Cabinet Meet In Pahalgam: ಪಹಲ್ಗಾಮ್ನಲ್ಲಿ ಬೀಡು ಬಿಟ್ಟ ಓಮರ್ ಅಬ್ದುಲ್ಲಾ... ವಿಶೇಷ ಸಂಪುಟ ಸಭೆ- ಗಾಲ್ಫ್ ಆಡಿ ಗಮನ ಸೆಳೆ ಫಾರೂಕ್ ಅಬ್ದುಲ್ಲಾ
Cabinet Meeting: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಇಂದು ಪಹಲ್ಗಾಮ್ನಲ್ಲಿ ವಿಶೇಷ ಸಂಪುಟ ಸಭೆ ನಡೆಸಿದೆ. ಇದು ಶ್ರೀನಗರ ಹಾಗೂ ಜಮ್ಮುವಿನ ಹೊರಗೆ ನಡೆದ ಮೊದಲ ಸಂಪುಟ ಸಭೆಯಾಗಿದ್ದು, ಏಪ್ರಿಲ್ 22, 2025ರಂದು ಬೈಸಾರನ್ ಕಣಿವೆಯಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರಿಂದ 26 ನಾಗರಿಕರು ಮೃತಪಟ್ಟಿದ್ದ ದುರ್ಘಟನೆಯ ಪರಿಣಾಮ ಈ ಸಭೆಯನ್ನು ಪಹಲ್ಗಾಮ್ನಲ್ಲಿ ನಡೆಸಲಾಗಿದೆ ಎನ್ನಲಾಗಿದೆ.


ಪಹಲ್ಗಾಮ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ (Omar Abdullah) ನೇತೃತ್ವದ ಸರ್ಕಾರವು ಇಂದು ಪಹಲ್ಗಾಮ್ನಲ್ಲಿ (Pahalgam) ವಿಶೇಷ ಸಂಪುಟ ಸಭೆ (Cabinet Meeting) ನಡೆಸಿದೆ. ಇದು ಶ್ರೀನಗರ ಹಾಗೂ ಜಮ್ಮುವಿನ ಹೊರಗೆ ನಡೆದ ಮೊದಲ ಸಂಪುಟ ಸಭೆಯಾಗಿದ್ದು, ಏಪ್ರಿಲ್ 22, 2025ರಂದು ಬೈಸಾರನ್ ಕಣಿವೆಯಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರಿಂದ 26 ನಾಗರಿಕರು ಮೃತಪಟ್ಟಿದ್ದ ದುರ್ಘಟನೆಯ ಪರಿಣಾಮ ಈ ಸಭೆಯನ್ನು ಪಹಲ್ಗಾಮ್ನಲ್ಲಿ ನಡೆಸಲಾಗಿದೆ ಎನ್ನಲಾಗಿದೆ.
ಪಹಲ್ಗಾಮ್ನಲ್ಲಿ ಸಭೆ: ಐಕಮತ್ಯದ ಸಂದೇಶ
ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ತಂತ್ರ ರೂಪಿಸಲಾಗಿದೆ. ಅಲ್ಲದೇ ಜನರೆದುರು ಒಗ್ಗಟ್ಟನ್ನು ಪ್ರದರ್ಶನಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಲಾಗಿದ್ದು, ಸಭೆಯ ನಿರ್ದಿಷ್ಟ ಕಾರ್ಯಸೂಚಿ ಬಹಿರಂಗವಾಗಿಲ್ಲವಾದರೂ, ರಾಷ್ಟ್ರವಿರೋಧಿ ಮತ್ತು ಸಾಮಾಜಿಕ ವಿರೋಧಿ ಶಕ್ತಿಗಳಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಎಂಬ ಸಾಂಕೇತಿಕ ಸಂದೇಶವನ್ನು ಈ ಸಭೆ ನೀಡಿದೆ.
ಪ್ರವಾಸೋದ್ಯಮ ಉತ್ತೇಜನಕ್ಕೆ ದ್ವಿಮುಖ ಯೋಜನೆ
ಈ ವಿಶೇಷ ಸಂಪುಟ ಸಭೆಯ ಎರಡು ದಿನಗಳ ಮೊದಲು, ಓಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕುಸಿಯುತ್ತಿರುವ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ದ್ವಿಮುಖ ಕಾರ್ಯತಂತ್ರವನ್ನು ಪ್ರಸ್ತಾಪಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ NITI ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ, ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಕಾಶ್ಮೀರದಲ್ಲಿ ಸಭೆಗಳನ್ನು ನಡೆಸಲು ಮತ್ತು ಸಂಸದೀಯ ಸಮಿತಿಗಳ ಸಭೆಗಳನ್ನು ಈ ಪ್ರದೇಶದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸರ್ಕಾರಿ ಪ್ರಯತ್ನಗಳು ಜನರ ಆತಂಕವನ್ನು ಕಡಿಮೆ ಮಾಡಿ, ಭದ್ರತೆ ಮತ್ತು ವಿಶ್ವಾಸವನ್ನು ಪುನರ್ ಸ್ಥಾಪಿಸಿ, ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮದ ಪುನರುತ್ಥಾನಕ್ಕೆ ದಾರಿ ಮಾಡಿಕೊಡಲಿವೆ. ಇದು ಆರ್ಥಿಕ ಸಂಕಷ್ಟದಿಂದ ಹೊರಬಂದು ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗಲಿದೆ ಎನ್ನಲಾಗಿದೆ.
