ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆದ್ದ ಬಗ್ಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ!

ABD on RCB's Maiden Tittle: ಸತತ 18 ವರ್ಷಗಳ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್‌ ದೀರ್ಘಾವಧಿ ಕನಸನ್ನು ನನಸಾಗಿಸಿಕೊಂಡಿತ್ತು. ಆರ್‌ಸಿಬಿ ಕಪ್‌ ಗೆದ್ದ ಹಲವು ದಿನಗಳ ಬಳಿಕ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ!

ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದ ಬಳಿಕ ಭಾವನಾತ್ಮಕ ಸಂದೇಶ ಹಂಚಿಕೊಂಡ ಎಬಿಡಿ.

Profile Ramesh Kote Jun 12, 2025 3:32 PM

ನವದೆಹಲಿ: ಸತತ 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡ ಬಗ್ಗೆ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers) ಅಭಿಮಾನಿಗಳೊಂದಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಜೂನ್‌ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಆರ್‌ಸಿಬಿ 6 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಚೊಚ್ಚಲ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಎಬಿಡಿ ಸತತ 11 ವರ್ಷಗಳ ಕಾಲ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದರು ಹಾಗೂ ಸಾಕಷ್ಟು ಬಾರಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ್ದರು. ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ದಾಖಲೆ ಕೂಡ ಎಬಿ ಡಿ ವಿಲಿಯರ್ಸ್‌ ಹೆಸರಿನಲ್ಲಿದೆ. ಆದರೆ, ಇವರು ಆರ್‌ಸಿಬಿ ಪರ ಆಡುವಾಗ ಒಮ್ಮೆಯೂ ಐಪಿಎಲ್‌ ಟ್ರೋಫಿ ಗೆಲ್ಲದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದೀಗ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದ ಬಳಿಕ ಎಬಿ ಡಿ ವಿಲಿಯರ್ಸ್‌ ಆರ್‌ಸಿಬಿ ಬಗ್ಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

"ಪ್ರಿಯ ಆರ್‌ಸಿಬಿ ಕುಟುಂಬ, ಕಳೆದ ರಾತ್ರಿ ಮಾತುಗಳು ಎಂದಿಗೂ ಸಂಪೂರ್ಣವಾಗಿ ನ್ಯಾಯ ಒದಗಿಸುವುದಿಲ್ಲ, ಆದರೆ ನಾನು ಪ್ರಯತ್ನಿಸುತ್ತೇನೆ, ಏಕೆಂದರೆ ಹೃದಯ ತುಂಬಿದಾಗ ಮಾತನಾಡಲು ಅರ್ಹವಾಗಿದೆ. ನಾನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಕಾಲಿಡುತ್ತಿದ್ದಂತೆ, ಸೂರ್ಯ ಈಗಾಗಲೇ ಆಕಾಶದ ರೇಖೆಯಿಂದ ಕೆಳಗೆ ಇಳಿದಿದ್ದ, ಆದರೆ ಆರ್‌ಸಿಬಿಯ ಕೆಂಪು ಇನ್ನೂ ದಿಗಂತವನ್ನು ಬೆಳಗುತ್ತಿರುವಂತೆ ಭಾಸವಾಯಿತು. ತಟಸ್ಥ ಸ್ಥಳವಾಗಿದ್ದರೂ, ಆರ್‌ಸಿಬಿಯ ಕೆಂಪು ಜೆರ್ಸಿ, ಫ್ಲ್ಯಾಗ್‌, ಮುಖಕ್ಕೆ ಕೆಂಪು-ಚಿನ್ನದ ಬಣ್ಣವನ್ನು ಬಳಿದಿರುವುದು ಎಲ್ಲೆಡೆ ಕಾಣುತ್ತಿತ್ತು. ಇದೆಲ್ಲವನ್ನೂ ನೋಡಿದಾಗ, ಇದು ಕೂಡ ಆರ್‌ಸಿಬಿಯ ತವರು ಅಂಗಣ ಎಂದು ನನಗೆ ಭಾಸವಾಗುತ್ತಿತ್ತು," ಎಂದು ಎಬಿ ಡಿವಿಲಿಯರ್ಸ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ನಾನು ಕೇವಲ ಕ್ರಿಕೆಟ್‌ ಪಂದ್ಯಕ್ಕೆ ಮಾತ್ರ ಸಾಕ್ಷಿಯಾಗಲಿಲ್ಲ, ಆದರೆ, ಅದು ಪರಾಕಾಷ್ಠೆಯಾಗಿತ್ತು. ನಂಬಿಕೆ, ಹೃದಯಾಘಾತಗಳು, ಬಹುತೇಕ ವಿಫಲತೆಗಳು, ಪವಾಡಗಳು ಮತ್ತು ಇಲ್ಲಿಯವರೆಗೆ ಯಾವುದೇ ಟ್ರೋಫಿಗೆ ಸಿಗದ ಅವಿನಾಭಾವ ನಿಷ್ಠೆಯ ಪರಾಕಾಷ್ಠೆ. ಆದರೆ, ನಿನ್ನೆ ರಾತ್ರಿ ಅದು ಸಂಭವಿಸಿತು. ಆರ್‌ಸಿಬಿ ನನಗೆ ಕುಟುಂಬವಿದ್ದಂತೆ, ಐಪಿಎಲ್‌ ಟೂರ್ನಿಯ ಚಾಂಪಿಯನ್ಸ್‌. ಇದನ್ನು ಹೇಳಲು ನನಗೆ ತುಂಬಾ ಖುಷಿಯಾಗುತ್ತದೆ,": ಎಂದು ಹೇಳಿದ್ದಾರೆ.

RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ!

"ಅಂದಿನ ರಾತ್ರಿ ನನ್ನಲ್ಲೆ ಭಾವನೆಗಳ ಕಟ್ಟೆ ಒಡೆದಿತ್ತು ಹಾಗೂ ನನ್ನ ಮುಂದೆ ವಿರಾಟ್‌ ಕೊಹ್ಲಿ ಲಾಂಗ್‌ ಆಫ್‌ನಲ್ಲಿ ಫೀಲ್ಡಿಂಗ್‌ ನಿಂತಿದ್ದರು. ಆ ಸನ್ನಿವೇಶದಲ್ಲಿ ನನ್ನ ಕಣ್ಣುಗಳನ್ನಿ ನೀರು ತುಂಬಿತ್ತು. ಆಗ ನಮಗೆ ಯಾವುದೇ ಪದಗಳ ಅಗತ್ಯವಿರಲಿಲ್ಲ. ಆ ಶಾಂತ ಮಾತುಕತೆಯಲ್ಲಿ ಎಲ್ಲವೂ ಅರ್ಥವಾಗಿತ್ತು. ಹಲವು ವರ್ಷಗಳಿಂದ ನಾವು ಇದನ್ನು ಕಳೆದುಕೊಂಡಿದ್ದೆವು ಹಾಗೂ ನಾವು ಕನಸಗಳು ಹೊತ್ತುಕೊಂಡು ಬಂದಿದ್ದೆವು.

ಹೌದು ಕಣ್ಣೀರು ಬಂದಿತ್ತು, ಆದರೆ, ಮಾತನಾಡದಕ್ಕಿಂತ ಭಾವೆನಗಳು ಜಾಸ್ತಿ ಇದ್ದವು. ನಾವು ಲೆಕ್ಕವಿಲ್ಲದಷ್ಟು ಇನಿಂಗ್ಸ್‌ಗಳು, ಸಂಭಾಷಣೆಗಳು ಮತ್ತು ಹೋರಟಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ, ಆದರೆ ಆಟದ ನಂತರ ಅವರು ಹೇಳಿದ ಮಾತುಗಳು, ನಮ್ಮ ಪ್ರಯಾಣವನ್ನು ಅವರು ಒಪ್ಪಿಕೊಂಡ ರೀತಿ, ಕೊಡುಗೆಗಳು ಮತ್ತು ಹಂಚಿಕೊಂಡ ನೆನಪುಗಳು, ಈ ಆಟದಲ್ಲಿ ಕೆಲವೇ ಕೆಲವು ವಿಷಯಗಳು ನನ್ನ ಮನಸ್ಸಿನ ಮೇಲೆ ಸ್ಪರ್ಶಿಸಿವೆ. ಆ ಕ್ಷಣ ನನಗೆ ನೆನಪಿಸಿತು. ಇದು ಸಂಖ್ಯೆಗಳ ಬಗ್ಗೆ ಅಲ್ಲ," ಎಂದು ಎಬಿಡಿ ಭಾವುಕರಾಗಿದ್ದಾರೆ.

RCB vs PBKS: ಶಿಖರ್‌ ಧವನ್‌ರ ಐಪಿಎಲ್‌ ಬೌಂಡರಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಎಬಿಡಿ ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇವರು 145 ಇನಿಂಗ್ಸ್‌ಗಳಿಂದ 41.10ರ ಸರಾಸರಿಯಲ್ಲಿ 4522 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಎರಡು ಶತಕಗಳು ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ. 25 ಬಾರಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.