Iran's First Supreme Leader: ಭಾರತದ ಈ ಗ್ರಾಮದಲ್ಲಿ ವಾಸವಿದ್ರಂತೆ ಇರಾನ್ನ ಮೊದಲ ಸರ್ವೋಚ್ಚ ನಾಯಕ!
Iran's First Supreme Leader: 1979ರಲ್ಲಿ ಇರಾನ್ನ ಇಸ್ಲಾಮಿಕ್ ಕ್ರಾಂತಿಯನ್ನು ಮುನ್ನಡೆಸಿ ಮೊದಲ ಸರ್ವೋಚ್ಚ ನಾಯಕರಾದ ಖೊಮೇನಿಯವರ ತಾತ, ಸಯ್ಯದ್ ಅಹ್ಮದ್ ಮುಸಾವಿ, 19ನೇ ಶತಮಾನದ ಆರಂಭದಲ್ಲಿ ಉತ್ತರ ಪ್ರದೇಶದ ಬರಾಬಂಕಿ ಬಳಿಯ ಕಿಂತೂರ್ ಗ್ರಾಮದಲ್ಲಿ ಜನಿಸಿದ್ದರು. ಕಿಂತೂರ್ ಶಿಯಾ ವಿದ್ವತ್ಗೆ ಕೇಂದ್ರವಾಗಿತ್ತು. ಬಳಿಕ ಅವರು ಇರಾಕ್ನ ನಜಾಫ್ಗೆ ತೆರಳಿ, 1834ರಲ್ಲಿ ಇರಾನ್ನ ಖೊಮೇನ್ ನಗರದಲ್ಲಿ ನೆಲೆಸಿದರು.


ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ (Middle East) ತೀವ್ರ ಉದ್ವಿಗ್ನತೆಯ ಸಂಘರ್ಷದ ನಡುವೆ, ಇರಾನ್ನ (Iran) ಇಸ್ಲಾಮಿಕ್ ಆಡಳಿತವು ಯುಎಸ್ ಒತ್ತಡ ಮತ್ತು ಇಸ್ರೇಲಿ (Israel) ಕ್ಷಿಪಣಿಗಳಿಗೆ ಬಗ್ಗದಿರಲು ಪಣತೊಟ್ಟಿದೆ. ಆದರೆ, ಈ ಆಡಳಿತದ ಸಂಸ್ಥಾಪಕ, ಟೆಹರಾನ್ನ ಉನ್ನತ ಮಟ್ಟದ ಧಾರ್ಮಿಕ ನಾಯಕ(Iran's First Supreme Leader) ಅಯಾತೊಲ್ಲಾ ರುಹೊಲ್ಲಾ ಮುಸಾವಿ ಖೊಮೇನಿಯವರ ಮೂಲವು ಭಾರತದ ಗ್ರಾಮವೊಂದಕ್ಕೆ ಸಂಬಂಧಿಸಿದೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ.
1979ರಲ್ಲಿ ಇರಾನ್ನ ಇಸ್ಲಾಮಿಕ್ ಕ್ರಾಂತಿಯನ್ನು ಮುನ್ನಡೆಸಿ ಮೊದಲ ಸರ್ವೋಚ್ಚ ನಾಯಕರಾದ ಖೊಮೇನಿಯವರ ತಾತ, ಸಯ್ಯದ್ ಅಹ್ಮದ್ ಮುಸಾವಿ, 19ನೇ ಶತಮಾನದ ಆರಂಭದಲ್ಲಿ ಉತ್ತರ ಪ್ರದೇಶದ ಬರಾಬಂಕಿ ಬಳಿಯ ಕಿಂತೂರ್ ಗ್ರಾಮದಲ್ಲಿ ಜನಿಸಿದ್ದರು. ಕಿಂತೂರ್ ಶಿಯಾ ವಿದ್ವತ್ಗೆ ಕೇಂದ್ರವಾಗಿತ್ತು. ಬಳಿಕ ಅವರು ಇರಾಕ್ನ ನಜಾಫ್ಗೆ ತೆರಳಿ, 1834ರಲ್ಲಿ ಇರಾನ್ನ ಖೊಮೇನ್ ನಗರದಲ್ಲಿ ನೆಲೆಸಿದರು. ಇಲ್ಲಿ ಅವರ ಕುಟುಂಬದ ಧಾರ್ಮಿಕ ಮತ್ತು ರಾಜಕೀಯ ಅಧಿಕಾರದ ಹುಡುಕಾಟ ಆರಂಭವಾಯಿತು. ಮುಸಾವಿಯವರು ‘ಹಿಂದಿ’ ಎಂಬ ಬಿರುದನ್ನು ಉಳಿಸಿಕೊಂಡಿದ್ದು, ಇರಾನ್ ದಾಖಲೆಗಳಲ್ಲಿ ಇದು ಅವರ ಭಾರತೀಯ ವಂಶಾವಳಿಯ ಸಾಕ್ಷಿಯಾಗಿದೆ.
