ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

Zero development, Bogus bills: ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲೆ ಸೀಮಿತ ವಾಗಿದ್ದು, ಯಾವುದೇ ಕೆಲಸ ಮಾಡದೆಯೇ ನೂರಕ್ಕೆ ನೂರರಷ್ಟು ಹಣ ಪಾವತಿ ಮಾಡಿ ಕೊಳ್ಳುವ ಮೂಲಕ ಕೋಟ್ಯಂತರ ರು. ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ. ಸರಕಾರಿ ಅನುದಾನದ ದುರ್ಬಳಕೆ ಮಿತಿ ಮೀರಿದ್ದು, ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಶಿಕ್ಷಣ ಮತ್ತು ವಸತಿ ನಿಲಯಗಳವರೆಗೆ ಭ್ರಷ್ಟಾಚಾರದ ಜಾಲ ವ್ಯಾಪಿಸಿದೆ.

Water Crisis: 411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

ಉತ್ತರಕನ್ನಡ ಜಿಲ್ಲೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜಿಲ್ಲೆಯ ಹಲವು ತಾಲೂಕು ಗಳಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ ತಲೆದೋರುತ್ತಿದೆ. ಜಿಲ್ಲೆಯ ಸುಮಾರು 411 ಹಳ್ಳಿಗಳು ಕುಡಿಯುವ ನೀರಿನ ತುಟಾಗ್ರತೆ ಎದುರಿಸುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.

Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ.

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ನವೀನ ಕಾಶಿನಾಥ ನಿಜಗುಲಿ ಅವರು ಶಾಸಕ ಅಶೋಕ ಪಟ್ಟಣ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು. ಸಿಬ್ಬಂದಿಗಳ ಸಹಕಾರದೊಂದಿಗೆ ಬಡ ರೋಗಿಗಳಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ.

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿ ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿದಂತಿಲ್ಲ. ಪ್ರಸ್ತುತ ಚುನಾವಣೆ ರಾಜಕೀಯ ಮುಖಂಡ ರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಎಸ್‌ಎಸ್ ಕುಟುಂಬ ಅನುಕಂಪದ ಆಧಾರ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಬಯಸಿದೆ.

‌ರಸ್ತೆಯಲ್ಲಿ ತರಕಾರಿ ಮಾರಾಟ, ಟ್ರಾಫಿಕ್‌ ಜಾಮ್

ರಸ್ತೆಯಲ್ಲಿ ತರಕಾರಿ ಮಾರಾಟ, ಟ್ರಾಫಿಕ್‌ ಜಾಮ್

ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಸಾಗರ ಪಟ್ಟಣದಲ್ಲಿ ವಾಹನ ಸಂಚಾರ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ ಪ್ರಸ್ತುತ ವಾಹನ ದಟ್ಟಣೆಯ ಸಾಲಿನಲ್ಲಿ ಶಿವಮೊಗ್ಗದ ನಂತರದ ಸ್ಥಾನದಲ್ಲಿದೆ ಎನ್ನಬಹುದು. ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತವಾದ ಸಾರಿಗೆ ನಿಯಮ ಅನುಸರಿಸುವುದಕ್ಕೆ ಪೂರಕ ಸೌಲಭ್ಯ ಕೂಡ ಈಗಾಗಲೆ ಅಳವಡಿಸಲಾಗಿದೆ ಕೆಲ ವರ್ಷಗಳಿಂದಲೇ ಅಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇದೆ.

ಅಪಘಾತಗಳಿಂದ ಜನರಲ್ಲಿ ಆತಂಕ ಸೃಷ್ಟಿ

ಅಪಘಾತಗಳಿಂದ ಜನರಲ್ಲಿ ಆತಂಕ ಸೃಷ್ಟಿ

ಜಿಲ್ಲೆಯ ರಸ್ತೆ ಅಪಘಾತಗಳನ್ನು ವಿಶ್ಲೇಷಿಸಿದರೆ ಎರಡು ಮುಖ್ಯ ಅಂಶಗಳು ಎದ್ದು ಕಾಣುತ್ತವೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹದಗೆಟ್ಟ ರಸ್ತೆ ಗಳು, ಅರ್ಧಕ್ಕೆ ನಿಂತ ಸೇತುವೆಗಳು, ಸೂಚನಾ ಫಲಕಗಳ ಕೊರತೆ ಮತ್ತು ಅವೈಜ್ಞಾನಿಕ ತಿರುವು ಗಳು ವಾಹನ ಸವಾರರಿಗೆ ಮೃತ್ಯುಪಾಶವಾಗಿವೆ.

