ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA S N Subbareddy: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ

ಇಂತಹ ಹೋಪ್‌ಲೆಸ್ ಟೀಚರ್ಸ ಗಳಿಂದ ಏನು ಉಪಯೋಗ, ಇವರ ಮೇಲೆ ಹಿಡಿತವಿಲ್ಲದ ನಿಮ್ಮಿಂ ದಲೂ ಶಿಕ್ಷಣ ಇಲಾಖೆಗೆ ಉಪಯೋಗವಿಲ್ಲ ಎಂದು ಬಿಇಓ ವಿರುದ್ದ ಕಿಡಿಕಾರಿದರು. ಇದಕ್ಕೆ ಪ್ರಕ್ರಿಯಿಸಿದ ಬಿಇಓ ವೆಂಕಟೇಶಪ್ಪ ಇಂತಹ ಶಿಕ್ಷಕರಿಗೆ ನೋಟೀಸ್ ನೀಡಿದ್ದೇನೆ ಎಂದು ಸಮಜಾಯಿಷಿ ನೀಡಿದಾಗ ನೀವು ನೀಡುವ ನೋಟೀಸ್ ಬೊಂಡ ಕಟ್ಟಿಕೊಳ್ಳಕ್ಕೆ ಹಾಕುತ್ತಾರೆ.

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ

Profile Ashok Nayak Jun 26, 2025 10:23 PM

ಸರ್ಕಾರಿ ಶಾಲೆಗಳಿಗೆ ಚಕ್ಕರ್

ಜಾತ್ರೆಗಳಿಗೆ ಹಾಜರ್ !!

ಬಿಇಓಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತೀವ್ರ ತರಾಟೆ

ಬಾಗೇಪಲ್ಲಿ: ಲಕ್ಷಾಂತರ ರೂಪಾಯಿಗಳ ಸಂಬಳ ತೆಗೆದುಕೊಂಡು ಶಾಲೆಗಳಿಗೆ ಹೋಗದೆ ಶಾಲಾ ಸಮಯದಲ್ಲಿ ಜಾತ್ರೆಗಳಿಗೆ ಓಡಾಡುವ ಮತ್ತು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವ ಹಾಗು ಡ್ರೈವಿಂಗ್ ಮಾಡಿಕೊಂಡಿರುವ ಶಿಕ್ಷಕರಿಗೆ ಕೇವಲ ನೋಟೀಸ್ ನೀಡಿದರೆ ಅದನ್ನು ಬೊಂಡಾ ಸುತ್ತಿಕೊಳ್ಳಲು ಬಳಸಿಕೊಳ್ಳುತ್ತಾರೆ. ಸಸ್ಪೆಂಡ್ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ಮೊದಲು ಶಿಕ್ಷಕರನ್ನು ಸರಿ ಮಾಡಿ ನಂತರ ಸಭೆಗಳಿಗೆ ಬನ್ನಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಬಿಇಓ ಎನ್.ವೆಂಕಟೇಶಪ್ಪನವರನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೆಲ ದಿನಗಳ ಹಿಂದೆ ನಡೆದ ಆಚೇಪಲ್ಲಿ ಜಾತ್ರೆಯಲ್ಲಿ 50 ಶಿಕ್ಷಕರು ಶಾಲಾ ಸಮಯದಲ್ಲಿಯೇ ಇರುತ್ತಾರೆ ಎಂದರೆ ಶಿಕ್ಷಣ ಇಲಾಖೆ ಯಾವ ದಾರಿಯಲ್ಲಿ ಸಾಗುತ್ತಿದೆ? ಶಾಲೆಗಳಿಗೆ ಚಕ್ಕರ್ ಹೊಡೆದು ಜಾತ್ರೆಗಳಿಗೆ ಹಾಜರಾಗುವ ಶಿಕ್ಷಕರಿಗೆ ನಾಚಿಕೆಯಾಗಬೇಕು. ಅನೇಕ ಶಿಕ್ಷಕರು ಸದಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿಯಾಗಿರುತ್ತಾರೆ. ಇವರಿಗೆ ಶಾಲೆ ಮತ್ತು ಮಕ್ಕಳ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಇನ್ನು ಜಿಲಾಜರ‍್ಲ ಶಾಲಾ ಶಿಕ್ಷಕ ಪುರಸಭೆ ಮುಂದೆ ಕಾರು ಡ್ರೈವಿಂಗ್ ಮಾಡಿಕೊಂಡು ಇರಲು ನಿತ್ಯವೂ ಇರುತ್ತಾನೆ.

