Moral Policing: ಕಲಬುರಗಿಯಲ್ಲಿ ನೈತಿಕ ಪೊಲೀಸ್ ಗಿರಿ; ಮುಸ್ಲಿಂ ಯುವತಿಗೆ ಬೈಕ್ನಲ್ಲಿ ಲಿಫ್ಟ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ
Moral Policing: ಕಲಬುರಗಿ ನಗರದ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಆಗಿದ್ದ ಮುಸ್ಲಿಂ ಯುವತಿಯನ್ನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಡ್ರಾಪ್ ಕೊಡಲು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಆತನ ಮೇಲೆ ಮುಸ್ಲಿಂ ಯುವಕ ಗುಂಪು ಹಲ್ಲೆ ನಡೆಸಿದೆ.


ಕಲಬುರಗಿ: ಅನ್ಯಕೋಮಿನ ಯುವತಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ನಡೆಸಿರುವ ಘಟನೆ (Moral Policing) ಕಲಬುರಗಿಯ ಸಂತ್ರಸದ ವಾಡಿ ಬಳಿ ನಡೆದಿದೆ. ಆಟೋ ಸಿಗದಿದ್ದಕ್ಕೆ ಡ್ರಾಪ್ ಕೊಡುವಂತೆ ಯುವತಿ ಕೇಳಿದ್ದಳು. ಹೀಗಾಗಿ ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ಮುಸ್ಲಿಂ ಯುವಕರು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಬೈಲಪ್ಪ (21) ಹಲ್ಲೆಗೊಳಗಾದ ಯುವಕ.
ನಗರದ ಶಾಬದಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಆಗಿ ಯುವಕ, ಯುವತಿ ಕೆಲಸ ಮಾಡುತ್ತಿದ್ದಾರೆ. ಆಟೋ ಸಿಗದಿದ್ದಕ್ಕೆ ಡ್ರಾಪ್ ಕೊಡುವಂತೆ ಮುಸ್ಲಿಂ ಯುವತಿ ಕೇಳಿದ್ದರಿಂದ ಹಿಂದೂ ಯುವಕ ಡ್ರಾಪ್ ಕೊಡಲು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಮುಸ್ಲಿಂ ಯುವತಿಯನ್ನು ಯಾಕೆ ಬೈಕ್ ಮೇಲೆ ಕರ್ಕೊಂಡು ಹೋಗುತ್ತಿದ್ದೀಯಾ ಎಂದು 10-15 ಮುಸ್ಲಿಂ ಯುವಕರು ದೊಣ್ಣೆಯಿಂದ ಹಲ್ಲೆ ನಡೆಸಿ, ರಸ್ತೆ ಪಕ್ಕ ಬಿಸಾಡಿ ಹೋಗಿದ್ದಾರೆ.
ಹಲ್ಲೆ ವೇಳೆ ಬೈಕ್, ಬೆಳ್ಳಿ ಚೈನ್ ಕೀ, 3.5 ಸಾವಿರ ರೂ.ಗಳನ್ನು ಯುವಕನಿಂದ ಕಿಡಿಗೇಡಿಗಳು ದೋಚಿದ್ದಾರೆ. ಗಾಯಗೊಂಡ ಬೈಲಪ್ಪನನ್ನು ಕಲಬುರಗಿಯ ಟ್ರಾಮಾ ಕೇರ್ಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಪತ್ನಿಗೆ ಮರು ಮದುವೆ ಮಾಡಿಸಿದ ಪತಿ
ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ
ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿಯುವ ಭಯ ಹುಟ್ಟಿಸಿ ಎರಡು ಕೋಟಿ ರೂಪಾಯಿ ದರೋಡೆ (Bengaluru Crime news) ಮಾಡಿರುವ ಘಟನೆ ಜೂನ್ 25ರಂದು ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. USDTಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ಖದೀಮರು ಎರಡು ಕೋಟಿ ರೂಪಾಯಿ (Robbery case) ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎಂಬವರು ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ.
ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್ನಿಂದ ಒಂದು ಯಂತ್ರ ತರಿಸಿಕೊಳ್ಳಲು ಇತ್ತು. ಹೀಗಾಗಿ ಯುಎಸ್ಡಿಟಿಗೆ ಹಣ ಕನ್ವರ್ಟ್ ಮಾಡಿಸಲು ಶ್ರೀ ಹರ್ಷ ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಎಂಬಾತ ಪರಿಚಯ ಆಗಿದ್ದಾನೆ. ಜೂನ್ 25ರ ಮಧ್ಯಾಹ್ನ 3 ಗಂಟೆಗೆ ಶ್ರೀಹರ್ಷನನ್ನು ಬೆಂಜಮಿನ್ ಭೇಟಿ ಆಗಿದ್ದ. ಎ.ಕೆ ಎಂಟರ್ಪ್ರೈಸಸ್ ಶಾಪ್ನಲ್ಲಿ ಶ್ರೀಹರ್ಷ ಮತ್ತು ಬೆಂಜಮಿನ್ ಭೇಟಿಯಾಗಿದ್ದರು. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು.
ಈ ವೇಳೆ 6-7 ಅಪರಿಚಿತರ ಗುಂಪು ಏಕಾಏಕಿ ಶಾಪ್ಗೆ ನುಗ್ಗಿದೆ. ಚಾಕುವಿನಿಂದ ಶ್ರೀಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎರಡು ಕೋಟಿ ಹಣ ದರೋಡೆ ಮಾಡಿದ್ದಾರೆ. ಎರಡು ಕೋಟಿ ರೂ. ನಗದು ಹಣವನ್ನು ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಪ್ನಲ್ಲಿದ್ದ ಶ್ರೀಹರ್ಷ ಮತ್ತು ಬೆಂಜಮಿನ್ ಹಾಗೂ ಅವರ ಸ್ನೇಹಿತರನ್ನು ಕೂಡಿಹಾಕಿ ಪರಾರಿಯಾಗಿದ್ದಾರೆ. ಶಾಪ್ನಿಂದ ಹೊರಬಂದ ಬಳಿಕ ಬೆಂಜಮೀನ್ ಮತ್ತು ಸ್ನೇಹಿತರು ಕೂಡ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: Police Firing: ದಿವ್ಯಾಂಗ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ: ಆರೋಪಿಯ ಕಾಲಿಗೆ ಗುಂಡು
ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಶ್ರೀಹರ್ಷ ದೂರು ನೀಡಿದ್ದಾರೆ. ದರೋಡೆ ಕುರಿತಂತೆ ಬೆಂಜಮಿನ್ ಮತ್ತು ಸ್ನೇಹಿತರ ಕೈವಾಡವನ್ನು ಶಂಕಿಸಲಾಗಿದೆ. ಇವರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.