Huge demand for Pots: ನಗರದಲ್ಲಿ ಮಡಿಕೆಗಳಿಗೆ ಭಾರಿ ಬೇಡಿಕೆ

ನಗರದಲ್ಲಿ ಮಡಿಕೆಗಳಿಗೆ ಭಾರಿ ಬೇಡಿಕೆ

ಜಿಲ್ಲೆಯಲ್ಲಿ ಬೆಳಗಾದರೆ ಭಾಸ್ಕರನ ಅಬ್ಬರ ದಿನೇದಿನೇ ಹೆಚ್ಚುತ್ತಿದ್ದು, ಮಾರ್ಚ್ ಮಧ್ಯ ಭಾಗ ದಲ್ಲೇ ಉಷ್ಣಾಂಶವು ದಾಖಲೆ ಮಟ್ಟಕ್ಕೆ ಏರುತ್ತಿದೆ. ಸದ್ಯ ಜಿಲ್ಲೆಯಲ್ಲಿ ತಾಪಮಾನವು ಗರಿಷ್ಠ ಮಟ್ಟದಲ್ಲಿದ್ದು, ಬಿಸಿಲಿನ ಪ್ರಖರತೆಗೆ ಜನ ಹೈರಾಣಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಪು ನೀರಿಗಾಗಿ ಮಣ್ಣಿನ ಮಡಕೆಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿ ಬೀಳುತ್ತಿದ್ದಾರೆ.

Greater Mysore: ಗ್ರೇಟರ್‌ ಮೈಸೂರಿಗಾಗಿ ಜನತೆ ಕಾತರ

Greater Mysore: ಗ್ರೇಟರ್‌ ಮೈಸೂರಿಗಾಗಿ ಜನತೆ ಕಾತರ

ಗ್ರೇಟರ್ ಮೈಸೂರು ಹೆಸರಿನಲ್ಲಿ ನಗರ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಗೆ ನೀಲನಕ್ಷೆ, ಮೂಲಸೌಕರ್ಯ, ಅಂದಾಜು ವೆಚ್ಚ ಸೇರಿದಂತೆ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಿದ ಬಳಿಕವೇ ಮೈಸೂರು ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೆ ಏರಿಸಿ ಗ್ರೇಡ್-1 ಮಹಾನಗರ ಪಾಲಿಕೆಯಾಗಿ ರೂಪಿಸಲು ರಾಜ್ಯ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.

Job fair: 26 ಸಾವಿರ ಜನರಿಗೆ ಉದ್ಯೋಗ ಮೇಳ ಆಸರೆ

Job fair: 26 ಸಾವಿರ ಜನರಿಗೆ ಉದ್ಯೋಗ ಮೇಳ ಆಸರೆ

ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷ ದಿಂದ ಆಯೋಜಿಸುತ್ತಿರುವ ಉದ್ಯೋಗ ಮೇಳದಲ್ಲಿ ಈವರೆಗೆ 3,31,303 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, 1,55,134 ಅಭ್ಯರ್ಥಿಗಳು ಹಾಜರಿದ್ದಾರೆ. ಇವರಲ್ಲಿ 54701 ಮಂದಿ ಶಾರ್ಟ್‌ಲಿಸ್ಟ್ ಆಗಿದ್ದರೆ, ಅದರಲ್ಲಿ 26,657 ಮಂದಿಗೆ ಉದ್ಯೋಗ ಲಭಿಸಿದೆ.

ಜಾಗೃತ ಗ್ರಾಹಕನೇ ಮಹಾರಾಜ

ಜಾಗೃತ ಗ್ರಾಹಕನೇ ಮಹಾರಾಜ

‘ಗ್ರಾಹಕರು ನಮ್ಮ ಆರ್ಥಿಕತೆಯ ಅತಿದೊಡ್ಡ ಗುಂಪು, ಆದರೆ ಅವರ ಧ್ವನಿ ಮಾತ್ರ ಕೇಳುತ್ತಿಲ್ಲ‘ ಎಂದು ಅವರು ಪ್ರತಿಪಾದಿಸಿದರು. ಈ ಐತಿಹಾಸಿಕ ಭಾಷಣದ ನೆನಪಿಗಾಗಿ 1983ರಿಂದ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಭಾರತದ "ಗ್ರಾಹಕ ಸಂರಕ್ಷಣಾ ಕಾಯ್ದೆ"ಯ ಪ್ರಕಾರ ಪ್ರತಿಯೊಬ್ಬ ಗ್ರಾಹಕನಿಗೂ ಈ ಕೆಳಗಿನ ಹಕ್ಕುಗಳಿವೆ.

ಚರಂಡಿ ನೀರಿನಿಂದ ಆವೃತವಾಗಿರುವ ರಸ್ತೆ, ಗ್ರಾಮಸ್ಥರ ಆಕ್ರೋಶ

ಚರಂಡಿ ನೀರಿನಿಂದ ಆವೃತವಾಗಿರುವ ರಸ್ತೆ, ಗ್ರಾಮಸ್ಥರ ಆಕ್ರೋಶ

ಇಲ್ಲಿನ ಅಂಗನವಾಡಿ ಮಕ್ಕಳ ಜೀವನಾಡಿಯಂತಿರುವ ಈ ರಸ್ತೆಯಲ್ಲಿಯೇ ನಡೆದಾಡಿಕೊಂಡು ಹೋಗಬೇಕು ಕಾಲು ಜಾರಿ ಅನೇಕ ಮಕ್ಕಳು ಈ ರಸ್ತೆಯಲ್ಲಿ ಬಿಳುತ್ತಿದ್ದಾರೆ ಅಲ್ಲದೇ ಈ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಭಯಾನಕ ರೋಗ-ರುಜಿನಗಳ ಬೀಕ್ಷಿತಿಯಲ್ಲಿ ಜನ ತತ್ತರಿಸಿ ಹೋಗಿದ್ದು ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಜಾ ಸಾಕ್ಷಿಯಾಗಿದೆ

ದೋಸೆ, ಪೂರಿ, ಗೋಬಿ ಮಂಚೂರಿಗೆ ಬಿದ್ದಿದೆ ಬ್ರೇಕ್

ದೋಸೆ, ಪೂರಿ, ಗೋಬಿ ಮಂಚೂರಿಗೆ ಬಿದ್ದಿದೆ ಬ್ರೇಕ್

ಜಿಲ್ಲೆಯಾದ್ಯಂತ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಪೂರೈಕೆ ಸಮಸ್ಯೆಯಿಂದ ಹೋಟೆಲ್ಗಳಲ್ಲಿ ಆರ್ಡರ್‌ಮಾಡಿದ ಕೂಡಲೇ ಸಿದ್ದಪಡಿಸುವಂತ ದೋಸೆ, ಪೂರಿ, ಗೋಬಿ ಮಂಚೂರಿಯಂತ ತಿಂಡಿಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಿಲಿಂಡರ್‌ಸರಿಯಾಗಿ ಪೂರೈಕೆಯಾಗದ ಹಿನ್ನಲೆ ಪರ್ಯಾಯವಾಗಿ ಸೌದೆ ಒಲೆ ಬಳಕೆಗೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ.

Demand for Firewood: ಸಿಗದ ಸಿಲಿಂಡರ್; ಸೌದೆಗೆ ಹೆಚ್ಚಿದ ಬೇಡಿಕೆ

Demand for Firewood: ಸಿಗದ ಸಿಲಿಂಡರ್; ಸೌದೆಗೆ ಹೆಚ್ಚಿದ ಬೇಡಿಕೆ

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಸಂಖ್ಯೆಯಲ್ಲಿ ಭಾರಿ ಅಭಾವ ಸೃಷ್ಟಿ ಯಾಗಿರುವು ದರಿಂದ ಅನಿವಾರ್ಯವಾಗಿ ಪರ್ಯಾಯ ಮಾರ್ಗದತ್ತ ಹೋಟೆಲ್ ಮಾಲೀಕರು ಆಲೋಚಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಿಗೆಯ ಬಳಕೆಯೇ ಸುಲಭ ಆಯ್ಕೆ ಯಾಗಿರುವುದರಿಂದ ಅನೇಕ ಹೋಟೆಲ್ ಮಾಲೀಕರು ಸೌದೆ ಒಲೆಯ ಮೂಲಕ ಆಹಾರ ತಯಾರಿಸುತ್ತಿದ್ದಾರೆ.

POCSO Act: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ ಪೋಕ್ಸೋ ಕೇಸ್

POCSO Act: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ ಪೋಕ್ಸೋ ಕೇಸ್

ಕಳೆದ ಐದು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 16,206 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 2884 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ ಅದು 3209ಕ್ಕೆ ಏರಿಕೆಯಾಗಿದೆ. 2023ರಲ್ಲಿ 3902 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ ಈ ಸಂಖ್ಯೆ 4064ಕ್ಕೆ ತಲುಪಿದೆ. ಇನ್ನು 2025ರ ಜೂನ್ 30ರವರೆಗೆ ಮಾತ್ರವೇ 2147 ಪ್ರಕರಣಗಳು ದಾಖಲಾಗಿರುವುದು ಮಕ್ಕಳ ಸುರಕ್ಷತೆ ಕುರಿತು ಮತ್ತಷ್ಟು ಆತಂಕ ಹುಟ್ಟಿಸಿದೆ.

