Gautam Adani: ಜಗನ್ನಾಥ ರಥಯಾತ್ರೆಯಲ್ಲಿ ಕುಟುಂಬಸ್ಥರ ಜೊತೆ ಗೌತಮ್ ಅದಾನಿ ಭಾಗಿ; ವಿಡಿಯೋ ನೋಡಿ
ಒಡಿಶಾದ ಪುರಿ ಜಗನ್ನಾಥ ದೇಗುಲದ ಜಾತ್ರೆ ಪ್ರಾರಂಭವಾಗಿದೆ. ದೇಶ ವಿದೇಶಗಳಿಂದ ಜನರು ಜಗನ್ನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. 12 ನೇ ಶತಮಾನದ ಈ ದೇವಾಲಯದಿಂದ ದೇವತೆಗಳು ವರ್ಷಕ್ಕೊಮ್ಮೆ ಜಾತಿ, ಮತ ಮತ್ತು ಧರ್ಮವನ್ನು ಮೀರಿ ಭಕ್ತರೊಂದಿಗೆ ಬೆರೆಯಲು ಬರುತ್ತಾರೆ. ಜುಲೈ 8 ರಂದು ದೇವತೆಗಳು ಮುಖ್ಯ ದೇವಾಲಯಕ್ಕೆ ಮರಳುವುದರೊಂದಿಗೆ ಈ ರಥಯಾತ್ರೆ ಕೊನೆಗೊಳ್ಳುತ್ತದೆ.


ಪುರಿ: ಒಡಿಶಾದ ಪುರಿ ಜಗನ್ನಾಥ ದೇಗುಲದ (Jagannath Rath Yatra) ಜಾತ್ರೆ ಪ್ರಾರಂಭವಾಗಿದೆ. ದೇಶ ವಿದೇಶಗಳಿಂದ ಜನರು ಜಗನ್ನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. 12 ನೇ ಶತಮಾನದ ಈ ದೇವಾಲಯದಿಂದ ದೇವತೆಗಳು ವರ್ಷಕ್ಕೊಮ್ಮೆ ಜಾತಿ, ಮತ ಮತ್ತು ಧರ್ಮವನ್ನು ಮೀರಿ ಭಕ್ತರೊಂದಿಗೆ ಬೆರೆಯಲು ಬರುತ್ತಾರೆ. ಜುಲೈ 8 ರಂದು ದೇವತೆಗಳು ಮುಖ್ಯ ದೇವಾಲಯಕ್ಕೆ ಮರಳುವುದರೊಂದಿಗೆ ಈ ರಥಯಾತ್ರೆ ಕೊನೆಗೊಳ್ಳುತ್ತದೆ. ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ಮತ್ತು ಅವರ ಕುಟುಂಬದ ಸದಸ್ಯರು ಶನಿವಾರ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಗೌತಮ್ ಅದಾನಿ ತಮ್ಮ ಪತ್ನಿ ಪ್ರೀತಿ ಅದಾನಿ ಮತ್ತು ಮಗ ಕರಣ್ ಅದಾನಿ ಅವರೊಂದಿಗೆ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅದಾನಿ ಹಾಗೂ ಅವರ ಕುಟುಂಬ ಪ್ರಸಾದ ತಯಾರಿಕೆಯಲ್ಲಿಯೂ ಭಾಗವಹಿಸಿದ್ದರು. ಒಂಬತ್ತು ದಿನಗಳ ಉತ್ಸವದಲ್ಲಿ ಅದಾನಿ ಗ್ರೂಪ್ ಯಾತ್ರಿಕರು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ. ಅದಾನಿ ಗ್ರುಪ್ ವತಿಯಿಂದ ದೊಡ್ಡ ಪ್ರಮಾಣದ ಊಟ ವಿತರಣೆ, ಕುಡಿಯುವ ನೀರು ಸರಬರಾಜು, ಕಾರ್ಮಿಕರಿಗೆ ಸುರಕ್ಷತಾ ಸಾಧನಗಳು ಮತ್ತು ಸ್ಥಳೀಯ ಸ್ವಯಂಸೇವಕರಿಗೆ ಸಹಾಯ ಮಾಡಲಾಗುತ್ತಿದೆ. ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ತಂಪು ಪಾನೀಯ ಮಳಿಗೆಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರಿಗೆ ಸಹಾಯ ಮಾಡಿದ ಹಾಗೆಯೇ ಜುಲೈ 8ರವರೆಗೂ ವಿಶ್ವಖ್ಯಾತ ಜಗನ್ನಾಥ ರಥಯಾತ್ರೋತ್ಸವದಲ್ಲಿ ವಿವಿಧ ಸೇವೆ ನಡೆಸುತ್ತಿದೆ. ಪುರಿಯ ವಿವಿಧೆಡೆ ಆಹಾರ ಮತ್ತು ಪಾನೀಯದ ಸ್ಟಾಲ್ಗಳನ್ನು ಇಟ್ಟು 40 ಲಕ್ಷ ಉಚಿತ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಿದೆ.
#WATCH | Puri, Odisha: Adani Group Chairman, Gautam Adani, along with his wife Priti Adani, distributes food to people at ISKCON Kitchen Puri
— ANI (@ANI) June 28, 2025
Adani Group has initiated the ‘Prasad Seva’ in Puri Dham and is undertaking a comprehensive 'seva' effort to support both pilgrims and… pic.twitter.com/ov9ytUfwbq
ಆಹಾರ ಮತ್ತು ನೀರಿನ ಜೊತೆಗೆ, ಈ ಗುಂಪು ಪುರಸಭೆಯ ಕಾರ್ಮಿಕರಿಗೆ ಫ್ಲೋರೊಸೆಂಟ್ ನಡುವಂಗಿಗಳನ್ನು, ಸ್ವಯಂಸೇವಕರಿಗೆ ಟಿ-ಶರ್ಟ್ಗಳನ್ನು ಮತ್ತು ಭದ್ರತಾ ಸಿಬ್ಬಂದಿ ಮತ್ತು ಭಕ್ತರಿಗೆ ಜಾಕೆಟ್ಗಳು, ಕ್ಯಾಪ್ಗಳು ಮತ್ತು ಛತ್ರಿಗಳು ಸೇರಿದಂತೆ ಮಳೆನೀರು ಉಡುಪುಗಳನ್ನು ವಿತರಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ನವಿಲುಗರಿಯಲ್ಲಿ ಮೂಡಿಬಂದ ಪುರಿ ಜಗನ್ನಾಥ ಸ್ವಾಮಿ; ಕಲಾವಿದೆಯ ಕೈಚಳಕಕ್ಕೆ ನೆಟ್ಟಿಗರು ಫುಲ್ ಫಿದಾ
ಜ 28 ರಂದು ರಥಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪ ಮತ್ತು ಜನದಟ್ಟಣೆಯಿಂದಾಗಿ ಸುಮಾರು 625 ಜನರು ಅಸ್ವಸ್ಥಗೀಡಾಗಿ ಅನೇಕರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಬರಲು ಆರಂಭಿಸಿದಾಗ ಭಕ್ತರು ಓಡಲು ಪ್ರಾರಂಭಿಸಿದ್ದಾರೆ. ಈ ವೇಳೆ ತಳ್ಳಾಟ ನಡೆದಿದೆ. ಸುಮಾರು 740ಕ್ಕೂ ಅಧಿಕ ಭಕ್ತರು ಕಾಲ್ತುಳಿತಕ್ಕೆ ಸಿಲುಕಿದ್ದಾರೆ. ತಕ್ಷಣವೇ ಅವರನ್ನು ಪುರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ 400ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಲಾಗಿದೆ.