ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

N Ravikumar: ಜಾತಿ ಗಣತಿ ವಿಷಯದ ಮೂಲಕ 11 ಯುವಜನರ ಸಾವನ್ನು ಮುಚ್ಚಿ ಹಾಕಲು ಯತ್ನ: ಎನ್‌.ರವಿಕುಮಾರ್ ಆರೋಪ

N Ravikumar: 11 ಯುವಜನರ ಸಾವನ್ನು ಮುಚ್ಚಿ ಹಾಕಲು ಜಾತಿ ಗಣತಿ ವಿಷಯವನ್ನು ಮಧ್ಯದಲ್ಲಿ ತಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿಷಯಾಂತರ ಮಾಡಲು ಕರ್ನಾಟಕದ ಪಾಲಿಗೆ ದೊಡ್ಡ ರಾಜಕೀಯ ಮಾಡಿದೆ ಎಂದು ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದ್ದಾರೆ.

ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳ ಮೋಕ್ಷ ಮಾಡಿದೆ-ಎನ್‌.ರವಿಕುಮಾರ್

Profile Siddalinga Swamy Jun 11, 2025 9:13 PM

ಬೆಂಗಳೂರು: ಕರ್ನಾಟಕದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದಿಂದ 11 ಯುವಜನರ ಸಾವಿನ ದುರ್ಘಟನೆಯನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡು ಕಾಲ್ತುಳಿತದ ವಿಷಯವನ್ನು ಮರೆಮಾಚಿಸಿ ಜಾತಿಗಣತಿ ವಿಷಯವನ್ನು ಮುನ್ನಲೆಗೆ ತರುವ ಪ್ರಯತ್ನ ಹೈಕಮಾಂಡ್ ಮಾಡಿದೆ ಎಂದು ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar) ಟೀಕಿಸಿದ್ದಾರೆ. ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜತೆ ಬುಧವಾರ ಅವರು ಮಾತನಾಡಿದ್ದಾರೆ.

11 ಜನರ ಸಾವನ್ನು ಮುಚ್ಚಿ ಹಾಕಲು ಜಾತಿ ಗಣತಿ ವಿಷಯವನ್ನು ಮಧ್ಯದಲ್ಲಿ ತಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿಷಯಾಂತರ ಮಾಡಲು ಕರ್ನಾಟಕದ ಪಾಲಿಗೆ ದೊಡ್ಡ ರಾಜಕೀಯ ಮಾಡಿದೆ. 11 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರಕ್ಕೆ ಹೈಕಮಾಂಡ್ ಮತ್ತೊಂದು ಮುಖಭಂಗ ಮಾಡಿದೆ. ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ. ಮತ್ತೊಮ್ಮೆ ಜಾತಿ ಗಣತಿ ಮಾಡುತ್ತೇವೆ. ಈಗ ಆಗಿರುವುದು ಸರಿ ಇಲ್ಲ; 10 ವರ್ಷ ಹಳೆಯದು, ಅದರ ಅಂಕಿ ಅಂಶ ಹಳೆಯದೆಂದು ತಿಳಿಸಿ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳ ಮೋಕ್ಷ ಮಾಡಿದೆ ಎಂದು ಟೀಕಿಸಿದರು.

ಕಾಂಗ್ರೆಸ್ಸಿನ ಹಲವರು ಜಾತಿ ಗಣತಿ ಅಂಕಿ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಅದನ್ನು ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದರು. ಕಪಾಳ ಮೋಕ್ಷ ಅನುಭವಿಸಿದ ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ಬಂದ ಮೇಲೆ ಹೊಸದಾಗಿ ಜಾತಿ ಗಣತಿ ಮಾಡುವುದಾಗಿ ಹೇಳಿದ್ದಾರೆ. ಹಾಗಿದ್ದರೆ ತೆರಿಗೆಯ 165 ಕೋಟಿಯನ್ನು ಯಾಕೆ ಖರ್ಚು ಮಾಡಿದಿರಿ ಎಂದು ಅವರು ಪ್ರಶ್ನಿಸಿದರು. ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು, ಆ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕ್ರೆಡಿಟ್ ವಾರ್, ಪೂರ್ವತಯಾರಿ ಇಲ್ಲ

ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಿಂದ ವಿರಾಟ್ ಕೊಹ್ಲಿಗೆ, ಅವರ ತಂಡಕ್ಕೆ ಇಡೀ ದೇಶಾದ್ಯಂತ ಅವಮಾನ ಆಗಿದೆ. ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳ ಕ್ರೆಡಿಟ್ ವಾರ್‌ನಿಂದ 11 ಜನ ಯುವಜನರು ಸಾಯುವಂತಾಗಿದೆ ಎಂದು ಆರೋಪಿಸಿದ ಅವರು, ಇಬ್ಬರಿಗೂ ಹೆಸರಿನ ಆಸೆ ಇತ್ತು. ಆದರೆ, ಇಬ್ಬರೂ ಕಾರ್ಯಕ್ರಮಕ್ಕೆ ಪೂರ್ವತಯಾರಿ ಮಾಡಲಿಲ್ಲ ಎಂದು ದೂರಿದರು.

2-3 ದಿನ ಬಿಟ್ಟು ಕಾರ್ಯಕ್ರಮ ಆಯೋಜಿಸೋಣ ಎಂದು ಪೊಲೀಸರು ಗೋಗರೆದರೂ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿ ಒಪ್ಪಲಿಲ್ಲ; ಪೂರ್ವತಯಾರಿ ಮಾಡದೇ ಇದ್ದುದರಿಂದ 11 ಜನರ ಸಾವಿಗೆ ಸರ್ಕಾರ ನೇರ ಕಾರಣವಾಗಿತ್ತು ಎಂದು ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಆರೋಪಿಸಿದರು.‌

ಈ ಸುದ್ದಿಯನ್ನೂ ಓದಿ | Karnataka Rains: ರಾಜ್ಯದಲ್ಲಿ ಮುಂದಿನ 4 ದಿನ ಆರ್ಭಟಿಸಲಿದೆ ಮುಂಗಾರು ಮಳೆ; ಆರೆಂಜ್‌ ಅಲರ್ಟ್‌ ಘೋಷಣೆ!