MLA K H PuttaswamyGowda: ಮುಖ್ಯಮಂತ್ರಿಗಳ ಎದುರು ಮೂರು ಬೇಡಿಕೆ ಈಡೇರಿಸಲು ಮನವಿ ಮಾಡುವೆ: ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ.
ಗೌರಿಬಿದನೂರು ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಶಾಸಕನಾಗಿ ಹಾಗೂ ತಾಲೂಕಿನ ಅಭಿವೃದ್ಧಿ ಕುರಿತಾಗಿ ಪ್ರಧಾನವಾಗಿ 3 ಬೇಡಿಕೆಗಳಿದ್ದು ಅವುಗಳ ಈಡೇರಿಸುವಂತೆ ಮನವಿ ಮಾಡಲಾಗುವುದು ಎಂದು ಶಾಸಕ ಪುಟ್ಟ ಸ್ವಾಮಿಗೌಡ ತಿಳಿಸಿದರು.

ಶಾಸಕ ಪುಟ್ಟಸ್ವಾಮಿಗೌಡ

ಚಿಕ್ಕಬಳ್ಳಾಪುರ: ಗೌರಿಬಿದನೂರು ಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಶಾಸಕನಾಗಿ ಹಾಗೂ ತಾಲೂಕಿನ ಅಭಿವೃದ್ಧಿ ಕುರಿತಾಗಿ ಪ್ರಧಾನವಾಗಿ ೩ ಬೇಡಿಕೆಗಳಿದ್ದು ಅವುಗಳ ಈಡೇರಿಸುವಂತೆ ಮನವಿ ಮಾಡಲಾಗುವುದು ಎಂದು ಶಾಸಕ ಪುಟ್ಟ ಸ್ವಾಮಿಗೌಡ ತಿಳಿಸಿದರು.
ನಗರದ ನೇತಾಜಿ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಸಿದ ಸುದ್ದಿಗೋಷ್ಟಿ ಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: M. Chinnaswamy Stadium: ಸ್ಥಳಾಂತರವಾಗುತ್ತಾ ಚಿನ್ನಸ್ವಾಮಿ ಸ್ಟೇಡಿಯಂ: ಸಿಎಂ ಹೇಳಿದ್ದೇನು?
ಗೌರಿಬಿದನೂರು ನಗರಕ್ಕೆ ಒಳಚರಂಡಿ ವ್ಯವಸ್ಥೆ ಮಾಡಬೇಕಾಗಿದ್ದು ಇದಕ್ಕಾಗಿ ೧೮೦ ಕೋಟಿ ಅನುದಾನ ಬೇಕಾಗಿದೆ. ಇದನ್ನು ಒದಗಿಸಿದರೆ ನಗರದ ಆರೋಗ್ಯವೃದ್ಧಿಗೆ ಸಹಾಯ ಮಾಡಿದಂತೆ ಆಗಲಿದೆ ಎಂದರು.
ಎರಡನೆಯದಾಗಿ ಅಲೀಪುರಕ್ಕೆ ಪಟ್ಟಣ ಪಂಚಾಯಿತಿ ಸ್ಥಾನಮಾನ ನೀಡಬೇಕು ಟೋಲ್ನಿಂದ ಹಿಂದೂಪುರ ಗಡಿಯವರೆಗಿನ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಅಮಾಯಕ ಜನರು ಅಸುನೀಗುತ್ತಿದ್ದಾರೆ.ಇದು ತಪ್ಪಬೇಕಾದರೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಬೇಕಿದೆ.ಈ ಮೂರು ಬೇಡಿಕೆಗಳು ಸಮಂಜಸವಾಗಿದ್ದು ಇವುಗಳ ಪೈಕಿ ಒಂದಷ್ಟಾದರೂ ಈಡೇರುತ್ತವೆ ಎಂಬ ನಂಬಿಕೆಯಿದೆ ಎಂದರು.