ಖೊಮೇನಿಯವರ ಆಧ್ಯಾತ್ಮಿಕ ಆಸಕ್ತಿಯನ್ನು ಉತ್ತೇಜಿಸಿದ್ದಕ್ಕೆ ಮುಸಾವಿಯೇ ಕಾರಣ ಎಂದು ನಂಗಲಾಗಿದೆ. 1979ರಲ್ಲಿ, ಖೊಮೇನಿಯವರು ಪಾಶ್ಚಿಮಾತ್ಯ ಬೆಂಬಲಿತ ಶಾ ಮೊಹಮ್ಮದ್ ರೆಜಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪಿಸಿದರು. 1989ರಲ್ಲಿ ಅವರ ಮರಣದವರೆಗೆ ಸರ್ವೋಚ್ಚ ನಾಯಕರಾಗಿದ್ದ ಖೊಮೇನಿಯವರು ಟೆಹರಾನ್ನ ಒಂದು ಮಹಡಿಯ ಮನೆಯಲ್ಲಿ ವಾಸಿಸುತ್ತಿದ್ದರು. ಈ ಮನೆಯನ್ನು ಸಯ್ಯದ್ ಮಹ್ದಿ ಇಮಾಮ್ ಜಮಾಹ್ ಉಚಿತವಾಗಿ ನೀಡಿದ್ದರೂ, ಖೊಮೇನಿಯವರು 1000 ರಿಯಾಲ್ ಪಾವತಿಸಿದ್ದರು. ಈಜಿಪ್ಟಿನ ಅಲಂಕಾರಗಳಿಂದ ಕೂಡಿದ ಈ ಮನೆ, ಎರಡು ಸಣ್ಣ ಕೊಠಡಿಗಳನ್ನು ಹೊಂದಿದ್ದು, ಅವರ ಸರಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
ಈ ಸುದ್ದಿಯನ್ನೂ ಓದಿ: Mossad: ಇರಾನ್ ವಿರುದ್ಧದ ಇಸ್ರೇಲ್ ದಾಳಿಯಲ್ಲಿ ಮೊಸಾದ್ ನೆರವಾಗಿದ್ದು ಹೇಗೆ? ಇಲ್ಲಿದೆ ರೋಚಕ ಡಿಟೇಲ್ಸ್
ಖೊಮೇನಿಯ ಉತ್ತರಾಧಿಕಾರಿ ಅಲಿ ಖಮೇನಿಯವರು ಇಂದಿಗೆ ಇರಾನ್ನ ನಾಯಕರಾಗಿದ್ದಾರೆ. ಗುರುವಾರದ ದೂರದರ್ಶನ ಭಾಷಣದಲ್ಲಿ, ಯುಎಸ್ ಒತ್ತಡ ಮತ್ತು ಇಸ್ರೇಲಿ ಕ್ಷಿಪಣಿಗಳಿಗೆ ಬಗ್ಗದಿರುವುದಾಗಿ ಘೋಷಿಸಿದರು. ಏಳನೇ ದಿನವೂ ಇರಾನ್-ಇಸ್ರೇಲ್ ಕ್ಷಿಪಣಿ ದಾಳಿಗಳು ಮುಂದುವರಿದಿವೆ. ಇರಾನ್ನ ಪರಮಾಣು ಕಾರ್ಯಕ್ರಮವನ್ನು ಇಸ್ರೇಲ್ ಅಸ್ತಿತ್ವಕ್ಕೆ ಭೀತಿಯೆಂದು ಪರಿಗಣಿಸಿದ್ದು, ಇದಕ್ಕೆ ಅವಕಾಶ ನೀಡದಿರಲು ಪಣತೊಟ್ಟಿದೆ. ಆದರೆ, ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತ ಉದ್ದೇಶಗಳಿಗೆ ಮಾತ್ರ ಎಂದು ಇರಾನ್ ಪುನರುಚ್ಚರಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಟೆಹರಾನ್ ಯುರೇನಿಯಂ ಶುದ್ಧೀಕರಣವನ್ನು 60%ವರೆಗೆ ಹೆಚ್ಚಿಸಿದ್ದು, ಶಸ್ತ್ರೀಕರಣಕ್ಕೆ ಅಗತ್ಯವಾದ 90%ಗೆ ಸಮೀಪಿಸಿದೆ.