ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 1,000 ಅಂಕ ಏರಿಕೆ ! ಬೆಂಗಳೂರಿನಲ್ಲಿ ಚಿಪ್‌ ಮೇಕಿಂಗ್‌ ಸೆಂಟರ್? ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದ ಸ್ಟಾಕ್‌ ಮಾರ್ಕೆಟ್‌ (Stock market) ಶುಕ್ರವಾರ ಪಾಸಿಟಿವ್‌ ಆಗಿತ್ತು. ಬಿಎಸ್‌ಇ ಚ ಮತ್ತು ನಿಫ್ಟಿ ಎರಡೂ ಗಳಿಕೆ ದಾಖಲಿಸಿತು. ಅಂತಿಮವಾಗಿ ಸೆನ್ಸೆಕ್ಸ್‌ 1,046 ಅಂಕ ಏರಿಕೆಯಾಗಿ 82,408 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 319 ಅಂಕ ಏರಿಕೆಯಾಗಿ 25,112ಕ್ಕೆ ಸ್ಥಿರವಾಯಿತು.

ಸೆನ್ಸೆಕ್ಸ್‌ 1,000 ಅಂಕ ಏರಿಕೆ ! ಸಂಪೂರ್ಣ ಮಾಹಿತಿ ಇಲ್ಲಿದೆ

Profile Vishakha Bhat Jun 20, 2025 7:47 PM

ಕೇಶವಪ್ರಸಾದ.ಬಿ

ಮುಂಬೈ: ಭಾರತದ ಸ್ಟಾಕ್‌ ಮಾರ್ಕೆಟ್‌ (Stock market) ಶುಕ್ರವಾರ ಪಾಸಿಟಿವ್‌ ಆಗಿತ್ತು. ಬಿಎಸ್‌ಇ ಚ ಮತ್ತು ನಿಫ್ಟಿ ಎರಡೂ ಗಳಿಕೆ ದಾಖಲಿಸಿತು. ಅಂತಿಮವಾಗಿ ಸೆನ್ಸೆಕ್ಸ್‌ 1,046 ಅಂಕ ಏರಿಕೆಯಾಗಿ 82,408 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 319 ಅಂಕ ಏರಿಕೆಯಾಗಿ 25,112ಕ್ಕೆ ಸ್ಥಿರವಾಯಿತು. BSE listed ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು 443 ಲಕ್ಷ ಕೋಟಿ ರುಪಾಯಿಗಳಿಂದ 447 ಲಕ್ಷ ಕೋಟಿ ರುಪಾಯಿಗೆ ಏರಿತು. ಒಂದೇ ದಿನ 4 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಯಿತು.

ಬ್ಯಾಂಕಿಂಗ್‌ ಮತ್ತು ಆಟೊ ಷೇರುಗಳು ಚೆನ್ನಾಗಿ ಏರಿಕೆಯಾಯಿತು. ಬಜಾಜ್‌ ಫಿನ್‌ ಸರ್ವ್‌ ಮತ್ತು ಮಹೀಂದ್ರಾ ಆಂಡ್‌ ಮಹೀಂದ್ರಾ ಟಾಪ್‌ ಗೈನರ್‌ ಆಗಿತ್ತು. ಹೀಗಿದ್ದರೂ ಕೆಲವು ಷೇರುಗಳು ನಷ್ಟಕ್ಕೀಡಾಯಿತು. ಉದಾಹರಣೆಗೆ ಇಂಡಸ್‌ ಇಂಡ್‌ ಬ್ಯಾಂಕ್‌ ಸ್ಟಾಕ್‌ ಇಳಿಯಿತು.ಇಸ್ರೇಲ್‌ ಮತ್ತು ಇರಾನ್‌ ನಡುವೆ ಸಂಘರ್ಷ ತಾರಕಕ್ಕೇರಿದ್ದರೂ, ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕಗಳು ಶುಕ್ರವಾರ ಏರಿಕೆ ದಾಖಲಿಸಿವೆ.