Sand Mining: ಮರಳು ದಂಧೆ: ಬರಿದಾಗುತ್ತಿದೆ ಕೃಷ್ಣೆಯ ಒಡಲು

Sand Mining: ಮರಳು ದಂಧೆ: ಬರಿದಾಗುತ್ತಿದೆ ಕೃಷ್ಣೆಯ ಒಡಲು

ಕಳೆದ ವರ್ಷ ಸಹ ಬರೋಬ್ಬರಿ 7 ಕೋಟಿ ರು.ಮೌಲ್ಯದ ಅಕ್ರಮ ಮರಳು ವಶಕ್ಕೆ ಪಡೆದಿದ್ದರು. ಜತೆಗೆ 2025ರ ಅಂತ್ಯಕ್ಕೆ 94 ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ, 2026ರ ಆರಂಭದಲ್ಲಿ ಯೇ 22.58 ಕೋಟಿ ಮರಳು ಜಪ್ತಿಯಾಗಿರುವುದು ಕೃಷ್ಣೆ ಒಡಲು ಬಗೆದಿರುವ ಪರಿ ಕುರಿತು ಕಳವಳ ತರಿಸಿದೆ.

Safari: ಬಿಸಿಲ ನಾಡಲ್ಲಿ ಈಗ ʼಜಂಗಲ್ ಸಫಾರಿʼ ಸದ್ದು  !

Safari: ಬಿಸಿಲ ನಾಡಲ್ಲಿ ಈಗ ʼಜಂಗಲ್ ಸಫಾರಿʼ ಸದ್ದು !

ಕಲಬುರಗಿ ಜಿಲ್ಲೆಯ ಪ್ರಕೃತಿ ಪ್ರೇಮಿಗಳ ಗುಪ್ತಗಾಮಿನಿಯಾಗಿದ್ದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಈಗ ಅಧಿಕೃತವಾಗಿ ‘ಜಂಗಲ್ ಸಫಾರಿ’ಗೆ ಚಾಲನೆ ಸಿಕ್ಕಿದ್ದು, ಈ ಭಾಗದ ಪ್ರವಾಸೋ ದ್ಯಮಕ್ಕೆ ಹೊಸ ಆಯಾಮ ದೊರೆತಿದೆ. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುವ ಮೂಲಕ ಚಾರಣಿಗರ ಮತ್ತು ವನ್ಯಜೀವಿ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ, ಹದಗೆಟ್ಟ ಹೆದ್ದಾರಿ

ಅಧಿಕಾರಿಗಳ ನಿರ್ಲಕ್ಷ್ಯ, ಹದಗೆಟ್ಟ ಹೆದ್ದಾರಿ

ಕಳೆದ ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಮಾಡಿದ ಮೇಲೂ ಏನು ಪ್ರಯೋಜನ ವಿಲ್ಲ. ಜನರು ಇಂಡಿ ವಿಜಯಪುರ ರಸ್ತೆ ಸಂಚಾರ ಬೇಡವೇ ಬೇಡ ಎನ್ನುತ್ತಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಸಂಚಾರ ಮಾಡೋಕು ಆಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ನಿತ್ಯ ಅಪಾರ ಸಂಖ್ಯೆಯ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ, ಇನ್ನೂ ಗರ್ಭಿಣಿಯರಿಗೆ, ರೋಗಿಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ ಎಂಬಂತಾಗಿದೆ, ಒಂದು ಕಡೆ ಹಾಳಾದ ರಸ್ತೆ.

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಉತ್ತರ ಕನ್ನಡವೀಗ ಬಿಸಿಲಿಗೆ ತತ್ತರ

ಹಸಿರು ಹೊದಿಕೆಯನ್ನು ಹೊದ್ದುಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ತಾಪಮಾನ ಏರಿಕೆ ಯಾಗಿರುವುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಅಲ್ಲಿನ ಜೀವವೈವಿಧ್ಯಕ್ಕೂ ದೊಡ್ಡ ಹೊಡೆತ ನೀಡಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2ಡಿಸೆ ನಿಂದ ೪ಡಿಸೆ ವರೆಗೆ ಏರಿಕೆಯಾಗಿದೆ.

