಜ್ಯದ ಆಲೂಗಡ್ಡೆಗೆ ಬೇಡಿಕೆ ಇಲ್ಲವಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

BJP Karnataka: ಬಿಜೆಪಿಯ ಅತೃಪ್ತರಿಗೆ ಅತಂತ್ರದ ಆತಂಕ

ಬಿಜೆಪಿಯ ಅತೃಪ್ತರಿಗೆ ಅತಂತ್ರದ ಆತಂಕ

ಸುದೀರ್ಘ ಕಾಲದ ಪಕ್ಷದೊಳಗಿನ ಈಗ ಅತೃಪ್ತಿ ಹೋರಾಟದ ಹಿಂದಿನ ರೂವಾರಿಗಳ ತೆರೆಮರೆ ಯ ಆರ್ಭಟ ಕೂಡ ಸದ್ದಡಗಿದ್ದು, ಅವರಲ್ಲೂ ಆತಂಕ ಶುರುವಾಗಿದೆ. ಅಂದಹಾಗೆ ಯತ್ನಾಳ್‌ಗೆ ಸಂಬಂಧಿಸಿದ ಬೆಳವಣಿಗೆಗೆ ನೈಜ ಕಾರಣವೇನು ಎನ್ನುವ ಚರ್ಚೆ ತೀವ್ರವಾಗಿದೆ. ಉಚ್ಚಾಟನೆಗೆ ನಿಜಕ್ಕೂ ಆರೋಪ, ಪ್ರತ್ಯಾರೋಪಗಳ ಹುಚ್ಚು ಆಟ ಕಾರಣವೋ ಅಥವಾ ಮೆಚ್ಚುವಂತೆ ಕಾಣುತ್ತಿದ್ದ ಬಿಚ್ಚು ಮಾತುಗಳು ಕಾರಣವೋ ಎನ್ನುವುದು ಈಗ ಅತೃಪ್ತರರಿಗೆ ಆರ್ಥವೇ ಆಗು ತ್ತಿಲ್ಲ ಎನ್ನಲಾಗಿದೆ.

ರಸ್ತೆ ತೆರಿಗೆ ಕಟ್ಟಲು ವರ್ಷದವರೆಗೆ ಅವಕಾಶವಿದ್ದರೂ ದಂಡಾಸ್ತ್ರ ಪ್ರಯೋಗ

ನೆರೆ ರಾಜ್ಯದಿಂದ ಕಾರು ತಂದು ಓಡಿಸಿದರೆ ತಪ್ಪೇನು ?

ಬೆಂಗಳೂರಿನಲ್ಲಿ ವಾಸಿಸುವ ಅನೇಕರು ಪಾಂಡಿಚೇರಿಯಲ್ಲಿ ವಾಹನ ಖರೀದಿಸುತ್ತಾರೆ. ಬಳಿಕ ವರ್ಷದೊಳಗೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಆರ್‌ಟಿಒ ಅಧಿಕಾರಿಗಳು, ವರ್ಷದ ಅವಧಿ ಮೀರದಿರುವ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಾಗೂ ಆ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ಕಾರ್ ಮಾಲೀಕರು ಆರೋಪ ಮಾಡು ತ್ತಿದ್ದಾರೆ

Legislature House: ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ರಾಜಧಾನಿ ಬೆಂಗಳೂರಿನ ಭದ್ರಕೋಟೆಯಂತಿರುವ, ಶಕ್ತಿಸೌಧ ಹಾಗೂ ರಾಜಭವನಕ್ಕೆ ಹೊಂದಿ ಕೊಂಡಿರುವ ಶಾಸಕರ ಭವನದಲ್ಲಿ ಶಾಸಕರ ಕೋಣೆಗಳಿಗೆ ಆಧುನಿಕ ಸ್ಮಾರ್ಟ್ ಲಾಕ್, ಲಾಕರ್ ಅಳವಡಿಸಲು ಮುಂದಾಗಿರುವ ವಿಧಾನಸಭಾ ಸಚಿವಾಲಯದ ನಡೆಗೆ ಹಲವರು ಅಚ್ಚರಿ ಯೊಂದಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Ration Shop scam: ಉಳಿಕೆ ಅಕ್ಕಿ ಕೊಡುವಲ್ಲಿ ಕಳ್ಳಾಟ !

ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆಜಿ ಕೊಡುವುದಕ್ಕೆ ಹಿಂಜರಿತ

ಕಳೆದ ತಿಂಗಳಿನಿಂದ (ಫೆಬ್ರವರಿ) ನಗದಿನ ಬದಲಿಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲು ತೀರ್ಮಾ ನಿಸಿತ್ತು. ಆದರೆ ಫೆಬ್ರವರಿಯಲ್ಲಿ ಅಗತ್ಯವಿರುವಷ್ಟು ಅಕ್ಕಿಯ ಕೊರತೆ ಇದ್ದಿದ್ದರಿಂದ ಮಾರ್ಚ್‌ ನಲ್ಲಿ ಬಾಕಿ ಐದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿವ್ಯಕ್ತಿಗೆ ಮಾರ್ಚ್‌ನಲ್ಲಿ ನೀಡ ಬೇಕಿದ್ದ ೧೫ ಕೆ.ಜಿ ಅಕ್ಕಿಯ ಬದಲು ಕೇವಲ 10 ಕೆ.ಜಿ. ನೀಡುತ್ತಿದ್ದಾರೆ

Honey Trap: ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿಟ್ರ್ಯಾಪ್‌ನಲ್ಲಿ ಕಾಂಗ್ರೆಸ್ ಕೈವಾಡವಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ಹೇಳಿಕೆಯಲ್ಲಿರುವ ಅಂಶ ಪಕ್ಷದ ವರಿಷ್ಠರನ್ನುಕಂಗೆಡಿಸಿದೆ. ಇದರಿಂದ ಪಕ್ಷದ ವರಿಷ್ಠರು ಕೆಂಡಾಮಂಡಲವಾಗಿದ್ದು, ಸತತ ಸೋಲು ಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಇದು ಅಪಾ ಯದ ಗಂಟೆಯಂತಾಗಿದೆ. ಈ ಮಧ್ಯೆ, ಈ ಪ್ರಕರಣವನ್ನು ಇಲ್ಲಿಗೇ ಬಿಡಬಾರದು.

ಇದೀಗ ಸರಕು ಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಮೆಟ್ರೋ ಚಿಂತನೆ

ಮೆಟ್ರೋದಲ್ಲಿ ಸರಕು ಸಾಗಾಟ?

ದೆಹಲಿ ಮೆಟ್ರೋದಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅತಿವೇಗವಾಗಿ ವಸ್ತುಗಳನ್ನು ರವಾನಿಸುವ ಜತೆಗೆ ಮೆಟ್ರೋ ಸಂಸ್ಥೆಗಳಿಗೂ ಹೆಚ್ಚುವರಿ ಆದಾಯ ಬರುತ್ತಿದೆ. ಆದ್ದರಿಂದ ದೆಹಲಿ ಮಾದರಿಯನ್ನೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಅಳವಡಿಸುವ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ದ್ದು, ಶೀಘ್ರದಲ್ಲಿಯೇ ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

App for cauvery Water: ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಟ್ಯಾಂಕರ್ ಮಾಫಿ ಯಾದವರು ಭಾರಿ ಶುಲ್ಕವನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಈ ಬಾರಿ ಜಲ ಮಂಡಳಿಯ ವತಿಯಿಂದ ಟ್ಯಾಂಕರ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಪಡೆಯಲು ಆಪ್ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

ಐಪಿಎಲ್ ಟಿಕೆಟ್: ಬೆಂಗ್ಳೂರಲ್ಲಿ ಡಿಮಾಂಡಪ್ಪೋ ಡಿಮಾಂಡ್!

ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭ

ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಆರ್‌ಸಿಬಿ ಬಳಗದ ಆಟಗಾರರ ಆಟವನ್ನು ಮೈದಾನದಲ್ಲಿಯೇ ನೇರ ಬಂದು ಕಣ್ತುಂಬಿಕೊಳ್ಳಬೇಕೆಂಬ ಉತ್ಸಾಹದಲ್ಲಿರುವ ಆರ್‌ಸಿಬಿಯ ಅಭಿಮಾನಿಗಳಿಗೆ ಈ ಸಲದ ಐಪಿಎಲ್ ಟಿಕೆಟ್ ದರ ಕೇಳಿ ಶಾಕ್ ಆಗಿದೆ. ದೇಶದ ಇತರ ಯಾವುದೇ ಏಳು ಫ್ರಾಂಚೈಸಿಯ ಟಿಕೆಟ್ ದರವು ಬೆಂಗಳೂರಿನ ಆರ್‌ಸಿಬಿ ಪಂದ್ಯದ ಅರ್ಧದಷ್ಟಿಲ್ಲ ಎಂಬುದು ಗಮನಾರ್ಹ

Demand for Fish: ಮೀನು, ಮಟನ್‌ ಗೆ ಬೇಡಿಕೆ

ಮೀನು, ಮಟನ್‌ ಗೆ ಬೇಡಿಕೆ

ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನು ಸೇವಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಮೀನಿನ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30 ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದು ಮೊದಲ ಕಾರಣವಾದರೆ, ಮೀನುಗಾರಿಕೆ ಕುಸಿತ ಕಂಡಿರುವುದು ಪ್ರಮುಖ ಇನ್ನೊಂದು ಕಾರಣವಾಗಿದೆ.

KSRTC Bus: ಬಸ್‌ ಹತ್ತಲು ಸಾಲಾಗಿ ಬನ್ನಿ

ಬಸ್‌ ಹತ್ತಲು ಸಾಲಾಗಿ ಬನ್ನಿ

ನೂಕುನುಗ್ಗಲು ತಡೆಗಟ್ಟಲು ಇದೀಗ ಕೆಎಸ್‌ಆರ್‌ಟಿಸಿ ಬಸ್ ಹತ್ತುವುದಕ್ಕೆ ಸರದಿ ಸಾಲು ಗಳನ್ನು ಪರಿಚಯಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೇ ಒಂದು ವೇಳೆ ನೂಕು ನುಗ್ಗಲು ಮಾಡಲು ಯಾರಾದರೂ ಪ್ರಯತ್ನಿಸಿದರೆ, ಕ್ರಮ ವಹಿಸಲು ಅಧಿಕಾರಿಗಳು ತೀರ್ಮಾನಿಸಿ ದ್ದಾರೆ. ಈ ಮೂಲ ಕ ಬಸ್ ನಿಲ್ದಾಣಗಳಲ್ಲಿ ಎದುರಾಗುವ ಹತ್ತಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