ಪಹಲ್ಗಾಮ್ನಲ್ಲಿ ಓಮರ್ ಅಬ್ದುಲ್ಲಾ ಅವರ ಫೋಟೋಸ್ ಇಲ್ಲಿವೆ
In Pahalgam to chair a cabinet meeting. We came to express solidarity with the local population. We’ve also come to thank all the tourists who are slowly making their way back to Kashmir & to Pahalgam. pic.twitter.com/VhKVyWV4Kd
— Omar Abdullah (@OmarAbdullah) May 27, 2025
ಈ ಸುದ್ದಿಯನ್ನು ಓದಿ: Pakistan's Nur Khan Airbase: ಭಾರತದ ದಾಳಿಯಿಂದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಭಾರೀ ಹಾನಿ; ದಾಳಿಯ ಚಿತ್ರಗಳು ವೈರಲ್
ಶಾಂತಿಗೆ ಅಚಲ ಬದ್ಧತೆ
ಏಪ್ರಿಲ್ 28ರಂದು ಜಮ್ಮುವಿನಲ್ಲಿ ನಡೆದ ವಿಶೇಷ ಒಂದು ದಿನದ ವಿಧಾನಸಭೆಯ ಸಭೆಯಲ್ಲಿ, ಪಹಲ್ಗಾಮ್ ದಾಳಿಯ ವಿರುದ್ಧ ಏಕಮತದ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಸಾಮುದಾಯಿಕ ಸೌಹಾರ್ದತೆಗೆ ಭಂಗ ತರುವ ಮತ್ತು ಪ್ರಗತಿಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನಗಳನ್ನು ದೃಢವಾಗಿ ವಿಫಲಗೊಳಿಸುವ ಶಪಥ ಮಾಡಲಾಗಿತ್ತ. ಆ ಸಂದರ್ಭದ 26 ನಿಮಿಷದ ಭಾಷಣದಲ್ಲಿ ಓಮರ್ ಅಬ್ದುಲ್ಲಾ, ತಾವು ಭಯೋತ್ಪಾದಕ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಪುನಃ ಸ್ಥಾಪಿಸುವಂತೆ ಒತ್ತಾಯಿಸಲು ಬಳಸಿಕೊಳ್ಳುವುದಿಲ್ಲ, ಕೀಳು ರಾಜಕೀಯವನ್ನು ತಿರಸ್ಕರಿಸುವುದಾಗಿ ತಿಳಿಸಿದ್ದರು.
ಗಾಲ್ಫ್ ಆಡಿದ ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಸಮ್ಮೇಳನ (JKNC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಇಂದು ಪಹಲ್ಗಾಮ್ನ ಸುಂದರ ಗಾಲ್ಫ್ ಕೋರ್ಸ್ನಲ್ಲಿ ಗಾಲ್ಫ್ ಆಡುತ್ತಿರುವುದು ಕಂಡುಬಂದಿತು. ಈ ಸುಂದರ ಗಾಲ್ಫ್ ಕೋರ್ಸ್, ಪ್ರಕೃತಿಯ ಸೌಂದರ್ಯದಿಂದ ಕೂಡಿದ್ದು, ಪ್ರವಾಸೋದ್ಯಮವನ್ನು ಪುನರುತ್ಥಾನಗೊಳಿಸುವ ಸರ್ಕಾರದ ವಿಶಾಲ ಕಾರ್ಯತಂತ್ರಕ್ಕೆ ಹಿನ್ನೆಲೆಯಾಗಿದೆ. ಪಹಲ್ಗಾಮ್ನ ಈ ಸಂಪುಟ ಸಭೆಯು ಜಮ್ಮು ಮತ್ತು ಕಾಶ್ಮೀರದ ಶಾಂತಿ ಮತ್ತು ಪ್ರಗತಿಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ. ಪ್ರವಾಸೋದ್ಯಮವನ್ನು ಪುನರುತ್ಥಾನಗೊಳಿಸುವ ಜೊತೆಗೆ, ಭಯೋತ್ಪಾದನೆಯ ವಿರುದ್ಧ ದೃಢವಾದ ಹೋರಾಟವನ್ನು ಮುಂದುವರಿಸಲು ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ.
Dr. Farooq Abdullah sb. @topfans #Golf pic.twitter.com/lx16IbbYPv
— NASIR AH KHAN (@NASIRAHKHAN9001) May 27, 2025