Viral News: ಮೋಡದ ಚೂರು ತುಂಡಾಗೇ ಬಿತ್ತಾ? ಭಯಭೀತ ಜನ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕಟ್ಕಾ ಗ್ರಾಮದಲ್ಲಿ ಇತ್ತೀಚೆಗೆ ಮೋಡದ ತುಂಡಿನಂತಹ ವಸ್ತುವೊಂದು ಹೊಲದಲ್ಲಿ ಜಾರಿ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿದೆ. ಆದರೆ ಕೊನೆಗೆ ಅದು ಮೋಡದ ತುಂಡಲ್ಲ, ಹತ್ತಿರದ ನದಿಯಲ್ಲಿ ಹೆಪ್ಪುಗಟ್ಟಿದ ನೊರೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.


ಲಖನೌ : ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕಟ್ಕಾ ಗ್ರಾಮದಲ್ಲಿ ಮೋಡದ ತುಂಡಿನಂತಹ ವಸ್ತುವೊಂದು ಹೊಲದಲ್ಲಿ ಜಾರಿ ಬಿದ್ದ ವಿಚಿತ್ರ ಘಟನೆ ನಡೆದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರಿ ಸಂಚಲನ ಮೂಡಿಸಿದೆ.ಕೊನೆಗೆ ಅದು ಮೋಡದ ತುಂಡಲ್ಲ, ಹತ್ತಿರದ ನದಿಯಲ್ಲಿ ಹೆಪ್ಪುಗಟ್ಟಿದ ನೊರೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಹತ್ತಿಯಂತಹ ವಸ್ತುವೊಂದು ಗಾಳಿಯಲ್ಲಿ ತೇಲುತ್ತಿರುವ ವಿಡಿಯೊ ಸೆರೆಯಾಗಿತ್ತು. ಅದು ನೆಲದ ಮೇಲೆ ಬಿದ್ದ ತಕ್ಷಣ, ಗ್ರಾಮಸ್ಥರು ಕುತೂಹಲದಿಂದ ಅದನ್ನು ನೋಡಲು ಓಡಿದ್ದಾರೆ.ಎಲ್ಲರೂ ಇದು ಆಕಾಶದಿಂದ ಜಾರಿ ಬಿದ್ದ ಮೋಡದ ತುಂಡು ಎಂದು ಶಾಕ್ ಆಗಿದ್ದಾರೆ. ಕೊನೆಗೆ ಅದು ಹತ್ತಿರದ ನದಿಯಲ್ಲಿ ಹೆಪ್ಪುಗಟ್ಟಿದ ನೊರೆ ಎಂಬ ಸತ್ಯ ಬೆಳಕಿಗೆ ಬಂದಿದೆ.
ಈ ವಿಡಿಯೊ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
जे हुन्छ छिमेकी देश भारतमै....
— Gajendra Budhathoki ♿ (@gbudhathoki) June 26, 2025
भारतको गडौली गाउँमा आकासबाट बादलका टुक्राहरू नै झरेछन् । भिडियो हेर्दा एआई जेनेरेडजस्तो पनि देखिएन ।
मौसमविद सर/म्यामहरू यसलाई के भनिन्छ?
के स्वाभाविक हो कि कुनै विशेष परिस्थितिमा हुन्छ?@DHM_Weather @ClimateDhm @BinodClimate @ngamindra1… pic.twitter.com/Tu6SltL1Mo
ಸುತ್ತಮುತ್ತಲಿನ ಕೈಗಾರಿಕಾ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಮಾಲಿನ್ಯಕಾರಕಗಳ ಘನೀಕರಣದಿಂದಾಗಿ ಫೋಮ್ ತರಹದ ವಸ್ತುವು ಹೆಚ್ಚಾಗಿ ರೂಪುಗೊಂಡಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಗಾಳಿ ಮತ್ತು ಗಾಳಿಯಲ್ಲಿನ ತೇವಾಂಶದಿಂದ ಸಾಗಿಸಲ್ಪಟ್ಟ ಈ ಮಾಲಿನ್ಯಕಾರಕಗಳ ಸಂಯೋಜನೆಯು ಈ ಮೋಡದಂತಹ ನೊರೆಯ ರಚನೆಗೆ ಕಾರಣವಾಗಿರಬಹುದು. ಈ ವಿವರಣೆಯು ವೈಜ್ಞಾನಿಕವಾಗಿಯೂ ಸರಿಯಾಗಿದ್ದು, ಕೈಗಾರಿಕಾ ಚಟುವಟಿಕೆಗಳು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಹರಿದ್ವಾರದ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪಟಪಟನೆ ಮಾತನಾಡಿದ ಕೋತಿ; ಕ್ಯೂಟ್ ವಿಡಿಯೊ ನೋಡಿ
ಒಟ್ಟಾರೆ ಸೋಶಿಯಲ್ ಮೀಡಿಯಾಗಳಲ್ಲಿ ಹರಡುವ ಪ್ರತಿಯೊಂದು ಸುದ್ದಿಯೂ ನಂಬಲು ಯೋಗ್ಯವಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಚಿತ್ರಿಸಿದೆ. ಸತ್ಯ ಪರಿಶೀಲನೆಯ ಹೊರತಾಗಿಯೂ, ವದಂತಿಗಳು ವೇಗವಾಗಿ ಹರಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕರು ಜಾಗೃತರಾಗಿರಬೇಕು.