ಸ್ಟಾಕ್‌ ಮಾರ್ಕೆಟ್‌ ಚೇತರಿಕೆಗೆ ಕಾರಣಗಳು:

  • ಏಷ್ಯಾದ ಮಾರುಕಟ್ಟೆಗಳು ಚೇತರಿಸಿರುವುದು.
  • FII ಅಥವಾ ವಿದೇಶಿ ಸಾಂಸ್ಥಿಕ ಹೂಡಿಕೆದಾರ ಹೂಡಿಕೆ ಹೆಚ್ಚಳ.
  • ಡಾಲರ್‌ ಎದುರು ರುಪಾಯಿ ಮೌಲ್ಯ 86 ರುಪಾಯಿ 60 ಪೈಸೆಗೆ ಏರಿಕೆ.
  • ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 76 ಡಾಲರ್‌ಗೆ ಇಳಿಕೆ.
  • ಇಂಡಿಯಾ ವಿಕ್ಸ್‌ 13%ಕ್ಕೆ ಇಳಿಕೆ.
  • ರಿಲಯನ್ಸ್‌ ಇಂಡಸ್ಟ್ರೀಸ್‌, ಏರ್‌ಟೆಲ್‌, HDFC Bank ಇತ್ಯಾದಿ ಬ್ಲೂಚಿಪ್‌ ಷೇರುಗಳ ಖರೀದಿ ಹೆಚ್ಚಳ.
  • ಪಿಎಸ್‌ಯು ಪ್ರಾಜೆಕ್ಟ್‌ ಫೈನಾನ್ಸ್‌ ಷೇರುಗಳಾದ IREDA, PFC, REC, HUDCO ಮತ್ತು IRFC ಸ್ಟಾಕ್ಸ್‌ ದರದಲ್ಲಿ ಏರಿಕೆ.
  • ಇರಾನ್‌ ವಿರುದ್ಧ ಇಸ್ರೇಲ್‌ ಮತ್ತು ಅಮೆರಿಕ ಮಾತುಕತೆ ಮುಂದಿನ ಎರಡು ವಾರಗಳ ಕಾಲ ನಡೆಸುವ ನಿರೀಕ್ಷೆ.

ಸೆನ್ಸೆಕ್ಸ್‌ನಲ್ಲಿ ಇಂದು ಏರಿಕೆಯದ ಷೇರುಗಳು:

  1. ಬಜಾಜ್‌ ಫಿನ್‌ ಸರ್ವ್‌
  2. ಮಹೀಂದ್ರಾ & ಮಹೀಂದ್ರಾ
  3. ಅಲ್ಟ್ರಾ ಟೆಕ್‌ ಸಿಮೆಂಟ್‌
  4. ಎಸ್‌ಬಿಐ
  5. ಎಟರ್ನಲ್‌
  6. ಮಾರುತಿ ಸುಜುಕಿ
  7. ಎಕ್ಸಿಸ್‌ ಬ್ಯಾಂಕ್‌

ನಷ್ಟ ದಾಖಲಿಸಿದ ಷೇರುಗಳು:

