Bhagya Lakshmi Serial: ಆದೀ-ಭಾಗ್ಯ ಮನಿ ಡೀಲ್: ಇಂದು ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಮಹಾ ತಿರುವು
ಕಾರಿನಿಂದ ಒಬ್ಬ ವ್ಯಕ್ತಿ ಕೆಳಗಿಳಿದು ಒಂದು ಪೇಪರ್ನ ಅಟ್ಟಿ ಕೊಡುತ್ತಾನೆ.. ಈ ಪೇಪರ್ಗೆ ಸೈನ್ ಮಾಡಿ.. ನಿಮ್ಮ ಹಣದ ಸಮಸ್ಯೆ ಎಲ್ಲ ದೂರವಾಗುತ್ತೆ ಎಂದು ಹೇಳಿ ಹೋಗುತ್ತಾನೆ. ಇದನ್ನು ಕೇಳಿ ಭಾಗ್ಯಾಗೆ ಶಾಕ್ ಆಗುತ್ತದೆ. ಸದ್ಯ ಆ ಪೇಪರ್ನಲ್ಲಿ ಅಂತಹದ್ದು ಏನಿದೆ ಎಂಬುದು ಕುತೂಹಲ ಕೆರಳಿಸಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಇಂದು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಒಂದುಕಡೆ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಪ್ರಸಂಗದ ಸಂಚಿಕೆಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿವೆ. ಮತ್ತೊಂದೆಡೆ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಿನ ಜುಗಲ್ಬಂದಿ ನೋಡಲು ಸಖತ್ ಮಜಾ ನೀಡುತ್ತಿದೆ. ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ಹೇಗಾದರು ಮಾಡಿ ಈ ಮದುವೆ ನಿಲ್ಲಿಸಿಯೇ ತೀರುತ್ತೇನೆಂದು ಆದೀ ಪಣ ತೊಟ್ಟಿದ್ದಾನೆ. ಇದಕ್ಕಾಗಿ ಭಾಗ್ಯಾಳಿಗೆ ಹಣ ಕೊಡಲು ಆದೀ ಮುಂದಾಗಿದ್ದು, ಈ ಎಪಿಸೋಡ್ ಇಂದು ಪ್ರಸಾರ ಕಾಣಲಿದೆ.
ಆದೀಶ್ವರ್ ಈ ಮದುವೆಯ ಮಾತುಕತೆ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ನೇರವಾಗಿ ಭಾಗ್ಯಾಗೆ ಕಾಲ್ ಮಾಡಿದ್ದಾನೆ. ಈ ಮದುವೆ ಮಾತುಕತೆ ಅಂತ ಬಂದಾಗಿನಿಂದ ನಮ್ಮ ಮನೆಯಲ್ಲಿ ಏನೇನೋ ನಡಿತಾ ಇದೆ.. ಇದನ್ನೆಲ್ಲ ಇಲ್ಲಿಗೆ ಎಂಡ್ ಮಾಡೋಣ ಅಂತ ಹೇಳಿದ್ದಾನೆ. ಅಲ್ಲದೆ ಒಂದು ಸ್ಥಳಕ್ಕೆ ಬಂದು ನನ್ನನ್ನ ಒಮ್ಮೆ ಭೇಟಿ ಮಾಡಿ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಅಲ್ಲಿಗೆ ಹೊರಟಿದ್ದಾಳೆ.
ವಿಶೇಷ ಎಂದರೆ ಭಾಗ್ಯ ಬರಲು ಸ್ವತಃ ಆದೀಯೆ ಭಾಗ್ಯಾಳಿಗೆ ಕಾರಿನ ವ್ಯವಸ್ಥೆಯನ್ನು ಮಾಡಿದ್ದಾನೆ. ಕಾರಿನ ಡ್ರೈವರ್ ಬಂದು, ಮೇಡಂ ನಿಮ್ಮನ್ನು ಒಂದು ಸ್ಥಳಕ್ಕೆ ಆದೀ ಸರ್ ಕರೆದುಕೊಂಡು ಬರಲು ಹೇಳಿದ್ದಾರೆ ಬನ್ನಿ ಹೋಗೋಣ ಎಂದು ಹೇಳಿದ್ದಾನೆ. ಆದರೆ, ಇದಕ್ಕೆ ಒಪ್ಪದ ಭಾಗ್ಯ, ನಾನು ನನ್ನ ಕಾರಿನಲ್ಲೇ ಬರುತ್ತೇನೆ ಎನ್ನುತ್ತಾಳೆ.. ನಿನ್ನ ಕೆಲಸ ಹೋಗುತ್ತೆ ಅಂತ ಟೆನ್ಶನ್ ಬೇಡ.. ಆದೀ ಸರ್ ಹತ್ರ ನಾನು ಮಾತಾಡ್ತೇನೆ, ಆ ಲೊಕೇಷನ್ ನನ್ಗೆ ಗೊತ್ತು.. ನಾನು ನನ್ನ ಕಾರಿನಲ್ಲಿ ಬರುತ್ತೇನೆ ನೀನು ಹೋಗು ಎನ್ನುತ್ತಾಳೆ.