Cooking oil prices rise: ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ರಾಹಕರಿಗೆ ಬರೆ

ಮಾರುಕಟ್ಟೆ ಮೂಲಗಳ ಪ್ರಕಾರ, ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ಲೀ. ಸಗಟು ದರ 10 ರಿಂದ 12 ರು.ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ರು.15 ಏರಿಕೆಯಾಗಿತ್ತು. ಹಾಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಒಟ್ಟು 25 ರು. ಏರಿಕೆ ಯಾದಂತಾಯಿತು.

Science world: ಜ್ಞಾನಭಾರತಿಯಲ್ಲಿ 'ವಿಜ್ಞಾನಲೋಕ' ಅನಾವರಣ

Science world: ಜ್ಞಾನಭಾರತಿಯಲ್ಲಿ 'ವಿಜ್ಞಾನಲೋಕ' ಅನಾವರಣ

Science for Exploring, Inspiring and Connecting the Society ಎಂಬ ಘೋಷವಾಕ್ಯ ದೊಂದಿಗೆ ನಡೆಯುವ ಈ ವಿಜ್ಞಾನ ಹಬ್ಬವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೈ ಫೋರಮ್ (ಬಿಯುಎಸ್‌ಎಫ್) ಆಯೋಜಿಸಿದ್ದು, ಇದಕ್ಕೆ ಪಿಎಂ ಉಷಾ ಯೋಜನೆಯ ಬೆಂಬಲ ದೊರಕಿದೆ. ‌ಎರಡು ದಿನಗಳ ಕಾಲ ನಡೆಯಲಿರುವ ಈ ವಿಜ್ಞಾನ ಹಬ್ಬವು ವಿಶ್ವವಿದ್ಯಾಲಯದ ಆವರಣವನ್ನು ವಿಜ್ಞಾನ, ನವೀನತೆ ಮತ್ತು ಅನ್ವೇಷಣೆಯ ಉತ್ಸವವಾಗಿ ಪರಿವರ್ತಿಸಲಿದೆ.

Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರಕಾರ ಮೂರು ದಿನದ ಹಿಂದೆ ಗೆಜೆಟ್ ನೋಟಿಷಿ ಕೇಷನ್ ಹೊರಡಿಸಿದೆ. ಇದರಲ್ಲಿ, ಗೃಹ ಬಳಕೆಗೆ ಪ್ರಥಮ ಆದ್ಯತೆ, ಸಾರಿಗೆ, ರಸ ಗೊಬ್ಬರಗಳಂತಹ ವಲಯಗಳನ್ನು ಎರಡನೇ ಆದ್ಯತೆ ನೀಡಿದೆ. ಆದರೆ ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೊನೆಯ ಆದ್ಯತೆ ನೀಡಿದೆ.

Gold found in Lakkundi : ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ಬೆಲೆ ರೂ.8 ಕೋಟಿ

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ಬೆಲೆ ರೂ.8 ಕೋಟಿ

ಎರಡು ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ ಸಕತ್ ಸದ್ದು ಮಾಡಿತ್ತು. ಇಲ್ಲಿ ಪ್ರಜ್ವಲ್ ರಿತ್ತಿ ಅವರ ಮನೆ ನಿರ್ಮಾಣ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿತ್ತು. ಅಂದಿನಿಂದ ಲಕ್ಕುಂಡಿ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹೊರಗೂ ಸಕತ್ ಸೌಂಡ್ ಮಾಡುತ್ತಲೇ ಇದೆ. ಈಗಲೂ ಲಕ್ಕುಂಡಿಗೆ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಲೇ ಇದ್ದಾರೆ.

Vande Bharat: ತೊಗರಿನಾಡಿಗೆ ಜೀವನಾಡಿಯಾದ ವಂದೇ ಭಾರತ್

ತೊಗರಿನಾಡಿಗೆ ಜೀವನಾಡಿಯಾದ ವಂದೇ ಭಾರತ್

ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾದ ಕಲಬುರಗಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ನಡುವಿನ ಕೊಂಡಿಯಾಗಿರುವ ‘ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ತನ್ನ ಯಶಸ್ವಿ ಸೇವೆಯ ಎರಡು ವರ್ಷಗಳನ್ನು ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನ, ವಿಮಾನದಂತಹ ಸೌಲಭ್ಯ ಮತ್ತು ಕರಾರುವಕ್ಕಾದ ಸಮಯ ಪಾಲನೆಯಿಂದಾಗಿ ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಜನರ ನೆಚ್ಚಿನ ಸಾರಿಗೆಯಾಗಿ ಹೊರಹೊಮ್ಮಿದೆ.

Loading...