  1. ಇಂಡಸ್‌ಇಂಡ್‌ ಬ್ಯಾಂಕ್‌
  2. ಬಜಾಜ್‌ ಫೈನಾನ್ಸ್‌
  3. ಟೆಕ್‌ ಮಹೀಂದ್ರಾ
  4. ಟೈಟನ್‌

ಐಟಿ ಸ್ಟಾಕ್ಸ್‌ಗಳು ಎರಡು ತಿಂಗಳಿನೊಳಗೆ 35 % ಏರಿಕೆಯಾಗಿವೆ. ಟೆಕ್‌ ಮಹೀಂದ್ರಾ ಮತ್ತು ಎಲ್‌ಟಿಐ ಮೈಂಡ್‌ ಟ್ರೀ 28% ಹೆಚ್ಚಳವಾಗಿದೆ. ಪರ್ಸಿಸ್ಟೆಂಟ್‌ ಸಿಸ್ಟಮ್ಸ್‌, ಎಚ್‌ಸಿಎಲ್‌ ಟೆಕ್‌, ಒರಾಕಲ್‌ ಫೈನಾನ್ಷಿಯಲ್‌ ಸರ್ವೀಸ್‌ ಸಾಫ್ಟ್‌ವೇರ್‌, ಎಂಫಸಿಸ್‌ ಷೇರುಗಳ ದರದಲ್ಲಿ 16%ರಿಂದ 22% ತನಕ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಲಾರ್ಜ್‌ ಕ್ಯಾಪ್‌ ಐಟಿ ಷೇರುಗಳಾದ ಇನ್ಫೋಸಿಸ್‌ ಮತ್ತು ವಿಪ್ರೊ ಡಬಲ್‌ ಡಿಜಿಟ್‌ ರಿಟರ್ನ್‌ ನೀಡಿವೆ. ಈ ವರ್ಷ ಆರಂಭದಿಂದ ಐಟಿ ಸ್ಟಾಕ್ಸ್‌ ತೀವ್ರ ಇಳಿಮುಖವಾಗಿತ್ತು. ಆದರೆ ಕಳೆದ ಎರಡು ತಿಂಗಳುಗಳಿಂದ ಸ್ಟ್ರಾಂಗ್‌ ಕಮ್‌ ಬ್ಯಾಕ್‌ ಆಗಿವೆ. ನಿಫ್ಟಿ ಐಟಿ ಇಂಡೆಕ್ಸ್‌ ಎರಡು ತಿಂಗಳಿನಲ್ಲಿ 10.5% ಏರಿಕೆಯಾಗಿದೆ.

ಬೆಂಗಳೂರಿನ ರಕ್ಷಣಾ ವಲಯದ ದಿಗ್ಗಜ ಕಂಪನಿಯಾದ ಎಚ್‌ಎಎಲ್‌, ಇಸ್ರೋದ ಗುತ್ತಿಗೆ ಯೋಜನೆಯನ್ನು ಗಳಿಸಿದೆ. ಸಣ್ಣ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ ಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಕೇನ್ಸ್‌ ಟೆಕ್ನಾಲಜಿ ಕಂಪನಿಯ ಷೇರಿನ ದರದಲ್ಲಿ ಇಂದು 4% ಏರಿಕೆ ಆಗಿದೆ. ಷೇರಿನ ದರ 5,825/-ಕ್ಕೆ ಏರಿಕೆಯಾಯಿತು. ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ತಯಾರಿಸುವ ಕೇನ್ಸ್‌ ಟೆಕ್ನಾಲಜಿಯು ಗುರುವಾರ 5,825 ಕೋಟಿ ರುಪಾಯಿ ಮೌಲ್ಯದ ಕ್ವಾಲಿಫೈಡ್‌ ಇನ್‌ಸ್ಟಿಟ್ಯೂಷನಲ್‌ ಪ್ಲೇಸ್‌ಮೆಂಟ್‌ ಅಥವಾ QIP ಯನ್ನು ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಷೇರಿನ ದರ ಏರಿತು.

