ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs SRH: 229 ರನ್‌ ಗುರಿ ನೀಡಿಯೂ ಸೋತಿದ್ದಕ್ಕೆ ಕಾರಣ ತಿಳಿಸಿದ ರಿಯಾನ್ ಪರಾಗ್‌!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ರನ್‌ ಹೊಳೆಯೇ ಹರಿಯುತ್ತಿದ್ದು, 200 ರನ್‌ಗಳ ಗುರಿ ಈಗ ಸಾಧಾರಣ ಆಗಿಬಿಟ್ಟಿದೆ. ತಂಡಗಳು ಸುಲಭವಾಗಿ 200+ ರನ್‌ಗಳನ್ನು ಚೇಸ್‌ ಮಾಡುತ್ತಿವೆ. ಅಥದ್ದೇ ಒಂದು ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ರಾಜಸ್ಥಾನ್ ರಾಯಲ್ಸ್‌ ಮಣ್ಣು ಮುಕ್ಕಿತು. ಅಂದಹಾಗೆ ಈ ಹೀನಾಯ ಸೋಲಿಗೆ ಕಾರಣವನ್ನು ಆರ್‌ಆರ್‌ ಕ್ಯಾಪ್ಟನ್‌ ರಿಯಾನ್‌ ಪರಾಗ್‌ ಬಹಿರಂಗ ಪಡಿಸಿದ್ದಾರೆ.

229 ರನ್‌ ಗುರಿ ನೀಡಿಯೂ ಸೋತಿದ್ದಕ್ಕೆ ಕಾರಣ ತಿಳಿಸಿದ ಪರಾಗ್‌!

ಆರ್‌ಆರ್‌ ಕ್ಯಾಪ್ಟನ್‌ ರಿಯಾನ್‌ ಪರಾಗ್‌. -

Vijeth Kumar DN
Vijeth Kumar DN Apr 26, 2026 5:21 PM

ಜೈಪುರ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿರ್‌ ಲೀಗ್‌ ಟೂರ್ನಿಯಲ್ಲಿ ನಡೆದ Rajasthan Royals ಮತ್ತು Sunrisers Hyderabad ನಡುವಿನ ಹೈ-ಸ್ಕೋರಿಂಗ್‌ ಪಂದ್ಯವು ಇತಿಹಾಸದ ಪು ಸೇರಿದೆ. ಶನಿವಾರ ಜೈಪುರದಲ್ಲಿ ನಡೆದ ಈ ಕಾಳಗದಲ್ಲಿ ರಾಜಸ್ಥಾನ್‌ ರಾಯಲ್ಸ್‌ 228 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದರೂ, ಸನ್‌ರೈಸರ್ಸ್‌ ಹೈದರಾಬಾದ್‌ ಅದನ್ನು ಸುಲಭವಾಗಿ ಮೆಟ್ಟಿನಿಂತಿತು.

ಭರ್ಜರಿ ಶತಕ ಸಿಡಿಸಿದ ಯುವ ಪ್ರತಿಭೆ Vaibhav Suryavanshi ಅವರ ಹೋರಾಟವೂ ಕೂಡ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರಾಜಸ್ಥಾನ್‌ ಐದು ವಿಕೆಟ್‌ಗಳ ಅಂತರದ ಸೋಲು ಕಂಡಿತು. ಪಂದ್ಯಾನಂತರ ಈ ಬಗ್ಗೆ ಮಾತನಾಡಿದ ಆರ್‌ಆರ್‌ ನಾಯಕ Riyan Parag ಅಚ್ಚರಿಯ ಸೋಲಿನ ಹಿಂದಿರುವ ಕಾರಣಗಳನ್ನು ವಿವರಿಸಿದರು.

