ಸರಕಾರಕ್ಕೆ ಈಗ ಸಚಿವರು, ಶಾಸಕರೇ ಪರೋಕ್ಷ ಪ್ರತಿಪಕ್ಷ !
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕಟ್ಟಿ ಹಾಕಬೇಕಾಗಿದ್ದ ಬಿಜೆಪಿಯು ಸಮರ್ಥ ಪ್ರತಿಪಕ್ಷವಾಗಿ ರೂಪುಗೊಳ್ಳಲಾಗದೆ ಅದರ ಪಾತ್ರವನ್ನು ಪರೋಕ್ಷವಾಗಿ ಕಾಂಗ್ರೆಸ್ ನಾಯಕರೇ ನಿರ್ವಹಿಸುವಂತಾಗಿದೆ. ಅಧಿಕೃತ ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟಗಳನ್ನು ಸರಕಾರದ ವಿರುದ್ಧದ ಹೇಳಿಕೆಗಳಿಗೆ ಸೀಮಿತ ಗೊಳಿಸುತ್ತಿದ್ದು, ತಾರ್ಕಿಕಗೊಳ್ಳದ ಪ್ರತಿಭಟನೆಗಳನ್ನು ನಡೆಸಿ ಕೈ ಚೆಲ್ಲುತ್ತಿದೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಿ.ಆರ್. ಪಾಟೀಲ್ ತಂದ ಪೀಕಲಾಟ
ಕುಸಿದ ಬಿಜೆಪಿ ಹೋರಾಟ
ರಾಜ್ಯಪಾಲರ ಹನ್ನೊಂದು ಚಾಟಿ ಏಟು
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕಟ್ಟಿ ಹಾಕಬೇಕಾಗಿದ್ದ ಬಿಜೆಪಿಯು ಸಮರ್ಥ ಪ್ರತಿಪಕ್ಷವಾಗಿ ರೂಪುಗೊಳ್ಳಲಾಗದೆ ಅದರ ಪಾತ್ರವನ್ನು ಪರೋಕ್ಷವಾಗಿ ಕಾಂಗ್ರೆಸ್ ನಾಯಕರೇ ನಿರ್ವಹಿಸು ವಂತಾಗಿದೆ. ಅಧಿಕೃತ ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟಗಳನ್ನು ಸರಕಾರದ ವಿರುದ್ಧದ ಹೇಳಿಕೆ ಗಳಿಗೆ ಸೀಮಿತಗೊಳಿಸುತ್ತಿದ್ದು, ತಾರ್ಕಿಕಗೊಳ್ಳದ ಪ್ರತಿಭಟನೆಗಳನ್ನು ನಡೆಸಿ ಕೈ ಚೆಲ್ಲುತ್ತಿದೆ. ಹಾಗೆ ನೋಡಿದರೆ, ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಅವರೇ ಪ್ರತಿಪಕ್ಷವನ್ನೂ ಮೀರಿಸುವಷ್ಟರ ಮಟ್ಟಿಗೆ ಸರಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸುತ್ತಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಕೆಲವು ಸಚಿವರು ಮತ್ತು ಅನೇಕ ಶಾಸಕರೇ ಸರಕಾರದ ವಿರುದ್ಧ ತಿರುಗಿಬೀಳುತ್ತಿದ್ದು, ಆಗಾಗ ಮುಜುಗರ ತರುತ್ತಿದ್ದಾರೆ. ಇದರಿಂದ ಸರಕಾರ ಬಿಜೆಪಿಗಿಂತ ತನ್ನ ಪಕ್ಷದೊಳಗೇ ಪ್ರತಿಪಕ್ಷವನ್ನು ಕಾಣುವಂತಾಗಿದೆ. ಅಂದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಆಗಿರುವ ಹಿರಿಯ ಶಾಸಕ ಬಿ.ಆರ್.ಪಾಟೀಲ, ಆರ್ಥಿಕ ಸಲಹೆಗಾರರೂ ಆದ ಮತ್ತೊಬ್ಬ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹಾಗೂ ಕಾನೂನು ಸಚಿವ ಎಚ್.ಕೆ.ಪಾಟೀಲ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ನಾಯಕರು ಆಗಾಗ ಸರಕಾರದ ವಿರುದ್ಧ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಬಾಂಬ್ ಸಿಡಿಸಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಇದನ್ನೂ ಓದಿ: R T Vittalmurthy Column: ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು ?
ಹಾಗೆಯೇ ಮುಡಾ ಹಗರಣದ ಆರೋಪಗಳಿಗೆ ಕಾರಣರಾದ ಸಚಿವ ಭೈರತಿ ಸುರೇಶ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರನ್ನು ಬಣ್ಣದ ಹೆಸರಿನಲ್ಲಿ ಟೀಕಿಸುವುದು ಸೇರಿದಂತೆ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಕೂಡ ಸಿಎಂ ಗರಂ ಆಗಿದ್ದಾರೆ.
