ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Benefits of Jamun: ಈ ಋತುವಿನಲ್ಲಿ ತಪ್ಪದೇ ತಿನ್ನಿ ನೇರಳೆ ಹಣ್ಣು!

ಈ ದಿನಗಳಲ್ಲಿ ಎಲ್ಲೆಡೆ ಕಾಣುವ ಕಪ್ಪನೆಯ ರಸಭರಿತ ನೇರಳೆ ಹಣ್ಣನ್ನು ಯಾರು ತಾನೆ ನೋಡಿ ರುವುದಿಲ್ಲ? ಉರುಟಾದ ಅಥವಾ ಉದ್ದ ಮಾಟದ, ಸಣ್ಣ ಗಾತ್ರದ ಅಥವಾ ಒಮ್ಮೆಲೆ ಬಾಯಿ ತುಂಬಿಸ ಬಹುದಾದಷ್ಟು ದೊಡ್ಡ ನೇರಳೆ ಹಣ್ಣುಗಳು ಈಗ ಭರದಿಂದ ಮಾರಾಟ ವಾಗುತ್ತಿವೆ. ಹಾಗೆ ನೋಡಿದರೆ, ಇನ್ನೇನು ನೇರಳೆಯ ಋತು ಮುಗಿಯುವ ದಿನಗಳೂ ಬಂದವು. ನಾವೆಷ್ಟು ತಿಂದಿದ್ದೇವೆ ಇದನ್ನು? ಏನು ಪ್ರಯೋಜನಗಳಿವೆ ಈ ಹಣ್ಣನ್ನು ತಿನ್ನುವುದರಿಂದ?

ನೇರಳೆ ಹಣ್ಣಿನ ಸೇವನೆಯಿಂದ ಈ ಆರೋಗ್ಯ ಲಾಭ ಇದೆ!

Jamun fruit

Profile Pushpa Kumari Jun 30, 2025 5:00 AM

ನವದೆಹಲಿ: ಋತುಮಾನದ ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕೆಂದು ಆಹಾರ ತಜ್ಞರು ಹೇಳುವುದನ್ನು ಕೇಳಿಯೇ ಇರುತ್ತೇವೆ. ಕೇಳಿದ್ದನ್ನು ಮಾಡಿರುವುದಿಲ್ಲ ಎನ್ನುವ ವಿಷಯ ಬೇರೆ. ಈ ದಿನಗಳಲ್ಲಿ ಎಲ್ಲೆಡೆ ಕಾಣುವ ಕಪ್ಪನೆಯ ರಸಭರಿತ ನೇರಳೆ ಹಣ್ಣನ್ನು (Jamun fruit) ಯಾರು ತಾನೆ ನೋಡಿರುವುದಿಲ್ಲ? ಉರುಟಾದ ಅಥವಾ ಉದ್ದ ಮಾಟದ, ಸಣ್ಣ ಗಾತ್ರದ ಅಥವಾ ಒಮ್ಮೆಲೆ ಬಾಯಿ ತುಂಬಿಸಬಹುದಾದಷ್ಟು ದೊಡ್ಡ ನೇರಳೆ ಹಣ್ಣುಗಳು ಈಗ ಭರದಿಂದ ಮಾರಾಟ ವಾಗು ತ್ತಿವೆ. ಹಾಗೆ ನೋಡಿದರೆ, ಇನ್ನೇನು ನೇರಳೆಯ ಋತು ಮುಗಿಯುವ ದಿನಗಳೂ ಬಂದವು. ನಾವೆಷ್ಟು ತಿಂದಿದ್ದೇವೆ ಇದನ್ನು? ಏನು ಪ್ರಯೋಜನಗಳಿವೆ ಈ ಹಣ್ಣನ್ನು ತಿನ್ನು ವುದರಿಂದ?

ಒಂದು ಮುಷ್ಟಿ ಹಣ್ಣು ತಿನ್ನುವಷ್ಟರಲ್ಲಿ ನಾಲಿಗೆಯೆಲ್ಲಾ ನೀಲಿಯಾಗುವಷ್ಟು ಕಡು ನೇರಳೆ ಬಣ್ಣ ಇದರದ್ದು. ಬಟ್ಟೆಯ ಮೇಲೆ ಇದರ ರಸ ಬಿದ್ದರೆ ಕಲೆ ತೆಗೆಯುವುದೇ ಸಾಹಸ. ಅಷ್ಟೊಂದು ಗಾಢ ವರ್ಣದ ಈ ರಸಭರಿತ ಹಣ್ಣನ್ನು ಇದ್ದಂತೆಯೇ ತಿನ್ನುವುದು ಬಹಳ ರುಚಿ. ಮಾತ್ರವಲ್ಲ, ಜ್ಯಾಮ್‌, ಜೆಲ್ಲಿ, ಯೋಗರ್ಟ್‌, ಜ್ಯೂಸ್‌ ಎನ್ನುತ್ತಾ ಹಲವು ಬಗೆಯಲ್ಲಿ ಮೌಲ್ಯವರ್ಧನೆ ಮಾಡಲಾಗುತ್ತದೆ. ಹಣ್ಣು ಅಥವಾ ತರಕಾರಿಗಳ ಸಲಾಡ್‌ನಲ್ಲೂ ಇದನ್ನು ಬಳಸಿಕೊಂಡು, ರುಚಿ ಹೆಚ್ಚಿಸಿಕೊಳ್ಳಬಹುದು. ಆರೋಗ್ಯಕ್ಕೇನು ಲಾಭ ಇದರಿಂದ?

ಕ್ಯಾಲರಿ ಕಡಿಮೆ: ತೂಕ ಇಳಿಸುವ ಅಥವಾ ಕಡಿಮೆ ಕ್ಯಾಲರಿ ತಿನ್ನುವ ಉದ್ದೇಶ ಹೊಂದಿದ್ದೀರೇ? ಹಾಗಾದರೆ ನೇರಳೆ ಹಣ್ಣು ಒಳ್ಳೆಯ ಆಯ್ಕೆ. ಕಾರಣ, ಒಂದು ಕಪ್‌ ತಾಜಾ ನೇರಳೆ ಹಣ್ಣಿನಲ್ಲಿ ದೊರೆಯುವ ಶಕ್ತಿ ಕೇವಲ 60ಕ್ಯಾಲರಿಗಳಷ್ಟು. ರಸಭರಿತವಾದ ಈ ಹಣ್ಣು ಹೊಟ್ಟೆ ತುಂಬಿದ ಅನುಭವವನ್ನೂ ನೀಡಿ, ಹೆಚ್ಚಿನ ಕ್ಯಾಲರಿಯೂ ದೊರೆಯದಂತೆ ತಡೆಯುತ್ತದೆ.

ಉತ್ಕರ್ಷಣ ನಿರೋಧಕ: ಈ ಹಣ್ಣಿನ ಕಡು ನೇರಳೆ ಬಣ್ಣವೇ ಸೂಚಿಸುತ್ತದೆ, ಇದರಲ್ಲಿ ಉತ್ಕ ರ್ಷಣ ನಿರೋಧಕಗಳು ಎಷ್ಟೊಂದು ಸಾಂದ್ರವಾಗಿವೆ ಎಂಬುದನ್ನು. ದೇಹದಲ್ಲಿ ಯಾವುದೇ ಬಗೆಯ ಉರಿ ಯೂತವನ್ನು ನಿಯಂತ್ರಣಕ್ಕೆ ತರುವುದಕ್ಕೆ ಇಂಥ ಆಹಾರಗಳು ಉಪಯುಕ್ತ. ಮಾತ್ರವಲ್ಲ, ಶರೀರ ದಲ್ಲಿ ಅಂಡಲೆಯುವ ಮುಕ್ತಕಣಗಳನ್ನು ನಿರ್ಬಂಧಿಸಿ, ಕ್ಯಾನ್ಸರ್‌ನಂಥ ಮಾರಕ ರೋಗಗಳು ಬರುವುದನ್ನು ತಪ್ಪಿಸುತ್ತವೆ.

ಮಧುಮೇಹ ನಿಯಂತ್ರಣ: ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ನೇರಳೆ ಹಣ್ಣಿನದ್ದು ಪ್ರಧಾನ ಪಾತ್ರ. ಇನ್‌ಸುಲಿನ ಉತ್ಪಾದನೆಯನ್ನು ಪ್ರಚೋದಿಸುವ ಮೂಲಕ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚ ದಂತೆ ನೋಡಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಹಾಗಾಗಿ ಈ ಋತುವಿನಲ್ಲಿ ದೊರೆಯುವ ನೇರಳೆ ಹಣ್ಣನ್ನು ಮಿತ ಪ್ರಮಾಣದಲ್ಲಿ ತಿನ್ನುವುದು ಮಧುಮೇಹಿಗಳಿಗೆ ಪ್ರಯೋಜನವಾಗಬಹುದು.

ಬೀಜಗಳೂ ಉಪಯುಕ್ತ: ಈ ನಿಟ್ಟಿನಲ್ಲಿ ನೇರಳೆ ಬೀಜಗಳ ಗುಣಗಳನ್ನೂ ಇಲ್ಲಿ ಹೇಳಲೇಬೇಕು. ಹಣ್ಣುಗಳನ್ನು ತಿಂದ ಮೇಲೆ ಉಳಿಯುವ ಬೀಜಗಳನ್ನು ಚೆನ್ನಾಗಿ ತೊಳೆದು, ಒಣಗಿಸಿ, ಪುಡಿ ಮಾಡಿ ಟ್ಟುಕೊಂಡು, ಅದನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಕ್ರಮ ಮೊದ ಲಿನಿಂದಲೂ ಇದೆ. ಹಸಿದ ಹೊಟ್ಟೆಯಲ್ಲಿ, ಈ ಪುಡಿಯನ್ನು ಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸ ಲಾಗುತ್ತದೆ. ಇದರ ಗ್ಲೈಸೆಮಿಕ್‌ ಸೂಚಿ ಬಹಳ ಕಡಿಮೆಯಿದ್ದು, ಪಿಷ್ಟವು ಸಕ್ಕರೆಯಾಗಿ ಪರಿವರ್ತನೆ ಯಾಗುವುದನ್ನು ನಿಧಾನ ಮಾಡುವಂಥ ಜಾಂಬೊಲಿನ್‌, ಜಾಂಬೊಸಿನ್‌ನಂಥ ಸಂಯುಕ್ತಗಳು ಇದರಲ್ಲಿವೆ. ಆದರೆ ಈಗಾಗಲೇ ಮಧುಮೇಹಕ್ಕೆ ಮದ್ದು ತೆಗೆದುಕೊಳ್ಳುವವರು, ಇಂಥ ಔಷಧಿಗಳನ್ನು ಬಳಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯಲೇಬೇಕು.

ಇದನ್ನು ಓದಿ:Health Tips: ರಕ್ತದೊತ್ತಡವನ್ನು ನಿಯಂತ್ರಿಸಲು ಈ ಆಹಾರ ಕ್ರಮ ಅಳವಡಿಸಿ

ಜೀರ್ಣಕಾರಿ: ಇದರಲ್ಲಿ ನಾರಿನಂಶ ಹೇರಳವಾಗಿದೆ. ಹಾಗಾಗಿ ಜೀರ್ಣಾಂಗಗಳ ಸಂಕಷ್ಟವನ್ನು ಕಡಿಮೆ ಮಾಡಿ, ಅವುಗಳ ಕ್ಷಮತೆಯನ್ನು ಹೆಚ್ಚಿಸಬಲ್ಲದು. ಯಕೃತ್‌ನ ಕಾರ್ಯದಕ್ಷತೆಯನ್ನು ಅಧಿಕಗೊಳಿಸುವಲ್ಲಿ ಈ ಹಣ್ಣು ಉಪಕಾರಿ. ಹಣ್ಣು, ತರಕಾರಿಗಳ ಸಲಾಡ್‌ ಜೊತೆಗೆ ನೇರಳೆ ಹಣ್ಣನ್ನೂ ಸೇರಿಸಿಕೊಂಡು ತಿನ್ನುವುದು ಈ ನಿಟ್ಟಿನಲ್ಲಿ ಒಳ್ಳೆಯ ಫಲಿತಾಂಶವನ್ನು ನೀಡುವಂಥದ್ದು.

ಪ್ರತಿರೋಧಕತೆ ಹೆಚ್ಚಳ: ಮಳೆಗಾಲವೆಂದರೆ ಹಲವು ರೀತಿಯ ಸೋಂಕುಗಳ ಕಾಲ. ಹಾಗಾಗಿ ವಿಟಮಿನ್‌ ಸಿ ಹೆಚ್ಚಿರುವಂಥ ಆಹಾರಗಳನ್ನು ತಿನ್ನುವುದು ಎಲ್ಲ ದೃಷ್ಟಿಯಿಂದಲೂ ಉಪಯುಕ್ತ. ನೇರಳೆ ಹಣ್ಣಿನಲ್ಲಿ ಸಿ ಜೀವಸತ್ವ ವಿಫುಲವಾಗಿದೆ. ಇಂಥ ಉರಿಯೂತ ಶಾಮಕಗಳು ಕೇವಲ ರೋಗ ನಿರೋಧಕತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಉರಿಯೂತದಿಂದ ಉಂಟಾಗುವಂಥ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲವು.