Special Admission: ಮೇಘಾಲಯದಿಂದ ವಲಸೆ ಬಂದ ಮಕ್ಕಳಿಗೆ ಪಿ.ಎಂ.ಶ್ರೀ ಶಾಲೆಯಲ್ಲಿ ವಿಶೇಷ ದಾಖಲಾತಿ
ಇದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಯೊಂದಿಗೆ ವಿಶೇಷ ಸಮಾಲೋಚನಾ ಸ್ಥಾನಮಾನದಲ್ಲಿರುವ ಸರಕಾರೇತರ ಸಂಸ್ಥೆಯಾಗಿರುವ ಎಐಎಂ, ದೇಣಿಗೆಗಳಿಂದ ಹಣವನ್ನು ಪಡೆದು ಮೇಘಾಲಯ ರಾಜ್ಯದಿಂದ ವಲಸೆ ಆರ್ಥಿಕ ವಾಗಿ ಬಡ ಮಕ್ಕಳ ಶಿಕ್ಷಣ ನೀಡುತ್ತಿದೆ. ಹಾಗಾಗಿ ಆ ಮಕ್ಕಳೆಲ್ಲರೂ ನಮ್ಮ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 25 ವಿದ್ಯಾರ್ಥಿಗಳನ್ನು ದಾಖಲಾತಿ ಪಡೆದಿದ್ದಾರೆ

ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು,ತಾಲೂಕಿನಿಂದಷ್ಟೇ ಅಲ್ಲದೆ ಮೇಘಾಲಯದ ಹಲವು ರಾಜ್ಯಗಳ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಿದ್ದು ಸಂತಸ ತಂದಿದೆ ಎಂದು ಮುಖ್ಯ ಶಿಕ್ಷಕ ಆರ್.ಹನುಮಂತರೆಡ್ಡಿ ತಿಳಿಸಿದರು.

ಬಾಗೇಪಲ್ಲಿ : ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ತಾಲೂಕಿ ನಿಂದಷ್ಟೇ ಅಲ್ಲದೆ ಮೇಘಾಲಯದ ಹಲವು ರಾಜ್ಯಗಳ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಿದ್ದು ಸಂತಸ ತಂದಿದೆ ಎಂದು ಮುಖ್ಯ ಶಿಕ್ಷಕ ಆರ್.ಹನುಮಂತರೆಡ್ಡಿ ತಿಳಿಸಿದರು.
ಪಟ್ಟಣದ ಪಿಎಂಶ್ರೀ ಶಾಲೆಗೆ ಗುರುವಾರ ಮೇಘಾಲಯ ರಾಜ್ಯದಿಂದ ವಲಸೆ ಬಂದು, ತಾಲೂಕಿನ ಪೆನುಮಲೆ ಗ್ರಾಮದಲ್ಲಿ ಎಐಎಂ(ಆಲ್ ಇಂಡಿಯಾ ಮೂವ್ಮೆಂಟ್) ಫಾರ್ ಸೇವಾ ಎಂಬ ಸೇವಾ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಸೌಮ್ಯ ಕೇಸಾನುಪಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿರುವ ೨೫ ವಿದ್ಯಾರ್ಥಿಗಳು ದಾಖಲಾದರು.
ಈ ವೇಳೆ ಮಾತನಾಡಿದ ಅವರು, ಇದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಯೊಂದಿಗೆ ವಿಶೇಷ ಸಮಾಲೋಚನಾ ಸ್ಥಾನಮಾನದಲ್ಲಿರುವ ಸರಕಾರೇತರ ಸಂಸ್ಥೆಯಾಗಿರುವ ಎಐಎಂ, ದೇಣಿಗೆಗಳಿಂದ ಹಣವನ್ನು ಪಡೆದು ಮೇಘಾಲಯ ರಾಜ್ಯದಿಂದ ವಲಸೆ ಆರ್ಥಿಕ ವಾಗಿ ಬಡ ಮಕ್ಕಳ ಶಿಕ್ಷಣ ನೀಡುತ್ತಿದೆ. ಹಾಗಾಗಿ ಆ ಮಕ್ಕಳೆಲ್ಲರೂ ನಮ್ಮ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 25 ವಿದ್ಯಾರ್ಥಿಗಳನ್ನು ದಾಖಲಾತಿ ಪಡೆದಿದ್ದಾರೆ ಎಂದರು.
ಇದನ್ನೂ ಓದಿ: Chikkaballapur News: ಜುಲೈ 18ರಂದು ಶ್ರೀ ಶರಭಯೋಗೇಂದ್ರ ಸ್ವಾಮಿಯವರ 307ನೇ ಆರಾಧನಾ ಮತ್ತು ರಥೋತ್ಸವ.
ಪಿಎಂಶ್ರೀ ವಿಶೇಷ ಶಾಲೆ,ವಿಶೇಷ ಚಟುವಟಿಕೆಗಳು
ಉದಯೋನ್ಮುಖ ಭಾರತಕ್ಕಾಗಿ ಕೇಂದ್ರ ಸರಕಾರ ಪ್ರಾಯೋಜಿತ ಶಾಲೆಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಭೌತಿಕವಾಗಿ ಉತ್ತಮ ಶಾಲಾ ಕೊಠಡಿ, ಪೀಠೋಪಕರಣಗಳು, ಪಾಠೋಪಕರಣಗಳು ಹಾಗೂ ನುರಿತ ಹಾಗೂ ಅರ್ಹ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ. ಜೊತೆಗೆ ಪ್ರಾಥಮಿಕ ಹಂತದಲ್ಲಿಯೇ ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಮೂಲಕ ಬೋಧನೆ, ಯೋಗ ತರಬೇತಿ, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕರಾಟೆ ತರಬೇತಿ, ವೃತ್ತಿ ಮತ್ತು ಸುರಕ್ಷಣಾ ತರಬೇತಿ, ಇನ್ನಿತರ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟ ,ಕ್ಷೀರ ಭಾಗ್ಯ, ಪ್ರತಿ ವಿದ್ಯಾರ್ಥಿಗಳಿಗೂ ದೈಹಿಕ ಮತ್ತು ಪೌಷ್ಟಿಕಾಂಶ ಯುಕ್ತ ಬೆಳವಣಿಗೆಗಾಗಿ ವಾರದ ಆರು ದಿನಗಳು ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುವುದು.
ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಉಚಿತ ಶೂ ಮತ್ತು ಸಾಕ್ಸ್ ವಿತರಣೆ, ಇನ್ನಿತರ ಸರ್ಕಾರದ ಉಚಿತ ಸೌಲಭ್ಯಗಳ ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಉದಯೋನ್ಮುಖ ಬೆಳವಣಿಗೆಗಾಗಿ ಶಾಲೆಯು ವಿಶೇಷ ಕಾಳಜಿಯನ್ನು ವಹಿಸಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿ ಅರ್ಹವಯಸ್ಸಿನ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಶುಲ್ಕವು ಇಲ್ಲದೆ ಶಾಲೆಗೆ ದಾಖಲಿಸಲಾಗುತ್ತಿದ್ದಾರೆ. ಅದರಂತೆ ಮೇಘಾಲಯದ ಆರ್ಥಿಕವಾಗಿ ಬಡ ಕುಟುಂಬದ ಮಕ್ಕಳನ್ನು ವಿಶೇಷ ದಾಖಲಾತಿ ಮೂಲಕ ದಾಖಲು ಮಾಡಲಾಗಿದೆ. ಇಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಬೋಧಿಸಲಾಗುತ್ತದೆ. ಇದರಿಂದಾಗಿ ಅನ್ಯ ರಾಜ್ಯದ ಮಕ್ಕಳಿಗೆ ಭೋದನೆ ಸುಲಭಗೊಳಿಸಬಹುದು ಎಂದರು.
ಸಾರಿಗೆ ವ್ಯವಸ್ಥೆ
ಮೇಘಾಲಯದ ಮಕ್ಕಳಿಗೆ ಪೆನಮಲೆ ವಿದ್ಯಾರ್ಥಿ ನಿಲಯದಿಂದ ಪ್ರತಿ ನಿತ್ಯ ವಾಹನ ವ್ಯವಸ್ಥೆಯ ಮಾಡಲಾಗಿದೆ. ಇದರಿಂದಾಗಿ ನಿತ್ಯವೂ ಶಾಲೆ ಆರಂಭ ಮತ್ತು ಮುಗಿಯುವ ವೇಳೆ ಬಸ್ ನಲ್ಲಿ ಕರೆದುಕೊಂಡು ಹೋಗುವುದು ಮತ್ತು ಬರುವುದು ಮಾಡಲಾಗುತ್ತದೆ ಎಂದು ವಿಧ್ಯಾರ್ಥಿ ನಿಲಯದ ಮೇಲ್ವಿಚಾರಕಿ ರುದ್ರಮ್ಮ ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮ ಪುತ್ರಿ, ಪ್ರಭಾವತಿ, ಕಲ್ಪನಾ, ಬೇಬಿ ಮಮ್ತಾಜ್, ರಾಧಿಕಾ, ಪದ್ಮಜಾ, ಭಾರ್ಗವಿ, ಗಣೇಶ್, ರಿಯಾಜ್, ಕವಿತಾ, ಮಂಜುನಾಥ ವೈ ಎಂ, ನರಸಿಂಹಮೂರ್ತಿ, ಮುನಿ ಲಕ್ಷ್ಮಮ್ಮ, ಬಾಬುರೆಡ್ಡಿ, ಶ್ರೀಲೇಖ, ರಜನಿ, ವಿಜಯಲಕ್ಷ್ಮಿ, ಅರ್ಶಿಯ ಮಧುಶ್ರೀ, ಜ್ಯೋತಿ ಹಾಗೂ ವಿದ್ಯಾರ್ಥಿ ಗಳು ಹಾಜರಿದ್ದರು.