ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Book Release: ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳ ಲೋಕಾರ್ಪಣೆ ಮಾಡಿದ ರಾಘವೇಶ್ವರ ಭಾರತೀ ಸ್ವಾಮೀಜಿ

Book Release: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಅವರ 'ತತ್ತ್ವಭಾಗವತಮ್' ಪ್ರವಚನಗಳನ್ನಾಧರಿಸಿದ 'ಪಿಬತ ಭಾಗವತಮ್', 'ನಲ ದಮಯಂತಿ', 'ಕಲಿ ಸಂತರಣ' ಹಾಗೂ 'ಅವತಾರಕಥಾ' ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ನಗರದ ಶ್ರೀರಾಮಚಂದ್ರಾಪುರ ಮಠದ ಬೆಂಗಳೂರು ಗಿರಿನಗರ ಶಾಖೆಯಲ್ಲಿ ಜರುಗಿತು.

‘ತತ್ತ್ವಭಾಗವತಮ್’ ನಾಲ್ಕು ಕೃತಿಗಳ ಲೋಕಾರ್ಪಣೆ ರಾಘವೇಶ್ವರ ಭಾರತೀ ಶ್ರೀ

Profile Siddalinga Swamy Jun 23, 2025 5:01 PM

ಬೆಂಗಳೂರು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ 'ತತ್ತ್ವಭಾಗವತಮ್' ಪ್ರವಚನಗಳನ್ನಾಧರಿಸಿದ 'ಪಿಬತ ಭಾಗವತಮ್', 'ನಲ ದಮಯಂತಿ', 'ಕಲಿ ಸಂತರಣ' ಹಾಗೂ 'ಅವತಾರಕಥಾ' ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು (Book Release) ನಗರದ ಶ್ರೀರಾಮಚಂದ್ರಾಪುರ ಮಠದ ಬೆಂಗಳೂರು ಗಿರಿನಗರ ಶಾಖೆಯಲ್ಲಿ ನಡೆಯಿತು. ಶ್ರೀಭಾರತೀ ಪ್ರಕಾಶನದಿಂದ ಪ್ರಕಟವಾದ, ಶ್ರೀಮದ್ಭಾಗವತದ ಕುರಿತಾದ ಪುಸ್ತಕಗಳನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ಪುಸ್ತಕಗಳ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಅನುರಾಧಾ ಪಾರ್ವತಿ ಅವರು ಉಪಸ್ಥಿತರಿದ್ದರು.

ಭಾರವಿ, ಮಲ್ಲಿನಾಥ ಸೂರಿ, ವಾಚಸ್ಪತಿ ಮಿಶ್ರ, ಪಾಣಿನಿ, ಮೀರ ಇವರ ಅದ್ಭುತ ಕಥೆಗಳು ಪಿಬತ ಭಾಗವತಮ್ ಪುಸ್ತಕದಲ್ಲಿದೆ. ಹಲವು ಮಹನೀಯರ ಚರಿತ್ರೆಯ ಮೂಲಕ ಲೋಕೋಪಕಾರಿ ಸಾಧನೆ, ಮೋಕ್ಷ ಸಾಧನೆ ಮಾಡಬಹುದು ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಪಂಚ ಪಾಂಡವರ ನಿರ್ಯಾಣದ ಕಥನ, ಕಲಿಯ ಪ್ರವೇಶ, ಪರೀಕ್ಷಿತ ಮೋಕ್ಷ ಇವೆಲ್ಲದರ ಚಿತ್ರಣ ಕಲಿಸಂತರಣ ಪುಸ್ತಕದಲ್ಲಿದೆ. ರಾಮ ಸೀತೆಯರಿಗೆ ಆದರ್ಶವಾದ ನಲ ದಮಯಂತಿಯರ ಅದ್ಭುತ ಕಥನ ನಲ ದಮಯಂತಿ ಪುಸ್ತಕದಲ್ಲಿದೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ ಇವರ ಕಥಾನಕ ಅವತಾರಕಥಾ ಪುಸ್ತಕದಲ್ಲಿದೆ.

ಈ ಸುದ್ದಿಯನ್ನೂ ಓದಿ | SBI Recruitment 2025: ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ. ಎಲ್., ಶ್ರೀಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್ ಎಲ್. ಎಸ್., ಹಿರಿಯ ಉಪಾಧ್ಯಕ್ಷ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಧರ್ಮಭಾರತೀ ಸಂಪಾದಕ ಗಣೇಶ್ ಕೃಷ್ಣ ಹೆಗಡೆ ಹಾಗೂ ಪ್ರಕಾಶನ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.