Viral Video: ಅಬ್ಬಬ್ಬಾ ಇವ್ನ ವೇಷವೇ... ಸೀರೆ ಉಟ್ಟು ರವಿಕೆ ತೊಟ್ಟು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಿಲಾಡಿ ಕಳ್ಳ- ವಿಡಿಯೊ ವೈರಲ್!
ರಾಜಸ್ಥಾನದ ಜೋಧ್ಪುರ ಜಿಲ್ಲೆಯಲ್ಲಿ ಮಹಿಳೆಯಂತೆ ಸೀರೆ-ಬ್ಲೌಸ್ ಧರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಅಪರಾಧಿ ದಯಾ ಶಂಕರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಸೀರೆ, ಬ್ಲೌಸ್ ಧರಿಸಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಜೈಪುರ: ರಾಜಸ್ಥಾನದ ಜೋಧ್ಪುರ ಜಿಲ್ಲೆಯಲ್ಲಿ, ಪೊಲೀಸರನ್ನು ದಾರಿ ತಪ್ಪಿಸಿ ತನ್ನ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಮಹಿಳೆಯ ವೇಷ ಧರಿಸಿದ್ದ ದಯಾ ಶಂಕರ್ ಎಂಬ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೀರೆ, ಬ್ಲೌಸ್ ಧರಿಸಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ದಯಾ ಶಂಕರ್ ವಿರುದ್ಧ ಹೊಡೆದಾಟ, ಹಲ್ಲೆ, ದರೋಡೆ ಮತ್ತು ಬೆದರಿಕೆ ಸೇರಿದಂತೆ 13 ಕ್ರಿಮಿನಲ್ ದಾಖಲೆಗಳಿವೆ ಎಂದು ವರದಿಯಾಗಿದೆ.
ಅಪರಾಧಿಯು ಮಹಿಳೆಯಂತೆ ಸೀರೆಯುಟ್ಟು ಹೊರಗಡೆ ಓಡಾಡುತ್ತಿದ್ದರಿಂದ ಪೊಲೀಸರಿಗೆ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ, ಮೂಲಗಳಿಂದ ಬಂದ ಸುಳಿವಿನ ಮೇರೆಗೆ ಹೆಡ್ ಕಾನ್ಸ್ಟೆಬಲ್ ಶಂಶೇರ್ ಖಾನ್ ನೇತೃತ್ವದಲ್ಲಿ ಪೊಲೀಸ್ ತಂಡ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ವಿಡಿಯೊ ಇಲ್ಲಿದೆ ನೋಡಿ...
राजस्थान के जोधपुर में एक फरार हिस्ट्रीशीटर को पकड़ने पहुंची पुलिस तब चौंक गई, जब आरोपी अपने ही घर में साड़ी-ब्लाउज पहनकर घूंघट ओढ़े बैठा मिला। pic.twitter.com/wwl5p5ywqP
— निशीकांत त्रिवेदी 🇮🇳 (@nishikantlive) June 19, 2025
ವರದಿಗಳ ಪ್ರಕಾರ, ಈ ವರ್ಷದ ಫೆಬ್ರವರಿ 13 ರಂದು ದಯಾ ಶಂಕರ್ ವಿರುದ್ಧ ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿತ್ತು. ದಯಾ ಶಂಕರ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಸೇರಿ 23 ವರ್ಷದ ಪ್ರಿನ್ಸ್ ಚಾವ್ಲಾ ಎಂಬ ಯುವಕನ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಹಾಗೇ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದನು. ಆದರೆ ಸಂತ್ರಸ್ತ ಆತನ ಬೆದರಿಕೆಗೆ ಹೆದರದೆ ಪೊಲೀಸರಿಗೆ ದೂರು ನೀಡಿದ್ದನು.
ಕಳೆದ ಕೆಲವು ದಿನಗಳಿಂದ, ಪೊಲೀಸರು ದಯಾ ಶಂಕರ್ ಮನೆಯ ಮೇಲೆ ಹಲವು ಬಾರಿ ದಾಳಿ ನಡೆಸಿದ್ದರು. ಆದರೆ ಅವನು ಮಹಿಳೆಯರ ಉಡುಪು ಧರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರಿಂದ ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮೂಲವೊಂದು ನೀಡಿದ ಮಾಹಿತಿ ಪ್ರಕಾರ ದಯಾ ಶಂಕರ್ ಮನೆಯಲ್ಲಿರುವ ಮಹಿಳೆ ಬೇರೆ ಯಾರೂ ಅಲ್ಲ, ಅವನೇ ಎಂದು ತಿಳಿಸಿದಾಗ, ಹೆಡ್ ಕಾನ್ಸ್ಟೆಬಲ್ ಶಂಶೇರ್ ಖಾನ್ ನೇತೃತ್ವದಲ್ಲಿ ಪೊಲೀಸರು ಅವರ ಮನೆಯ ಮೇಲೆ ದಾಳಿ ಮಾಡಿ ಅವನನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕೇದಾರನಾಥ ಯಾತ್ರೆಯ ವೇಳೆ ಇದೆಂಥಾ ಹಿಂಸಾಚಾರ? ನಡುರಸ್ತೆಯಲ್ಲಿ ಭಕ್ತರ ಮಾರಾಮಾರಿ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೀರೆಯುಟ್ಟ ದಯಾಶಂಕರ್ ಅನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಇದಕ್ಕೆ ನೆಟಿಜನ್ಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಘಟನೆಯು ಅಪರಾಧಿ ಎಷ್ಟೇ ಬುದ್ಧಿವಂತನಾಗಿ ವೇಷ ಧರಿಸಿದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸುತ್ತದೆ.