ಇದನ್ನೂ ಓದಿ: Chikkaballapur News: ಭೂ ಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿ ದೇವನಹಳ್ಳಿ ಚಲೋ ಹೊರಟ ಕೆಪಿಆರ್‌ಎಸ್ ಸದಸ್ಯರು

ಇಂತಹ ಹೋಪ್‌ಲೆಸ್ ಟೀಚರ್ಸ ಗಳಿಂದ ಏನು ಉಪಯೋಗ, ಇವರ ಮೇಲೆ ಹಿಡಿತವಿಲ್ಲದ ನಿಮ್ಮಿಂದಲೂ ಶಿಕ್ಷಣ ಇಲಾಖೆಗೆ ಉಪಯೋಗವಿಲ್ಲ ಎಂದು ಬಿಇಓ ವಿರುದ್ದ ಕಿಡಿಕಾರಿದರು. ಇದಕ್ಕೆ ಪ್ರಕ್ರಿಯಿಸಿದ ಬಿಇಓ ವೆಂಕಟೇಶಪ್ಪ ಇಂತಹ ಶಿಕ್ಷಕರಿಗೆ ನೋಟೀಸ್ ನೀಡಿದ್ದೇನೆ ಎಂದು ಸಮಜಾ ಯಿಷಿ ನೀಡಿದಾಗ ನೀವು ನೀಡುವ ನೋಟೀಸ್ ಬೊಂಡ ಕಟ್ಟಿಕೊಳ್ಳಕ್ಕೆ ಹಾಕುತ್ತಾರೆ. ಶಾಲಾ ಸಮಯದಲ್ಲಿ ಶಾಲೆಗಳಿಗೆ ಹೋಗದ ಶಿಕ್ಷಕರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿ, ನಾನೇ ಅವರನ್ನು ಸಸ್ಪೆಂಡ್ ಮಾಡಿಸುತ್ತೇನೆ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಗಾಗಿ ನನ್ನ ಸ್ವಂತ ಹಣ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿದ ಮಟ್ಟದಲ್ಲಿ ಬರಲಿಲ್ಲ. ಶಿಕ್ಷಕರು ಸರಿಯಿಲ್ಲದಿದ್ದ ಯಾವ ಬಡವನೂ ತನ್ನ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಇಷ್ಠ ಪಡುವುದಿಲ್ಲ ಎಂದು ತಿಳಿಸಿದ ಶಾಸಕರು ಮೊದಲು ನಿಮ್ಮ ಶಿಕ್ಷಕರನ್ನು ಸರಿಪಡಿಸು ಎಂದು ತಾಕೀತು ಮಾಡಿದರು.

ಸರ್ಕಾರದಲ್ಲಿ ಕಾಡಿ-ಬೇಡಿ ಅನುದಾನ ತಂದು ರಸ್ತೆಗಳನ್ನು ಮಾಡಿಸಿದರೆ ಹೊಸ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದೀರಿ, ರಸ್ತೆಗಳನ್ನು ಹಾಳು ಮಾಡುವವರ ವಿರುದ್ದ ಎಫ್‌ಐಆರ್ ದಾಖಲಿಸಿ ಎಂದು ಲೋಕೋಪಯೋಗಿ ಇಲಾಖೆ ಎಇಇ ಪ್ರದೀಪ್ ಗೆ ಸೂಚಿಸಿ ಬಾಗೇಪಲ್ಲಿ ಪಟ್ಟಣಕ್ಕೆ ಪ್ರವೇಶ ನೀಡುವ ಟಿಬಿ ಕ್ರಾಸ್ ಸಮಸ್ಯೆಯನ್ನು ಸರಿಪಡಿಸಲು ಅಂದಾಜುವೆಚ್ಚವನ್ನು ಸಿದ್ದಪಡಿಸಿ ಎಂದರು.

