ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೀಕಲ್ ರಾಮಚಂದ್ರಗೌಡ ಆಯ್ಕೆ: ಕಾರ್ಯಕರ್ತರಲ್ಲಿ ಸಂಭ್ರಮ

ಸೀಕಲ್ ರಾಮಚಂದ್ರಗೌಡರು ಮೂಲತಃ ಚಿಂತಾಮಣಿ ತಾಲೂಕಿನವರಾಗಿದ್ದು ಬೆಂಗಳೂರು ಸೇರಿದಂತೆ ದೇಶದ ನಾನಾ ಕಡೆ ಆಸ್ಪತ್ರೆಗಳನ್ನು ತೆರೆದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ 15446 ಮತಗಳನ್ನು ಪಡೆಯವ ಮೂಲಕ ಕ್ಷೇತ್ರದ ಗಮನ ಸೆಳೆದಿದ್ದರು.ಅಲ್ಲಿಂದ ಈವರೆಗೆ ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೀಕಲ್ ರಾಮಚಂದ್ರಗೌಡ ಆಯ್ಕೆ

ಸೀಕಲ್ ರಾಮಮಚಂದ್ರಗೌಡ

Profile Ashok Nayak Jun 11, 2025 10:41 PM

ಚಿಕ್ಕಬಳ್ಳಾಪುರ : ಅಂತೂ ಇಂತೂ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಗಿದ್ದ ಗೊಂದಲ ನಿವಾರಣೆ ಮಾಡಿರುವ ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಉದ್ಯಮಿ ಸೀಕಲ್ ರಾಮಚಂದ್ರಗೌಡ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್ ಬುಧವಾರ ಸಂಜೆ ಆಧಿಕೃತ ಆದೇಶ ಹೊರಡಿಸಿದ್ದಾರೆ.

ಸೀಕಲ್ ರಾಮಚಂದ್ರಗೌಡರು ಮೂಲತಃ ಚಿಂತಾಮಣಿ ತಾಲೂಕಿನವರಾಗಿದ್ದು ಬೆಂಗಳೂರು ಸೇರಿದಂತೆ ದೇಶದ ನಾನಾ ಕಡೆ ಆಸ್ಪತ್ರೆಗಳನ್ನು ತೆರೆದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ 15446 ಮತಗಳನ್ನು ಪಡೆಯವ ಮೂಲಕ ಕ್ಷೇತ್ರದ ಗಮನ ಸೆಳೆದಿದ್ದರು.ಅಲ್ಲಿಂದ ಈವರೆಗೆ ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: Chikkaballapur News: ಒಂದು ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ದರ್ಗಾ ನಿರ್ವಹಣೆ ಮಾಡಿರುವ ಮೌಲಾ ಅಲಿ

ಶಿಡ್ಲಘಟ್ಟ ನಗರದಲ್ಲಿ ಮಯೂರ ಥಿಯೇಟರ್ ಇದ್ದ ಜಾಗವನ್ನು ಖರೀಧಿಸಿ ಅಲ್ಲಿ ಪಕ್ಷದ ಕಾರ್ಯಚಟವಟಿಕೆ ನಡೆಸಲು ಸೇವಾ ಸೌಧ ನಿರ್ಮಿಸಿ ಇಂದಿಗೂ ಕೂಡ ಪಕ್ಷದ ಕಾರ್ಯಕ್ರಮಗಳಿಗೆ ಖಾಯಂ ನೆಲೆಯನ್ನು ಕಲ್ಪಿಸಿದ್ದಾರೆ. ಉತ್ತಮ ಸಂಘಟಕರಾಗಿ,ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಕೊಡುಗೈದಾನಿಯಾಗಿ, ಪಕ್ಷದ ಜಿಲ್ಲಾ ರಾಜ್ಯ ರಾಷ್ಟçಮಟ್ಟದ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವುದೇ ಇರುವ ಆಯ್ಕೆ ಹಿಂದಿರುವ ಶಕ್ತಿಯಾಗಿದೆ.

ಸಂಘಟನಾ ಚತುರರಾದ ಸೀಕಲ್ ರಾಮಚಂದ್ರಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಬೀಳುತ್ತಿದ್ದಂತೆ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಂಡಿದೆ.

ಯುವ ನಾಯಕ ಸಂದೀಪ್‌ರೆಡ್ಡಿ ಅವರ ಆಯ್ಕೆಯನ್ನು ಸಂಸದ ಡಾ.ಕೆ.ಸುಧಾಕರ್ ವಿರೋಧಿಸಿದ್ದೇ ಸೀಕಲ್ ರಾಮಚಂದ್ರಗೌಡರಿಗೆ ವರವಾಗಿ ಪರಿಣಮಿಸಿತು ಎಂಬ ಮಾತುಗಳು ಕೂಡ ಪಕ್ಷದ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.ಏನೇ ಆಗಲಿ ಪಕ್ಷದ ಹೈಕಮಾಂಡ್ ಉತ್ತಮರನ್ನೇ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆರಿಸಿದೆ ಎಂಬ ಮಾತುಗಳು ಪಕ್ಷದ ಹಿರಿಯರಿಂದ ಕೇಳಿ ಬಂದಿವೆ.

*
ಬಿಜೆಪಿ ಪಕ್ಷವು ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಿಸಿ ಜವಾಬ್ದಾರಿ ನೀಡಿರುವುದಕ್ಕೆ ಮೊದಲಿಗೆ ಎಲ್ಲಾ ಹಿರಿಯ ಮುಖಂಡರಿಗೆ ರಾಜ್ಯಾಧ್ಯಕ್ಷರಿಗೆ, ಜಿಲ್ಲೆಯ ಎಲ್ಲಾ ಹಿರಿಕಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ.ನನಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಲು ಸಂಕಲ್ಪ ಮಾಡುತ್ತೇನೆ.ಪಕ್ಷವು ಕಾಲಕಾಲಕ್ಕೆ ಸೂಚಿಸುವ ನಿರ್ದೇಶನಗಳನ್ನು ಪಾಲಿಸುತ್ತಾ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಅಹೋರಾತ್ರಿ ಶ್ರಮಿಸುತ್ತೇನೆ.
ಸೀಕಲ್ ರಾಮಚಂದ್ರಗೌಡ ನೂತನ ಬಿಜೆಪಿ ಜಿಲ್ಲಾಧ್ಯಕ್ಷರು, ಚಿಕ್ಕಬಳ್ಳಾಪುರ.