SRH vs RR: 36 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ವೈಭವ್‌ ಸೂರ್ಯವಂಶಿಯ ಸ್ಪೋಟಕ ಆಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್‌ ತಂಡ 6 ವಿಕೆಟ್‌ಗೆ 228 ರನ್‌ಗಳ ಭರ್ಜರಿ ಮೊತ್ತವನ್ನು ಕಲೆಹಾಕಿತು. ಈ ಇನ್ನಿಂಗ್ಸ್‌ಗೆ ಯುವ ಆಟಗಾರ ಸೂರ್ಯವಂಶಿ ಅದ್ಭುತ ಶತಕದ ಮೂಲಕ ಬೆಳಕು ಚೆಲ್ಲಿದರು. ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ ಅವರು ಐಪಿಎಲ್‌ ಇತಿಹಾಸದಲ್ಲೇ ವೇಗದ ಶತಕಗಳಲ್ಲಿ ಒಂದನ್ನು ದಾಖಲಿಸಿದರು. ಅವರ ದೈತ್ಯ ಹೊಡೆತಗಳು ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ರಾಜಸ್ಥಾನ್‌ಗೆ ಬಲವಾದ ವೇದಿಕೆ ಒದಗಿಸಿತು. ಸಮತಟ್ಟಾದ (ಫ್ಲ್ಯಾಟ್‌) ಪಿಚ್‌ನಲ್ಲಿ ಈ ಮೊತ್ತ ಗೆಲುವಿಗೆ ಸಾಕು ಎಂಬ ಭಾವನೆ ಮೂಡಿತ್ತು. ಆದರೆ ಫೀಲ್ಡಿಂಗ್‌ನಲ್ಲಿ ನಡೆದ ತಪ್ಪುಗಳಿಂದ ಪಂದ್ಯ ನಿಧಾನವಾಗಿ ಕೈ ಜಾರಿತು.

RR vs LSG: ಐಪಿಎಲ್‌ನಲ್ಲಿ ಯಾರು ಮಾಡಲಾಗದ ಸಾಧನೆ ಮಾಡಿದ ವೈಭವ್ ಸೂರ್ಯವಂಶಿ

ಸೋಲಿನ ಕಾರಣ ವಿವರಿಸಿದ ಪರಾಗ್‌

ಪಂದ್ಯಾನಂತರ ಮಾತನಾಡಿದ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌, ತಂಡದ ಆಟ ಬಹುತೇಕ ವಿಭಾಗಗಳಲ್ಲಿ ಉತ್ತಮವಾಗಿದ್ದರೂ, ಫೀಲ್ಡಿಂಗ್‌ನಲ್ಲಿ ಅದರಲ್ಲೂ ನಿರ್ಣಾಯಕ ಕ್ಷಣಗಳಲ್ಲಿ ಹಿಡಿತ ಕಳೆದುಕೊಂಡದ್ದು ಸೋಲಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು. ವಿಶೇಷವಾಗಿ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದೊಡ್ಡ ತಪ್ಪು ಎಂದು ಹೇಳಿದರು. "ನಾವು ಎಲ್ಲ ದೃಷ್ಟಿಯಿಂದ ಉತ್ತಮವಾಗಿ ಆಡಿದ್ದೇವೆ. ಆದರೆ ಕೆಲವು ಪ್ರಮುಖ ಕ್ಯಾಚ್‌ಗಳನ್ನು ಬಿಟ್ಟಿದ್ದೇವೆ. ಅಭಿಷೇಕ್‌ ಶರ್ಮಾ ಸೇರಿದಂತೆ ಗುಣಮಟ್ಟದ ಆಟಗಾರರಿಗೆ ಎರಡನೇ ಅವಕಾಶ ನೀಡಿದರೆ ಅವರು ಅದನ್ನು ಬಳಸಿಕೊಳ್ಳುತ್ತಾರೆ. ಅವರು ಅದನ್ನು ಸಂಪೂರ್ಣವಾಗಿ ಬಳಸಿಕೊಂಡರು ಕೂಡ. ನಾವು ಫೀಲ್ಡಿಂಗ್‌ನಲ್ಲಿ ಇನ್ನಷ್ಟು ಉತ್ತಮವಾಗಿರಬಹುದಿತ್ತು," ಎಂದು ಪರಾಗ್‌ ಹೇಳಿದರು.

IPL 2026: ಮಂಡಿರಜ್ಜು ಗಾಯಕ್ಕೆ ತುತ್ತಾದ ವೈಭವ್ ಸೂರ್ಯವಂಶಿ; ರಾಜಸ್ಥಾನ್‌ಗೆ ಆತಂಕ!

ಸನ್‌ರೈಸರ್ಸ್‌ ಹೈದರಾಬಾದ್‌ನ ಹೋರಾಟ

ರಾಜಸ್ಥಾನ್‌ನ ತಪ್ಪುಗಳನ್ನು ಎಸ್‌ಆರ್‌ಎಚ್‌ ತಂಡ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿತು. ಅಭಿಷೇಕ್‌ ಶರ್ಮಾ 57 ರನ್‌ ಗಳಿಸಿ ಎರಡು ಜೀವದಾನಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅವರು Ishan Kishan (74) ಅವರೊಂದಿಗೆ 132 ರನ್‌ಗಳ ಭರ್ಜರಿ ಜೊತೆಯಾಟ ನಿರ್ಮಿಸಿದರು. ಇದು ಪಂದ್ಯವನ್ನು ಹೈದರಾಬಾದ್‌ ಕಡೆಗೆ ತಿರುಗುವಂತೆ ಮಾಡಿತು.

ಇನ್ನೊಂದೆಡೆ, ನಿತೀಶ್‌ ಕುಮಾರ್ ರೆಡ್ಡಿ ಅವರು 14 ರನ್‌ಗಳಲ್ಲಿದ್ದಾಗ ಕ್ಯಾಚ್‌ ಕೈ ತಪ್ಪಿತು. ಬಳಿಕ ಅವರು 36 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಜೊತೆಗೆ ಹೆನ್ರಿಚ್‌ ಕ್ಲಾಸೆನ್‌ 29 ರನ್‌ಗಳ ಸಮಾಧಾನಕರ ಇನ್ನಿಂಗ್ಸ್‌ ಆಡಿದರು. ಈ ಎಲ್ಲಾ ಪ್ರದರ್ಶನಗಳಿಂದ ಹೈದರಾಬಾದ್‌ ತಂಡ ಗುರಿಯನ್ನು ಇನ್ನೂ 9 ಎಸೆತ ಬಾಕಿ ಇರುವಾಗಲೇ ತಲುಪಿತು.

RCB vs RR: ʼಡಿಯರ್ ವೈಭವ್ʼ; ಸೂರ್ಯವಂಶಿಯನ್ನು ಕೊಂಡಾಡಿದ ವಿರಾಟ್‌ ಕೊಹ್ಲಿ

ಎಸ್‌ಆರ್‌ಎಚ್‌ ತಂಡದ ಐತಿಹಾಸಿಕ ಚೇಸ್‌

ಸೂರ್ಯವಂಶಿಯ ವೇಗದ ಶತಕದ ನಡುವೆಯೂ ಹೈದರಾಬಾದ್‌ನ ಟಾಪ್‌ ಆರ್ಡರ್‌ ಆಕ್ರಮಣಕಾರಿ ಆಟವಾಡಿ ಗುರಿಯನ್ನು ಸುಲಭಗೊಳಿಸಿತು. ಈ ಜಯ ಐಪಿಎಲ್‌ ಇತಿಹಾಸದಲ್ಲೇ ನಾಲ್ಕನೇ ಅತಿ ದೊಡ್ಡ ಯಶಸ್ವಿ ರನ್‌ ಚೇಸ್‌ ಆಗಿದೆ. ಒಟ್ಟಿನಲ್ಲಿ, ರಾಜಸ್ಥಾನ್‌ ತಂಡದ ಫೀಲ್ಡಿಂಗ್‌ನಲ್ಲಿನ ಪುನರಾವರ್ತಿತ ತಪ್ಪುಗಳು ಪಂದ್ಯ ಫಲಿತಾಂಶವನ್ನು ತಿರುಗಿಸಿಬಿಟ್ಟವು ಎಂಬುದು ಸ್ಪಷ್ಟವಾಗಿದೆ.