ರೈತರನ್ನು ಪಾಕಿಸ್ತಾನ್‌ದವರಂತೆ ಅರಣ್ಯ ಇಲಾಖೆ ನೋಡುತ್ತಿದೆ: ತಾಲ್ಲೂಕಿನ ರೈತರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪಾಕಿಸ್ತಾನದವರಂತೆ ನೋಡುತ್ತಿದ್ದಾರೆ, ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಸ್ವತಹ ತಹಶೀಲ್ದಾರ್ ನೀಡಿರುವ ಸಾಗುವಳಿ ಚೀಟಿಯನ್ನು ಮಾನ್ಯತೆ ಮಾಡುವುದಿಲ್ಲ ಎಂದರೆ ಹೇಗೆ. ಹೊಸಬರು ಅರಣ್ಯ ಒತ್ತುವರಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬೇಡಿ, ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಬೇಡಿ. ನೀಡಿದರೆ ನಾನೇ ನಿಮ್ಮ ಕಚೇರಿ ಎದುರು ಕುಳಿತುಕೊಳ್ಳಬೇಕಾಗುತ್ತದೆ. ಪೊಲೀಸರ ರಕ್ಷಣೆಯಲ್ಲಿ ಹಳ್ಳಿಗಳಿಗೆ ಹೋಗುವಂತಹ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ವಲಯ ಅರಣ್ಯಾಧಿಕಾರಿ ವಾಸುದೇವ್ ರವರಿಗೆ ಎಚ್ಚರಿಕೆ ನೀಡಿದರು.

ಬಾಡಿಗೆ ನೀಡದವರವ ಅಂಗಡಿಗೆ ಬಾಗಿಲು ಹಾಕಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಂದ ಪುರಸಭೆಗೆ ಬರಬೇಕಾಗಿರುವ ಕೋಟ್ಯಾಂತರ ರೂಪಾಯಿಗಳ ಬಾಡಿಗೆ ವಸೂಲು ಮಾಡದೆ ಇರುವುದಕ್ಕೆ ತೀವ್ರ ಅಸಮಾಧನ ವ್ಯಕ್ತಪಡಿಸಿದ ಶಾಸಕ ಸುಬ್ಬಾರೆಡ್ಡಿಯವರು 30 ನೇ ತಾರೀಖು ಒಳಗೆ ಬಾಡಿಗೆ ಕಟ್ಟದ ಅಂಗಡಿಗಳಿಗೆ ಮುಲಾಜಿಲ್ಲದೆ ಬಾಗಿಲು ಹಾಕಿ ಖಾಲಿ ಮಾಡಿಸಿ, ಚಿತ್ರಾವತಿ ನದಿಗೆ ತ್ಯಾಜ್ಯವನ್ನು ಎಸೆಯುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಿ, ಕಂದಾಯ ವಸೂಲಿ ಶೇ. 3 ರಷ್ಟು ಮಾಗಿರುವುದಕ್ಕೆ ಪುರಸಭೆಗೆ ನೋಬೆಲ್ ಪ್ರಶಸ್ತಿ ನೀಡಬೇಕಾಗತ್ತದೆ ಎಂದರು.

ಅಕ್ರಮ ಮದ್ಯಮಾರಾಟಗಾರರನ್ನು ಜೈಲಿಗೆ ಕಳುಹಿಸದಿದ್ದಕ್ಕೆ ತರಾಟೆ: ಕನಿಷ್ಠ 5 ಅಕ್ರಮ ಮದ್ಯಮಾರಾಟಗಾರರನ್ನು ಜೈಲಿಗೆ ಕಳುಹಿಸಿ ಮುಂದಿನ ಕೆಡಿಪಿ ಸಬೆಗೆ ಬರುವಂತೆ ಅಬಕಾರಿ ಇನ್ಸ್ಪೆಕ್ಟರ್‌ಗೆ ಸೂಚಿಸಿದ್ದೆ. ಜೈಲಿಗೆ ಕಳುಹಿಸದೆ ಸಬೆಗೆ ಗೈರುಹಾಜರಾದದಕ್ಕೆ ಅಬಕಾರಿ ಇನ್ಸ್ಪೆಕ್ಟರ್ ರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಗ್ರಾಮಗಳಲ್ಲಿನ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಿ ಎಂದು ಅಬಕಾರಿ ಉಪನಿರೀಕ್ಷಕರಿಗೆ ಸೂಚಿಸಿದರು.

