Mann Ki Baat: ಮನ್ ಕೀ ಬಾತ್ನಲ್ಲಿ ಕಲಬುರಗಿ ರೊಟ್ಟಿಯ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ!
Mann Ki Baat: ಕಲಬುರಗಿ ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ 123ನೇ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮ (Mann Ki Baat) ನಡೆಸಿದರು. ಈ ವೇಳೆ ವಿವಿಧ ವಿಚಾರಗಳನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ( PM Narendra Modi), ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದ್ದು, ಮಹಿಳೆ ನಮ್ಮ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಈ ನಿಟ್ಟಿನಲ್ಲಿ ನೀವು ಕಲಬುರಗಿ ಮಹಿಳೆಯರ ಸಾಧನೆಯನ್ನು ತಿಳಿಯಲೇಬೇಕು. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕಲಬುರಗಿ ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆಯಲಾಗಿದೆ. ಆನ್ಲೈನ್ ಮೂಲಕ ಆರ್ಡರ್ ಬರುತ್ತಿವೆ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮವಿಶ್ವಾಸ, ಆತ್ಮನಿರ್ಭರದ ಪ್ರತೀಕವಾಗಿದೆ' ಎಂದು ಶ್ಲಾಘಿಸಿದ್ದಾರೆ.
ಇಂದು ದಿನಾಂಕ 29.06.2025 ರ “ಮನ್ ಕೀ ಬಾತ್” ಕಾರ್ಯಕ್ರಮದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರು ಕಲಬುರಗಿಯ ಜೋಳದ ರೊಟ್ಟಿ ಕುರಿತು ಮಾತನಾಡಿದ ಸುಂದರ ಕ್ಷಣ.
— DC Kalaburagi (@DCKalaburagi) June 29, 2025
ಇದು ಕಲಬುರಗಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
"ಕಲಬುರಗಿ ರೊಟ್ಟಿ ಸಿರಿಧಾನ್ಯದ ಶಕ್ತಿ"@Kalaburgivarthe@PMOIndia#mankibat #Kalaburagi pic.twitter.com/UOR7VC3UnH
ಮನ್ ಕೀ ಬಾತ್: ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿವೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್ ಕೀ ಬಾತ್(Mann Ki Baat) ಕಾರ್ಯಕ್ರಮದ 123 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಯೋಗ ದಿನ, ತುರ್ತು ಪರಿಸ್ಥಿತಿಗೆ 50ವರ್ಷ ಪೂರ್ತಿಯಾಗಿರುವ ಬಗ್ಗೆ ಮಾತನಾಡಿದೆ.
ಯೋಗ ದಿನಾಚರಣೆ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಜೂ.21 ರಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಕಳೆದ 10 ವರ್ಷಗಳಲ್ಲಿ, ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ದೇಶಾದ್ಯಂತದ ಆಚರಣೆಗಳ ಬಗ್ಗೆ ಮಾತನಾಡುತ್ತಾ, ಅವರು ತೆಲಂಗಾಣ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳು ಮತ್ತು ಸಶಸ್ತ್ರ ಪಡೆಗಳು, ಬುಡಕಟ್ಟು ವಿದ್ಯಾರ್ಥಿಗಳು ಮತ್ತು ದಿವ್ಯಾಂಗ ಜನರು ಸೇರಿದಂತೆ ಜನರು ಉತ್ಸಾಹದಿಂದ ಭಾಗವಹಿಸಿದ ಇತರ ರಾಜ್ಯಗಳನ್ನು ಉಲ್ಲೇಖಿಸಿದರು.
ಈ ಸುದ್ದಿಯನ್ನೂ ಓದಿ: Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ
Sharing this month's #MannKiBaat. Do tune in! https://t.co/N8WrWlWNId
— Narendra Modi (@narendramodi) June 29, 2025
ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು
- ಜಮ್ಮು ಮತ್ತು ಕಾಶ್ಮೀರದಲ್ಲಿರುವ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯಲ್ಲಿ, ಹಿಮದಿಂದ ಆವೃತವಾದ ಶಿಖರಗಳಲ್ಲಿಯೂ ಯೋಗ ಪ್ರದರ್ಶನ ನಡೆದಿದೆ
- ಗುಜರಾತ್ನ ವಡ್ನಗರದಲ್ಲಿ 2,121 ಜನರು ಒಟ್ಟಾಗಿ ಭುಜಂಗಾಸನಗಳನ್ನು ಪ್ರದರ್ಶಿಸಿ ಹೊಸ ದಾಖಲೆ ಬರೆದಿದ್ದಾರೆ.
- ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್ ಹೀಗೆ ಪ್ರಪಂಚ ಮೂಲೆ ಮೂಲೆಯಲ್ಲೂ ಯೋಗ ದಿನಾಚರಣೆ ನಡೆದಿದೆ.
- "ಒಂದು ಭೂಮಿಗಾಗಿ, ಆರೋಗ್ಯಕ್ಕಾಗಿ ಯೋಗ"- ಇದು ಕೇವಲ ಘೋಷಣೆಯಲ್ಲ, ಬದಲಾಗಿ ವಸುಧೈವ ಕುಟುಂಬಕಂ" ಎಂಬ ಭಾವನೆಯನ್ನು ಪ್ರತಿಧ್ವನಿಸುತ್ತದೆ ಎಂದು ಅವರು ಹೇಳಿದರು.
- ಕೈಲಾಸ-ಮಾನಸ ಸರೋವರ ಯಾತ್ರೆ ಬಹಳ ಸಮಯದ ನಂತರ ಪುನರಾರಂಭಗೊಂಡಿದ್ದು, ಭಕ್ತರಿಗೆ ಮಹತ್ವದ ಕ್ಷಣವಾಗಿದೆ.ಜುಲೈ 3 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಯಾತ್ರಿಕರು ಮತ್ತೊಮ್ಮೆ ಈ ಪವಿತ್ರ ಪ್ರಯಾಣವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ತೀರ್ಥಯಾತ್ರೆಗಳನ್ನು ಕೈಗೊಳ್ಳಲಿರುವವರಿಗೆ ನನ್ನ ಶುಭಾಶಯಗಳು.
- WHO ಭಾರತವನ್ನು ಕಣ್ಣಿನ ಕಾಯಿಲೆಯಾದ ಟ್ರಾಕೋಮಾ ಮುಕ್ತ ದೇಶವೆಂದು ಘೋಷಿಸಿದೆ. ಭಾರತದ ಹಲವು ಭಾಗಗಳಲ್ಲಿ ಟ್ರಾಕೋಮಾ ಸಾಮಾನ್ಯವಾಗಿದ್ದ ಕಾಲವಿತ್ತು. ನಾವು ಟ್ರಾಕೋಮಾವನ್ನು ತೊಡೆದುಹಾಕಲು ನಿರ್ಧರಿಸಿದ್ದೇವೆ. WHO ಭಾರತವನ್ನು ಟ್ರಾಕೋಮಾ ಮುಕ್ತ ಎಂದು ಘೋಷಿಸಿದೆ.
- 95 ಕೋಟಿಗೂ ಹೆಚ್ಚು ಭಾರತೀಯರು ಈಗ ಕೆಲವು ಸಾಮಾಜಿಕ ಭದ್ರತಾ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ, 2015 ರಲ್ಲಿ ಸರ್ಕಾರಿ ಯೋಜನೆಗಳು 25 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಿವೆ ಎಂದು ಹೇಳಿದರು.
- 1975ರ ತುರ್ತು ಪರಿಸ್ಥಿತಿಗೆ 50ವರ್ಷ ಪೂರ್ಣಗೊಂಡಿದೆ. ಅಂದು ಸಂವಿಧಾನ ಹತ್ಯಾ ದಿವಸ್' ಆಚರಿಸಿದ್ದೇವೆ. ತುರ್ತು ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಿದವರನ್ನು ನಾವು ಸ್ಮರಿಸಬೇಕು. ಇದು ನಮ್ಮ ಸಂವಿಧಾನವನ್ನು ರಕ್ಷಿಸಲು ಜಾಗರೂಕರಾಗಿರಲು ನಮಗೆ ಸ್ಫೂರ್ತಿ ನೀಡುತ್ತದೆ.