MLA Pradeep Eshwar: ಸಂಸದ ಡಾ.ಕೆ.ಸುಧಾಕರ್ ಅವರೇ ನಮ್ಮ ಜತೆ ಹಳ್ಳಿಗಳಿಗೆ ಬನ್ನಿ ಇಬ್ಬರು ಕೂತು ಜನರ ಕೆಲಸ ಮಾಡೋಣ
ದ್ವೇಶದ ರಾಜಕಾರಣ ಬೇಡ, ಜನಪರ ಕೆಲಸಕ್ಕೆ ಬರುವುದಾದರೆ ಮಾಹಿತಿ ತಿಳಿಸಿ, ನಿಮಗೆ ಕುರ್ಚಿ ವ್ಯವಸ್ಥೆ ಮಾಡಿಸುವೆ, ಮಿನರಲ್ ವಾಟರ್ ಒದಗಿಸುವೆ, ನಾನು ಬಡವ ಚಾಪೇ ಮೇಲೆ ಕುಳಿತು ಕೊಳ್ಳುತ್ತೇನೆ. ಇಬ್ಬರೂ ಕೂಡಿ ಜನರ ಸಮಸ್ಯೆ ಕೇಳೋಣ,ಹಿರಿಯರನ್ನು ದೊಡ್ಡಮ್ಮ ಎಂದು ಕರೆದರೆ ನಿಮಗೇಕೆ ಉರಿಯುತ್ತೋ ಗೊತ್ತಿಲ್ಲ.ಇದು ನಾಟಕ ಅಲ್ಲ ಹೃದಯದ ಮಾತು

ತಾಲ್ಲೂಕಿನ ಗೊಂಗಡಿಪುರ ಗ್ರಾಮದಲ್ಲಿ ಕೆಳಗೆ ಕುಳಿತು ಗ್ರಾಮಸ್ಥರ ಅಹವಾಲು ಪರಿಶೀಲಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ಅವರೆ ದಯವಿಟ್ಟು ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ ತಾವು ಕೂಡ ನನ್ನ ಜೊತೆ ನೀವೂ ಬನ್ನಿ ಹಳ್ಳಿಗಳಿಗೆ ತೆರಳಿ ಇಬ್ಬರು ಒಂದೇ ಚಾಪೇಮೇಲೆ ಕುಳಿತು ಜನರ ಸಮಸ್ಯೆಗೆ ಪರಿಹಾರ ಕಲ್ಪಿಸೋಣ, ಗುಣಕ್ಕೆ ಅಭಿವೃದ್ದಿ ಕೆಲಸಗಳಿಗೆ ಮತ್ಸರವಿಲ್ಲದೆ ಮೆಚ್ಚುಗೆ ಸೂಚಿಸೋಣ ಎಂದು ಶಾಸಕ ಪ್ರದೀಪ್ ಈಶ್ವರ್ ಸಂಸದ ಡಾ.ಕೆ. ಸುಧಾಕರ್ ಅವರಿಗೆ ಬಹಿರಂಗ ಆಹ್ವಾನ ನೀಡಿದರು.
ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೈಯೂರು,ಇಟ್ಟಪನಹಳ್ಳಿ ಮತ್ತು ಗೊಂಗಡಿಪುರ ಗ್ರಾಮಗಳಿಗೆ ೩೬ ಇಲಾಖೆಗಳ ಅಧಿಕಾರಿಗಳೊಂದಿಗೆ ಬೇಟಿ ನೀಡಿ,ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದ್ವೇಶದ ರಾಜಕಾರಣ ಬೇಡ, ಜನಪರ ಕೆಲಸಕ್ಕೆ ಬರುವುದಾದರೆ ಮಾಹಿತಿ ತಿಳಿಸಿ, ನಿಮಗೆ ಕುರ್ಚಿ ವ್ಯವಸ್ಥೆ ಮಾಡಿಸುವೆ, ಮಿನರಲ್ ವಾಟರ್ ಒದಗಿಸುವೆ, ನಾನು ಬಡವ ಚಾಪೇ ಮೇಲೆ ಕುಳಿತು ಕೊಳ್ಳುತ್ತೇನೆ. ಇಬ್ಬರೂ ಕೂಡಿ ಜನರ ಸಮಸ್ಯೆ ಕೇಳೋಣ,ಹಿರಿಯರನ್ನು ದೊಡ್ಡಮ್ಮ ಎಂದು ಕರೆದರೆ ನಿಮಗೇಕೆ ಉರಿಯುತ್ತೋ ಗೊತ್ತಿಲ್ಲ.ಇದು ನಾಟಕ ಅಲ್ಲ ಹೃದಯದ ಮಾತು ಎಂದರು.
ಇದನ್ನೂ ಓದಿ: MLA Pradeep Eshwar: ವಿರೋಧಿಗಳ ವಿರುದ್ಧ ಒಂದು ಗಂಟೆಗೂ ಹೆಚ್ಚುಕಾಲ ವಾಗ್ದಾಳಿ ನಡೆಸಿ ಅಬ್ಬರಿಸಿದ ಪ್ರದೀಪ್
ನಗರ ನಿವಾಸಿಗಳಿಗೆ ಬಿ ಖಾತೆ ನೀಡುವುದರಲ್ಲಿ ವಿಳಂಬದ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ನಗರಸಭೆ ಕಾರ್ಯಗಳಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಖಾತೆ ತಯಾರಿದ್ದರೇ ಅಧ್ಯಕ್ಷರು, ಪೌರಾಯುಕ್ತರು ವಿತರಿಸಲಿ,ಯಾವುದೋ ಕಾರಣಕ್ಕೆ ಪೌರಾಯುಕ್ತರ ಮೇಲೆ ಕೇಸು ದಾಖಲು ಮಾಡುತ್ತೇವೆ ಎಂದರೆ ಪೌರಾಯುಕ್ತರು ಏನು ಮಾಡಬೇಕು ಎಂದರು.
ನAದಿ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಚಿಕ್ಕಬಳ್ಳಾಪುರಕ್ಕೆ ಏನನ್ನೂ ಘೋಷಣೆ ಮಾಡಿಲ್ಲ ಎಂದರೆ ಜಿಲ್ಲೆಯ ಜನರಿಗೆ ಬೇಸರವಾಗಲ್ಲವೇ? ಹಾಗಾಗಿ ನಾವೇ ಖುದ್ದು ಸಭೆಯನ್ನು ಮುಂದೂಡಲು ಮನವಿ ಮಾಡಿದ್ದೆವು.ನಮ್ಮ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಸಭೆಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದರು. ಬರುವ ತಿಂಗಳು ಜುಲೈ ೨ ರಂದು ನಂದಿ ಬೆಟ್ಟದಲ್ಲೇ ಸಚಿವ ಸಂಪುಟ ಸಭೆ ನಡೆಯ ಲಿದ್ದು ಚಿಕ್ಕಬಳ್ಳಾಪುರಕ್ಕೆ ಯೋಜನೆ ಹಾಗೂ ಅನುದಾನ ಘೋಷಣೆಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಶಾಸಕ ಪ್ರದೀಪ್ ಈಶ್ವರ್ ಪ್ರಾರಂಭಿಸಿರುವ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಶೀಘ್ರವೇ 200 ಹಳ್ಳಿಗಳು ಪೊರೈಸಿ ದ್ವಿಶತಕ ಬಾರಿಸುವ ಸನಿಹದಲ್ಲಿದೆ.
ಶುಕ್ರವಾರ ನಡೆದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಜೊತೆ ತೆರಳಿ ಗ್ರಾಮಗಳಲ್ಲಿನ ಮೂಲಭೂತ ಸಮಸ್ಯೆಗಳಾದ ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ದೀಪದ ಸಮಸ್ಯೆ, ಆರೋಗ್ಯ ಸಮಸ್ಯೆ, ಹೊಲಗಳಿಗೆ ತೆರಳುವ ರಸ್ತೆಯ ಸಮಸ್ಯೆ,ಸ್ಮಶಾನ ಜಾಗದ ಒತ್ತುವರಿ ತೆರವು,ಪಿಂಚಣಿ ಸೌಲಭ್ಯ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಹೇಳಿಕೊಂಡಿದ್ದು ಜನರ ಸಮಸ್ಯೆಗಳನ್ನು ಅರಿತು ಅಲ್ಲೆ ನೆರೆದಿದ್ದ ಅಧಿಕಾರಿಗಳಿಗೆ ಆದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಉಳಿದ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಈ ವೇಳೆ ತಾಲೂಕು ತಹಶೀಲ್ದಾರ್ ರಶ್ಮೀ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್, ಎಡಿಎ???ರ್ ವಿವೇಕ್ ಮಹದೇವ್,ತಾಲ್ಲೂಕು ಆರೋಗ್ಯಾಧಿಕಾರಿ, ಪಿಡಿಓ ಸತ್ಯಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ,ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ,ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಮೀಮ್, ಮುಖಂಡರಾದ ಲಾಯರ್ ಮುನೇಗೌಡ, ಗವಿರಾಯಪ್ಪ,ಡಾನ್ಸ್ ಶ್ರೀನಿವಾಸ್, ಅರವಿಂದ್, ಉಮೇಶ್.ಜಿ, ರಮೇಶ್ ಬಾಬು, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.