ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ತುರ್ತಾಗಿ ಕಾಮಗಾರಿ ಮುಗಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಿ ಎಂದು ಹೋರಾಟದ ಎಚ್ಚರಿಕೆ ನೀಡಿದ ಮುಖಂಡರು

ನರಕ ಸದೃಶವಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಕಾಂಗಾರಿ ನಡೆಸಿರುವ ಎಂಜಿ.ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ದಟ್ಟಣೆಯಿರುವುದು ಹೆದ್ಧಾರಿ ಕಾಮಗಾರಿ ತುರ್ತಾಗಿ ನಡೆಸಲು ತೊಂದರೆ ಎದುರಾಗಿದೆ. ಸಂಚಾರ ಸಮಸ್ಯೆ ನಿಭಾಯಿಸ ಬೇಕಾದ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ ಎನ್ನುವುದು ನಾಗರೀಕರ ಆರೋಪವಾಗಿದೆ.

ಕಾಂಗ್ರೆಸ್‌ʼಗೆ ಉತ್ತರಾಧಿಕಾರ ತಂದ ತಲೆನೋವು

ಕಾಂಗ್ರೆಸ್‌ʼಗೆ ಉತ್ತರಾಧಿಕಾರ ತಂದ ತಲೆನೋವು

ತಮ್ಮ ಹೇಳಿಕೆ ಈ ಪ್ರಮಾಣದಲ್ಲಿ ಅಲ್ಲೋಲ ಕಲ್ಲೋಲ ಏಳುತ್ತದೆ ಯತೀಂದ್ರ ಅವರೇ ಊಹಿಸಿರ ಲಿಲ್ಲ. ಹೀಗಾಗಿ ಅವರು ಉತ್ತರಾಧಿಕಾರ ಕುರಿತ ತಮ್ಮ ಹೇಳಿಕೆಯನ್ನು ಸಮರ್ಥಿಸು ವಂತೆಯೂ ಇಲ್ಲ. ತಿರುಚ‌ ಲಾಗಿದೆ ಎಂದೂ ಹೇಳಲಾಗುತ್ತಿಲ್ಲ. ಆದ್ದರಿಂದ ಹೊಸ ಹೇಳಿಕೆ ನೀಡುತ್ತಾ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ವರುಣನ ಕಾಟಕ್ಕೆ ಪಟಾಕಿ ಮಾರಾಟ ಠುಸ್‌ !

ವರುಣನ ಕಾಟಕ್ಕೆ ಪಟಾಕಿ ಮಾರಾಟ ಠುಸ್‌ !

ಪ್ರತಿ ಬಾರಿಯೂ ನೂರಾರು ಅಂಗಡಿಗಳು ನಾಯಿ ಕೊಡೆಗಳಂತೆ ತೆರೆದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಪಟಾಕಿ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಕಣ್ಗಾವಲಿನಡಿ ನಿಯಮಗಳನ್ನು ಪಾಲಿಸಿರುವುದನ್ನು ಖಚಿತ ಪಡಿಸಿಕೊಂಡಿದೆ. ಬೆರಳೆಣಿಕೆ ಯಷ್ಟು ಪಟಾಕಿ ಅಂಗಡಿಗಳಿಗೆ(27) ಮಾತ್ರ ಅಧಿಕೃತ ಮಾರಾಟ ಪರವಾನಗಿ ನೀಡಿ ವ್ಯಾಪಾರ ಮಾಡಲು ಅವಕಾಶ ನೀಡಿದೆ.

ಇದೀಗ ಹಸಿರು ಪಟಾಕಿಯದ್ದೇ ಸದ್ದು

ಇದೀಗ ಹಸಿರು ಪಟಾಕಿಯದ್ದೇ ಸದ್ದು

ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ವಾಯು ಮಾಲಿನ್ಯ ಮತ್ತು ಶಬ್ದಮಾಲಿನ್ಯ ವನ್ನು ಉಂಟು ಮಾಡುವ ಪರಿಸರಸ್ನೇಹಿ ಪಟಾಕಿಗಳನ್ನು ‘ಹಸಿರು ಪಟಾಕಿ’ ಎನ್ನುತ್ತೇವೆ. ಈ ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರು ತ್ತವೆ, ಹಾಗೆಯೇ ಅವುಗಳನ್ನು ಸುಟ್ಟಾಗ ಕಡಿಮೆ ಹೊಗೆ ಮತ್ತು ಕಡಿಮೆ ಶಬ್ದ ಹೊರಬರುತ್ತದೆ.

