ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಟಾಯ್ಲೆಟ್‌ನಲ್ಲೇ ಕುಳಿತು ಹೈಕೋರ್ಟ್‌ ವಿಚಾರಣೆಗೆ ಹಾಜರು- ಅರೇ...ಇದೆಂಥಾ ವಿಚಿತ್ರ ಘಟನೆ?

ಗುಜರಾತ್ ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ ನಡೆಯುವ ವೇಳೆ ಕಕ್ಷಿದಾರನೊಬ್ಬ ತನ್ನ ಟಾಯ್ಲೆಟ್‌ನಿಂದ ವಿಚಾರಣೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಜೂನ್ 20 ರಂದು ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಅವರ ಪೀಠದ ಮುಂದೆ ನಡೆದಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಟಾಯ್ಲೆಟ್‌ನಿಂದಲೇ ಕೋರ್ಟ್‌ ವಿಚಾರಣೆಗೆ ಹಾಜರು; ಕಿಡಿಗೇಡಿ ಕೃತ್ಯ ವೈರಲ್‌!

Profile pavithra Jun 28, 2025 2:47 PM

ಜೈಪುರ್‌: ಗುಜರಾತ್ ಹೈಕೋರ್ಟ್‌ನಲ್ಲಿ ನಡೆದ ವರ್ಚುವಲ್ ವಿಚಾರಣೆಯ ವೇಳೆ ಕಕ್ಷಿದಾರನೊಬ್ಬ ಶೌಚಾಲಯದಿಂದ ವಿಚಾರಣೆಗೆ ಹಾಜರಾಗುತ್ತಿರುವುದು ಕಂಡುಬಂದಿದೆ. ಈ ಘಟನೆ ಜೂನ್ 20 ರಂದು ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಅವರ ಪೀಠದ ಮುಂದೆ ನಡೆದಿದ್ದು, ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಈ ವಿಡಿಯೊದಲ್ಲಿ 'ಸಮದ್ ಬ್ಯಾಟರಿ' ಎಂಬಾತ ಟಾಯ್ಲೆಟ್‌ನಲ್ಲಿ ಕುಳಿತಿರುವುದು ಸೆರೆಯಾಗಿದೆ. ನಂತರ ಆತ ಹೋಗಿ ಬೇರೆ ಕೋಣೆಯಲ್ಲಿ ಕುಳಿತಿದಿದ್ದಾನೆ.ಈ ಘಟನೆಯು ವರ್ಚುವಲ್ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸೂಕ್ತ ನಡವಳಿಕೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಆ ವ್ಯಕ್ತಿಯು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸುವ ಪ್ರಕರಣದಲ್ಲಿ ಪ್ರತಿವಾದಿಯಾಗಿ ಹಾಜರಿದ್ದನು. ವಾಸ್ತವವಾಗಿ, ಅವನು ಪ್ರಕರಣದ ಮೂಲ ದೂರುದಾರನಾಗಿದ್ದನು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರು ಆ ವ್ಯಕ್ತಿಯ ದುರ್ನಡತೆ ಕಂಡು ಕಿಡಿಕಾರಿದ್ದಾರೆ. ವಕೀಲರಿಗೆ ಮಾತ್ರ ವಿಸಿ ಮಾಡಲು ಅವಕಾಶ ನೀಡಬೇಕು. ಒಬ್ಬ ಕಕ್ಷಿದಾರನ ಈ ನಡವಳಿಕೆ ತಪ್ಪು. ಇಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಒಬ್ಬರು ಬರೆದಿದ್ದಾರೆ.

ವರ್ಚುವಲ್ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಗೌರವಕ್ಕೆ ಧಕ್ಕೆಯಾಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ, ಗುಜರಾತ್ ಹೈಕೋರ್ಟ್ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಮೊಕದ್ದಮೆದಾರನಿಗೆ ದಂಡ ವಿಧಿಸಿತ್ತು. ಆತ ಸಿಗರೇಟ್ ಸೇದುತ್ತಾ ವಿಡಿಯೊ ಮೂಲಕ ಕಾಣಿಸಿಕೊಂಡಿದ್ದ. ಹೀಗಾಗಿ ಗುಜರಾತ್ ಹೈಕೋರ್ಟ್ ಆತನಿಗೆ ರೂ. 50,000 ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ಲೈಫ್ ಜಾಕೆಟ್ ಕದ್ದ ಪ್ರಯಾಣಿಕ; ಆಮೇಲೆ ನಡೆದಿದ್ದೇನು? ವೈರಲ್‌ ವಿಡಿಯೊ ಇಲ್ಲಿದೆ

ಹಾಗೇ ಮಾರ್ಚ್‌ನಲ್ಲಿ ದೆಹಲಿ ನ್ಯಾಯಾಲಯದಲ್ಲಿ ಇದೇ ರೀತಿಯ ಘಟನೆ ನಡೆಯಿತು. ಅಲ್ಲಿ ವಿಡಿಯೋ ಕಾಲ್ ಮೂಲಕ ತನ್ನ ಪ್ರಕರಣದ ಕುರಿತು ವಾದಿಸುವಾಗ ಆತ ಧೂಮಪಾನ ಮಾಡಿದ್ದಾನೆ. ಹಾಗಾಗಿ ದಾವೆ ಹೂಡಿದ್ದ ವ್ಯಕ್ತಿಗೆ ಸಮನ್ಸ್ ಜಾರಿ ಮಾಡಲಾಯಿತು.