ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: ʻಅಂಕಲ್‌ ಜೊತೆಗೂಡಿ ಅಪ್ಪನನ್ನು ಅಮ್ಮನೇ ಕೊಂದ್ಳುʼ- ತಾಯಿಯ ಕುಕೃತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಗ!

ಇತ್ತೀಚಿಗೆ ರಾಜಸ್ತಾನದ ಅಲ್ವಾರ್‌ ಜಿಲ್ಲೆಯಲ್ಲಿ ಪತ್ನಿಯಿಂದ ನಡೆದ ಪತಿಯ ಹತ್ಯೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಆಕೆಯ ಮಗನೇ ಇದೀಗ ಪ್ರಕರಣಕ್ಕೆ ಪ್ರಮುಖ ಸಾಕ್ಷಿದಾರನಾಗಿದ್ದಾನೆ. ಗಂಡನನ್ನು ಕೊಲೆ ಮಾಡಿ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಮೃತ ಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಳು. ಆದರೆ ಆಕೆಯ 9 ವರ್ಷದ ಮಗನಿಂದ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ.

ತಂದೆಯ ಹತ್ಯೆ ಮಾಡಿದ್ದ ತಾಯಿಯ ಕುಕೃತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಗ!

Profile Rakshita Karkera Jun 18, 2025 3:37 PM

ಜೈಪುರ್‌: ಇತ್ತೀಚಿಗೆ ರಾಜಸ್ತಾನದ ಅಲ್ವಾರ್‌ ಜಿಲ್ಲೆಯಲ್ಲಿ ಪತ್ನಿಯಿಂದ ನಡೆದ ಪತಿಯ ಹತ್ಯೆ ಪ್ರಕರಣಕ್ಕೆ(Murder case) ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಆಕೆಯ ಮಗನೇ ಇದೀಗ ಪ್ರಕರಣಕ್ಕೆ ಪ್ರಮುಖ ಸಾಕ್ಷಿದಾರನಾಗಿದ್ದಾನೆ. ತನ್ನ ಪತಿಯನ್ನು ಅನಿತಾ ಎನ್ನುವ ಮಹಿಳೆ ಆಕೆಯ ಪ್ರಿಯಕರ ಕಾಶಿರಾಂ ಜೊತೆಗೂಡಿ ಹಾಗೂ ಅವನ ನಾಲ್ಕು ಜನ ಸಹಚರರು ಕೊಂದಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮೃತ ವ್ಯಕ್ತಿಯನ್ನು ವೀರೂ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಶವವನ್ನು ಅವರ ಮನೆಯಲ್ಲೇ ಪತ್ತೆಹಚ್ಚಲಾಗಿತ್ತು. ಪ್ರಾರಂಭದಲ್ಲಿ ಮಹಿಳೆ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಮೃತ ಪಟ್ಟಿದ್ದಾರೆ ಎಂದು ಹೇಳಿ ಕಥೆ ಕಟ್ಟಿದ್ದಳು. ಆದರೆ, ನಂತರ ಆಕೆಯ 9 ವರ್ಷದ ಮಗನಿಂದ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂತು.

ತನ್ನ ತಾಯಿಯ ಮರ್ಡರ್‌ ಮಿಸ್ಟ್ರಿ ಬಿಚ್ಚಿಟ್ಟಿರುವ ಬಾಲಕ "ನಾನು, ಅಪ್ಪ ಇಬ್ಬರು ಕೂಡ ಮಲಗಿದ್ದೆವು, ಬಾಗಿಲಿನ ಬಳಿ ಶಬ್ದ ಕೇಳಿ ಬಂತು. ಅಮ್ಮ ಬಾಗಿಲು ತೆರೆದ್ರು. ಕಾಶಿ ಅಂಕಲ್ ಆ ವೇಳೆ ಮನೆಗೆ ಬಂದಿದ್ದರು. ಅವರ ಜೊತೆಗೆ ಇನ್ನೂ ನಾಲ್ಕು ಜನರಿದ್ದರು. ನಾನು ಹೆದರಿಕೊಂಡು ಸುಮ್ಮನೆ ಮಲಗಿದ್ದೆ. ನಂತರ ಅವರು ಮನೆಯೊಳಗೆ ಬಂದರು. ಆ ವೇಳೆ ಅಮ್ಮ ಮತ್ತು ಕಾಶಿ ಅಂಕಲ್‌ ಅಪ್ಪನನ್ನು ಹೊಡೆದು, ಕಾಲುಗಳನ್ನು ಮುರಿದು, ಮುಖಕ್ಕೆ ಪಿಲ್ಲೋ ಇಟ್ಟು ಉಸಿರುಗಟ್ಟಿಸಿ ಕೊಂದರು. ಕಾಶಿ ಅಂಕಲ್ ನನ್ನ ಕೈ ಹಿಡಿದು ಎತ್ತಿಕೊಂಡು ಹೆದರಿಸಿದರು. ನಾನು ಭಯದಿಂದ ಸೈಲೆಂಟ್ ಆಗಿ ಹೋದೆ. ಕೆಲವೇ ನಿಮಿಷಗಳಲ್ಲಿ ಅಪ್ಪ ಸತ್ತು ಹೋದರು ಎಂದು ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್‌ ಟಿವಿ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಸ್ಟುಡಿಯೋದೊಳಗೆ ಬಿತ್ತು ಬಾಂಬ್‌; ಇಸ್ರೇಲ್‌ ದಾಳಿಯ ವಿಡಿಯೊ ವೈರಲ್‌

