ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಕೆಎಲ್‌ ರಾಹುಲ್‌ಗೆ ಮಹತ್ವದ ಸಂದೇಶ ರವಾನಿಸಿದ ಸಂಜಯ್‌ ಮಾಂಜ್ರೇಕರ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಎರಡನೇ ಟೆಸ್ಟ್‌ ಪಂದ್ಯ ಜುಲೈ 2 ರಂದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ.

ಕೆಎಲ್‌ ರಾಹುಲ್‌ಗೆ ಮಹತ್ವದ ಸಂದೇಶ ಕಳುಹಿಸಿದ ಮಾಂಜ್ರೇಕರ್‌!

ಕೆಎಲ್‌ ರಾಹುಲ್‌ಗೆ ಮಹತ್ವದ ಸಂದೇಶ ನೀಡಿದ ಸಂಜಯ್‌ ಮಾಂಜ್ರೇಕರ್‌.

Profile Ramesh Kote Jun 30, 2025 5:56 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಶತಕಗಳನ್ನು ಸಿಡಿಸಿದ್ದ ರಿಷಭ್‌ ಪಂತ್‌ ಹಾಗೂ ಕೆಎಲ್‌ ರಾಹುಲ್‌ (KL Rahul) ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್‌ (Sanjay Manjrekar) ಶ್ಲಾಘಿಸಿದ್ದಾರೆ. ಅಲ್ಲದೆ, ರಿಷಭ್‌ ಪಂತ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅವರು ಈ ಸರಣಿಯುದ್ದಕ್ಕೂ ಇದೇ ಲಯವನ್ನು ಮುಂದುವರಿಸಲಿದ್ದಾರೆ. ಆದರೆ, ಇವರ ಜೊತೆಗೆ ಕೆಎಲ್‌ ರಾಹುಲ್‌ ಕೂಡ ಒಂದೇ ಒಂದು ಶತಕಕ್ಕೆ ಸುಮ್ಮನಾಗುವುದಿಲ್ಲ, ಅವರು ಕೂಡ ಇನ್ನಷ್ಟು ಶತಕಗಳನ್ನು ಸಿಡಿಸಬೇಕೆಂದು ಸಲಹೆ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ರಿಷಭ್‌ ಪಂತ್‌ ಹಾಗೂ ಕೆಎಲ್‌ ರಾಹುಲ್‌ ಅವರಿಂದ ಒಟ್ಟು 5 ಶತಕಗಳು ಮೂಡಿಬಂದಿದ್ದವು. ಆದರೂ, ಕಳೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಕುಸಿತ ಹಾಗೂ ಬೌಲಿಂಗ್‌ ವೈಫಲ್ಯದಿಂದ ಭಾರತ ತಂಡ, ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಕೆಎಲ್‌ ರಾಹುಲ್‌ ಪ್ರಥಮ ಇನಿಂಗ್ಸ್‌ನಲ್ಲಿ 42 ರನ್‌ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 137 ರನ್‌ಗಳನ್ನು ಕಲೆ ಹಾಕಿದ್ದರು.

IND vs ENG: ʻಶುಭಮನ್ ಗಿಲ್‌ಗೆ ಸಮಯ ಕೊಡಿ-ಟೀಕಾಕಾರರ ವಿರುದ್ಧ ಮೊಹಮ್ಮದ್ ಅಝರುದ್ದಿನ್ ಕಿಡಿ!

ರಿಷಭ್‌ ಪಂತ್‌ಗೆ ಮಾಂಜ್ರೇಕರ್‌ ಮೆಚ್ಚುಗೆ

ರಿಷಭ್‌ ಪಂತ್‌ ಟೆಸ್ಟ್‌ ಕ್ರಿಕೆಟ್‌ ಅನ್ನು ಪ್ರೀತಿಸುತ್ತಾರೆ ಹಾಗೂ ಅವರು ಈ ಸ್ವರೂಪದಲ್ಲಿ ತಮ್ಮ ಬ್ಯಾಟಿಂಗ್‌ ಅನ್ನು ಆನಂದಿಸುತ್ತಾರೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ತೋರಿದ್ದ ಮಾನಸಿನ ಸಾಮರ್ಥ್ಯವನ್ನು ನೋಡಿದಾಗ ಅವರು ರನ್‌ ಗಳಿಸಲು ಹಸಿವನ್ನು ಹೊಂದಿದ್ದಾರೆಂದು ಸಂಜಯ್‌ ಮಾಂಜ್ರೇಕರ್‌ ಹೇಳಿದ್ದಾರೆ.

"ಅವರು (ರಿಷಭ್ ಪಂತ್) ಎರಡನೇ ಪಂದ್ಯಕ್ಕೂ ತಮ್ಮ ಫಾರ್ಮ್ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಅನ್ನು ಆನಂದಿಸುತ್ತಾರೆ ಎಂದು ತೋರುತ್ತದೆ. ಟೆಸ್ಟ್ ಪಂದ್ಯದಲ್ಲಿ ಎರಡು ಶತಕಗಳನ್ನು ಗಳಿಸುವ ಯಾವುದೇ ಬ್ಯಾಟ್ಸ್‌ಮನ್ ದೈಹಿಕ ಅಂಶಗಳಿಂದ ಅಲ್ಲ, ಮಾನಸಿಕವಾಗಿ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. 48 ಗಂಟೆಗಳ ನಂತರ ನೀವು ಇನ್ನೊಂದು ಶತಕವನ್ನು ಗಳಿಸಲು ಅದೇ ರೀತಿಯ ಮೀಸಲು ಹೊಂದಿರುತ್ತೀರಿ. ಆದ್ದರಿಂದ ಅದು ಅಸಾಧಾರಣ ಆಟಗಾರನ ವಿಶಿಷ್ಟ ಲಕ್ಷಣವಾಗಿದೆ," ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ 'ಗೇಮ್ ಪ್ಲಾನ್' ಕಾರ್ಯಕ್ರಮದ ಸಂದರ್ಭದಲ್ಲಿ ತಿಳಿಸಿದ್ದಾರೆ.

IND vs ENG: 49 ವರ್ಷದ ಭಾರತೀಯ ದಾಖಲೆ ಮುರಿಯಲು ಸಜ್ಜಾದ ಜೈಸ್ವಾಲ್‌

ಕೆಎಲ್‌ ರಾಹುಲ್‌ ಇನ್ನಷ್ಟು ಶತಕಗಳನ್ನು ಗಳಿಸಬೇಕು

ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯ ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿಯೂ ಕೆಎಲ್‌ ರಾಹುಲ್‌ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆಂಬ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

"ರಿಷಭ್ ಪಂತ್ ಟೆಸ್ಟ್ ಪಂದ್ಯಗಳನ್ನು ಆನಂದಿಸುತ್ತಾರೆ. ಅವರು ಸಾಕಷ್ಟು ರನ್ ಗಳಿಸಿಲ್ಲ. ಆದ್ದರಿಂದ ಅವರು ಹಸಿದಿದ್ದಾರೆ. ಪಂತ್ ತಮ್ಮ ಫಾರ್ಮ್ ಅನ್ನು ಉಳಿಸಿಕೊಳ್ಳುವುದನ್ನು ನಾನು ನೋಡುತ್ತೇನೆ, ಆದರೆ ತಂಡದಲ್ಲಿ ಮತ್ತೊಬ್ಬ ಹಿರಿಯ ಬ್ಯಾಟ್ಸ್‌ಮನ್ ಇದ್ದಾರೆ, ಅವರಿಗೆ ಈಗ ಸರಣಿಯುದ್ದಕ್ಕೂ ತಮ್ಮ ಫಾರ್ಮ್ ಅನ್ನು ಮುಂದುವರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಭಾರತೀಯ ಕ್ರಿಕೆಟ್‌ಗೆ ಅವರ ಅವಶ್ಯಕತೆ ಇದೆ, ಮತ್ತು ಕೆಎಲ್ ರಾಹುಲ್ ಒಂದು ಶತಕದ ಅದ್ಭುತ ಅಥವಾ ಒಂದು ಟೆಸ್ಟ್ ಪಂದ್ಯದ ಪ್ರದರ್ಶನ ನೀಡುವವನಾಗಲು ಸಾಧ್ಯವಿಲ್ಲ," ಎಂದು ಅವರು ತಿಳಿಸಿದ್ದಾರೆ.