ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ನಿಜ್ಜರ್‌ ಹತ್ಯೆಗೂ ಭಾರತಕ್ಕೂ..... ಮೋದಿ ಭೇಟಿ ಕುರಿತು ಕೆನಡಾ ಪ್ರಧಾನಿ ಹೇಳಿದ್ದೇನು?

ಕಳೆದ ಕೆಲ ತಿಂಗಳುಗಳಿಂದ ಹದಗೆಟ್ಟಿದ್ದ ಭಾರತ ಹಾಗೂ ಕೆನಡಾ ಸಂಬಂಧ ಇದೀಗ ಸರಿಯಾದಂತೆ ಕಾಣಿಸುತ್ತಿದೆ. G7 ಶೃಂಗಸಭೆಗೆ ತೆರಳಲು ಪ್ರಧಾನಿ ಮೋದಿ ಅವರು ಕೆನಡಾಗೆ ತೆರಳಿದ್ದಾರೆ. ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಂತರ, ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತದ ಏಜೆಂಟ್‌ಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.

ನಿಜ್ಜರ್ ಹತ್ಯೆಯ ಬಗ್ಗೆ ಮಾರ್ಕ್ ಕಾರ್ನಿ ಹೇಳಿದ್ದೇನು?

Profile Vishakha Bhat Jun 18, 2025 12:42 PM

ಒಟ್ಟಾವಾ: ಕಳೆದ ಕೆಲ ತಿಂಗಳುಗಳಿಂದ ಹದಗೆಟ್ಟಿದ್ದ ಭಾರತ ಹಾಗೂ (Narendra Modi) ಕೆನಡಾ ಸಂಬಂಧ ಇದೀಗ ಸರಿಯಾದಂತೆ ಕಾಣಿಸುತ್ತಿದೆ. G7 ಶೃಂಗಸಭೆಗೆ ತೆರಳಲು ಪ್ರಧಾನಿ ಮೋದಿ ಅವರು ಕೆನಡಾಗೆ ತೆರಳಿದ್ದಾರೆ. (Canada) ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಂತರ, ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತದ ಏಜೆಂಟ್‌ಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನಲೆ ಭಾರತ ಮತ್ತು ಕೆನಡಾ ದೇಶಗಳು ತಮ್ಮ ನಡುವಿನ ಭಾಂಧವ್ಯವನ್ನು ಪರಸ್ಪರ ಕಡಿದುಕೊಂಡಿದ್ದವು. ಕೆನಡಾಗೆ ನೂತನ ಪ್ರಧಾನಿ ಆಯ್ಕೆ ಬಳಿಕ ಕೆನಡಾ ಭಾರತದೊಂದಿಗೆ ಸ್ನೇಹ ಹಸ್ತ ಚಾಚಿದೆ.

ಜಿ7 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ಚರ್ಚೆಯ ವಿವರಗಳನ್ನು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಬುಧವಾರ ಹಂಚಿಕೊಂಡಿದ್ದಾರೆ. ನಾವು ಕಾನೂನು ಜಾರಿ ಸಂವಾದವನ್ನು ಹೊಂದುವ ಪ್ರಾಮುಖ್ಯತೆಯನ್ನು ಚರ್ಚಿಸಿದ್ದೇವೆ, ಕೇವಲ ಸಂಭಾಷಣೆ, ಸಹಕಾರ ಮಾತ್ರವಲ್ಲ, ಅಂತಾರಾಷ್ಟ್ರೀಯ ದಬ್ಬಾಳಿಕೆಯನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ಚರ್ಚಿಸಿದ್ದೇವೆ... ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಕುರಿತು ಹೆಚ್ಚಿನ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಲ್ಲಿ ನಾನು ಎಚ್ಚರಿಕೆಯಿಂದ ಇರಬೇಕಾಗಿದೆ,” ಎಂದು ಹೇಳಿದ್ದಾರೆ.

ಇದೀಗ ಈ ಬಗ್ಗೆ ಮಾತನಾಡಿರುವ ಕೆನಡಾದ ಪ್ರಧಾನಿ, ಇಂದಿನ ಸಭೆ ಮಹತ್ವದ್ದಾಗಿದೆ. ಆದರೆ ನಾನು ಅದನ್ನು ಎರಡು ದೇಶಗಳ ಬಾಂಧವ್ಯ ಕಟ್ಟಲು ಮೊದಲ ಹೆಜ್ಜೆ ಎಂದು ಭಾವಿಸಿದ್ದೇನೆ. ಮಾಹಿತಿ, ಮತ್ತು ಮತ್ತು ಎರಡು ದೇಶಗಳ ಪರಸ್ಪರ ಗೌರವ, ಸಾರ್ವಭೌಮತ್ವ ಮತ್ತು ನಂಬಿಕೆಯ ಆಧಾರದ ಮೇಲೆ ಸಂಬಂಧವನ್ನುಪುನಃ ನಿರ್ಮಿಸುವ ಕುರಿತು ಮಾತುಕಥೆ ನಡೆಸಿದೆವು. ಇನ್ನು ಮುಂದುವರೆದು, ನರೇಂದ್ರ ಮೋದಿಯವರೊಂದಿಗೆ G-7 ಶೃಂಗಸಭೆಯಲ್ಲಿ ನಡೆದ ದ್ವಿಪಕ್ಷಿಯ ಸಭೆಯಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯಗೆ ನಾವು ಕಾನೂನು ಮತ್ತು ಅಂತಾರಾಷ್ಟ್ರೀಯ ಒತ್ತಡದ ಬಗ್ಗೆ ಚರ್ಚೆ ಮಾಡಿದೆವು.

ಈ ಚರ್ಚೆಯ ಬಳಿಕ ಭಾರತ ಮತ್ತು ಕೆನಡಾ ಎರಡೂ ದೇಶಗಳು ಗಡಿಯಾಚೆಗಿನ ಅಪರಾಧಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಹೈಕಮಿಷನರ್‌ಗಳನ್ನು ನೇಮಿಸಲು ಒಪ್ಪಿಗೆ ನೀಡಿವೆ. ನಿಜ್ಜರ್, ಭಾರತದ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪಿಯಾಗಿದ್ದು, 2023ರ ಜೂನ್‌ನಲ್ಲಿ ಹತ್ಯೆಯಾಗಿದ್ದ. ಇದಾದ ನಂತರ ಎರಡು ದೇಶಗಳು ಪರಸ್ಪರ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.

ಇನ್ನು ಈ ಸಭೆಯ ವೇಳೆ, ಮೋದಿ ಮತ್ತು ಕಾರ್ನಿ ಭಾರತ-ಕೆನಡಾ ನಡುವಿನ ಸಂಬಂಧ ಮರು ಸ್ಥಾಪಿಸುವ ದೃಷ್ಟಿಯಿಂದ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಮೋದಿ ಅವರು ಇತ್ತೀಚೆಗೆ ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿ ನೂತನ ಪ್ರಧಾನಿಯಾಗಿ ಆಯ್ಕೆಯಾದ ಕಾರ್ನಿಗೆ ಅಭಿನಂದನೆ ತಿಳಿಸಿ ಶುಭ ಹಾರೈಸಿದ್ದರು. ಇದು ಎರಡು ದೇಶಗಳ ನಡುವೆ ಬಾಂಧವ್ಯವನ್ನು ಪುನಃ ವೃದ್ಧಿಸುವ ಮುನ್ಸೂಚನೆ ಎನ್ನಲಾಗಿದೆ.ಪ್ರಧಾನಿ ಮೋದಿಯವರೊಂದಿಗಿನ ದ್ವಿಪಕ್ಷೀಯ ಭೇಟಿಯನ್ನು ಅವರು ಅಡಿಪಾಯ ಹಾಗೂ ಅಗತ್ಯವಾದ ಮೊದಲ ಹೆಜ್ಜೆ" ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನಿಯಾದ ನಂತರ ಕಾರ್ನಿ ಮತ್ತು ಪ್ರಧಾನಿ ಮೋದಿ ನಡುವಿನ ಮೊದಲ ಭೇಟಿ ಇದಾಗಿದೆ.

ಈ ಸುದ್ದಿಯನ್ನೂ ಓದಿ: Donald Trump: ಇಸ್ರೇಲ್‌ ಇರಾನ್‌ ಕದನಕ್ಕೆ ಅಮೆರಿಕ ಎಂಟ್ರಿ? G7 ಶೃಂಗಸಭೆ ಮೊಟಕುಗೊಳಿಸಿ ತೆರಳಿದ ಟ್ರಂಪ್‌

ಟ್ರಂಪ್‌ ಮೋದಿ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (Narendra Modi) ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಫೋನ್‌ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಉಭಯ ದೇಶದ ನಾಯಕರು 35 ನಿಮಿಷಗಳ ಕಾಲ ಮಾತನಾಡಿದರು ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ. ಕರೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಆಪರೇಷನ್‌ ಸಿಂದೂರ್‌ದ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.