Chikkaballapur News: ಉಪ್ಪಾರ ಸಮುದಾಯ ಶೈಕ್ಷಣಿವಾಗಿ ಮುಂದೆ ಬರಬೇಕಿದೆ: ತಾಲೂಕು ಉಪ್ಪಾರರ ಸಂಘದ ಅಧ್ಯಕ್ಷ ಸಜ್ಜಗಂಟರಾಯಪ್ಪ
ಸಮುದಾಯದ ಮುಖಂಡರು ನಮ್ಮ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು, ಶೈಕ್ಷಣಿಕವಾಗಿ ವಂಚಿತರಾದವರಿಗೆ ಸಂಘದ ಕಡೆಯಿಂದ ಸಹಾಯ ಹಸ್ತ ನೀಡಬೇಕು ಮುಂದಿನ ದಿನಗಳಲ್ಲಿ ನಮ್ಮ ಸಮುದಾಯವು ಮುಂಚೂಣಿಗೆ ಬರಲು ಶಿಕ್ಷಣ ಕಡ್ಡಾಯ ಶಿಕ್ಷಣ ಹೊಂದಿದ್ದರೆ ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಸಹಕಾರಿಯಾಗುತ್ತೆ ಎಂದರು.

ಉಪ್ಪಾರ ಸಮುದಾಯ ಶೈಕ್ಷಣಿವಾಗಿ ಮುಂದೆ ಬರಬೇಕಿದೆ ಎಂದು ತಾಲೂಕು ಉಪ್ಪಾರರ ಸಂಘದ ಅಧ್ಯಕ್ಷ ಸಜ್ಜಗಂಟರಾಯಪ್ಪ ಹೇಳಿದರು.

ಗೌರಿಬಿದನೂರು: ಉಪ್ಪಾರ ಸಮುದಾಯವು ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ತುಂಬಾ ಹಿಂದುಳಿದ ಸಮಾಜವಾಗಿದೆ. ನಾವುಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ನಮ್ಮ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಬೇಕು ಎಂದು ತಾಲೂಕು ಉಪ್ಪಾರರ ಸಂಘದ ಅಧ್ಯಕ್ಷ ಸಜ್ಜಗಂಟರಾಯಪ್ಪ ತಿಳಿಸಿದರು.
ತಾಲೂಕಿನ ನಗರಗೆರೆ ಹೋಬಳಿ, ಹುಣಸೆನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ವಿಶ್ವನಾಥಪುರ ರೈತರ ಹೋರಾಟಕ್ಕೆ ರಾಜ್ಯ ರೈತ ಸಂಘ ಪ್ರೊ.ನಂಜುಂಡಸ್ವಾಮಿ ಬಣ ಬೆಂಬಲ
ಅವರು ನಮ್ಮ ಸಮುದಾಯವು ಬಹಳಷ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದು ಳಿದಿದೆ. ಈ ಹಿಂದೆ ಈ ಹಿಂದೆ ನಮ್ಮ ಸಮುದಾಯದ ಜನರು ಗ್ರಾಮಗಳಿಗೆ ತೆರಳಿ ಉಪ್ಪನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಗ್ರಾಮಸ್ಥರು ಕೂಡ ನಮ್ಮ ಮೇಲೆ ಅವಲಂಬಿತ ರಾಗಿದ್ದರು. ಆದರೆ ಕಾಲಕ್ರಮೇಣ ಪ್ರತಿ ಅಂಗಡಿಗಳಲ್ಲಿ ಉಪ್ಪಿನ ಮಾರಾಟ ಪ್ರಾರಂಭವಾಗಿ ನಮ್ಮ ಸಮುದಾಯಕ್ಕೆ ಬಹಳ ತೊಂದರೆ ಆಯಿತು. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಸಮಾಜಕ್ಕೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ ಅಭಿವೃದ್ಧಿ ಪಡಿಸಬೇಕು ಎಂದರು.
ಸಮುದಾಯದ ಮುಖಂಡರು ನಮ್ಮ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು, ಶೈಕ್ಷಣಿಕವಾಗಿ ವಂಚಿತರಾದವರಿಗೆ ಸಂಘದ ಕಡೆಯಿಂದ ಸಹಾಯ ಹಸ್ತ ನೀಡಬೇಕು ಮುಂದಿನ ದಿನಗಳಲ್ಲಿ ನಮ್ಮ ಸಮುದಾಯವು ಮುಂಚೂಣಿಗೆ ಬರಲು ಶಿಕ್ಷಣ ಕಡ್ಡಾಯ ಶಿಕ್ಷಣ ಹೊಂದಿದ್ದರೆ ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಸಹಕಾರಿಯಾಗುತ್ತೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಜಯರಾಮ್ ಎನ್, ತೂಮ ಕುಂಟ, ನರಸಿಂಹಮೂರ್ತಿ, ಮದ್ದಪ್ಪ, ಗೋವಿಂದಪ್ಪ, ಪುಟ್ಟಸ್ವಾಮಿ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಆನಂದ, ಹುಣಸೆನಹಳ್ಳಿ ಉಪ್ಪಾರ ಸಂಘದ ಅಧ್ಯಕ್ಷ ತಿಪ್ಪಣ್ಣ, ಶ್ರೀನಿವಾಸ, ಸುಧಾಕರ, ಬಾಬು, ಅನಿಲ, ಗಂಗಾಧರ, ಗೋವಿಂದ, ಚಂದ್ರರಾಜು, ರವೀಂದ್ರ, ತಿಪ್ರರಾಜು ಹಾಗೂ ಸಮಾಜದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.