ಹೀಗಾಗಿ ಕಾಂಗ್ರೆಸ್ನ ಅನೇಕ ಸಚಿವರು, ನಾಯಕರೇ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿ, ಅನೇಕ ಅಸಗಳನ್ನು ಪರೋಕ್ಷವಾಗಿ ಬಿಜೆಪಿಗೆ ನೀಡಿದರೂ ಪ್ರತಿಪಕ್ಷ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ಬಿಜೆಪಿಯ ಅನೇಕ ಶಾಸಕರು, ಮುಖಂಡರು, ಪ್ರತಿಪಕ್ಷ ನಾಯಕರ ವಿರುದ್ಧ ಬಹಿರಂಗವಾಗಿಯೇ ಸಿಡಿದೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಇಂಥ ವೈಫಲ್ಯಗಳ ಮಧ್ಯೆ, ರಾಜ್ಯಪಾಲ ಗೆಲ್ಹೋಟ್ ರಾಜ್ಯದ ಇತಿಹಾಸದ ಪ್ರಥಮ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಸರಕಾರದ 11 ಮಸೂದೆಗಳನ್ನು ತಡೆಹಿಡಿದು ಸರಕಾರವನ್ನು ಇಕ್ಕಿಟಿಗೆ ಸಿಲುಕಿಸಿzರೆ. ಈ 11 ಮಸೂದೆಗಳ ಪೈಕಿ ಸುದೀರ್ಘ ವಿವರಗಳನ್ನು ಕೇಳಿ ಸದ್ಯ 5 ಮಸೂದೆ ಗಳನ್ನು ಮಾತ್ರ ಮುಕ್ತಗೊಳಿಸಿzರೆ. ಉಳಿದ ೫ ಮಸೂದೆಗಳನ್ನು ರಾಷ್ಟಪತಿ ಅವರಿಗೆ ಕಳುಹಿಸಿದ್ದಾರೆ.
ಇದ್ದಲ್ಲದೆ ಇನ್ನೂ ಎರಡು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಮತ್ತು ಕೆಪಿಎಸ್ಸಿ ತಿದ್ದುಪಡಿ ಮಸೂದೆಗಳು ತಿರಸ್ಕಾರದ ನಂತರ ಸರಕಾರದ ಉಳಿದಿವೆ. ಹೀಗಾಗಿ ಇತ್ತೀಚೆಗೆ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿಗಿಂತ ಸರಕಾರದೊಳಗಿನ ಸಚಿವರು, ಶಾಸಕರು ಪ್ರತಿಪಕ್ಷದಂತಾಗಿದ್ದಾರೆ ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದಾರೆ.
ಸಚಿವರು ಮಾಡಿದ್ದೇನು?
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿರ್ಲಕ್ಷದಿಂದ ರಾಜ್ಯದಲ್ಲಿ ಮುಡಾ ಹಗರಣದ ಸದ್ದು ಮಾಡಿ, ಇದರಿಂದ ಬಹುತೇಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗೇ ಕುತ್ತು ಬಂದಂತಾಗಿತ್ತು. ಇದೇ ರೀತಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಸ್ಪೀಕರ್ ಯು.ಟಿ.ಖಾದರ್ ಅವರ ಆಯ್ಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದು ಪಕ್ಷದ ಹೈಕಮಾಂಡ್ವರೆಗೂ ಹೋಗಿತ್ತು. ಇದೀಗ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ನಲ್ಲಿ ಹಗರಣ ಕುರಿತ ಶಾಸಕ ಬಿ.ಆರ್. ಪಾಟೀಲ್ ಹೇಳಿಕೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಜತೆಗೆ ನಡೆಸಿದ ಫೋನ್ ಸಂಭಾಷ ಣೆಯ ಆಡಿಯೋ ಲೀಕ್ ಆಗಿದ್ದು, ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿದೆ ಎನ್ನಲಾಗಿದೆ. ಇದೇ ರೀತಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಗಣಿ ಹಗರಣ ಬಗ್ಗೆ ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದು ಸರಕಾರಕ್ಕೆ ಮುಜುಗರ ತಂದಿದ್ದರು. ಅಕ್ರಮ ಗಣಿಗಾರಿಕೆ ವಿಚಾರ ಮುಂದಿಟ್ಟು ಹೋರಾಟ ಮಾಡಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಈಗ ಅದರ ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ಇದರಿಂದ ರಾಜ್ಯಕ್ಕೆ 1.50 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದರು.
ಸರಕಾರದ ವಿರುದ್ಧ ಶಾಸಕರ ಗುಡುಗು
ಸರಕಾರ ಅಧಿಕಾರಕ್ಕೆ ಬಂದ ಆರಂಭದ ಸುಮಾರು 20ಕ್ಕೂ ಹೆಚ್ಚು ಸಚಿವರು ತಮಗೆ ಸ್ಪಂದಿಸುತ್ತಿಲ್ಲ ವೆಂದು ಬೇಸರಗೊಂಡು ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ 10 ಶಾಸಕರೊಂದಿಗೆ ಸಹಿ ಮಾಡಿರುವ ಜಂಟಿ ಪತ್ರವೊಂದು ಬಿಡುಗಡೆಯಾಗಿತ್ತು. ಇದಾದ ಕೆಲವು ತಿಂಗಳ ನಂತರ ಪಾಟೀಲ್ ಅವರು, ವಿಧಾನಸಭೆಯಲ್ಲಿ ತಮಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ತಮ್ಮನ್ನು ಯಾವುದೇ ರೀತಿಯಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿ ದ್ದರು. ಈಗ ವಸತಿ ಇಲಾಖೆ ಹಗರಣವನ್ನು ಸಂಭಾಷಣೆ ಮೂಲಕ ಬಯಲಿಗೆಳೆದಿದ್ದಾರೆ. ಇದೇ ರೀತಿ, ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಂಧನ ಇಲಾಖೆ ಅಧಿಕಾರಿಗಳು, ಸಚಿವರು ತಮಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿಗೆ ಪತ್ರ ಬರೆದು, ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಗುಡುಗಿದ್ದರು.
ಇದಾದ ಕೆಲವು ತಿಂಗಳ ನಂತರ ರಾಯರಡ್ಡಿ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಯಾವುದೇ ಪಕ್ಷದ ಸರಕಾರ ಇದ್ದರೂ ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ ಎಂದಿದ್ದರು.
ಬಿಜೆಪಿ ಬಚ್ಚಿಟ್ಟ ಅಸ್ತ್ರಗಳು
ಬಿಜೆಪಿ ವಿರೋಧಿಸುವ ಕಾಂಗ್ರೆಸ್ನ ಅನೇಕ ನೀತಿ, ನಿರ್ಧಾರಗಳು ಅಸಗಳಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವುಗಳು ರಾಜಕೀಯ ಟೀಕೆಗಷ್ಟೇ ಸೀಮಿತವಾಗಿ ಅಂತ್ಯ ಕಂಡಿವೆ. ಅವುಗಳೆಂದರೆ,
೧. ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲು ನೀಡುವುದು. ಈಗ ವಸತಿ ಯೋಜನೆಗಳಲ್ಲಿ ಸಹ ಮುಸ್ಲಿಂ ಸಮುದಾಯಕ್ಕೆ ಶೇ.15ರಷ್ಟು ಮೀಸಲು ನೀಡಲು ತೀರ್ಮಾನ.
೨. ಮಂಗಳೂರಿನಲ್ಲಿ ಪ್ರವೀಣ ನೆಟ್ಟಾರು ಕೊಲೆ, ಫಾಸಿಲ್ ಹತ್ಯೆ, ಸುಹಾಸ್ ಶೆಟ್ಟಿ ಹತ್ಯೆ, ಅಬ್ದುಲ್ ರಹ್ಮಾನ್ ಸೇರಿದಂತೆ ಇಡೀ ಜಿಲ್ಲೆ ರಕ್ತಸಿಕ್ತವಾಗಿರುವುದು.
೩. ಇತ್ತೀಚೆಗಷ್ಟೇ ಇಸ್ರೇಲ್ ಕಾನ್ಸುಲೇಟ್ ಜನರಲ್ನ ಡೆಪ್ಯುಟಿ ಕಾನ್ಸುಲ್ ಜನರಲ್ ಇನ್ಬಾಲ್ ಸ್ಟೋನ್ ಅವರನ್ನು ಗೌರವಿಸಿ ಇಸ್ರೇಲ್ ಸಂಬಂಧಗಳನ್ನು ಬಲಪಡಿಸುವ ಮಾತನಾಡಿದ ಬೆನ್ನಲ್ಲೇ ಈಗ ಇಸ್ರೇಲ್-ಇರಾನ್ ಯುದ್ಧದಲ್ಲಿ ಭಾರತ ಇರಾನ್ ಪರ ನಿಲ್ಲುವಂತೆ ಕೇಂದ್ರ ಸರಕಾರವನ್ನು ರಾಜ್ಯ ಸರಕಾರ ಒತ್ತಾಯಿಸುತ್ತಿರುವುದು.
೪. ಸಹಕಾರಿ ಸಚಿವ ಕೆ.ಎನ್.ರಾಜಣ್ಣನವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಸಹಕಾರ ಇಲಾಖೆಯ ಸೇವೆ ಮತ್ತು ಜಾಹಿರಾತುಗಳೂ ಸೇರಿದಂತೆ ಇತರ ವೆಚ್ಚಕ್ಕೆ ಅನುದಾನ ಬಳಸಿಕೊಂಡಿ ರುವ ಆರೋಪಗಳು.