ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಬ್ಬರಿ ಎಣ್ಣೆ ಲೀಟರಿಗೆ 390-420 ರು. ಜಿಗಿತ

ಕರಾವಳಿಯಲ್ಲಿ ಬೆಳೆಯುವ ತೆಂಗಿನಕಾಯಿಯಲ್ಲಿ ಎಣ್ಣೆ ಪ್ರಮಾಣ ಜಾಸ್ತಿ. ಆದರೆ ಈ ಕೊಬ್ಬರಿಯೇ ಇತ್ತೀಚೆಗೆ ಸಿಗುತ್ತಿಲ್ಲ. ನಾವು ಪ್ರತಿ ಕೆ.ಜಿ.ಗೆ ೨೪೦ ರು. ಕೊಡುತ್ತೇವೆ ಎಂದರೂ ಕೊಬ್ಬರಿ ಕೊಡುವವರಿಲ್ಲ ಒಂದು ಲೀಟರ್ ತೆಂಗಿನೆಣ್ಣೆ ಪಡೆಯಲು ಸುಮಾರು ಒಂದೂ ಮುಕ್ಕಾಲು ಕೆ.ಜಿ. ಕೊಬ್ಬರಿ ಬೇಕು.

ಕೊಬ್ಬರಿ ಎಣ್ಣೆ ಲೀಟರಿಗೆ 390-420 ರು. ಜಿಗಿತ

Profile Ashok Nayak Jun 22, 2025 11:33 AM

ಹೂವಪ್ಪ ಐ ಹೆಚ್. ಬೆಂಗಳೂರು

ವರ್ಷದ ಹಿಂದೆ ತೆಂಗಿನಕಾಯಿ ದರ ನೆಲಕಚ್ಚಿತ್ತು. ಆಗ ತೆಂಗಿನೆಣ್ಣೆಯ ದರ ಲೀಟರ್‌ಗೆ ೨೦೦ ರು. ರವರೆಗೆ ಇಳಿಕೆಯಾಗಿತ್ತು. ಕ್ರಮೇಣ ದರ ಏರಿಕೆಯಾಗಿ ಪ್ರತಿ ಲೀಟರ್‌ಗೆ ೩೦೦ ರು. ರವರೆಗೆ ತಲುಪಿತ್ತು. ತಿಂಗಳಿನಿಂದ ಈಚೆಗೆ ದರ ಹೆಚ್ಚುತ್ತಲೇ ಇದ್ದು, ಪ್ರಸ್ತುತ ಲೀಟರ್‌ಗೆ ಬಿಡಿ ಎಣ್ಣೆ ೩೮೦ ರು. ಇದ್ದು, ಪ್ಯೂರ್ ಪ್ಯಾಕೇಟ್ ೩೯೦ ರು. ರಿಂದ ೪೨೦ ರು. ರವರೆಗೆ ಆಗಿದೆ. ಇನ್ನೂ ಕೇರಳ ಕೊಬ್ಬರಿ ಎಣ್ಣೆ ೪೨೦ ರು. ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಬೆಲೆಯಾಗಿದೆ.

ಕರಾವಳಿಯಲ್ಲಿ ಬೆಳೆಯುವ ತೆಂಗಿನಕಾಯಿಯಲ್ಲಿ ಎಣ್ಣೆ ಪ್ರಮಾಣ ಜಾಸ್ತಿ. ಆದರೆ ಈ ಕೊಬ್ಬರಿಯೇ ಇತ್ತೀಚೆಗೆ ಸಿಗುತ್ತಿಲ್ಲ. ನಾವು ಪ್ರತಿ ಕೆ.ಜಿ.ಗೆ ೨೪೦ ರು. ಕೊಡುತ್ತೇವೆ ಎಂದರೂ ಕೊಬ್ಬರಿ ಕೊಡುವವ ರಿಲ್ಲ ಒಂದು ಲೀಟರ್ ತೆಂಗಿನೆಣ್ಣೆ ಪಡೆಯಲು ಸುಮಾರು ಒಂದೂ ಮುಕ್ಕಾಲು ಕೆ.ಜಿ. ಕೊಬ್ಬರಿ ಬೇಕು.

