Dhruva Sarja: ಗ್ಯಾರೇಜ್ನಲ್ಲಿ ನಿಂತಿದ್ದ ಅಣ್ಣನ ಫೇವರಿಟ್ ಗಾಡಿ ಓಡಿಸಿ ಖುಷಿಪಟ್ಟ ಧ್ರುವ ಸರ್ಜಾ
Dhruva Sarja: ಹಲವು ವರ್ಷಗಳಿಂದ ಗ್ಯಾರೇಜ್ನಲ್ಲಿ ನಿಂತಿದ್ದ ಅಣ್ಣ ಚಿರಂಜೀವಿ ಸರ್ಜಾ ಅವರ ಫೇವರಿಟ್ ಗಾಡಿಯನ್ನು ಮತ್ತೆ ಧ್ರುವ ಸರ್ಜಾ ರೆಡಿ ಮಾಡಿಸಿದ್ದಾರೆ. ತಂದೆ ಜತೆಗೆ ಗಾಡಿ ಓಡಿಸಿ ಖುಷಿ ಪಟ್ಟಿದ್ದಾರೆ. ಚಿರು ಇಹಲೋಕ ತ್ಯಜಿಸಿದ ದಿನದಿಂದ ಅಣ್ಣನ ಸವಿನೆನಪಿನೊಂದಿಗೆ ಧ್ರುವ ಬದುಕು ಕಳೆಯುತ್ತಿದ್ದಾರೆ. ಇದೀಗ ಅಣ್ಣನ ಬೈಕ್ ಓಡಿಸಿ ಖುಷಿ ಪಟ್ಟಿದ್ದಾರೆ.


ಬೆಂಗಳೂರು: ಹಲವು ವರ್ಷಗಳಿಂದ ಗ್ಯಾರೇಜ್ನಲ್ಲಿ ನಿಂತಿದ್ದ ಅಣ್ಣ ಚಿರಂಜೀವಿ ಸರ್ಜಾ ಅವರ ಫೇವರಿಟ್ ಗಾಡಿಯನ್ನು ನಟ ಧ್ರುವ ಸರ್ಜಾ (Dhruva Sarja) ರೆಡಿ ಮಾಡಿಸಿ, ಬೈಕ್ ಓಡಿಸುವ ಮೂಲಕ ಖುಷಿಪಟ್ಟಿದ್ದಾರೆ. ಅಣ್ಣನ ಪ್ರತಿಯೊಂದು ನೆನಪನ್ನು ತನ್ನ ಬಳಿ ಇರಿಸಿಕೊಳ್ಳಲು ಪ್ರಯತ್ನಪಡುತ್ತಿರುವ ಧ್ರುವ ಸರ್ಜಾ, ಅಣ್ಣನ (Chiranjeevi Sarja) ಫೇವರಿಟ್ ಗಾಡಿ ನೋಡಿ ಭಾವುಕರಾಗಿದ್ದು, ತಂದೆಯೊಂದಿಗೆ ಬೈಕ್ ಓಡಿಸಿ ಖುಷಿಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ದುರಂತಗಳಲ್ಲಿ ನಟ ಚಿರಂಜೀವಿ ಸರ್ಜಾ ಸಾವಿನ ಘಟನೆ ಕೂಡ ಒಂದು. 2020ರ ಜೂನ್ 7ರಂದು ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಧ್ರುವ ಸರ್ಜಾ ಅವರಿಗೆ ಅಣ್ಣ ಚಿರಂಜೀವಿ ಎಂದರೆ ಅಚ್ಚುಮೆಚ್ಚು. ಅಣ್ಣ ಬದುಕಿದ್ದಾಗ ಕೂಡ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ತುಂಬಾ ಆಪ್ತತೆ ಹೊಂದಿದ್ದರು. ಅಣ್ಣ ಚಿರು ಇಹಲೋಕ ತ್ಯಜಿಸಿದ ದಿನದಿಂದ ಅಣ್ಣನ ಸವಿನೆನಪಿನೊಂದಿಗೆ ತಮ್ಮ ಬದುಕು ಕಳೆಯುತ್ತಿದ್ದಾರೆ.

ಇದೀಗ, ತಮ್ಮ ಧ್ರುವ ಸರ್ಜಾ ಅಣ್ಣ ಚಿರಂಜೀವಿ ನೆನಪು ಮಾಡಿಕೊಂಡು ಒಂದು ಅಪೂರ್ವವಾದ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ಗ್ಯಾರೇಜ್ನಲ್ಲಿ ನಿಂತಿದ್ದ ಅಣ್ಣನ ಫೇವರಿಟ್ ಗಾಡಿಯನ್ನು ಮತ್ತೆ ಧ್ರುವ ಸರ್ಜಾ ರೆಡಿ ಮಾಡಿಸಿದ್ದಾರೆ. ತಂದೆ ಜತೆಗೆ ಗಾಡಿ ಓಡಿಸಿ ಖುಷಿ ಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Nanda Kishore: ಸಿನಿಮಾದಲ್ಲಿ ಆಫರ್ ನೀಡುವುದಾಗಿ ಯುವ ನಟನಿಗೆ ಲಕ್ಷ ಲಕ್ಷ ವಂಚನೆ; ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ
ದರ್ಶನ್ ಭೇಟಿ ಕೊಟ್ಟ ದೇವಾಲಯದಲ್ಲಿ ಧನರಾಜ್ ಆಚಾರ್ ಕುಟುಂಬ

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮುಗ್ಧ ಮನಸ್ಸಿನ ಸ್ಪರ್ಧಿಯಾಗಿ ಇಡೀ ಕರ್ನಾಟಕದ ಮನೆಮಾತಾದ ಧನರಾಜ್ ಆಚಾರ್ (Dhanraj Achar) ಅಂತಿಮ ಹಂತದಲ್ಲಿ ಎಲಿಮಿನೇಟ್ ಆಗಿ ಆಚೆ ಬಂದರು. ಬಿಬಿಕೆ 11 ಫಿನಾಲೆಗೆ ಒಂದು ವಾರ ಇರುವಾಗ ದೊಡ್ಮನೆಯಿಂದ ಹೊರಬಂದರು. ಹನುಮಂತನ ಜೊತೆಗೆ ಇವರ ಒಡನಾಟ ಕಂಡು ಕರ್ನಾಟಕ ಮಂದಿಯ ಹೃದಯದಲ್ಲಿ ದೋಸ್ತಾ ಎಂಬ ಸ್ಥಾನ ಪಡೆದಿದದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಕಾಮಿಡಿಯಿಂದಲೇ ಫೇಮಸ್ ಆಗಿದ್ದ ಧನರಾಜ್ ಫಿನಾಲೆ ವಾರಕ್ಕೆ ಎಂಟ್ರಿ ಆಗಬೇಕಿತ್ತು ಎಂದು ಅನೇಕರು ಹೇಳಿದ್ದೂ ಉಂಟು.
ಬಿಗ್ ಬಾಸ್ ಮುಗಿದ ಬಳಿಕ ಇವರು ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ನಗುಸಿದರು. ಈಗ ಕ್ವಾಟ್ಲೆ ಕಿಚನ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಇವರು ಸದಾ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತ ಇರುತ್ತಾರೆ. ಹೆಂಡತಿ ಕುಟುಂಬ ಸದಸ್ಯರ ಜೊತೆ ರೀಲ್ಸ್ ಮಾಡುತ್ತ ಇರುತ್ತಾರೆ. ಇದೀಗ ಧನರಾಜ್ ಆಚಾರ್ ತಮ್ಮ ಕುಟುಂಬದ ಜೊತೆ ವರ್ಷಕ್ಕೆ 30 ದಿನ ಮಾತ್ರ ತೆರೆದಿರುವ ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
ವಿಶೇಷ ಎಂದರೆ ಮೊನ್ನೆಯಷ್ಟೇ ಇದೇ ದೇವಸ್ಥಾನಕ್ಕೆ ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್ ಕೂಡ ಬಂದು ಶಿವ ದೇಗುಲಕ್ಕೆ ತೆರಳಿ ಪೂಜೆ ಮಾಡಿಸಿದ್ದರು. ಹಾಗೇ, ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ ಸಹ ಪತ್ನಿ ಪ್ರಜ್ಞಾ, ಮಗಳು ಪ್ರಸಿದ್ಧಿ ಹಾಗೂ ಫ್ಯಾಮಿಲಿ ಜೊತೆಗೆ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರ ಫೋಟೋಗಳು ವೈರಲ್ ಆಗುತ್ತಿದೆ.
ತಮ್ಮ ಕುಟುಂಬದ ಜೊತೆಗೆ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ಧನರಾಜ್ ಆಚಾರ್ ತೆರಳಿದ್ದಾರೆ. ಶಿವನಿಗೆ ಧನರಾಜ್ ಆಚಾರ್ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ. ಕೊಟ್ಟಿಯೂರು ಶಿವ ದೇಗುಲದಲ್ಲಿ ಪತ್ನಿ ಪ್ರಜ್ಞಾ ಹಾಗೂ ಮಗಳು ಪ್ರಸಿದ್ಧಿ ಜೊತೆ ಧನರಾಜ್ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಎಲ್ಲೆಡೆ ಹರಿದಾಡುತ್ತಿದೆ. ಮಗಳು ಪ್ರಸಿದ್ಧಿ ಒಳಿತಿಗಾಗಿ ಧನರಾಜ್ ಆಚಾರ್ ಹಾಗೂ ಪ್ರಜ್ಞಾ ಪಾರ್ಥಿಸಿದ್ದಾರೆ.
ಅಂದಹಾಗೆ ಕೇರಳ ಕಣ್ಣೂರಿನ ಬಾವಲಿ ನದಿಯ ಎರಡೂ ದಡಗಳಲ್ಲಿ ಅಕ್ಕರೆ ಕೊಟ್ಟಿಯೂರು ದೇವಸ್ಥಾನ ಹಾಗೂ ಇಕ್ಕರೆ ಕೊಟ್ಟಿಯೂರು ಎನ್ನುವ ಎರಡು ದೇವಸ್ಥಾನಗಳಿವೆ. ಇಕ್ಕರೆ ಕೊಟ್ಟಿಯೂರು ಆಲಯಕ್ಕೆ ಭಕ್ತರು ವರ್ಷವಿಡೀ ಭೇಟಿ ನೀಡಬಹುದು. ಆದರೆ ಅಕ್ಕರೆ ಕೊಟ್ಟಿಯೂರು ಆಲಯ ವೈಶಾಖ ಮಾಸದ ಉತ್ಸವದ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಹಾಗಾಗಿ ಇದೇ ಸಮಯದಲ್ಲಿ ದರ್ಶನ್ ಹಾಗೂ ಧನರಾಜ್ ಕುಟುಂಬ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ಅಕ್ಕರೆ ಕೊಟ್ಟಿಯೂರು ಆಲಯವನ್ನು ದಕ್ಷ ಯಾಗದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಸತಿ ದೇವಿಯು ಇಲ್ಲಿ ತನ್ನನ್ನು ದಹಿಸಿಕೊಂಡಳು ಎಂದು ಪುರಾಣಗಳು ಹೇಳುತ್ತವೆ.