ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಮೂವರು ಹುಡುಗಿಯರು ಬೀಳುವುದನ್ನು ನೋಡಿದೆ: ಬೆಂಗಳೂರು ಕಾಲ್ತುಳಿತದ ಭಯಾನಕ ಘಟನೆ ವಿವರಿಸಿದ ಪ್ರತ್ಯಕ್ಷದರ್ಶಿ

Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಿಂದ 11 ಜನ ಸಾವನ್ನಪ್ಪಿದ್ದಾರೆ. ಮೂವರು ಯುವತಿಯರು ಬಿದ್ದಿದ್ದನ್ನು ನೋಡಿದೆ, ಆದರೆ ಯಾರೂ ರಕ್ಷಣೆಗೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೆಂಗಳೂರು ಕಾಲ್ತುಳಿತದ ಭಯಾನಕ ಘಟನೆ ವಿವರಿಸಿದ ಪ್ರತ್ಯಕ್ಷದರ್ಶಿ

Profile Sushmitha Jain Jun 4, 2025 10:21 PM

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಐಪಿಎಲ್ ವಿಜಯೋತ್ಸವದ (IPL Celebrations) ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಹೊರಗೆ ಉಂಟಾದ ಕಾಲ್ತುಳಿತದಿಂದ (Stampede) 11 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ (Bengaluru Stampede). ಗೇಟ್‌ಗಳ ಬಳಿ ಜನಸಂದಣಿ ತುಂಬಿಕೊಂಡಿದ್ದರಿಂದ ಗೊಂದಲ ಸೃಷ್ಟಿಯಾಗಿ ಘಟನೆ ನಡೆದಿದೆ.

ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡವನ್ನು ಕಾಣಲು ಸಾವಿರಾರು ಜನ ಬಂದಿದ್ದರು. ಹಲವು ಯುವತಿಯರು ಗೇಟ್ ತಳ್ಳಿ ಒಳಗೆ ಪ್ರವೇಶಿಸಲು ಯತ್ನಿಸಿದರು. ಮೂವರು ಯುವತಿಯರು ಬಿದ್ದಿದ್ದನ್ನು ನೋಡಿದೆ, ಆದರೆ ಯಾರೂ ರಕ್ಷಣೆಗೆ ಬರಲಿಲ್ಲ. ಭಾರಿ ಜನ ಸೇರಿದ್ದರಿಂದ ಪೊಲೀಸರಿಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಹೇಶ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.



ಒಳಗೆ ಎಲ್ಲ ಸೀಟ್‌ಗಳು ತುಂಬಿವೆ, ಹಾಗಾಗಿ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಹಿಂತಿರುಗಲು ಸಹ ಅವಕಾಶವಿರಲಿಲ್ಲ. ಗೇಟ್‌ಗಳ ಬಳಿ ಜನ ತುಂಬಿಕೊಂಡಿದ್ದರಿಂದ ತೆರೆದರೆ ಇನ್ನಷ್ಟು ಜನ ಒಳಗೆ ಬರುತ್ತಿದ್ದರು. ಹಲವರು ಗಾಯಗೊಂಡಿದ್ದರು. ಆದ್ದರಿಂದ ಗೇಟ್‌ಗಳನ್ನು ಮುಚ್ಚಲಾಗಿತ್ತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಕಾರೊಂದರ ಮೇಲೆ ಹತ್ತಿದ್ದರಿಂದ ಅದು ಸಂಪೂರ್ಣ ಹಾನಿಯಾಗಿತ್ತು.

ಈ ಸುದ್ದಿಯನ್ನೂ ಓದಿ: Bengaluru Stampede: ಬೆಂಗಳೂರು ಕಾಲ್ತುಳಿತಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ವಾಗ್ದಾಳಿ

ಬಿಜೆಪಿಯಿಂದ ಸರ್ಕಾರದ ಟೀಕೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ಅಸಡ್ಡೆ ಮತ್ತು ಸುರಕ್ಷತಾ ಕೊರತೆಯಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈ ದುರಂತಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆರ್‌ಸಿಬಿ ವಿಜಯೋತ್ಸವವನ್ನು ದೇಶ ಮತ್ತು ಕರ್ನಾಟಕ ಆಚರಿಸುತ್ತಿರುವಾಗ, ಸರ್ಕಾರದ ಯಾವುದೇ ಮುಂಜಾಗ್ರತೆ ಇಲ್ಲದೆ ಆತುರದಿಂದ ರ‍್ಯಾಲಿ ಆಯೋಜಿಸಿದ್ದು ಈ ದುರಂತಕ್ಕೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.

ಸರ್ಕಾರಕ್ಕೆ ಪೂರ್ವ ತಯಾರಿಯ ಕಾಳಜಿಯಿರಲಿಲ್ಲ, ಪ್ರಚಾರದಲ್ಲಿ ಆಸಕ್ತರಾಗಿದ್ದರು. ಇದರಿಂದ 11ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಕೆಲವರು ಐಸಿಯುನಲ್ಲಿದ್ದಾರೆ. ಕ್ರೀಡಾಂಗಣದ ಒಳಗೆ ಪೊಲೀಸರು, ಆಂಬುಲೆನ್ಸ್ ಸೌಲಭ್ಯವಿರಲಿಲ್ಲ. ಮುಖ್ಯಮಂತ್ರಿಯವರು ಈ ವಿಷಯವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.