ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aamir Khan: ʼಸಿತಾರೆ ಜಮೀನ್ ಪರ್ʼ ಚಿತ್ರದ ಬಗ್ಗೆ ಅಭಿಮಾನಿಯ ಪತ್ರ ಓದಿ ನಟ ಆಮೀರ್‌ ಖಾನ್ ಭಾವುಕ

ʼತಾರೆ ಜಮೀನ್ ಪರ್ʼನಂತೆಯೇ ʼಸಿತಾರೆ ಜಮೀನ್ ಪರ್ʼ ಬಾಲಿವುಡ್‌ ಸಿನಿಮಾವು ಪ್ರೇಕ್ಷಕರ ಮನ ಗೆಲ್ಲುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಈ ಸಿನಿಮಾದ ಕಲಾವಿದರ ಕುರಿತು ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದೇ ರೀತಿ ಅಭಿಮಾನಿಯೊಬ್ಬರು ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದು, ಇದನ್ನು ಓದಿ ಆಮೀರ್ ಖಾನ್ ಭಾವುಕರಾಗಿದ್ದಾರೆ.

ಅಭಿಮಾನಿ ಪತ್ರ ಓದಿ ಬಿಕ್ಕಿ-ಬಿಕ್ಕಿ ಅತ್ತ ನಟ ಆಮೀರ್‌ ಖಾನ್

Aamir Khan

Profile Pushpa Kumari Jun 30, 2025 6:55 PM

ಮುಂಬೈ: ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ತಮ್ಮ ಅಭಿನಯದ ಮೂಲಕವೇ ಜನ ಮನ ಗೆದ್ದಿದ್ದಾರೆ. ಅವರ ಈ ಹಿಂದಿನ ʼಥಗ್ಸ್ ಆಫ್ ಹಿಂದೂಸ್ತಾನ್ʼ ಹಾಗೂ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾ ಫ್ಲಾಪ್ ಆದ ಬಳಿಕ ʼಸಿತಾರೆ ಜಮೀನ್ ಪರ್ʼ ಚಿತ್ರದ ಮೇಲೆ ಅವರು ಭರವಸೆಯನ್ನಿಟ್ಟಿದ್ದರು. ಈ ಚಿತ್ರ ಇದೀಗ ಕೈ ಹಿಡಿದಿದೆ. ಈ ಹಿಂದಿನ ʼತಾರೆ ಜಮೀನ್ ಪರ್ʼನಂತೆಯೇ ʼಸಿತಾರೆ ಜಮೀನ್ ಪರ್ʼ ಕೂಡ ಪ್ರೇಕ್ಷಕರ ಮನಗೆಲ್ಲುತ್ತಿದ್ದು. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಪಾತ್ರವರ್ಗದ ಕುರಿತು ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದೀಗ ಅಭಿಮಾನಿಯೊಬ್ಬರು ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದು, ಅದನ್ನು ಓದಿ ನಟ ಆಮೀರ್ ಖಾನ್ ಭಾವುಕರಾಗಿದ್ದಾರೆ.

ʼಸಿತಾರೆ ಜಮೀನ್ ಪರ್ʼಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ಅಭಿಮಾನಿಯೊಬ್ಬರು ನಟ ಆಮೀರ್ ಖಾನ್ ಅವರಿಗೆ ಪತ್ರ ಬರೆದಿದ್ದು, ಸಿನಿಮಾ ಬಹಳ ಚೆನ್ನಾಗಿತ್ತು ಎಂದು ಕೊಂಡಾಡಿದ್ದಾರೆ. ತನ್ನ ಸಹೋದರ ಕೂಡ ವಿಶೇಷಚೇತನರಾಗಿದ್ದು, ಅವರ ಅಭಿಪ್ರಾಯವನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ‌. ಸಿನಿಮಾದಲ್ಲಿ ವಿಶೇಷ ಚೇತನರ ಸಾಮರ್ಥ್ಯ ತೋರ್ಪಡಿಸಿದ್ದು, ಆ ಮೂಲಕ ಅನೇಕರಿಗೆ ಸ್ಫೂರ್ತಿ ನೀಡಿದೆ. ಸಮಾಜದಲ್ಲಿ ವಿಶೇಷ ಚೇತರಿಗೆ ನೀಡಬೇಕಾದ ಪ್ರಾತಿನಿಧ್ಯತೆ ವಿಚಾರಗಳಿಗೆ ಮಾನ್ಯತೆ ನೀಡಿದ್ದೀರಿ‌. ನಟ ಆಮೀರ್‌ ಮತ್ತು ಅವರ ತಂಡಕ್ಕೆ ಧನ್ಯವಾದಗಳು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದ ಜತೆಗೆ ಅಭಿಮಾನಿ ಹಾಗೂ ಆತನ ಸಹೋದರನ ಫೋಟೊ ಕೂಡ ಇದ್ದು ಇದನ್ನು ಓದಿ ಆಮೀರ್ ಖಾನ್ ಭಾವುಕರಾಗಿದ್ದಾರೆ.

ಅಭಿಮಾನಿಯು ತನ್ನ ಪತ್ರದಲ್ಲಿ, ʼʼನನ್ನ ಸಹೋದರ ಮಾನಸಿಕ ಮತ್ತು ದೈಹಿಕವಾಗಿ ಅಶಕ್ತರಾಗಿದ್ದರೂ ಈ ಸಿನಿಮಾ ನೋಡಿ ಕಥೆಯನ್ನು ಅರ್ಥೈಸಿಕೊಂಡಿದ್ದಾರೆ. ಸಿನಿಮಾ ಮುಗಿದ ಬಳಿಕವು ಖಾಲಿ ಪರದೆಯನ್ನು ನೋಡುತ್ತಲೇ ಇದ್ದರು. ಮೌನವಾಗಿ ಕುಳಿತು ಕಣ್ಣೀರು ಹರಿಸಿದ್ದನ್ನು ನಾನು ಗಮನಿಸಿದೆ. ನೀವು ಕೇವಲ ಒಂದು ಚಲನಚಿತ್ರವನ್ನು ಮಾಡಿಲ್ಲ. ನೀವು ವಿಶೇಷ ಚೇತನರ ಸಾಮರ್ಥ್ಯ ಜಗತ್ತಿಗೆ ಪರಿಚಯಿಸಿದ್ದೀರಿ ʼʼಎಂದು ಬರೆದಿದ್ದಾರೆ. ಇದನ್ನು ಓದುತ್ತಿದ್ದಂತೆ ಆಮೀರ್ ಭಾವುಕರಾಗಿ ಕಣ್ಣೊರೆಸಿಕೊಂಡಿದ್ದಾರೆ.

ಪತ್ರವನ್ನು ಪೂರ್ತಿ ಓದಿ ಮುಗಿಸಲು ಸಾಧ್ಯವಾಗದೆ, ನಿರ್ದೇಶಕ ಆರ್.ಎಸ್. ಪ್ರಸನ್ನ ಅವರಲ್ಲಿ ಮುಂದುವರಿಸಲು ಆಮೀರ್ ಕೇಳಿಕೊಂಡರು. ಪತ್ರದ ಕೊನೆಯಲ್ಲಿ ಅಭಿಮಾನಿಯ ಸಹೋದರ ಬಾಂದ್ರಾದಲ್ಲಿ ವಾಸಿಸುತ್ತಿದ್ದು, ಶೀಘ್ರದಲ್ಲಿ ಅವರ ಹುಟ್ಟುಹಬ್ಬ ಇದೆ ಎಂದು ತಿಳಿದು ಬಂದಿದ್ದು, ತಕ್ಷಣ ಅವರನ್ನು ಊಟಕ್ಕೆ ಆಹ್ವಾನಿಸಿ, ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಬಗ್ಗೆ ಆಮೀರ್‌ ಭರವಸೆ ನೀಡಿದ್ದಾರೆ.

ಇದನ್ನು ಓದಿ:Su From So Movie: ಬಾಯ್ಸ್‌ ಪಾರ್ಟಿಗೆ ಹೇಳ್‌ ಮಾಡ್ಸಿದ ಹಾಡಿದು! ಸೂಪರ್‌ ಡೂಪರ್‌ ಸಾಂಗ್‌ ರಿಲೀಸ್‌ ಮಾಡಿದ ರಾಜ್ ಬಿ ಶೆಟ್ಟಿ

ಆಮೀರ್ ಖಾನ್ ಅವರ 2007ರ‌ ʼತಾರೆ ಜಮೀನ್ ಪರ್‌ʼನ ಪ್ರೇರಣೆಯಿಂದ ʼಸಿತಾರೆ ಜಮೀನ್ ಪರ್ʼ ಮಾಡಲಾಗಿದೆ. ಆಮೀರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಈ ಸಿನಿಮಾ ನಿರ್ಮಿಸಿದ್ದು, ಸ್ಪೋರ್ಟ್ಸ್ ಕಾಮಿಡಿ ಸಿಕ್ವೆನ್ಸ್ ಹೊಂದಿದೆ. ಆಮೀರ್‌ ಖಾನ್ ಬಾಸ್ಕೆಟ್ ಬಾಲ್ ತರಬೇತುದಾರನ ಪಾತ್ರ ನಿರ್ವಹಿಸಿದ್ದಾರೆ. ನಾಯಕಿಯಾಗಿ ಜೆನಿಲಿಯಾ ದೇಶಮುಖ್ ನಟಿಸಿದ್ದಾರೆ. ಆರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ಶರ್ಮಾ, ಆಯುಷ್ ಬನ್ಸಾಲಿ, ಆಶಿಶ್ ಪೆಂಡ್ಸೆ, ರಿಷಿ ಶಹಾನಿ, ರಿಷಬ್ ಜೈನ್, ನಮನ್ ಮಿಶ್ರಾ ಮತ್ತು ಸಿಮ್ರಾನ್ ಮಂಗೇಶ್ಕರ್ ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.