ಪ್ರತಿ ಲೀಟರ್ ತೆಂಗಿನೆಣ್ಣೆಯನ್ನು ಕನಿಷ್ಠ ದರ ೩೯೦ ರು. ಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದರೆ ನಷ್ಟವಾಗುತ್ತದೆ ಎನ್ನುತ್ತಾರೆ ಕೊಬ್ಬರಿ ಎಣ್ಣೆ ಮಿಲ್ ಮಾಲೀಕ ರಾದ ಪುತ್ತೂರಿನ ಪ್ರಕಾಶ್ ನಾಯಕ್. ಎಳನೀರು ದುಬಾರಿ ಸಿಗುತ್ತಿಲ್ಲ ಕೊಬ್ಬರಿ: ಕರಾವಳಿಯಲ್ಲಿ ಕೊಬ್ಬರಿ ಕೊರತೆ ಎದುರಾಗಲು ಮುಖ್ಯ ಕಾರಣ ಎಳನೀರಿನ ದರ ಗಣನೀಯವಾಗಿ ಹೆಚ್ಚಾಗಿರುವುದು. ಇಲ್ಲಿ ಬೇಸಿಗೆಯಲ್ಲಿ ಎಳನೀರು ೫೦ ರಿಂದ ೬೦ ರು. ಗೆ ಮಾರಾಟವಾಗಿದೆ.

ಇದನ್ನೂ ಓದಿ: Health Tips: ಫಲವಂತಿಕೆ ಹೆಚ್ಚಿಸಲು ಯೋಗ ನೆರವಾಗಬಲ್ಲದು; ಗೊತ್ತೇ?

ವ್ಯಾಪಾರಿಗಳು ಬೆಳೆಗಾರರಿಂದಲೇ ೩೫-೩೭ ರು. ಕೊಟ್ಟು ಎಳನೀರು ಖರೀದಿ ಮಾಡಿದ್ದಾರೆ. ತೆಂಗಿನ ಕಾಯಿಗೂ ಆಗ ಅಷ್ಟು ದರ ಇರಲಿಲ್ಲ. ತೆಂಗಿನಕಾಯಿಗಿಂತ ಎಳನೀರಿಗೇ ಜಾಸ್ತಿ ದರ ಸಿಕ್ಕಿದ್ದರಿಂದ ತೆಂಗಿನಕಾಯಿಯನ್ನು ಒಣಗಿಸಿ ಕೊಬ್ಬರಿ ಮಾಡಲು ಬೆಳೆಗಾರರು ಆಸಕ್ತಿ ತೋರಿಸಿಲ್ಲ. ತೆಂಗಿನಕಾಯಿ ಮತ್ತು ಒಣ ಕೊಬ್ಬರಿ ಉತ್ಪಾದನೆಯ ಕುಸಿತವೇ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇನ್ನು ಬರುವ ಅಕ್ಟೋಬರ್ ನವಂಬರ್ ನಲ್ಲಿ ಹೊಸ ತೆಂಗು ಫಸಲು ಬರುತ್ತದೆ ಅಸ್ಟೊತ್ತಿಗೆ ಇಳುವರಿ ಹೆಚ್ಚುವುದರಿಂದ ತುಸು ಬೆಲೆ ಇಳಿಕೆಯ ಸಂಭವಿವಿದೆ ಎಂದು ಹೇಳಲಾಗುತ್ತಿದೆ.

ಉಂಡೆ ಕೊಬ್ಬರಿ ದರದ ಪ್ರಭಾವ: ಕೇರಳ ಮಾರುಕಟ್ಟೆಯಲ್ಲಿ ಕೊಬ್ಬರಿ ದರವು ಪ್ರತಿ ಕೆಜಿಗೆ ೨೩೪ ರು. ಗೆ ತಲುಪಿದ್ದು, ತಮಿಳುನಾಡಿನಲ್ಲಿ ೨೩೦ ರು. ಗೆ ಏರಿಕೆಯಾಗಿದೆ. ಇಂಡಸ್ಟ್ರಿಗೆ ಕಚ್ಚಾ ಸಾಮಗ್ರಿಯ ತೀವ್ರ ಕೊರತೆಯಿಂದ ಎದುರಾಗುತ್ತಿರುವ ಸಂಕಷ್ಟದ ಹಿನ್ನೆಲೆ ಶೀಘ್ರದಲ್ಲೇ ಕೇಂದ್ರ ಸರಕಾರವನ್ನು ಕೋಪ್ರಾ ಮತ್ತು ತೆಂಗಿನೆಣ್ಣೆಯ ಆಮದು ನಿಬಂಧಗಳನ್ನು ತೆರವುಗೊಳಿಸಲು ಅಸೋಸಿಯೇಷನ್ ಮನವಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಓಣಂಗೆ ಇನ್ನೂ ಬೆಲೆ ಏರಿಕೆ: ಕೊಬ್ಬರಿ ಮತ್ತು ತೆಂಗಿನಕಾಯಿ ಕೊರತೆಯಿಂದ ತೆಂಗಿನೆಣ್ಣೆ ಬೆಲೆ ಒಣಾಂ ಹಬ್ಬದ ವೇಳೆಗೆ ಲೀ, ಗೆ ೫೦೦ ರು.ಗೆ ಏರಲಿರುವ ಸಾಧ್ಯತೆಯಿದೆ. ತೆಂಗಿನೆಣ್ಣೆ ಮತ್ತು ಇತರೆ ಎಣ್ಣೆಗಳ ನಡುವಿನ ಬೆಲೆ ವ್ಯತ್ಯಾಸವು ತೆಂಗಿನೆಣ್ಣೆ ಬೆಲೆ ಇಳಿಕೆಗೆ ತಳ್ಳಬಹುದು ಎಂದು ಅಂದಾಜಿಸ ಲಾಗಿದೆ.

*

ತೆಂಗಿನಕಾಯಿಗೆ ಬೆಲೆ ಇದ್ದರೂ ರೈತರಿಗೆ ಲಾಭವಿಲ್ಲದಾಗಿದೆ. ಒಂದೂ ಅತಿವೃಷ್ಟಿ ಅನವೃಷ್ಟಿ ಮಳೆಯಿಂದಾಗಿ ಮತ್ತು ನುಸಿ ರೋಗಬಾದೆ ಮಂಗಗಳ ಕಾಟದಿಂದಾಗಿ ಶೇ.60ರಷ್ಟು ಇಳುವರಿ ಕಡಿಮೆ ಇದೆ ಜತೆಗೆ ದುಬಾರಿ ಕೂಲಿ ಹೀಗಾಗಿ ಬೆಲೆ ಇದ್ದರೂ ರೈತರಿಗೆ ಲಾಭ ಇಲ್ಲದಗಿದೆ ಎನ್ನುತ್ತಾರೆ.

-ಸುರೇಶ್ ಪುತ್ತೂರಿನ ಸುಲ್ಯ ಪದು ಗ್ರಾಮದ ರೈತ

*

ಕಳೆದ ವರ್ಷ ಕೊಬ್ಬರಿ ಎಣ್ಣೆ ಲೀ ಗೆ 200 ರೂ ಗೆ ಏರಿಕೆಯಾಗಿದ್ದರಿಂದ ಚಿಂತೆಯಾಗಿತ್ತು. ಈಗ 400 ರೂ. ಮೇಲೆ ಇದೆ ನಾವು ಉತ್ತರ ಕರ್ನಾಟಕದ ಮಂದಿ ತೆಲೆಗೆ ಸ್ಯಾಂಪು ಹಾಕಲ್ಲ ಹೆಚ್ಚು ಕೊಬ್ಬರಿ ಎಣ್ಣೆ ಉಪಯೋಗಿಸುತ್ತೆವೆ ಈ ಪರಿ ಬೆಲೆಯಾದರೆ ಹೇಗೆ ಎನ್ನುವ ಚಿಂತೆಯಾಗಿದೆ.

-ರಾಧಾ ಎಂ ಬಿ ಗ್ರಾಹಕಿ, ಬೆಂಗಳೂರು

*

ತೀವ್ರ ಬೆಲೆ ಏರಿಕೆಯಿಂದಾಗಿ, ಗ್ರಾಹಕರು ಕಡಿಮೆ ಬೆಲೆಯ ಪರ್ಯಾಯ ಎಣ್ಣೆಗಳಾದ ಪಾಮೋಲೆನ್ ಲೀ, ಗೆ 130 ಮತ್ತು ಸೂರ್ಯಕಾಂತಿ ಎಣ್ಣೆ 150 ಬಳಕೆಯತ್ತ ತಿರುಗುತ್ತಿದ್ದಾರೆ ಎಂದು ಹೇಳಲಾಗು ತ್ತಿದೆ. ಕೇರಳ ರಾಜ್ಯವೇ ಏಕೈಕವಾಗಿ ಅಡುಗೆಗೆ ತೆಂಗಿನೆಣ್ಣೆ ಬಳಸುವ ರಾಜ್ಯವಾಗಿದೆ.

-ದಕ್ಷಿಣ ಕನ್ನಡ ತೆಂಗು ವ್ಯಾಪಾರಿಗಳು