Viral News: ಚಿನ್ನ-ಬೆಳ್ಳಿ ಹೆಕ್ಕಲು ಶೌಚ ಗುಂಡಿಗೆ ಇಳಿದ ನಾಲ್ವರು ಮಸನ ಸೇರಿದ್ರು! ಏನಿದು ಘಟನೆ?
ಜೈಪುರದ ಆಭರಣ ಅಂಗಡಿಯ ಮಾಲೀಕರು ಕೆಮಿಕಲ್ ಬಳಸಿ ತೊಳೆದ ಚಿನ್ನ ಮತ್ತು ಬೆಳ್ಳಿಯ ಕಣಗಳನ್ನು ಹೆಕ್ಕಲು ಪೌರ ಕಾರ್ಮಿಕರಿಗೆ ಹಣದ ಆಮಿಷವೊಡ್ಡಿ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಅವರನ್ನು ಸೆಪ್ಟಿಕ್ ಟ್ಯಾಂಕ್ಗೆ ಇಳಿಸಿದ್ದಾರೆ. ಈ ಘಟನೆಯಿಂದ ಕಾರ್ಮಿಕರಲ್ಲಿ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಜೈಪುರ: ಜೈಪುರದ ಆಭರಣ ತಯಾರಿಕೆ ಕಾರ್ಖಾನೆಯೊಂದರಲ್ಲಿ ಚಿನ್ನ ಮತ್ತು ಬೆಳ್ಳಿಯ ಕಣಗಳನ್ನು ಹೆಕ್ಕಲು ಪೌರ ಕಾರ್ಮಿಕರಿಗೆ ಹಣದ ಆಮಿಷವೊಡ್ಡಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸೆಪ್ಟಿಕ್ ಟ್ಯಾಂಕ್ಗೆ ಇಳಿಸಿದ್ದಾರೆ. ಆದರೆ ಟ್ಯಾಂಕ್ನ ತೀವ್ರಶಾಖ ಹಾಗೂ ವಿಷಾನಿಲದ ಕಾರಣದಿಂದ ನಾಲ್ವರು ಕಾರ್ಮಿಕರು ಅಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲಿಗೆ ಪೌರ ಕಾರ್ಮಿಕರು ಈ ಕೆಲಸ ಮಾಡಲು ಒಪ್ಪಲಿಲ್ಲವಂತೆ. ಆದರೆ ಕಂಪನಿಯ ಆಡಳಿತವು ಹೆಚ್ಚುವರಿ ಹಣವನ್ನು ನೀಡಿ ಒತ್ತಾಯಿಸಿದ ಕಾರಣ ಅವರು ಸೆಫ್ಟಿಕ್ ಟ್ಯಾಂಕ್ನೊಳಗೆ ಇಳಿದಿದ್ದಾರೆ. ಹಾಗಾಗಿ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಪೊಲೀಸರು ಹೇಳುವ ಪ್ರಕಾರ, ಆಭರಣ ತಯಾರಿಕೆ ಕಾರ್ಖಾನೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಕೆಮಿಕಲ್ ಬಳಸಿ ತೊಳೆದ ನಂತರ ಅದರ ಕಣಗಳು ಕೆಸರಿನಲ್ಲಿ ಹೂತು ಹೋಗಿತ್ತಂತೆ. ಕೆಸರಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಕಣಗಳನ್ನು ಹೊರಗೆ ತೆಗೆಯಲು ಕಂಪನಿಯವರು ಪೌರ ಕಾರ್ಮಿಕರನ್ನು ಬಳಸಿಕೊಂಡಿದ್ದಾರಂತೆ.
ತುಂಬಾ ಬಿಸಿಲಿದ್ದ ಕಾರಣ ಕಾರ್ಮಿಕರು ಶುರುವಿನಲ್ಲಿ ಈ ಕೆಲಸ ಮಾಡಲು ನಿರಾಕರಿಸಿದ್ದಾರೆ. ಕಂಪನಿಯ ಸಿಇಒ ವಿಕಾಸ್ ಮೆಹ್ತಾ ಮತ್ತು ನಿರ್ದೇಶಕ ಅರುಣ್ ಕೊಠಾರಿ ಹೆಚ್ಚುವರಿ ಹಣದ ಆಮಿಷವೊಡ್ಡಿ ಕಾರ್ಮಿಕರನ್ನು ಟ್ಯಾಂಕ್ಗೆ ಇಳಿಯಲು ಮನವೊಲಿಸಿದ್ದಾರೆ. ಗುತ್ತಿಗೆ ಸಂಸ್ಥೆಯ ಮೂಲಕ ಕೆಲಸ ಮಾಡುತ್ತಿದ್ದ ಎಂಟು ಕಾರ್ಮಿಕರು ಟ್ಯಾಂಕ್ ಒಳಗೆ ಹೋಗಿ ಮೂರ್ಛೆ ತಪ್ಪಿದ್ದಾರಂತೆ. ಅವರಲ್ಲಿ ಉತ್ತರ ಪ್ರದೇಶದ ಸುಲ್ತಾನ್ಪುರ ಮತ್ತು ಅಂಬೇಡ್ಕರ್ ನಗರದ ರೋಹಿತ್ ಪಾಲ್, ಸಂಜೀವ್ ಪಾಲ್, ಹಿಮಾಂಗು ಸಿಂಗ್ ಮತ್ತು ಅರ್ಪಿತ್ ಯಾದವ್ ಎಂಬ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರನ್ನು ಮನೆಗೆ ಕಳುಹಿಸಲಾಗಿದೆ. ಅವರಿಗೆ ಯಾವುದೇ ಸುರಕ್ಷಾ ಸಾಧನಗಳನ್ನು ಒದಗಿಸದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಜ್ಞರು ಸ್ಥಳವನ್ನು ಪರಿಶೀಲಿಸಿದ್ದಾರೆ. ಮತ್ತು ಬಿಸಿಲಿನ ತಾಪವಿರುವ ಸಮಯದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಏಕೆ ಒತ್ತಾಯಿಸಲಾಯಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಭರಣ ಕಾರ್ಖಾನೆ ಮಾಲೀಕರು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ರೊಮ್ಯಾನ್ಸ್; ಸನ್ ರೂಫ್ ತೆಗೆದು ಯುವತಿಗೆ ಚುಂಬಿಸಿದ ಯುವಕ!
ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರ ಸರಣಿ ಸಾವುಗಳನ್ನು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಲ್ಲೇಖಿಸಿ ಸರ್ಕಾರದ ಬೇಜವಾಬ್ದಾರಿತನವನ್ನು ಪ್ರಶ್ನಿಸಿದ್ದಾರೆ. "ಬಿಕಾನೆರ್, ದೀಗ್ ಮತ್ತು ಜೈಪುರದಲ್ಲಿ ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ಕನಿಷ್ಠ 10 ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಶುಚಿಗೊಳಿಸುವ ಯಂತ್ರಗಳನ್ನು ಖರೀದಿಸುವುದಾಗಿ ಸರ್ಕಾರ ಘೋಷಿಸಿದ್ದರೂ, ಯೋಜನೆ ಕಾಗದದ ಮೇಲೆಯೇ ಉಳಿದಿದೆ. ಸರ್ಕಾರ ಯಾವಾಗ ಕ್ರಮ ಕೈಗೊಳ್ಳುತ್ತದೆ?" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ತಿಳಿಸಿದ್ದಾರೆ.