ಪೋಲಿಸರು ಹೇಳಿದ್ದೇನು?

ಇನ್ನು ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೋಲಿಸರು, ಅನಿತಾ ಮತ್ತು ಕಾಶಿರಾಂ ಅವರ ಮಧ್ಯೆಯಿರುವ ಅನೈತಿಕ ಸಂಬಂಧವೇ ಈ ಹತ್ಯೆಗೆ ಕಾರಣವಾಗಿದೆ. ಒಂದು ಸಣ್ಣ ಜನರಲ್ ಸ್ಟೋರ್ ನಡೆಸುತ್ತಿದ್ದ ಅನಿತಾ ಹಾಗೂ ಅಲ್ಲಿಯೇ ಸಮೀಪ ಕೆಲಸ ಮಾಡುತ್ತಿದ್ದ ಕಾಶಿರಾಂ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದು, ನಂತರ ಪತಿಯ ಹತ್ಯೆಗೆ ಸಂಚು ರೂಪಿಸಿದ್ದಾರೆ. ಕಾಶಿರಾಂ ಅವನ ನಾಲ್ಕು ಜನ ಸಹಚರರಿಗೆ ತಲಾ 2 ಲಕ್ಷ ಹಣ ನೀಡಿದ್ದಾನೆ. ಹತ್ಯೆ ನಡೆದ ರಾತ್ರಿ ಅನಿತಾ ಉದ್ದೇಶಪೂರ್ವಕವಾಗಿಯೇ ಬಾಗಿಲು ತೆರೆದು ಮಲಗಿದ್ದಾಳೆ. ನಂತರ ಆಕೆಯ ಪ್ರಿಯಕರ ಕಾಶಿರಾಂ ಮತ್ತು ನಾಲ್ಕು ಜನ ಅವನ ಸಹಚರರು ಮನೆಗೆ ಬಂದಿದ್ದು, ಮಲಗಿದ್ದ ವೀರೂನನ್ನು ಕೊಂದಿದ್ದಾರೆ. ಬಳಿಕ ಎರಡು ದಿನಗಳ ವೀರೂ ಸಾವಿನ ಸುದ್ದಿ ಹಬ್ಬಿತ್ತು. ಆದರೆ ಶವದ ಮೇಲೆ ಗಾಯದ ಗುರುತುಗಳು, ಮುರಿದ ಹಲ್ಲು ಮತ್ತು ಉಸಿರುಗಟ್ಟಿದ ಲಕ್ಷಣಗಳು ಅನುಮಾನ ಹುಟ್ಟಿಸಿದವು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿತು ಎಂದು ಹೇಳಿದ್ದಾರೆ.

ವೀರೂ ಅವರ ಸಹೋದರ ಗಬ್ಬರ್ ಜಟವ್ ನೀಡಿದ ದೂರಿನಾಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಸ್ಥಳದಲ್ಲಿದ್ದ 100ಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ ಮತ್ತು ಫೋನ್‌ ಕರೆಯ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಅನಿತಾ, ಕಾಶಿರಾಂ ಹಾಗೂ ಅವರ ಸಹಚರ ಬ್ರಿಜೇಶ್ ಜಟವ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆದಿದೆ.