Israel-Iran Conflict: ಯುದ್ಧಪೀಡಿತ ಇರಾನ್ನಿಂದ ಭಾರತೀಯರ ಸ್ಥಳಾಂತರ; 3 ವಿಶೇಷ ವಿಮಾನದಲ್ಲಿ1,000 ಜನರ ಆಗಮ ಸಾಧ್ಯತೆ
ಭಾರತ ಹಾಗೂ ಇರಾನ್ ನಡುವಿನ ಯುದ್ಧ 8 ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ನಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕರೆತರಲು ಭಾರತ ವಿಶೇಷ ವಿಮಾನವನ್ನು ಕಳುಹಿಸುತ್ತಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್, ಭಾರತೀಯ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿದೆ.


ಟೆಹ್ರಾನ್: ಭಾರತ ಹಾಗೂ ಇರಾನ್ ನಡುವಿನ (Israel-Iran Conflict) ಯುದ್ಧ 8 ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ನಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕರೆತರಲು ಭಾರತ ವಿಶೇಷ ವಿಮಾನವನ್ನು ಕಳುಹಿಸುತ್ತಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್, ಭಾರತೀಯ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿದೆ .ಇರಾನ್ನಿಂದ ಮೂರು ವಿಶೇಷ ವಿಮಾನಗಳು ಸುಮಾರು 1,000 ಭಾರತೀಯರನ್ನು ಸಾಗಿಸಲಿದ್ದು, ಮೊದಲ ವಿಮಾನ ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಉಳಿದ ಎರಡು ವಿಮಾನಗಳು ಶನಿವಾರ ಮಧ್ಯಾಹ್ನ ಭಾರತಕ್ಕೆ ಬಂದಿಳಿಯುವ ಇಳಿಯುವ ನಿರೀಕ್ಷೆಯಿದೆ.
ಅಗತ್ಯವಿದ್ದರೆ ಹೆಚ್ಚಿನ ವಿಮಾನಗಳನ್ನು ಆಯೋಜಿಸಲಾಗುವುದು ಎಂದು ಇರಾನಿನ ಅಧಿಕಾರಿಗಳು ಹೇಳಿದ್ದು, ಇರಾನ್ನಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಆಪರೇಷನ್ ಸಿಂಧು ಮೂಲಕ ಇರಾನ್ನಲ್ಲಿರುವ ಭಾರತೀಯರನ್ನು ಕರೆತರಲಾಗುತ್ತಿದೆ. ಇರಾನ್ನಿಂದ ಬರಲು ಬಯಸುವ ಭಾರತೀಯರಿಗಾಗಿ ನಾವು ಈ ಚಾರ್ಟರ್ಡ್ ವಿಮಾನಗಳನ್ನು ನಿಗದಿಪಡಿಸಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, ಬುಧವಾರ ಆಪರೇಷನ್ ಸಿಂಧು ಅಡಿಯಲ್ಲಿ ಕನಿಷ್ಠ 110 ವಿದ್ಯಾರ್ಥಿಗಳನ್ನು, ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ.
ವಿದ್ಯಾರ್ಥಿಗಳನ್ನು ದೋಹಾಗೆ ಕರೆದೊಯ್ಯುವ ಮೊದಲು ಅರ್ಮೇನಿಯಾಗೆ ಕರೆದೊಯ್ಯಲಾಯಿತು. ಗುರುವಾರ ಮುಂಜಾನೆ ವಿದ್ಯಾರ್ಥಿಗಳು ಕತಾರ್ ರಾಜಧಾನಿಯಿಂದ ದೆಹಲಿಗೆ ಬಂದರು. ಇರಾನ್ನಲ್ಲಿ ಸುಮಾರು 10,000 ಭಾರತೀಯರಿದ್ದಾರೆ. ಅದರಲ್ಲಿ ಸುಮಾರು 1,500-2,000 ವಿದ್ಯಾರ್ಥಿಗಳು ಮತ್ತು 6,000 ಕ್ಕೂ ಅಧಿಕ ಜನರು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್; ಇರಾನ್-ಇಸ್ರೇಲ್ ಡೆಡ್ಲಿ ಅಟ್ಯಾಕ್ ವಿಡಿಯೊ ವೈರಲ್
ಗುರುವಾರ, ಇಸ್ರೇಲ್ನಿಂದ ಬರಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪ್ರಾರಂಭಿಸುವುದಾಗಿ ಭಾರತ ಘೋಷಿಸಿತು , ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಅವರು ಭೂ ಗಡಿಗಳ ಮೂಲಕ ಹೊರಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಇಸ್ರೇಲ್ನಿಂದ ಹೊರಹೋಗಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಿರ್ಧರಿಸಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕಾರ್ಯಾಚರಣೆಯ ಜಾರಿ ಮತ್ತು ಸಮನ್ವಯವನ್ನು ನೋಡಿಕೊಳ್ಳುತ್ತದೆ.