Bengaluru Techie: ಲಕ್ಷ ಲಕ್ಷ ತೆರಿಗೆ ಕಟ್ಟುತ್ತಿದ್ದ ವ್ಯಕ್ತಿ ಈಗ ನಿರುದ್ಯೋಗಿ; ಬೆಂಗಳೂರು ಟೆಕ್ಕಿಯ ಕರುಣಾಜನಕ ಸ್ಟೋರಿ!
Bengaluru Techie: ಕಳೆದ ಐದು ವರ್ಷಗಳಲ್ಲಿ 30 ಲಕ್ಷ ರೂ. ಗಿಂತಲೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ದಿಢೀರನೆ ಕೆಲಸ ಕಳೆದುಕೊಂಡು, ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾನದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ.


ಬೆಂಗಳೂರು: ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲೂ ವಿವಿಧ ಕಾರಣಗಳಿಂದಾಗಿ ಉದ್ಯೋಗ ಕಡಿತ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಖಾಸಗಿ ಕ್ಷೇತ್ರದ ಉದ್ಯೋಗಿಗಳಲ್ಲಿ ಉದ್ಯೋಗ ಭದ್ರತೆ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಕೆಲಸ ಕಳೆದುಕೊಂಡ ಕತೆಯನ್ನು ಹಂಚಿಕೊಂಡಿದ್ದು, ಸದ್ಯ ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಲೀಂ ಎಂಬ ಟೆಕ್ಕಿ, ಎನ್ಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಬೆಂಗಳೂರಿನ ಕಂಪನಿಯೊಂದರಲ್ಲಿ ವಾರ್ಷಿಕ 43.5 ಲಕ್ಷ ರೂ. ಪ್ಯಾಕೇಜ್ನ ಜಾಬ್ ಹೊಂದಿದ್ದರು. ಇವರು ಏಕಾಏಕಿ ಕೆಲಸ ಕಳೆದುಕೊಂಡಿದ್ದರಿಂದ ಏನೆಲ್ಲಾ ಸಮಸ್ಯೆ ಅನುಭವಿಸಿದರು ಎಂದು ವೆಂಕಟೇಶ್ ಆಲ್ಲಾ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಲೀಂ ಅವರನ್ನು ಕಳೆದ ತಿಂಗಳು ಕಂಪೆನಿಯಿಂದ ಲೇ ಆಫ್ ಮಾಡಲಾಗಿತ್ತು. ಕೇವಲ ಮೂರು ತಿಂಗಳ ಸಂಬಳ ಕೊಟ್ಟು, ಹೊರಗಡೆ ಕಳುಹಿಸಲಾಗಿತ್ತು.
Just got a message from Mr. Salim a topper from his NIT, working in Bangalore with a ₹43.5 LPA package laid off last month. The company handed him just 3 months’ severance.
— Venkatesh Alla (@venkat_fin9) June 29, 2025
Last year alone, he paid ₹11.22 lakhs in income tax. In just 5 years, over ₹30 lakhs gone into the…
ಕಳೆದ ಐದು ವರ್ಷಗಳಲ್ಲಿ ಸಲೀಂ ಅವರು 30 ಲಕ್ಷ ರೂ. ಗಿಂತಲೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಕಳೆದ ವರ್ಷವಷ್ಟೇ 11.22 ಲಕ್ಷ ರೂ. ತೆರಿಗೆ ಪಾವತಿಸಿದ್ದಾರೆ. ಈಗ ಉದ್ಯೋಗವಿಲ್ಲದೆ ಸಂಕಷ್ಟ ಎದುರಾಗಿದೆ. ಮನೆ ಸಾಲವಿಲ್ಲದೆ, ಮಕ್ಕಳ ಶಿಕ್ಷಣಕ್ಕಾಗಿ, ಪ್ರತಿ ಮಗುವಿಗೆ ವರ್ಷಕ್ಕೆ 1.95 ಲಕ್ಷ ರೂ. ಖರ್ಚು ಮಾಡಲು ಜಾಬ್ ಮೇಲೆ ಅವಲಂಬಿತರಾಗಿದ್ದರು. ಹೀಗಾಗಿ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಆದರೆ, ಅವರಿಗೆ ಯಾವುದೇ ನೆರವು ಸಿಕ್ಕಿಲ್ಲ.
ನಾನು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಪಾವತಿಸಿದ್ದೆ. ಆದರೆ ನನಗೆ ಯಾವುದೇ ಉಪಯೋಗವಾಗಿಲ್ಲ. ಏಕಾಏಕಿ ಕೆಲಸ ಕಳೆದುಕೊಂಡಿದ್ದರಿಂದ ಬೀದಿಗೆ ಬಿದ್ದಿದ್ದು, ದಿಕ್ಕು ತೋಚದಂತಾಗಿದೆ ಎಂದು ಸಲೀಂ ಹೇಳಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ದೇಶದಲ್ಲಿ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರ ಸ್ಥಿತಿ ಹೀಗಿದೆ, ಈ ವ್ಯವಸ್ಥೆಯು ಬದಲಾಗಬೇಕು ಎಂದು ವೆಂಕಟೇಶ್ ಆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಕಳೆದುಕೊಂಡ ಟೆಕ್ಕಿ ತಮ್ಮ ನಿಜವಾದ ಹೆಸರನ್ನು ಗೌಪ್ಯವಾಗಿ ಇಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಸಲೀಂ ಎಂದು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದೇನೆ ವೆಂಕಟೇಶ್ ಆಲ್ಲಾ ತಿಳಿಸಿದ್ದಾರೆ.
ಈ ಪೋಸ್ಟ್ಗೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪ್ರಪಂಚದಾದ್ಯಂತ ಎಲ್ಲರೂ ತೆರಿಗೆ ಪಾವತಿಸುತ್ತಾರೆ, ಜಾಬ್ ಕಳೆದುಕೊಂಡರೆ ಅದಕ್ಕೆ ಸರ್ಕಾರ ಕಾರಣವೇ? ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಡ್ ಮಾಡಿದ್ದಾರೆ. ತೆರಿಗೆ ಪಾವತಿಸಿದ ಮಾತ್ರಕ್ಕೆ ಅದು ನಿರುದ್ಯೋಗ ವಿರುದ್ಧದ ಇನ್ಶೂರೆನ್ಸ್ ಅಲ್ಲ, ಕೆಲವರು ಎಲ್ಲದಕ್ಕೂ ಸರ್ಕಾರವನ್ನು ದೂಷಿಸುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Rinku Singh: 9ನೇ ತರಗತಿ ಫೇಲ್ ಆದ ರಿಂಕುಗೆ ಶಿಕ್ಷಣಾಧಿಕಾರಿ ಹುದ್ದೆ; ಭಾರೀ ವಿರೋಧ
ಅಷ್ಟಕ್ಕೂ ಸರ್ಕಾರ ಯಾಕೆ ಆತನ ಯೋಗಕ್ಷೇಮ ನೋಡಿಕೊಳ್ಳಬೇಕು, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಜಿಎಸ್ಟಿ, ಅಬಕಾರಿ, ಸೀಮಾ ಸುಂಕ, ಆದಾಯ ತೆರಿಗೆ ಸೇರಿ ವಿವಿಧ ರೂಪಗಳಲ್ಲಿ ತೆರಿಗೆ ಪಾವತಿಸುತ್ತಾರೆ ಎಂದು ಇನ್ನೊಬ್ಬರು ಸ್ಪಂದಿಸಿದ್ದಾರೆ.