ಹೀಗೆ ಭಾಗ್ಯ ಕಾರಿನಲ್ಲಿ ಹೋಗುವಾಗ ಹಣದ ಅವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ಯೋಚನೆ ಮಾಡುತ್ತಾಳೆ. ಇನ್ಮುಂದೆ ಖಾಲಿ ಕ್ಯಾಟರಿಂಗ್ ಮಾಡ್ಕೊಂಡು ಕೂತ್ರೆ ಆಗಲ್ಲ.. ಹಣಕ್ಕಾಗಿ ಬೇರೆ ಏನಾದ್ರು ಮಾಡ್ಬೇಕು.. ಬಂಗಾರಿಯ ಹಾಗೂ ಗುಂಡಣ್ಣನ ಕಾಲೇಜ್ ಫೀಸ್ ಕಟ್ಬೇಕು.. ಪೂಜಾ ಮದುವೆಗೆ ಚಿನ್ನ ತೆಗೊಬೇಕು.. ಮನೆಯ ಇಎಮ್ಐ ಕಟ್ಟಬೇಕು ಎಂದೆಲ್ಲ ಯೋಚನೆ ಮಾಡುತ್ತಾಳೆ. ಹೀಗೆ ಯೋಚನೆ ಮಾಡುತ್ತ ಕಾರಿನಲ್ಲಿ ಹೋಗುವಾಗ ಎದುರಿನಿಂದ ಭಾಗ್ಯ ಕಾರಿಗೆ ಮತ್ತೊಂದು ಕಾರು ಅಡ್ಡ ಬಂದು ನಿಲ್ಲುತ್ತದೆ.
ಮತ್ತೊಂದು ಕಾರಿನಿಂದ ಒಬ್ಬ ವ್ಯಕ್ತಿ ಕೆಳಗಿಳಿದು ಒಂದು ಪೇಪರ್ನ ಅಟ್ಟಿ ಕೊಡುತ್ತಾನೆ.. ಈ ಪೇಪರ್ಗೆ ಸೈನ್ ಮಾಡಿ.. ನಿಮ್ಮ ಹಣದ ಸಮಸ್ಯೆ ಎಲ್ಲ ದೂರವಾಗುತ್ತೆ ಎಂದು ಹೇಳಿ ಹೋಗುತ್ತಾನೆ. ಇದನ್ನು ಕೇಳಿ ಭಾಗ್ಯಾಗೆ ಶಾಕ್ ಆಗುತ್ತದೆ. ಸದ್ಯ ಆ ಪೇಪರ್ನಲ್ಲಿ ಅಂತಹದ್ದು ಏನಿದೆ ಎಂಬುದು ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಭಾಗ್ಯ ಆದೀಶ್ವರ್ ಹೇಳಿದ ಸ್ಥಳಕ್ಕೆ ತಲುಪಿದ್ದಾಳೆ.
ಅಲ್ಲಿ ಆದೀಶ್ವರ್ ಮೂರು ಸ್ಯೂಟ್ ಕೇಸ್ ತಂದಿದ್ದು, ಇದರಲ್ಲಿ ಒಂದು ಸ್ಯೂಟ್ ಕೇಸ್ ತೆರೆದು ಅದರಲ್ಲಿದ್ದ ದುಡ್ಡನ್ನು ಭಾಗ್ಯಾಳ ಮೈಮೇಲೆ ಸುರಿದು ಪೂಜಾ-ಆದೀ ಮದವೆಯನ್ನು ನಿಲ್ಲಿಸಬೇಕು ಎಂದು ಹೇಳಿರುವುದನ್ನು ಪ್ರೊಮೋದಲ್ಲಿ ತೋರಿಸಲಾಗಿದೆ. ಸದ್ಯ ಭಾಗ್ಯಾಗೆ ಹಣದ ಅವಶ್ಯಕತೆ ತುಂಬಾ ಇದೆ.. ಭಾಗ್ಯಾಳ ಮುಂದಿನ ನಡೆ ಏನು?, ಆದೀ ಕೊಟ್ಟ ಹಣವನ್ನು ಭಾಗ್ಯ ತೆಗೆದುಕೊಳ್ಳುತ್ತಾಳಾ?, ಇದಕ್ಕೂ ಮುನ್ನ ಕಾರಿನಲ್ಲಿ ಅಡ್ಡಗಟ್ಟಿದ ವ್ಯಕ್ತಿ ಕೊಟ್ಟ ಪೇಪರ್ನಲ್ಲಿ ಏನಿದೆ? ಎಂಬುದೆಲ್ಲ ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Chaithra Kundapura: ನಮ್ಮ ಮೇಲೆ ಯಾವಾಗ ಬೇಕಾದ್ರು ಅಟ್ಯಾಕ್ ಆಗಬಹುದು: ಚೈತ್ರಾ ಕುಂದಾಪುರ