ಕೆರೆಗಳನ್ನು ಹರಾಜು ಮಾಡುವಾಗ ಸ್ಥಳೀಯರಿಗೆ ದೊರೆಯುವಂತೆ ಮಾಡಬೇಕು ಎಂದು ಮೀನು ಗಾರಿಕೆ ಉಪನಿದೇಶಕರಿಗೆ ಸೂಚನೆ ನೀಡಿದ ಶಾಸಕರು ಸಾಮಾಜಿಕ ವಲಯ ಅರಣ್ಯ ಇಲಾಖೆ ರಸ್ತೆ ಪಕ್ಷದಲ್ಲಿ ನೆಡುವ ಗಿಡಗಳನ್ನು ಲೋಕೋಪಯೋಗಿ ಇಲಾಖೆ ಕಿತ್ತುಹಾಕುತ್ತಿದ್ದು ಇದರಿಂದ ಏನೂ ಪ್ರಯೋಜನವಿಲ್ಲದಂತಾಗಿದೆ. ರಸ್ತೆಯಿಂದ ಕನಿಷ್ಠ 50 ಅಡಿ ದೂರದಲ್ಲಿ ಗಿಡಗಳನ್ನು ನೆಡಿ ಎಂದು ಸೂಚಿಸಿದರು. ವೃದ್ಧರು ಮಹಿಳೆಯರು ಹತ್ತಲು ತೊಂದರೆಯಾಗುತ್ತಿರುವ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಕೂಡಲೇ ಸ್ಥಳಾಂತರಿಸಿ ಎಂದು ಹೇಳಿದರು.

ಎಪಿಎಂಸಿ ಯಲ್ಲಿ ಪಾಳೆಗಾರಿಕೆ ದರ್ಬಾರು/ರೈತರ ಸುಲಿಗೆ: ಪಟ್ಟಣದ ಎಪಿಎಂಸಿನಲ್ಲಿ ಪಾಳೆಗಾರಿಕೆ ದರ್ಬಾರು ನಡೆಯುತ್ತಿದೆ. ಹರಾಜಿನಲ್ಲಿ 2 ಬಾಕ್ಸ್ ಫ್ರೀ, ಜೊತೆಗೆ ಸ್ಯಾಂಪಲ್ ಸಾಲದು ಎಂಬುದಕ್ಕೆ ಶೇ 10 ಕಮೀಷನ್. ಇನ್ನು ರೈತರೇನು ಮಣ್ಣು ತಿನ್ನುವುದೇ? ರೈತರಿಗೆ ಆ ದೇವರೇ ಗತಿ ಎಂದು ಎಪಿಎಂಸಿ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಇದು ನನಗೆ ಗೊತ್ತಿಲ್ಲ ಎಂದು ಒತ್ತರಿಸಿದ್ದಕ್ಕೆ ನಿಮಗೆ ಕಣ್ಣು ಕಾಣುವುದಿಲ್ಲ ಎಂದು ಅರ್ಥವಾಯಿತು ಎಂದರು. ಅನುಪಾಲನಾ ವರದಿ ಪಾಲನೆ ಮಾಡದಿರುವುದಕ್ಕೆ ಬೆಸ್ಕಾಂ ಮತ್ತು ಜಿಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಚೇಳೂರು ತಾಲ್ಲೂಕಿನ ರಾಶ್ಚೆರುವು ಗ್ರಾಪಂ ಕಾರ್ಯದರ್ಶಿ ಕುಡಿದು ಕಚೇರಿಗೆ ಬರುವುದೇ ಅಲ್ಲದೆ ದಲಿತ ಮಹಿಳೆಯರಿಗೆ ಲೈಂಗಿಕು ಕಿರುಕುಳ ಮಾಡುತ್ತಿದ್ದು ಆತನ ವಿರುದ್ದ ಕ್ರಮ ಜರಿಗಿಸಿ ಎಂದು ಕೆಡಿಪಿ ಸದಸ್ಯ ಬಿ.ವಿ.ವೆಂಕಟರಮಣ ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿದಾಗ ಸೂಕ್ತ ಕ್ರಮ ಜರುಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಜಿಪಂ ಉಪಕಾರ್ಯದರ್ಶಿ ಅತೀಕ್ ಪಾಷ ರವರಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಮ ಉಪ ಕಾರ್ಯದರ್ಶಿ ಅತಿಕ್ ಪಾಷ, ತಹಶೀಲ್ದಾರ್ ಮನೀಷ್ ಎನ್. ಪತ್ರಿ, ತಾಪೋ ಇಓ ಜಿ.ವಿ.ರಮೇಶ್, ಕೆಡಿಪಿ ಸದಸ್ಯರಾದ ಪಿ.ಮಂಜುನಾಥರೆಡ್ಡಿ, ಬಿ.ವಿ.ವೆಂಕಟರಮಣ, ಜಿ. ರಾಮಕೃಷ್ಣ, ರಿಜ್ವಾನ್ ಅಹಮದ್, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.