HDFC Bank ನ ಅಧೀನ ಸಂಸ್ಥೆಯಾಗಿರುವ ಮತ್ತು ನಾನ್‌ ಬ್ಯಾಂಕಿಂಗ್‌ ಫೈನಾನ್ಷಿಯಲ್‌ ಕಂಪನಿಯಾಗಿರುವ HDB Financial Services ಷೇರು ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಜೂನ್‌ 25ಕ್ಕೆ ಐಪಿಒ ಆರಂಭವಾಗಲಿದೆ. ಈ ಸಂಸ್ಥೆಯು 2024-25ರಲ್ಲಿ 2,175 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. HDB Financial Services ಐಪಿಒದಲ್ಲಿ ಪ್ರತಿ ಷೇರಿನ ದರ 700-740/- ಇರಲಿದೆ. ಜೂನ್‌ 27ಕ್ಕೆ ಐಪಿಒ ಮುಕ್ತಾಯವಾಗುತ್ತಿದೆ. ಈ ಐಪಿಒದ ಗಾತ್ರ 12,500 ಕೋಟಿ ರುಪಾಯಿ ಆಗಿದೆ. ಪ್ರತಿ ಲಾಟ್‌ ಸೈಜ್‌ 20 ಷೇರುಗಳಾಗಿದೆ. ಜುಲೈ 2ರಂದು ಈ ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಲಿಸ್ಟ್‌ ಆಗುವ ನಿರೀಕ್ಷೆ ಇದೆ.

ಇದು NBFC ಸಂಸ್ಥೆಗಳ ಇತಿಹಾಸದಲ್ಲೇ ಅತಿ ದೊಡ್ಡ IPO ಆಗಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹುಂಡೈ ಮೋಟಾರ್‌ ಇಂಡಿಯಾದ 27,870 ಕೋಟಿ ರುಪಾಯಿಗಳ ಐಪಿಒದ ಬಳಿಕ ನಡೆಯುತ್ತಿರುವ ದೊಡ್ಡ ಐಪಿಒ ಆಗಿದೆ. ಗ್ರೇ ಮಾರುಕಟ್ಟೆಯಲ್ಲಿ HDB Financial Services ಷೇರಿನ GMP ದರ 83 ರುಪಾಯಿಗೆ ಏರಿಕೆಯಾಗಿದ್ದು, ಐಪಿಒ ಬಳಿಕ ಷೇರಿನ ದರ ಏರಿಕೆಯಾಗುವ ನಿರೀಕ್ಷೆ ಇದೆ.

ರಕ್ಷಣಾ ವಲಯದ ಹೆಮ್ಮೆಯ ಸಂಸ್ಥೆಯಾಗಿರುವ ಬಿಇಎಲ್‌ ಸಂಸ್ಥೆಯ ಷೇರಿನ ದರದಲ್ಲಿ ಕಳೆದ 6 ತಿಂಗಳಿನಲ್ಲಿ 38% ಏರಿಕೆಯಾಗಿದೆ. ರಕ್ಷಣಾ ವಲಯದ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಆಸಕ್ತಿ ವಹಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತು ಸಹಕಾರ ಬ್ಯಾಂಕ್‌ಗಳಿಗೆ, ಪ್ರಾಜೆಕ್ಟ್‌ ಫೈನಾನ್ಸಿಂಗ್‌ ವಿಚಾರಕ್ಕೆ ಸಂಬಂದಿಸಿ ತನ್ನ ಅಂತಿಮ ನಿರ್ದೇಶನವನ್ನು ನೀಡಿದ ಬಳಿಕ ಶುಕ್ರವಾರ PFC ಮತ್ತು REC ಷೇರುಗಳ ದರದಲ್ಲಿ 4.5 ಪರ್ಸೆಂಟ್‌ ತನಕ ಏರಿಕೆ ಕಂಡು ಬಂದಿತು. PFC ಷೇರಿನ ದರ 407 ರುಪಾಯಿಗೆ ಹಾಗೂ REC ಷೇರಿನ ದರ 396/-ಕ್ಕೆ ಏರಿತು.