ಅರ್ಧ ಸೆಂಚುರಿ ಹೊಡೆದರೂ ಅಪ್ರಸ್ತುತವಾಗದ ಬೂತಯ್ಯ..!

ಅರ್ಧ ಸೆಂಚುರಿ ಹೊಡೆದರೂ ಅಪ್ರಸ್ತುತವಾಗದ ಬೂತಯ್ಯ..!

ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ವಯ್ಯಾರಿ’ ಎಂಬ ಕಥೆಯನ್ನಾಧರಿಸಿದ, ಸಿದ್ದಲಿಂಗಯ್ಯ ನವರ ನಿದೇರ್ಶನದ ಈ ಚಿತ್ರ ಬಿಡುಗಡೆಯಾಗಿದ್ದು 1974ರ ಫೆಬ್ರವರಿ ೨ರಂದು. ಅಂದರೆ, ಬರೋಬ್ಬರಿ 50 ವರ್ಷಗಳನ್ನು ದಾಟಿದ್ದರೂ ಅಪ್ರಸ್ತುತವಾಗಿಲ್ಲ ಎಂಬುದೇ ಈ ಚಿತ್ರದ ವಿಶೇಷ.

ಪ್ರಥಮ ಶಾಸಕರೂ ಮಂತ್ರಿಯಾಗುವ ಸಾಧ್ಯತೆ, ಹಿರಿಯರಿಗೂ ಆದ್ಯತೆ

ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮನ್ನಣೆ

ಡಿಸೆಂಬರ್ ವೇಳೆಗೆ ನಡೆಯಬಹುದಾದ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ಕೆಲವು ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಒದಗಿಸಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ವರಿಷ್ಠರು ಹೆಚ್ಚು ಹಿರಿಯರಿಗಿಂತ ಯುವ ನಾಯಕರಿಗೆ ಹಾಗೂ ಕೆಲವು ಹೊಸ ಮುಖಗಳಿಗೂ ಅವಕಾಶ ನೀಡುವಂತೆ ಪ್ರಾತಿನಿಧ್ಯ ಕಲ್ಪಿಸಿ ಎನ್ನುವ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿವಾದದ ಲೇಪ: 'ಮದ್ಯ ಮಾಫಿಯಾ'ಗೆ ಪ್ರೋತ್ಸಾಹಿಸಿ ಹರಾಜು ಮೂಲಕ ಹಣ ಸಂಗ್ರಹ!

ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿವಾದದ ಲೇಪ

ಕಂದಿಕೆರೆಯ ಯಲ್ಲಮ್ಮ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದರೂ, ಜೀರ್ಣೋದ್ಧಾರ ಸಮಿತಿ ಸದಸ್ಯರು ಖಾಸಗಿಯಾಗಿ ಸಭೆ ನಡೆಸಿ ಒಂದು ಅಚ್ಚರಿಯ ಮತ್ತು ಕಾನೂನುಬಾಹಿರ ನಿರ್ಧಾರ ಕೈಗೊಂಡಿ ದ್ದಾರೆ. ಊರಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಬಯಸುವವರಿಗೆ 'ನಿರ್ಬಂಧವಿಲ್ಲದ ಹಕ್ಕನ್ನು' ನೀಡುವ ಒಂದು ವಿಶಿಷ್ಟ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯಕ್ಕೆ 40 ಕೋಟಿ ರು. ಪಟಾಕಿ ಆದಾಯ ಠುಸ್

ರಾಜ್ಯಕ್ಕೆ 40 ಕೋಟಿ ರು. ಪಟಾಕಿ ಆದಾಯ ಠುಸ್

ದೀಪಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇವಲ ಐದು ದಿನಗಳಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ವಾರ್ಷಿಕ ಅವಧಿಗೆ ಪಟಾಕಿ ದಾಸ್ತಾನು ಮಾಡುವುದನ್ನು ಕೇವಲ ಏಳೆಂಟು ಬೆರಳೆಣಿಕೆ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಹಬ್ಬದ ಕಾರಣಕ್ಕೆ ಈ ಐದು ದಿನಗಳಿಗೆ ರಾಜ್ಯಾದ್ಯಂತ ಸುಮಾರು ೧೦೦೦ ಮಂದಿಗೆ ಮಾತ್ರ ಮಾರಾಟದ ಅವಕಾಶ ಸಿಕ್ಕಿದೆ.

5,000 ಕಂತುಗಳ ರಸದೌತಣ

5,000 ಕಂತುಗಳ ರಸದೌತಣ

ಇಂದು (ಅಕ್ಟೋಬರ್ ೧೧) ತನ್ನ ೫೦೦೦ನೇ ಕಂತಿನ ಪ್ರಸಾರಕ್ಕೆ ಸಜ್ಜಾಗಿದೆ ‘ಥಟ್ ಅಂತ ಹೇಳಿ’ ತಂಡ. ಈ ಕಾರ್ಯಕ್ರಮದ ಅಧ್ವರ್ಯು ಮತ್ತು ‘ಕ್ವಿಜ್ ಮಾಸ್ಟರ್’ ಆಗಿರುವ ಡಾ. ನಾ.ಸೋಮೇಶ್ವರ ಅವರದ್ದೇ ಪ್ರಶ್ನೆಗಳ ಸಂಶೋಧನೆ, ರಚನೆ ಹಾಗೂ ಪ್ರಸ್ತುತಿ ಕೂಡ. ಇವರು ನಮ್ಮ ಅಂಕಣಕಾರರು ಹೌದು ಎಂಬುದು ‘ವಿಶ್ವವಾಣಿ’ ಪತ್ರಿಕೆಯ ಪಾಲಿಗೆ ಖುಷಿಯ ಸಂಗತಿ.

ಸಂಪುಟಕ್ಕೆ ಸರ್ಜರಿ: ಸಚಿವರೇ ಸಿದ್ಧವಾಗಿರಿ, ಪುನಾರಚನೆಗೆ ಪರ-ವಿರೋಧ, ಮಂತ್ರಿಗಳಿಗೆ ಆತಂಕ

ಪುನಾರಚನೆಗೆ ಪಕ್ಷದಲ್ಲೇ ಪರ-ವಿರೋಧ

ಮುಂಬರುವ ನವೆಂಬರ್‌ಗೆ ಸರಕಾರವು ಎರಡೂವರೆ ವರ್ಷಗಳನ್ನು ಪೂರೈಸಲಿದ್ದು, ಈಗಾಗಲೇ ನಿರ್ಧರಿಸಿದಂತೆ ಸಚಿವ ಸಂಪುಟ ಪುನಾರಚನೆ ಮಾಡಲು ಪಕ್ಷದೊಳಗೆ ಗಂಭೀರ ಚಿಂತನೆ ಶುರುವಾಗಿದೆ. ನಿರೀಕ್ಷೆಯಂತೆ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ವೇಳೆಗೆ ಸಂಪುಟ ಪುನಾರಚನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವ ಸೂಚನೆಗಳು ಪಕ್ಷದ ವರಿಷ್ಠರಿಂದ ಲಭ್ಯವಾಗಿದೆ.

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದ. ಬಳಿಕ ತಿಮರೋಡಿ ನಿವಾಸದಲ್ಲಿ ನಡೆದ ಸ್ಥಳ ಮಹಜರಿನ ವೇಳೆಯೂ ಷಡ್ಯಂತ್ರದಲ್ಲಿ ತಿಮರೋಡಿ ಹಾಗೂ ಮಟ್ಟಣ್ಣನವರ್ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಈವರೆಗೂ ಈ ಇಬ್ಬರ ವಿರುದ್ಧ ಕ್ರಮ ವಹಿಸದೇ ಇರುವುದು ಏಕೆ? ಎನ್ನುವ ಸಂದೇಹ ಜನರಲ್ಲಿ ಮೂಡಿದೆ.

Narendra Parekat Column: ಭಾರತ-ಪಾಕ್ ಸರ್ ಕ್ರೀಕ್ ವಿವಾದ: ಏನಿದು ಸಮಸ್ಯೆ? ಭಾರತ ಕೊಟ್ಟ ಎಚ್ಚರಿಕೆ ಏನು?

ಭಾರತ-ಪಾಕ್ ಸರ್ ಕ್ರೀಕ್ ವಿವಾದ

ಕ್ರೀಕ್ ಎಂಬ ಇಂಗ್ಲೀಷ್ ಪದದ ಅರ್ಥ ಕಡಲ್ಕೊರೆತದಿಂದ ಭೂಮಿಯ ಒಂದು ಭಾಗ ಸಂದಿಯಂತೆ ಆಗಿರುವ ಕೊರಕಲು ಪ್ರದೇಶ ಎಂದರ್ಥ. ಇದೀಗ ಚರ್ಚೆಗೆ ಗ್ರಾಸವಾಗಿರುವ ‘ಸರ್ ಕ್ರೀಕ್’ ಎಂಬುದು ಭಾರತದ ಗುಜರಾತ್ ರಾಜ್ಯದ ಕಛ್ ಪ್ರಾಂತ್ಯದ ಪಶ್ಚಿಮ ತುದಿಯಲ್ಲಿದೆ. ಅಲ್ಲಿನ ಕಛ್ ಪಕ್ಕದಲ್ಲಿ ಅರಬ್ಬೀ ಸಮುದ್ರವಿದ್ದು, ಅದರ ಕಡಲ್ಕೊರೆತದಿಂದ ಕಛ್‌ನ ಪಶ್ಚಿಮ ತಟದಲ್ಲಿ ಕೊರಕಲು ಏರ್ಪ ಟ್ಟಿದ್ದು ಅದೇ ಸರ್ ಕ್ರೀಕ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ.

ವಿರಾಜಪೇಟೆಯಿಂದ ಜಗದಗಲ ಹಾರಿದ ದೇವನಕ್ಕಿ ವೈದ್ಯರ ಪರಿಸರ ಕಾಳಜಿಗೆ 41 ವರ್ಷ !

ವಿರಾಜಪೇಟೆಯಿಂದ ಜಗದಗಲ ಹಾರಿದ ದೇವನಕ್ಕಿ ವೈದ್ಯರ ಪರಿಸರ ಕಾಳಜಿಗೆ 41 ವರ್ಷ !

ವಿರಾಜಪೇಟೆಯಲ್ಲಿ 4 ದಶಕಗಳ ಹಿಂದೆ ತರಂಗ ಎಂಬ ಸಾಂಸ್ಕೃತಿಕ ಸಂಘ ಇತ್ತು. ಈ ಸಮಾನ ಮನಸ್ಕರ ಸಂಘದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಗೆ ಜಿಂಕೆಯ ಚಿತ್ರ ಬಿಡಿಸಿದ್ದೆ. ಇದು ಸಂಘದ ಸದಸ್ಯ ರಿಂದ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೇ ಉಮೇದಿನಲ್ಲಿ ವನ್ಯಜೀವಿಗಳ ಚಿತ್ರ ರೂಪಿಸ ತೊಡಗಿದೆ. ಆರಂಭಿಕ ವರ್ಷ ಜಿಂಕೆ ಚಿತ್ರವಿರುವ 150 ಚಿತ್ರಗಳನ್ನು ರಚಿಸಿದ್ದೆ ಎಂದು ನರಸಿಂಹನ್ ಸ್ಮರಿಸಿಕೊಂಡರು.

Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು

Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು

2005ರಿಂದ ಬಿಹಾರ ಎನ್‌ಡಿಎ ಮುನ್ನಡೆಸುತ್ತಿದ್ದ ನಿತೀಶ್, ಮುಂದೊಂದು ದಿನ ದೇಶದ ಪ್ರಧಾನಿ ಯಾಗಬೇಕೆಂಬ ತಮ್ಮ ಕನಸಿಗೆ ಮೋದಿಯೇ ಪ್ರಮುಖ ಅಡ್ಡಿಯಾಗಬಲ್ಲರು ಎಂಬುದನ್ನು ಮೊದಲೇ ಗ್ರಹಿಸಿದ್ದರು. ಹಾಗಾಗಿಯೇ, ಗುಜರಾತ್ ಗಲಭೆ ಕಾರಣಕ್ಕಾಗಿ ಮೋದಿಯವರನ್ನು ಅಪರಾಧಿ ಎಂದು ಬಿಂಬಿಸುತ್ತಲೇ, ದ್ವೇಷಿಸುತ್ತಿದ್ದ ನಿತೀಶ್, ಬಿಹಾರದಲ್ಲಿ ಕೋಮುವಾದದ ಗಾಳಿ ಸೋಕಲು ಎಂದಿಗೂ ಬಿಡಲಾರೆ 2005ರ ಪೂರ್ವದ ಹೇಳುತ್ತಿದ್ದರು.

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಬೇಕು ಎಂಬುದನ್ನು ಅದರ ಸ್ಥಾಪಕ, ಇಂಡಸ್ಟ್ರಿಯಲಿಸ್ಟ್ ಅಲ್ರೆಡ್ ನೊಬೆಲ್ ತಮ್ಮ 1895ರ ವಿಲ್‌ನಲ್ಲಿ ಬರೆದಿದ್ದರು. ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಪ್ರಸರಣವನ್ನು ನಿರ್ಮೂಲನೆ ಮಾಡುವವರು ಮತ್ತು ಕಡಿಮೆ ಮಾಡುವ ವ್ಯಕ್ತಿಗಳಿಗೆ, ಶಾಂತಿ ಸ್ಥಾಪನೆಗೆ ಯತ್ನಿಸುವವರಿಗೆ ನೀಡಬೇಕು ಎಂದಿದ್ದರು.

ವಜ್ರಕ್ಕೆ ಯುದ್ಧಾಘಾತ, ಬೆಲೆ ಶೇ.50ರಷ್ಟು ಕುಸಿತ

ವಜ್ರಕ್ಕೆ ಯುದ್ಧಾಘಾತ, ಬೆಲೆ ಶೇ.50ರಷ್ಟು ಕುಸಿತ

ಕೆಲವು ತಿಂಗಳ ಹಿಂದೆ 0-3 ಸೆನ್ಸ್ ವಜ್ರದ ಬೆಲೆ 80 ಸಾವಿರ ರೂ.ವರೆಗೂ ಇತ್ತು. ಈಗ ಅದರ ಬೆಲೆ ಕೇವಲ 40 ಸಾವಿರ ರೂ.ಗೆ ಇಳಿದಿದೆ. ಅದರಲ್ಲೂ 50 ಸೆನ್ಸ್ ಅಳತೆಯ ವಜ್ರದ ಬೆಲೆ ಗಣನೀಯವಾಗಿ ಕಡಿಮೆ ಯಾಗಿದೆ. ಆದರೆ ವಜ್ರಕ್ಕೆ ಸವಾಲು ಎಸೆಯುವಂತೆ ಚಿನ್ನದ ಧಾರಣೆ ಏರುತ್ತಲೇ ಇದೆ. ಕೆಲವೇ ತಿಂಗಳ ಹಿಂದೆ 10 ಗ್ರಾಮಿಗೆ 70 ಸಾವಿರ ರೂ.ಗೆ ಸಿಗುತ್ತಿದ್ದ ಚಿನ್ನ ಈಗ 1.25 ಲಕ್ಷ ರು. ದಾಟಿದೆ.

ರೇಷ್ಮೆ ನಿಗಮದಲ್ಲಿ ರೇಷ್ಮೆ ಸೀರೆಗೆ ಬರ

ರೇಷ್ಮೆ ನಿಗಮದಲ್ಲಿ ರೇಷ್ಮೆ ಸೀರೆಗೆ ಬರ

ಮೈಸೂರು ರಾಜಮನೆತನದ ಅವಶ್ಯಕತೆಗಳನ್ನು ಮತ್ತು ಅಲಂಕಾರಿಕ ಬಟ್ಟೆಗಳನ್ನು ಸಿದ್ಧಪಡಿಸಲು ಅಂದಿನ ಪ್ರಗತಿಪರ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಎಸ್ ಐಸಿ ಸಂಸ್ಥೆ ಸ್ಥಾಪಿಸಿದ್ದರು. ಈಗ 100 ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ದೇಶದ ಅತ್ಯುತ್ತಮ ರೇಷ್ಮೆ ಉದ್ಯಮ ಸಂಸ್ಥೆ. ಸಂಸ್ಥೆ ರೇಷ್ಮೆ ಸೀರೆಗಳು, ಶರ್ಟ್‌ ಗಳು, ಕುರ್ತಾಗಳು, ಸಿಲ್ಕ್ ಧೋತಿಗಳನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಮಗ್ಗಗಳನ್ನು ಹಾಗೂ 14‌ ಮಾರಾಟ ಮಳಿಗೆಗಳನ್ನು ಕಾರ್ಯ ನಿರ್ವಹಿಸುತ್ತಿವೆ.

Narendra Parekat Column: ಭಾರತದ ವನಿತೆಯರಲ್ಲೂ ಗೆಲ್ಲುವ ಛಲ

ಭಾರತದ ವನಿತೆಯರಲ್ಲೂ ಗೆಲ್ಲುವ ಛಲ

ಭಾರತವು ಆತಿಥ್ಯ ವಹಿಸಿದ್ದ ಎರಡನೇ ಟೂರ್ನಿ 1978ರಲ್ಲಿ ನಡೆಯಿತು. ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಅನ್ನು ಮಣಿಸಿ ತನ್ನ ಹಿಂದಿನ ವಿಶ್ವಕಪ್‌ನ ಸೇಡನ್ನು ತೀರಿಸಿ ಕೊಂಡಿತು. 1982ರಲ್ಲಿ ಅತಿಥೇಯ ನ್ಯೂಜಿಲೆಂಡ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು 2ನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದನ್ನಾ ಗಿಸಿತು.

ನಾಡಗೀತೆಗೆ ಬೌದ್ಧಪದ ಜೋಡಿಸಿ

ನಾಡಗೀತೆಗೆ ಬೌದ್ಧಪದ ಜೋಡಿಸಿ

ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ, ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿ ದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ

Surendra Pai Column: ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ನೆಲದ ಮೇಲೆ ಬಿದ್ದ ಆಹಾರವನ್ನು ಐದು ಸೆಕೆಂಡುಗಳೊಳಗೆ ತೆಗೆದುಕೊಂಡರೆ ಅದು ಕಲುಷಿತ ವಾಗುವು ದಿಲ್ಲ ಎಂಬ ವೈಜ್ಞಾನಿಕ ಲೋಕದಲ್ಲಿನ ಅಪರೂಪದ ವಿಷಯದ ಕುರಿತಾಗಿ ತಮಾಷೆಯ ಆವಿಷ್ಕಾರ ಮಾಡಿದ್ದೀರಾ? ಹಾಗಾದರೆ ನೀವು ಇಗ್ ನೊಬೆಲ್ ಪ್ರಶಸ್ತಿಗೆ ಪ್ರಯತ್ನಿಸಬಹುದು.

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳೇ ತಲೆನೋವು

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳೇ ತಲೆನೋವು

ಬಿಎಂಟಿಸಿ ನಿಗಮ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷ ದಲ್ಲಿ ಬಿಎಂಟಿಸಿ ಬಸ್‌ಗಳಿಂದ ಆಗಿರುವ ಬಹುತೇಕ ಅಪಘಾತ ಅಥವಾ ಅನಾಹುತದ ಹಿಂದೆ ಈ ಎಲೆಕ್ಟ್ರಿಕ್ ಬಸ್‌ಗಳಿವೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 2024-25ರಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಂದ 29 ಅಪಘಾತಗಳಾಗಿದ್ದು, 11 ಮಂದಿಯ ಜೀವ ಹೋಗಿದೆ.

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಸರಕಾರದಿಂದ ಬರುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದು ಮುಂದೆ 16ನೇ ಹಣಕಾಸು ಆಯೋಗದ ಅನುದಾನ ಸಿಗುವುದೂ ಮರೀಚಿಕೆಯಾಗಿದೆ.

Loading...