Siddaganga Sri: ಯಲುವಳ್ಳಿ ಎನ್ ರಮೇಶ್ ಮನೆಗೆ ಸಿದ್ದಗಂಗಾ ಶ್ರೀಗಳ ಭೇಟಿ
ರಮೇಶ್ ಅವರ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಅವರ ಸಾಧನೆ ಹಾಗು ಸುಖಕರ ಜೀವನಕ್ಕೆ ರಮೇಶ್ ದಂಪತಿಯ ಕುಟುಂಬವನ್ನು ಎಷ್ಟು ಒಳ್ಳೆಯ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬುದೆ ಸಾಕ್ಷಿಯಾಗಿದೆ ಅವರ ಸುಪುತ್ರ ಜನಾರ್ದನ್ ತಮ್ಮ ಕೆಲಸಗಳ ನಡುವೆಯೂ ತಂದೆಗೆ ಜೊತೆಗಿದ್ದು ಕೆಲಸಗಳನ್ನು ಮುನ್ನಡೆಸಿ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ


ಚಿಕ್ಕಬಳ್ಳಾಪುರ : ಕಷ್ಟಗಳನ್ನು ಎದುರಿಸಿ ಶ್ರಮಪಟ್ಟು ಮೇಲೆ ಬಂದ ಯಲುವಳ್ಳಿ ರಮೇಶ್ ರಾಜಕೀಯ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಕಿಂಚಿತ್ತೂ ಅಹಮ್ ಇಲ್ಲದೆ ಸರಳ ಜೀವನ ಸಾಗಿಸುತ್ತಿರುವ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ರಮೇಶ್ ಅವರಲ್ಲಿ ದೈವಭಕ್ತಿ, ಗುರುಭಕ್ತಿ ತುಂಬಿದೆ ಜೀವನದಲ್ಲಿ ಸಾಧನೆಗೆ ತಾಯಿ ಮತ್ತು ಕೈ ಹಿಡಿದ ಮಡದಿಯ ಪಾತ್ರ ಬಹು ಮುಖ್ಯವಾದದ್ದು ತನ್ನ ಸಾಧನೆಯಲ್ಲಿ ತಾಯಿ ಹಾಗು ಅವರ ಮಡದಿಯ ಜೋತೆ ಇದೆ ಯಾವುದೇ ಹಿನ್ನೆಲೆಯಿಲ್ಲದೆ ತಮ್ಮ ಶ್ರಮದಿಂದ ಮೇಲೆ ಬಂದು ಜನರ ಪ್ರೀತಿ ಹಾಗು ಗೌರವಕ್ಕೆ ಪಾತ್ರರಾಗಿದ್ದಾರೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಅವರು ಖಾಸಗಿ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ವೇಳೆ ಯಲುವಳ್ಳಿ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಹಾಗು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ರಮೇಶ್ ಅವರ ಅಹ್ವಾನದ ಮೇರೆಗೆ ಎನ್ ರಮೇಶ್ ನಿವಾಸಕ್ಕೆ ಬೇಟಿ ನೀಡಿ ಪೂಜೆ ಸ್ವೀಕರಿಸಿ ಇಡೀ ಕುಟುಂಬಕ್ಕೆ ಆಶೀರ್ವಚನ ನೀಡಿದರು.ಈ ವೇಳೆ ಯಲುವಳ್ಳಿ ಎನ್ ರಮೇಶ್ ಅವರು ಶ್ರೀ ಸಿದ್ದಲಿಂಗ ಮಹಾ ಸ್ವಾಮಿ ಅವರ ಪಾದ ಪೂಜೆ ಮಾಡಿ ಕುಟುಂಬ ಸಮೇತ ಆಶೀರ್ವಾದ ಪಡೆದರು ಕಾಣಿಕೆಯನ್ನೂ ಸಹ ರಮೇಶ್ ಮಠಕ್ಕೆ ಅರ್ಪಿಸಿದರು.
Roopa Gururaj Column: ಅಜ್ಞಾನದಿಂದ ಅಮೃತವನ್ನು ನಿರಾಕರಿಸಿದ ಉತ್ತುಂಕ
ಪಾದಪೂಜೆ ಸ್ವೀಕರಿಸಿದ ನಂತರ ಮಾತನಾಡಿದ ಶ್ರೀಗಳು ರಮೇಶ್ ಅವರ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಅವರ ಸಾಧನೆ ಹಾಗು ಸುಖಕರ ಜೀವನಕ್ಕೆ ರಮೇಶ್ ದಂಪತಿಯ ಕುಟುಂಬವನ್ನು ಎಷ್ಟು ಒಳ್ಳೆಯ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬುದೆ ಸಾಕ್ಷಿಯಾಗಿದೆ ಅವರ ಸುಪುತ್ರ ಜನಾರ್ದನ್ ತಮ್ಮ ಕೆಲಸಗಳ ನಡುವೆಯೂ ತಂದೆಗೆ ಜೊತೆಗಿದ್ದು ಕೆಲಸಗಳನ್ನು ಮುನ್ನಡೆಸಿ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ಅವರು ಸ್ಪರ್ಧಿಸಲು ಬಯಸಿದ್ದು ದೇವರು ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡ್ಲಿ ರಮೇಶ್ ಅವರಿಗೆ ಭಗವಂತ ಆಯಸ್ಸು ಆರೋಗ್ಯ ನೀಡಲಿ ಅವರ ಕುಟುಂಬದ ಮೇಲೆ ಭಗವಂತನ ಕೃಪೆ ಇರಲಿ ಎಂದರು.
ಇದೇ ವೇಳೆ ಮಾತನಾಡಿದ ಎನ್ ರಮೇಶ್ ರಾಜ್ಯದಲ್ಲಿ ಅನ್ನದಾಸೋಹ, ಅಕ್ಷರ ದಾಸೋಹ ಕಾರ್ಯ ಕ್ರಮಗಳನ್ನ ಅತಿ ಹೆಚ್ಚು ಸಿದ್ದಗಂಗಾ ಮಠ ಹಾಗು ಆದಿಚುಂಚನಗಿರಿ ಚುಂಚನಗಿರಿ ಮಹಾಸಂಸ್ಥಾನ ಮಾಡುತ್ತಿದೆ,ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದನೂ ಪಡೆದಿದ್ದೇನೆ ಅವರ ಪಾದ ಪೂಜೆ ಮಾಡ್ಲಿಕ್ಕೆ ನನಗೆ ಆಸೆಯಿತ್ತು ಆದ್ರೆ ಆಗಲಿಲ್ಲ ಈಗ ಮಠದ ಸಿದ್ದಲಿಂಗ ಮಹಾಸ್ವಾಮಿಗೆ ಪಾದ ಪೂಜೆ ಮಾಡಲು ಮಠಕ್ಕೆ ಒಂದಿಷ್ಟು ಕಾಣಿಕೆ ನೀಡಲು ಬಯಸಿದ್ದೆ ಇಂದು ಆ ಸಮಯ ಕೂಡಿ ಬಂದಿದೆ ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿ ಅವರ ಪಾದ ಪೂಜೆ ಕುಟುಂಬ ಸಮೇತ ಮಾಡಿದ್ದು ನನ್ನ ಸೌಭಾಗ್ಯ ಅವರ ಸೇವೆ ಮನಸ್ಸಿಗೆ ಸಮಾಧಾನ ತೃಪ್ತಿ ನೀಡಿದ್ದು ಕುಟುಂಬ ಸದಸ್ಯರೆಲ್ಲರು ಮಹಾಸ್ವಾಮಿ ಅವರ ಆಶೀರ್ವಾದ ಪಡೆಯಲಾಗಿದೆ ಎಂದರು.
ಈ ವೇಳೆ ಪುತ್ರ ಜನಾರ್ದನ್ ರಮೇಶ್ ಹೆಂಡತಿ ಹಾಗು ಕುಟುಂಬ ಸಮೇತ ಪೂಜೆಯಲ್ಲಿ ಪಾಲ್ಗೊಂಡಿ ದ್ಸರು ರಮೇಶ್ ಅಭಿಮಾನಿಗಳು ಸಹ ಹಾಜರಿದ್ದರು.