ಬೆಂಗಳೂರಿಗೆ ಸಂಬಂಧಿಸಿ ಇಂಟರೆಸ್ಟಿಂಗ್‌ ಸುದ್ದಿ ಇದೆ. ಅಮೆರಿಕದ ಖ್ಯಾತ ಚಿಪ್‌ ತಯಾರಕ ಅಪ್ಲೈಡ್‌ ಮೆಟೀರಿಯಲ್ಸ್‌, ಬೆಂಗಳೂರಿನಲ್ಲಿ ಸೆಮಿಕಂಡಕ್ಟರ್‌ ತಯಾರಿಕೆಗೆ ಇನ್ನೊವೇಶನ್‌ ಸೆಂಟರ್‌ ಅನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ 200 ಕೋಟಿ ಡಾಲರ್‌ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಅಪ್ಲೈಡ್‌ ಮೆಟೀರಿಯಲ್ಸ್‌ ಇಂಡಿಯಾದ ಮ್ಯಾನೇಜಿಂಗ್‌ ಡೈರೆಕ್ಟರ್‌ ಸೂರಜ್‌ ರಂಗರಾಜನ್‌ ತಿಳಿಸಿದ್ದಾರೆ. ಕರ್ನಾಟಕ ಸರಕಾರವು ರಾಜ್ಯದಲ್ಲಿ ಮೂರು ಸೆಮಿಕಂಡಕ್ಟರ್‌ ಯೋಜನೆಗಳನ್ನು ಅನುಮೋದಿಸಿದೆ. ಅದರಲ್ಲಿ ಅಪ್ಲೈಡ್‌ ಮೆಟೀರಿಯಲ್ಸ್‌ ನದ್ದೂ ಇದೆ. ಸದ್ಯಕ್ಕೆ ಕಂಪನಿಯು ಈ ಯೋಜನೆಗೆ 4,850 ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆ ಮಾಡುತ್ತಿದೆ.

ಅಮೆರಿಕದ ಮತ್ತೊಂದು ಸೆಮಿಕಂಡಕ್ಟರ್‌ ಚಿಪ್‌ ತಯಾರಕ ಕಂಪನಿಯಾದ ಲ್ಯಾಮ್‌ ರಿಸರ್ಚ್‌ ಕೂಡ ರಾಜ್ಯದಲ್ಲಿ ಎರಡು ಯುನಿಟ್‌ಗಳನ್ನು ತೆರೆಯಲಿದೆ. ಇದಕ್ಕಾಗಿ 6,790 ಕೋಟಿ ರುಪಾಯಿ ಹೂಡಿಕೆಯನ್ನು ಮಾಡಲಿದೆ. ಈ ಯೋಜನೆಗಳಿಂದ ಸಾವಿರಾರು ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದೆ. ಪರೋಕ್ಷವಾಗಿಯೂ ಸಾವಿರಾರು ಮಂದಿಗೆ ಉದ್ಯೋಗ ದೊರೆಯಲಿದೆ.

ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿಯು ತಮಿಳುನಾಡಿನಲ್ಲಿ ಐಫೋನ್‌ ಉತ್ಪಾದನೆಗೆ ಹೊಸ ಘಟಕವನ್ನು ನಿರ್ಮಿಸಲು ಮುಂದಾಗಿದೆ. ಚೆನ್ನೈಗೆ ಸಮೀಪ ಇರುವ ಒರಾಗಡಮ್‌ ಕೈಗಾರಿಕಾ ಪ್ರದೇಶದಲ್ಲಿ ಹೊಸ ಘಟಕ ಸ್ಥಾಪನೆಗೆ ಉದ್ದೇಶಿಸಿದೆ ಎಂದು ವರದಿಯಾಗಿದೆ. ಇದುವರೆಗೆ ಫಾಕ್ಸ್‌ ಕಾನ್‌, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಐಫೋನಿನ ಅಸೆಂಬ್ಲಿಂಗ್‌ ಕೆಲಸಗಳನ್ನು ಮಾಡುತ್ತಿತ್ತು. ಬೆಂಗಳೂರಿನ ದೇವನಹಳ್ಳಿಯ ಬಳಿಯೂ ಫಾಕ್ಸ್‌ ಕಾನ್‌ ಐಫೋನ್‌ ಅಸೆಂಬ್ಲಿಂಗ್‌ ಮಾಡುತ್ತಿದೆ. ಇದರೊಂದಿಗೆ ಟಾಟಾ ಎಲೆಕ್ಟ್ರಾನಿಕ್ಸ್‌ ಜತೆಗೆ ಫಾಕ್ಸ್‌ ಕಾನ್‌ ಕೂಡ ಭಾರತದಲ್ಲಿ ಐಫೋನ್‌ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಈ ಸುದ್ದಿಯನ್ನೂ ಓದಿ: Stock Market: ಗ್ರಾಸಿಮ್‌ ಇಂಡಸ್ಟ್ರೀಸ್‌ ಸ್ಟಾಕ್‌ ಖರೀದಿಸಿದ್ರೆ 36% ಲಾಭ? RCB ಮಾರಾಟಕ್ಕಿಲ್ಲ: ಡಿಯಾಜಿಯೊ

ಐಟಿ ಕಂಪನಿ ಕಾಗ್ನಿಜೆಂಟ್‌ ವಿಶಾಖಪಟ್ಟಣಂನಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ 1,582 ಕೋಟಿ ರುಪಾಯಿ ವೆಚ್ಚದಲ್ಲಿ ಐಟಿ ಕ್ಯಾಂಪಸ್‌ ಆರಂಭಿಸಲಿದೆ. ಇದರಿಂದ 8,000 ಮಂದಿಗೆ ನೇರವಾಗಿ ಉದ್ಯೋಗಾವಕಾಶ ಸಿಗಲಿದೆ. ವಿಶೇಷ ಏನೆಂದರೆ ಆಂಧ್ರಪ್ರದೇಶ ಸರಕಾರವು ಕಾಗ್ನಿಜೆಂಟ್‌ ಕಂಪನಿಗೆ 21 ಎಕರೆ ಜಾಗವನ್ನು 99 ಪೈಸೆಗೆ ಸಾಂಕೇತಿಕವಾಗಿ ಲೀಸ್‌ ದರದಲ್ಲಿ ಕೊಟ್ಟಿದೆ. ಅಂದರೆ ಬಹುತೇಕ ಉಚಿತವಾಗಿಯೇ ಕೊಟ್ಟಿದೆ. ಈ ವರ್ಷ ಏಪ್ರಿಲ್‌ನಲ್ಲಿ ಟಿಸಿಎಸ್‌ಗೆ ಇದೇ ರೀತಿ 99 ಪೈಸೆ ಲೀಸ್‌ ದರದಲ್ಲಿ 21 ಎಕರೆ ಜಾಗವನ್ನು ಆಂಧ್ರಪ್ರದೇಶ ಕೊಟ್ಟಿತ್ತು. ಇದಾದ ಬಳಿಕ ವಿಶಾಖಪಟ್ಟಣವನ್ನು ಐಟಿ ಹಬ್‌ ಆಗಿ ಬೆಳೆಸಲು ಸರಕಾರ ಆಸಕ್ತಿ ವಹಿಸಿದೆ. ಕಾಗ್ನಿಜೆಂಟ್‌ 2029ರಿಂದ ಅಲ್ಲಿ ಕಾರ್ಯಾಚರಣೆ ಶುರು ಮಾಡುವ ನಿರೀಕ್ಷೆ ಇದೆ. ಹೀಗಾಗಿ ಕರ್ನಾಟಕ ಕೂಡ ನೆರೆಯ ರಾಜ್ಯಗಳ ಸ್ಪರ್ಧೆಯನ್ನು ಗಮನಿಸಬೇಕಾಗಿದೆ. ಐಟಿ ಕ್ಯಾಪಿಟಲ್‌ ಬೆಂಗಳೂರಿನ ಜತೆಗೆ ಇತರ ನಗರಗಳಲ್ಲೂ ಐಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮುಂದಾಗಬೇಕಿದೆ.